Thursday, December 23, 2010

ಹೊಸ ವರುಷದ ಜೋಳಿಗೆಯಲ್ಲಿ...


ಹೊಸ ವರುಷದ ಜೋಳಿಗೆಯಲ್ಲಿ...

ಪ್ರತಿಯೊಬ್ಬರ ಕೈಗೂ ಒಂದೊಂದು ಬಿಳೀ ಖಾಲಿ ಹಾಳೆ ಕೊಟ್ಟು ಹೋಗಿಬಿಟ್ಟಿದ್ದಾರೆ ಯಾರೋ ಮೇಷ್ಟ್ರು..

ಅವರು ಕೊಟ್ಟಾಗ ಅದ್ಯಾಕೆ ಕೊಟ್ಟರು ಅಂತಲೇ ಗೊತ್ತಿರಲಿಲ್ಲ ನನಗೆ.. ಅಕ್ಕ ಪಕ್ಕ ನೋಡಿದೆ: ಎಲ್ಲರೂ ಮಗ್ನರಾಗಿ ತಲೆ ತಗ್ಗಿಸಿ ಚಿತ್ರ ಬಿಡಿಸುತ್ತಿದ್ದರು, ಕೆಲವರು ಮೇಲೆ ನೋಡುತ್ತಾ ಯೋಚಿಸುತ್ತಿದ್ದರು, ಕೆಲವರು ಪಕ್ಕದವರದನ್ನು ಕಾಪಿ ಹೊಡೆಯುತ್ತಿದ್ದರು, ಕೆಲವರು ಯಾರದೋ ಚಿತ್ರಕ್ಕೆ ಬಣ್ಣ ತುಂಬುತ್ತಿದ್ದರು, ಕೆಲವರು ಆಗಲೇ ಬಿಡಿಸಿ ಮುಗಿಸಿ, ಹಾಳೆಯನ್ನು ಟೇಬಲ್ಲಿನ ಮೇಲಿಟ್ಟು ಎದ್ದು ಹೋಗುತ್ತಿದ್ದರು.

ನಾನೂ ನನ್ನ ಹಾಳೆಯನ್ನು ಎದುರಿಗೆ ಹರವಿಕೊಂಡು ಬಿಡಿಸಲು ತೊಡಗಿದೆ. ಒಂದಷ್ಟು ದಿನ, ಅಪ್ಪ, ಅಮ್ಮ, ಮತ್ತೂ ಇನ್ನೇನೋ ಅವರ ಹೆಸರುಗಳು- ಅವರೆಲ್ಲ ಇದ್ದರು.. ಮೊದಮೊದಲು ಕೈ ಹಿಡಿದು ತಿದ್ದಿಸಿದರು, ನಂತರ ಪಕ್ಕದಲ್ಲಿ ನಿಂತು ಹುರಿದುಂಬಿಸುತ್ತಿದ್ದರು: 'ಹೂಂ, ಬರಿ ಬರಿ.. ಚನಾಗ್ ಬಿಡಿಸ್ತೀಯ.. ಬಿಡಿಸು..' ಆಮೇಲೆ ನನ್ನ ಪಾಡಿಗೆ ನನ್ನನ್ನು ಬಿಟ್ಟು ಅವರೆಲ್ಲ ಸುಮ್ಮನಾಗಿಬಿಟ್ಟರು.

ಮಂಕಾಗಿ ಕೂತಿದ್ದ ನನ್ನ ಬಳಿ ಯಾರೋ ಪುಣ್ಯಾತ್ಮರು ಬಂದು ಹಾಳೆಯ ಮೇಲೆ ಒಂದಷ್ಟು ಚುಕ್ಕಿಗಳನ್ನಿಟ್ಟು ಸ್ಕೆಚ್ ಹಾಕಿಕೊಟ್ಟರು. 'ಹೀಗೇ ಬಿಡಿಸಿದರೆ ಅದ್ಭುತ ಚಿತ್ರವಾಗೊತ್ತೆ' -ಎಂದರು. ನಾನು ಹೌದೆಂದುಕೊಂಡು ಬಿಡಿಸತೊಡಗಿದೆ. ಬಿಡಿಸಿದ ಚಿತ್ರ, ಸ್ವಲ್ಪ ಹೊತ್ತಿಗೆ ನನಗೇ ಇಷ್ಟವಾಗದೆ ಎಲ್ಲಾ ಅಳಿಸಿಹಾಕಿದೆ.

ಮತ್ತೆ ಬಿಳೀ ಖಾಲಿ ಹಾಳೆ..

ಯಾರೋ ಹೇಳಿದಂತೆ ನಾನ್ಯಾಕೆ ಬಿಡಿಸಬೇಕು? ನಾನೇ ಸ್ವಂತ ಸ್ವತಂತ್ರ ಚಿತ್ರ ಬಿಡಿಸಬೇಕೆಂಬ ಹಂಬಲು ಮೂಡಿತು. ಕುಂಚವನ್ನು ಕೈಗೆತ್ತಿಕೊಂದು ಬಿಡಿಸತೊಡಗಿದೆ... ಏನೋ ಕಲ್ಪನೆ.. ಏನೋ ಕನಸು.. ಹೌದು, ಎಷ್ಟು ಚಂದ ಮೂಡಿಬರುತ್ತಿದೆ ಚಿತ್ರ..! ಎಲ್ಲಾ ಸರಿಯಿದೆ, ಹುಬ್ಬಿಗೆ ಸ್ವಲ್ಪ ಕಪ್ಪು ತೀಡಿದರೆ ಮುಗಿಯಿತು ಎನಿಸುವಷ್ಟರಲ್ಲಿ ಯಾರೋ ಬಂದು ಇಡೀ ಚಿತ್ರದ ಮೇಲೆ ಒಂದು ಅಡ್ಡಗೆರೆ ಎಳೆದು ಹೋಗಿಬಿಡುತ್ತಾರೆ.. ನನ್ನ ಚಿತ್ರ ಹಾಳಾಗಿಬಿಡುತ್ತದೆ. ನಾನೀಗ ಅದನ್ನು ಪೂರ್ತಿ ಅಳಿಸಿ ಮತ್ತೆ ಹೊಸದಾಗಿ ಬಿಡಿಸಬೇಕು.

ಅದೇ ಚಿತ್ರವನ್ನು ಮತ್ತೆ ಬಿಡಿಸಲಾಗದು. ಬಿಡಿಸಿದರೂ ಅದೂ ಒಪ್ಪವಾಗಲಾರದು. ಆಗ ಉಷಃಕಾಲವಿತ್ತು; ಆ ರಾಗಕ್ಕದು ಒಗ್ಗುತ್ತಿತ್ತು. ಈಗ ಮಧ್ಯಾಹ್ನ; ಬೇರೆಯದೇ ರಾಗ; ಹೊಸದೇ ಚಿತ್ರ ಬೇಕು.

ಯಾರೋ ಹೇಳುತ್ತಾರೆ: 'ಪಕ್ಕದವನನ್ನು ನೋಡಿಕೊಂಡು ಬಿಡಿಸು. ಚಿತ್ರ ಯಾರದಾದರೇನು? ಚಿತ್ರಕ್ಕೆ ಜೀವ ಬರಲು ಬೇಕು ಹಚ್ಚುವವನದೇ ಭಾವ, ರಾಗ, ಬಣ್ಣ.' ಇರಬಹುದೇನೋ ಅಂದುಕೊಂಡು ನಾನು ಅವರಿವರ ಹಾಳೆ ನೋಡಿದೆ. ಕೆಲವು ಈಗ ತಾನೇ ಬಿಡಿಸಲು ಶುರುವಾದ ಚಿತ್ರಗಳು. ಇನ್ನು ಕೆಲವು ಅರ್ಧ ಬಿಡಿಸಿದ ಚಿತ್ರಗಳು. ಮತ್ತೆ ಕೆಲವಕ್ಕೆ ಢಾಳ ಬಣ್ಣಗಳು. ಕೆಲವು ಚಿತ್ರಗಳು ಇಷ್ಟವಾಗಲಿಲ್ಲ. ಕೆಲವು ಅತ್ಯಾಕರ್ಷಕವಾಗಿದ್ದವು. ನಾನೂ ಹಾಗೇ ಬಿಡಿಸಬೇಕು ಎಂದು ನನ್ನ ಒಂದು ಮನಸು ಹೇಳಿದರೆ, ಮತ್ತೊಂದು ಮನಸು ಒಪ್ಪಲಿಲ್ಲ. ನನ್ನ ಚಿತ್ರ ಯಾರದನ್ನೂ ಹೋಲಬಾರದು. ನನ್ನ ಚಿತ್ರ, ಅದಕ್ಕೆ ನನ್ನದೇ ಬಣ್ಣ -ಆಗಲೇ ಚಂದ ಎನ್ನಿಸಿತು.

ನಾನು ಮತ್ತೆ ಬಿಡಿಸಲು ತೊಡಗುತ್ತೇನೆ; ಏನು ಬಿಡಿಸಬೇಕೆಂದೇ ಗೊತ್ತಾಗದೆ ಹೆಣಗಾಡುತ್ತೇನೆ.

ಹಾಗೆ ನಮ್ಮನ್ನೆಲ್ಲ ಬರೆಯಲು ಹಚ್ಚಿ ಹಾಳೆ ಹಂಚಿಹೋದ ಮೇಷ್ಟ್ರು ಮಾತ್ರ ಇನ್ನೂ ಸಿಕ್ಕಿಲ್ಲ. ಅವಾಗಿವಾಗ ಬಂದು ನೋಡಿಕೊಂಡು ಹೋಗುತ್ತಿರುತ್ತಾರೆ, ಒಳ್ಳೆಯ ಚಿತ್ರ ಬಿಡಿಸಿದರೆ ಪ್ರಶಸ್ತಿ ಕೊಡುತ್ತಾರೆ, ಕೆಟ್ಟ ಚಿತ್ರಕ್ಕೆ ಶಾಪ ಎಂದೆಲ್ಲ ಗುಸುಗುಸು ನಮ್ಮಲ್ಲಿ... ನನಗಂತೂ ಅವರನ್ನು ನೋಡಿದ ನೆನಪೂ ಇಲ್ಲ. ಅವರು ಯಾವಾಗ ಬರುತ್ತಾರೋ, ಏನೋ, ಕಾದೂ ಕಾದೂ ಬೇಸತ್ತು ನಾನಂತೂ ಇತ್ತೀಚೆಗೆ ಅವರ ಬಗ್ಗೆ ಧೇನಿಸುವುದನ್ನೂ ಬಿಟ್ಟಿದ್ದೇನೆ.

ಯಾರೋ ಬಂದು ಪಕ್ಕದಲ್ಲಿ ಕೂರುತ್ತಾರೆ. 'ನಿನ್ನ ಹಾಳೆಯಲ್ಲಿ ನಾನೂ ಬಿಡಿಸಲಾ?' ಎನ್ನುತ್ತಾರೆ. 'ಇಬ್ಬರೂ ಸೇರಿ ಬಿಡಿಸಿದರೆ ಚಿತ್ರಕ್ಕೆ ಹೆಚ್ಚು ಸೊಗಸು ಬರುತ್ತದೆ' ಎನ್ನುತ್ತಾರೆ. ನನಗೂ ಅದು ಹಿತವೆನಿಸುತ್ತದೆ. ನಾನವರ ಮುಖ ನೋಡುತ್ತೇನೆ. ಮುಗುಳ್ನಗುತ್ತೇನೆ. ಅದನ್ನವರು ಸಮ್ಮತಿಯೆಂದು ಭಾವಿಸಿ ನನ್ನ ಜೊತೆ ಕೈಜೋಡಿಸುತ್ತಾರೆ. ಹೊಸ ಕನಸಿನ ಹೊಸ ಚಿತ್ರ ಶುರುವಾಗುತ್ತದೆ... ಆದರೆ ನನ್ನ ಅವರ ಭಾವಕ್ಕೆ ಹೊಂದಾಣಿಕೆಯಾಗದೆ, ಚಿತ್ರ ಚಿತ್ರಾನ್ನವಾಗಿ, ಅವರು ಬೇಸರಗೊಂಡು ಎಲ್ಲಾ ಅಳಿಸಿ, ಎದ್ದು ನಡೆಯುತ್ತಾರೆ.

ಮತ್ತದೇ ಬಿಳೀ ಹಾಳೆ... ಅಲ್ಲಲ್ಲಿ ಹಳೆಯ, ಅಳಿಸಿದರೂ ಪೂರ್ತಿ ಮರೆಯಾಗದ ಚಿತ್ರದ ಕುರುಹುಗಳು.. ಆ ಮತ್ತೊಬ್ಬರೊಂದಿಗೆ ಬೆಸೆದುಕೊಂಡು ಬಿಡಿಸಿ ಅಭ್ಯಾಸವಾಗಿದ್ದ ಕೈಗೆ ಸ್ವಲ್ಪ ದಿನ ಕಷ್ಟವಾಗುತ್ತದೆ; ಆಮೇಲೆ ಒಗ್ಗಿಹೋಗುತ್ತದೆ.

ಎಷ್ಟೋ ಚಿತ್ರಗಳನ್ನು ಬಿಡಿಸುತ್ತೇನೆ ನಾನು. ಬಿಡಿಸಿದ ಯಾವ ಚಿತ್ರವೂ ನನಗೆ ಪರಿಪೂರ್ಣ ಎನಿಸುವುದಿಲ್ಲ. ಒಮ್ಮೊಮ್ಮೆ ಯೋಚಿಸಿದಾಗ ದಿಗಿಲಾಗುತ್ತದೆ: ನಾನು ಚಿತ್ರ ಬಿಡಿಸಲು ತೊಡಗಿ ಎಷ್ಟೋ ವರ್ಷಗಳಾಗಿಬಿಟ್ಟಿವೆ. ಇನ್ನೂ ಈ ಚಿತ್ರ ಪೂರ್ತಿಯಾಗಿಲ್ಲ.. ಯಾವತ್ತಿಗಿದು ಮುಗಿಯುವುದು? ಎಂದಿದಕ್ಕೆ ಮುಕ್ತಿ? ಪಕ್ಕದಲ್ಲಿ ಹಣೆಗೆ ವಿಭೂತಿ ಹಚ್ಚಿ ಕೂತವನೊಬ್ಬ ಹೇಳುತ್ತಾನೆ: 'ಹಾಗೆಲ್ಲ ಚಿಂತಿಸುತ್ತಾ ಕೂರಬಾರದು. ಈ ಚಿತ್ರ ಮುಗಿಯುವುದೇ ಇಲ್ಲ. ಈಗಾಗಲೇ ಎದ್ದು ಹೋದವರೆಲ್ಲ ಮುಗಿಸಿಯೇ ಕೊಟ್ಟು ಹೋದವರೇನಲ್ಲ. ಅರ್ಧಕ್ಕೇ ಬೇಸತ್ತು ಎದ್ದು ಹೋದವರಿದ್ದಾರೆ. ಸುಸ್ತಾಗಿ ಎದ್ದು ಹೋದವರಿದ್ದಾರೆ. ಮೇಷ್ಟ್ರು ಕರೆದಂತಾಯ್ತು ಎಂದುಕೊಂಡು ಎದ್ದು ಹೋದವರಿದ್ದಾರೆ. ಚಿತ್ರ ಬಿಡಿಸೀ ಅಳಿಸಿ - ಬಿಡಿಸೀ ಅಳಿಸಿ ಹಾಳೆಯೆಲ್ಲ ಹರಿದುಹೋಗಿ ಎದ್ದು ಹೋದವರಿದ್ದಾರೆ. ನೀನ್ಯಾಕೆ ಹೀಗೆ ಚಿಂತಿಸುತ್ತ ಕುಳಿತಿದ್ದೀಯಾ? ನಿನಗೆ ತೋಚಿದಂತೆ ಬಿಡಿಸು. ಬಿಡಿಸುವಾಗ ಸಿಗುವ ಆನಂದವನ್ನು ಅನುಭವಿಸು.'

ಅವರು ಹೇಳಿದ್ದು ನನಗೆ ಸರಿಯೆನಿಸುತ್ತದೆ. ಹೊಸ ಉತ್ಸಾಹದೊಂದಿಗೆ ಬಿಡಿಸತೊಡಗುತ್ತೇನೆ...

* * *

ಬರುವ ಹೊಸ ವರ್ಷದ ಜೋಳಿಗೆಯಲ್ಲಿ ಚಿತ್ರ ಬಿಡಿಸುತ್ತಿರುವ ನಿಮಗೆ ಹೊಸ ಕಲ್ಪನೆಗಳನ್ನೂ, ವಿನ್ಯಾಸಗಳನ್ನೂ, ಪರಿಪೂರ್ಣತೆಯೆಡೆಗಿನ ತಿರುವುಗಳನ್ನೂ ಒದಗಿಸಬಲ್ಲ ಪೆನ್ಸಿಲ್ಲು - ಬಣ್ಣಗಳಿರಲಿ. ಬಿಡಿಸುವ ಮನಸಿನಲ್ಲಿ ಉಲ್ಲಾಸ ತುಂಬಿರಲಿ.

ಶುಭಾಶಯಗಳು.

ಚಳಿಯಲ್ಲೊಂದು ಬೆಚ್ಚಗಿನ ನೆನಪು

ಚಳಿಯಲ್ಲೊಂದು ಬೆಚ್ಚಗಿನ ನೆನಪು


ಪ್ರತಿಯೊದು ಕಾಲಕ್ಕೂ ಅದರದೇ ಆದ ಸೌಂದರ್ಯವಿದೆ. ಕಾಲ ಬದಲಾಗುತ್ತಿಲ್ಲದಿದ್ದರೆ ಬದುಕು ನಿಂತ ನೀರಾಗುತ್ತಿತ್ತು. ಪ್ರಕೄತಿಯ ಮನೋಹರ ರೂಪಗಳನ್ನು ಅನುಭವಿಸಲು ಬಹಳ ಸುಂದರ. ಪ್ರತಿ ವರುಷವೂ ಹರುಷ. ಪ್ರಕೄತಿ ಒಂದು ಅದ್ಭುತ. ನಾನು ಸ್ವಭಾವತಃ ಪ್ರಕೄತಿ ಪ್ರಿಯಳು. ಅವಳ ಪ್ರತಿಯೊಂದು ಭಾವನೆಗಳು ಉಲ್ಲಾಸ ತರುತ್ತದೆ, ಹೊಸ ಸ್ಪೂರ್ತಿಯನ್ನು ನೀಡುತ್ತದೆ.

ಈ ಚಳಿಗಾಲದ ರಮ್ಯತೆಯನ್ನು ನಾನು ಇದೀಗ ೮-೯ ವರ್ಷಗಳಿಂದ ಅನುಭವಿಸುತ್ತಿರುವೆ.ನನ್ನೂರಲ್ಲಿ ಇದ್ದಿದ್ದು ಕೇವಲ ೨ ಕಾಲಗಳು. ಚಳಿಗಾಲವನ್ನು ಯಾವತ್ತೂ ಅನುಭವಿಸಿರಲಿಲ್ಲ. ೨ ನೇ ತರಗತಿಯಲ್ಲಿದ್ದಾಗ ಕಲಿತಿದ್ದ ವರ್ಷಕ್ಕೆ ೩ ಕಾಲಗಳಲ್ಲಿ ಮಾತ್ರ ಚಳಿ ಜೀವಂತವಾಗಿರುತ್ತಿತ್ತು. ಹಾಂ.... ಮತ್ತೆ ಇನ್ನೊಂದು ಹಾಡಿತ್ತು..
ಚಳಿರಪ್ಪೊ ಚಳಿರೊ...
ಚಳಿರಮ್ಮ ಚಳಿರೊ....
ಅಮ್ಮನ ಸೀರೆ ಹೊದ್ಕೊಂಡೆ ಚಳಿ ಹೋಗ್ಲೇ ಇಲ್ಲ..
ಅಪ್ಪನ ಕೋಟು ಹಾಕ್ಕೊಂಡೆ ಚಳಿ ಹೋಗ್ಲೇ ಇಲ್ಲ..
ಅಕ್ಕನ ಶಾಲು ಹೊದ್ಕೊಂಡೆ ಚಳಿ ಹೋಗ್ಲೇ ಇಲ್ಲ..

ಇದು ಚಳಿಯ ಕಲ್ಪನೆಯನ್ನು ಕಟ್ಟಿ ಕೊಟ್ಟಿತ್ತು.
ನನ್ನ ಕಕ್ಕಿಯರ ಮನೆ ಚಳಿಯ ನಾಡಲ್ಲಿ ಇದ್ದುದ್ದರಿಂದ, ಚಳಿಗಾಲದಲ್ಲಿ ಅಲ್ಲೊಮ್ಮೆ ಹೋಗಿದ್ದಾಗ ಅನುಭವಿಸಿದ್ದೆ.

ಚಳಿ ಎಂದಾಕ್ಷಣ ನನಗೆ ನೆನಪಾಗುವುದು ನನ್ನ ಓದಿನ ದಿನಗಳು. ಚಳಿಯ ಊರಿಗೆ ಹೋಗಿ ಸಿಕ್ಕಿಬಿದ್ದಿದ್ದೆ. ದುರಾದೄಷ್ಟಕ್ಕೆ ನನ್ನ ಪರೀಕ್ಷಾ ಕಾಲವೂ ಡಿಸೆಂಬರ್ ತಿಂಗಳುಗಳೇ ಆಗಿತ್ತು.ಬೆಚ್ಚಗೆ ಹೊದ್ದು ಮಲಗೋಣವೆಂದರೆ ಪುಸ್ತಕಗಳ ಕಾಟ. ಓದೋಣವೆಂದರೆ ಚಳಿರಾಯ ಮಲಗಲು ಒತ್ತಾಯಿಸುತ್ತಿದ್ದ.ಅಂತೂ ಪರೀಕ್ಷೆ ಮುಗಿಸಿದಾಗ ಗೆದ್ದ ಭಾವನೆ.ನನ್ನ ’ರೂಮಿ’ ಚಳಿಯ ನಾಡಿನಿಂದಲೇ ಬಂದವಳಾಗಿದ್ದಳು. ಆದ್ದರಿಂದ ಅವಳ ಓದಿಗೆ ಭಂಗ ತರುವವರಾರೂ ಇರುತ್ತಿರಲಿಲ್ಲ.ನನಗೋ ಅವಳ ಓದು ಕಂಡರೆ ಹೊಟ್ಟೆ ಉರಿಯುತ್ತಿತ್ತು. ನಾನೋ ಓದುವೆನೆಂದು ಪುಸ್ತಕ ಹಿಡಿದು ಕುರ್ಚಿಯಲ್ಲಿ ಕೂರುತ್ತಿದ್ದೆ. ನಂತರ ನೆಲಕ್ಕೆ ಸವಾರಿ ಹೋಗುತ್ತಿತ್ತು, ಅನಂತರದಲ್ಲಿ ಪುಸ್ತಕದ ಮೇಲೆಯೇ ನಿದ್ದೆ ಹೋಗುತ್ತಿದ್ದೆ... ಹಾ.. ಹಾ... ಹಾ...
ಬೆಳಗ್ಗೆ ನನ್ನ ’ರೂಮಿ’ ಎದ್ದು ’coffee’ ಮಾಡಿ ಕೊಡುತ್ತಿದ್ದಳು. ವಾಹ್...ನಿಜಕ್ಕೂ ನಾನು ಅದೄಷ್ಟ ಮಾಡಿದ್ದೆ.

ಬೆಂಗಳೂರಿನಲ್ಲಿ ಚಳಿಯ ಸರಿಯಾದ ಅನುಭವ ಪಡೆಯುತ್ತಿದ್ದೇನೆ. ಚಳಿಗಾಲ ಬಂದಾಕ್ಷಣ ಬೆಚ್ಚಗಿನ ಬಟ್ಟೆಗಳು, ಕ್ರೀಮುಗಳು ಎಲ್ಲಾ ಹೊರಬರುತ್ತದೆ. ಕತ್ತಲೂ ಬೇಗ ಹಾಗೆಯೇ ಬೆಳಗೂ ನಿಧಾನ. ಏನೇ ಆದರೂ ಚಳಿಗಾಲದ ಈ ಸೋಮಾರಿತನ ಬಲು ಪ್ರಿಯವಾದುದು.
ನಿಮ್ಮಲ್ಲೂ ಚಳಿಗಾಲದ ಬೆಚ್ಚಗಿನ ನೆನಪುಗಳಿರಬಹುದು. ನನ್ನೊಡನೆ ಹಂಚಿಕೊಳ್ಳುವಿರಾ.........

ಹೊಸ

"ಏಯ್... ಎರಡ್ಸಾವ್ರದ ಆರು ಹೋಗುತ್ತಿದೆ.. ಟಾಟಾ ಮಾಡು ಬಾರೇ..."
"ಎಲ್ಲೇ?"
"ಅದೇ.... ಅಲ್ಲಿ....!"
"ಓಹ್... ಹೊರಟೇಬಿಡ್ತಾ? ನಿನ್ನೆ ಮೊನ್ನೆ ಬಂದಂಗಿತ್ತಲ್ಲೇ.."
"ಬಂದಿದ್ದೂ ಆಯ್ತು ಹೊರಟಿದ್ದೂ ಆಯ್ತು; ಬೇಗಬೇಗ ಟಾಟಾ ಮಾಡೇ..."

* * *

ಧಾನ್ಯ ದಾಸ್ತಾನಿನ ಗೋಡೌನಿನಲ್ಲಿ ಬಂದಿಯಾಗಿದ್ದ ಹೆಗ್ಗಣವೊಂದು ಗೋಡೆಯಲ್ಲಿ ದೊಡ್ಡದೊಂದು ಕನ್ನ ಕೊರೆಯುತ್ತಿದೆ.. ಬೇಗ ಬೇಗ ಕೊರೆ ದೊಡ್ಡಿಲಿಯೇ: ಹೊಸ ವರ್ಷ ಬರುತ್ತಿದೆ...

ಎರಡು ಬಾರಿ ಕೆಮ್ಮಿ, ಗಂಟಲನ್ನು ಶ್ರುತಿಗೊಳಿಸಿ, ಹಾಡಲು ಕುಳಿತಿದ್ದಾನೆ ಗಾಯಕ.. ಪಲ್ಲವಿ ಮುಗಿದು, ಅನುಪಲ್ಲವಿ ಮುಗಿದು, ಇದು ಎಷ್ಟನೇ ಚರಣ..? ಬೇಗ ಬೇಗ ಹಾಡು ಗೆಳೆಯಾ: ಹೊಸ ವರ್ಷ ಬರುತ್ತಿದೆ...


ಮಗುವನ್ನು ಕಾಲ ಮೇಲೆ ಹಾಕಿಕೊಂಡು, 'ಉಶ್‍ಶ್‍ಶ್‍ಶ್ಶ್...' ಎನ್ನುತ್ತಾ ಕುಳಿತಿದ್ದಾಳೆ ತಾಯಿ; ಉಚ್ಚೆಯನ್ನೇ ಮಾಡುತ್ತಿಲ್ಲ ಪಾಪು! ಬೇಗ ಬೇಗ ಉಚ್ಚೆ ಮಾಡು ಮಗೂ: ಹೊಸ ವರ್ಷ ಬರುತ್ತಿದೆ...

ದನದ ಕೆಚ್ಚಲಿಗೆ ನೀರು ಸೋಕಿ, ಮೊಲೆಗಳನ್ನು ತೊಳೆದು, ದೊಡ್ಡ ಕೌಳಿಗೆಯನ್ನಿಟ್ಟುಕೊಂಡು ಕುಳಿತಿದ್ದಾನೆ ಅಪ್ಪ.. ಸೊರೆಯುತ್ತಲೇ ಇಲ್ಲ ದನ! ಬೇಗ ಬೇಗ ಹಾಲು ಕೊಡು ದನವೇ: ಹೊಸ ವರ್ಷ ಬರುತ್ತಿದೆ...


ನ್ಯಾಲೆಯ ಮೇಲೆ ಬಟ್ಟೆಗಳನ್ನು ನೇತುಹಾಕಿ, ಒಣಗುವುದನ್ನೇ ಕಾಯುತ್ತಾ ಕುಳಿತಿದ್ದಾನೆ ರೂಂಮೇಟ್.. ಅಂಡರ್ ವೇರ್ ಒಣಗುವುದಂತೂ ಯಾವಾಗಲೂ ಲೇಟ್! ಬೇಗ ಒಣಗು ಚಡ್ಡಿಯೇ: ಹೊಸ ವರ್ಷ ಬರುತ್ತಿದೆ...


ಶಾಪಿಂಗಿಗೆ ಹೋದ ಗೆಳೆಯ ಸ್ವೀಟು, ಕೇಕು, ಪಟಾಕಿ.. ಎಲ್ಲಾ ತಂದಿದ್ದಾನೆ. ಆದರೆ ಹೊಸ ಕ್ಯಾಲೆಂಡರು ತರುವುದನ್ನೇ ಮರೆತುಬಿಟ್ಟಿದ್ದಾನೆ! ಮತ್ತೆ ಓಡಿಸಿಯಾಗಿದೆ ಪೇಟೆಯೆಡೆಗೆ. ಬೇಗ ಬಾ ಗೆಳೆಯಾ: ಹೊಸ ವರ್ಷ ಬರುತ್ತಿದೆ...


ಭಟ್ಟರು ಗಂಧ ತೇಯ್ದು, ದೇವರನ್ನು ತೊಳೆದು, ಹೂವೇರಿಸಿ, ಕುಂಕುಮ-ಅರಿಶಿನ ಹಚ್ಚಿ, ಊದುಬತ್ತಿ ಬೆಳಗಿ, ಕಾಯಿ ಓಡೆದು, ನೈವೇದ್ಯ ಮಾಡಿ.... ಅಯ್ಯೋ, ಅವೆಲ್ಲಾ ಇರಲಿ ಭಟ್ರೇ, ಬೇಗ ಮಂಗಳಾರತಿ ಮಾಡಿ: ಹೊಸ ವರ್ಷ ಬರುತ್ತಿದೆ...

*
* *

ಅಗೋ.... ಹೊಸ ವರ್ಷ ಬಂದೇಬಿಟ್ಟಿತು..! ಕೊರೆದೂ ಕೊರೆದು ಕೊನೆಗೂ ಗೋಡೆಯಲ್ಲೊಂದು ಸಣ್ಣ ಕಿಂಡಿಯನ್ನು ಮಾಡಿಯೇಬಿಟ್ಟಿದೆ ಹೆಗ್ಗಣ. ಆ ಸಣ್ಣ ಕಿಂಡಿಯಿಂದಲೇ ತೂರಿ ಬರುತ್ತಿದೆ ಹೊಸ ವರ್ಷದ ಆಶಾಕಿರಣ; ಹೊಸ ಬೆಳಕು. ಮಗು ಹಾರಿಸಿದ ಉಚ್ಚೆ ಇಡೀ ಭುವಿಯನ್ನೇ ಒದ್ದೆ ಮಾಡಿದೆ. ಕೌಳಿಗೆ ತುಂಬಿದರೂ ಮುಗಿದಿಲ್ಲ ದನದ ಕೆಚ್ಚಲಿನ ಹಾಲು. ಅಪ್ಪ ಕೂಗುತ್ತಿದ್ದಾನೆ: 'ಏಯ್, ಇನ್ನೊಂದು ಗಿಂಡಿ ತಗಂಬಾರೇ..' ಅಮ್ಮ ಅಡುಗೆ ಮನೆಯಿಂದಲೇ ಉತ್ತರಿಸುತ್ತಿದ್ದಾಳೆ: 'ಸಾಕು ನಮಗೆ; ಉಳಿದಿದ್ದನ್ನು ಕರುವಿಗೆ ಬಿಡಿ.' ಒಣಗಿದ ಚಡ್ಡಿಯ ಮೇಲೆ ಹೊಸ ಪ್ಯಾಂಟೇರಿಸುತ್ತಿದ್ದಾನೆ ರೂಂಮೇಟ್. ಗೆಳೆಯನಂತೂ ಓಡೋಡಿ ಬರುತ್ತಿದ್ದಾನೆ. ಅವನ ಕೈಯಲ್ಲಿ ಪೂರ್ತಿ ಮುನ್ನೂರಾ ಅರವತ್ತೈದು ದಿನಗಳುಳ್ಳ ಕ್ಯಾಲೆಂಡರಿದೆ. ದೇವರಿಗೇ ಆಶ್ಚರ್ಯವಾಗುವಷ್ಟು ದಕ್ಷಿಣೆ ಬಿದ್ದಿದೆ ಭಟ್ಟರ ಮಂಗಳಾರತಿ ಹರಿವಾಣದಲ್ಲಿ.

ಎಲ್ಲರಿಗೂ ಖುಷಿ; ಎಲ್ಲರಿಗೂ ಸಂಭ್ರಮ; ಎಲ್ಲರಿಗೂ ಸಡಗರ.. ಏಕೆಂದರೆ, ಹೊಸ ವರ್ಷ ಬಂದಿದೆ! ಈ ಮಧ್ಯೆ, ಹಾಡುತ್ತಿರುವವನನ್ನು ಎಲ್ಲರೂ ಮರೆತೇ ಬಿಟ್ಟಿದ್ದಾರೆ. ಆತ ಹಾಡುವುದನ್ನು ಒಂದು ಕ್ಷಣ ನಿಲ್ಲಿಸಿಬಿಟ್ಟಿದ್ದಾನೆ. ತಕ್ಷಣ ಎಲ್ಲರಿಗೂ ಅರಿವಾಗಿದೆ. ಎಲ್ಲಾ ಅವನ ಬಳಿ ಹೋಗಿ ಹೇಳುತ್ತಿದ್ದಾರೆ:


"ಹಾಡು ಗೆಳೆಯಾ, ಮುಂದುವರೆಸು. ಹಾಡು ಹಳೆಯದಾದರೇನು, ಭಾವ ಹೊಸತಿದ್ದರೆ ಸಾಕು.."

ಹೊಸ ವರ್ಷದ ಹೊಸ ಕ್ಯಾಲೆಂಡರು ನಿಮ್ಮ ಬದುಕಿನ ಹಾಡಿಗೆ - ಹಾದಿಗೆ ಹೊಸ ಭಾವ ಬೆರೆಸಲಿ ಎಂದು ಹಾರೈಸುತ್ತೇನೆ.

ನೂತನ ವರ್ಷದ ಶುಭಾಶಯಗಳು.

Tuesday, April 13, 2010

MISSING U.....


ಜೊತೆಯಾಗಿ ನಡೆದು ತಿಳಿಯದಂತೆ ನೀ ನಡೆದೇ ಮುಂದೆ...
ಹಿಂಬಾಲಿಸೋಣವೆಂದು ಹಿಂದೆ ಬಂದೆ ಬೇಡವೆಂದು ನೀ ದೂರವಾದೆ...
ನಿನ್ನ ದಾರಿ ಅರಿಯದೆ ನಾನು ಹಿಂತಿರುಗಿ ಹೋಗುವ ಮನಸ್ಸು ಮಾಡಿದೆ..
ಹೆಜ್ಜೆ ಮಾಸುವ ಮೊದಲೊಮ್ಮೆ ಹೇಳ ಬಯಸುತ್ತೇನೆ..
STILL AM MISSING U.....

ಉಳಿದು ಹೋದ ಮಾತುಗಳು ......


Deaರ ರವಿಕುಮಾರ್.....
ಮಾಮರವೆಲ್ಲೋ ಕೊಗಿಲೆಯಲ್ಲೋ ಎನೀ ಸ್ನೇಹ ಸಂಬಂಧ ಎಲ್ಲಿಯದೋ ಈ ಅನುಬಂಧ
ಎಂದು ಪ್ರಖ್ಯಾತ ಕವಿಯೊಬ್ಬರು ಬರೆದಿರುವ ಹಾಡು ರೇಡಿಯೋ ದಲ್ಲಿ ಮೂಡಿ ಬರುತ್ತಿರಲು ಅಲ್ಲೇ ಕುಳಿತು ಓದುತ್ತಿದ್ದ ನನ್ನ ಮನವು ಹಿಂದಿನದನ್ನು ಮೆಲುಕು ಹಾಕತೊಡಗಿತು.. ಬದುಕು ಸುಂದರ ಅನಿಸುವಾಗ ಸಾಕೋ ಸಾಕು ಎನ್ನುವಂತೆ,
ಇನ್ನೇನು ಏನೂ ಇಲ್ಲ ಎನುವಾಗ ಬೇಕಿತ್ತು ಅನ್ನುವಂತೆ ಜೀವನದಲ್ಲಿ ಕೆಲವೊಂದು ದಿನಗಳು ಹಾಗೆ ಇದ್ದು ಬಿಟ್ಟಿದ್ದರೆ ಎಷ್ಟು ಚೆನ್ನಾಗಿತ್ತು
ಅಲ್ಲವೇ…..ನೀನು ನಾನು ಜೊತೆಯಾಗಿ ಕಳೆದ ಎಷ್ಟೊಂದು ದಿನಗಳ ಸಾವಿರಾರು ಕ್ಷಣಗಳ ನೆನಪು ಮೂಡಿದಾಗ ನನಗೆ ನಾನೇ
ಅಂದುಕೊಂಡಿದ್ದಿದೆ.. ಜಗತ್ತು ಬದಲಾಗ ಬಾರದಿತ್ತು...!!! ಕೆಲವೊಮ್ಮೆ ಅಂದುಕೊಳ್ಳುತ್ತೇನೆ ನಿನಗೆ ನನ್ನ ನೆನಪೇ
ಬರುವುದಿಲ್ಲವೇನೋ?? ಹಾಗೆಂದುಕೊಂಡಾಗ ನನಗೆ ನನ್ನ ಮೇಲೆ ಬೇಸರವಾಗಿದ್ದಿದೆ…ಮತ್ತೊಮ್ಮೆ ಅಂದುಕೊಳ್ಳುತ್ತೇನೆ ,
ಈ ಹಾಳಾದ ನೆನಪು ನನ್ನಬದಲಾದರೂ ಬಿಡುತ್ತಿಲ್ಲವಲ್ಲ…ಮರೆಯಬೇಕೆಂದು ಅಂದು ಕೊಂಡಂತೆ ಮತ್ತೆ ಮತ್ತೆ ಮರುಕಳಿಸುವ ಸುಂದರ ನೆನಪುಗಳು.. ಒಮ್ಮೆಲೇ ಮನದಲ್ಲಿ ಕಾಮನಬಿಲ್ಲು,ಮತ್ತೆ ಚಿಂತನ ಮಂಥನ ನನ್ನಲ್ಲೇ.…!!!

"ಇಗೇಕೆ ಆ ನೆನಪು ಬಂದೆನ್ನ ಕಾಡಿದೆ
ಎದೆಯ ಆಳದಲ್ಲಿ ವಿಷಾದ ಮೂಡಿದೆ "
ಏನೋ ಸೆಳೆತ ಇದೆ ಕಣೆ ಗೆಳಯ ನಿನ್ನ ಸ್ನೇಹದಲ್ಲಿ...ನಿನ್ನನೆನಪುಗಳೆಲ್ಲ ಆಯಸ್ಕಾಂತದಂತೆ ನನ್ನ ಸೆಳೆಯುತ್ತವೆ..ಕೇವಲ ನಗುವಿನಲ್ಲಿ ಪರಿಚಯವಾದ ನಾನು ನೀನು ಎಷ್ಟೊಂದು ಆತ್ಮೀಯರಾಗುತ್ತೆವೆಂದು ಬಹುಷ: ನಾವಿಬ್ಬರೂ ಅಂದುಕೊಂಡಿರಲಿಲ್ಲ…
ಆದರೂ ಮರೆಯಲಾಗದ ಒಂದು ಬಂಧ ನಮ್ಮನ್ನು ಬಂದಿಸಿ ಬಿಟ್ಟಿದ್ದು ವಿಪರ್ಯಾಸವೇ.….??ನಿನಗೂ ಹಾಗೆ ಅನಿಸಿದ್ದರೆ ನೀನುನನ್ನಿಂದ ಮಾನಸಿಕವಾಗಿ ಬಹುದೂರ ನಡೆದು ಬಿಡುತ್ತಿರಲಿಲ್ಲ ಅಲ್ಲವೇ.…
"ಬಣ್ಣ ಬಣ್ಣದ ಚಿತ್ರ ಬರೆದು
ಹೋದಳೆನ್ನ ತೊರೆದು
ಚಿತ್ರಕ್ಕೆ ಮಸಿ ಬಳಿದು "

ನಿನಗೆ ನೆನಪಿದೆಯೇ...ಎಷ್ಟೊಂದು ಕ್ಷಣಗಳು ನಾವಿಬ್ಬರೂ ಜೊತೆಯಾಗಿ ನಡೆದಿಲ್ಲ.…ಸುಂದರ ಇರುಳಿನಲ್ಲಿಮನಸ್ಸಿನ ಭಾವನೆಗಳನ್ನು ಹಂಚಿಕೊಂಡಿಲ್ಲ...ಎಷ್ಟೊಂದು ವಿಷಯ ಚರ್ಚಿಸಿಲ್ಲ.ನಾನು ಪಟಪಟನೆ ಮಾತನಾಡುತ್ತಿದ್ದರೆ ಸುಮ್ಮನೆ ಹಸನ್ಮುಖಿಯಾಗಿ ಆಲಿಸುತ್ತಿದ್ದ ನಿನ್ನ ಮುಖ, ನಿನ್ನ ಕಣ್ಣುಗಳು ಈಗಲೂ ನೆನಪಿದೆ... ಇವತ್ತಿಗೂ ನಾನೂ ಮಾತನಾಡುತ್ತೇನೆ... ಆದರೆ ಆಲಿಸಲು ನೀನಿಲ್ಲ ಪಕ್ಕದಲ್ಲಿ ಇಷ್ಟೇ ಬದಲಾಗಿದೆ ಜೀವನ..

ನಾನು ಇದ್ದಲ್ಲಿ ನೀನು ನೀನು ಇದ್ದಲ್ಲಿ ನಾನೂ ಎಲ್ಲವೂ ಜೊತೆಯಾಗಿ ಮಾಡುತ್ತಿದ್ದ ನಾವು ಇಂದು ನನಗೆ ನೀನು ನಿನಗೆ ನಾನು..ನೆನಪಾದರೆ ನಿನಗೆ ನಾನು ಸಿಗಲೇ ಬಾರದಿತ್ತು ಇಂದು ಕೂಡ ಅನಿಸಿದ್ದಿದ್ದೆ ನನಗೆ.…ಎಷ್ಟೊಂದು ಕಾಡಿಸಿದ್ದಿದೆ ನಾನು ನಿನಗೆ.…ನೆನೆದಂತೆ ಮನದಲ್ಲಿ ಅರಿವಿಲ್ಲದಂತೆ ಒಂದೊಂದೇ ಪುಟಗಳು ತೆರೆಯುತ್ತ ಹೋಗುತ್ತವೆ.…ನಿನ್ನ ಮಾತು ಮೀರಿದರೆ ನೀನು ಗದರಿಸುತ್ತಿದ್ದ ರೀತಿ “ಅಬ್ಬಾರೆ !!!!”ಎಂದು ಕಣ್ಣು ಬಿಡುತ್ತಿದ್ದ ಮುಖ ಇಂದಿಗೂ ಕೂಡ ನನ್ನ ಮನದಲ್ಲಿ ಅಚ್ಚಾಗಿ ಉಳಿದುಬಿಟ್ಟಿದೆ.…ಯಾರ ಕಣ್ಣುಬಿತ್ತೋ ಏನೋ ಇಂದು ಎಲ್ಲಾ ಸುಳ್ಳೇನು ಅನಿಸುವಷ್ಟರ ಮಟ್ಟಿಗೆ ಬದಲಾಗಿದೆ.…
ಒಂದು ದಿನ ನೋಡದಿದ್ದರೂ ಏನೋ ಕಳೆದು ಕೊಂಡಂತೆ ಭಾಸವಾಗುತ್ತಿದ್ದ ನಮಗೆ ಇಂದು ಫಾರ್ಮಾಲಿಟಿಯ ಮಾತಷ್ಟೇ ಉಳಿದಿದ್ದರೆ
ಜಗತ್ತು ಜೀವನ ಎಂತಹವೈಪರೀತ್ಯಗಳನ್ನು ಸ್ರಷ್ಟಿಸುತ್ತೆ ಅನಿಸುತ್ತದೆ ಅಲ್ಲ..!!ಆದರೂ ಯಾಕೋ ಕನೋ ನಿನ್ನ
ತುಂಬಾ ಜ್ಞಾಪಿಸಿಕೊಳ್ಳುತ್ತಿನಿ ..ಮರೆತರೂ ನೆನಪಿಸಿಕೊಳ್ಳಲು ಇಷ್ಟಪಡುತ್ತಿನಿ …
““ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರು
ಅರಿತೆವೇನು ನಾವು ನಮ್ಮ ಅಂತರಾಳವ”

ಎಷ್ಟು ಕಾಲ ಒಟ್ಟಿಗಿದ್ದ ನಮಗೆ ಇನ್ನಷ್ಟು ಸಮಯ ಒಟ್ಟಿಗೆ ಇರಬಹುದಿತ್ತು..ಇರುತ್ತೆನೆಂದು ನೀನು ನನ್ನ ನಂಬಿಸಿಬಿಟ್ಟಿದ್ದೆ. .. ಆದರೆ ಕ್ರಮೇಣ ನೀನು ಮರೆತೂ ಬಿಟ್ಟೆ...ಅವಕಾಶವಿದ್ದರೂ ಬೇಡವೆಂದು ದೂರ ಸರಿಯುತ್ತಲೇಬಂದೆ...ಎಷ್ಟು ಹತ್ತಿರ ಬಂದರೂ ಬೇಡವೆಂದು ದೂರವಾಗುತ್ತಲೇ ಹೋದೆ..ಇದೆಲ್ಲ ಅರಿವಾದಾಗ ನಾನು ಕಂಪಿಸಿಬಿಟ್ಟಿದ್ದೆ..ಈಗ ಅನಿಸುತ್ತದೆ ನಮ್ಮಲ್ಲಿದ್ದಿದು ಸ್ನೇಹಾನ ಅಥವಾ ಅದೇನೋ NEEDಅನ್ನುತ್ತಾರಲ್ಲ ಅದಾ...???!!!ಇನ್ನು ಉತ್ತರ ಮಾತ್ರ ಸಿಕ್ಕಿಲ್ಲ..!!! ಕೇಳಿದರೆ ನಿನ್ನಿಂದ ಅದೇ ಮೌನ.…ಅದಕ್ಕೆ ನಾನೇ ಉತ್ತರ ಕಂಡು ಕೊಂಡಿದ್ದೇನೆ...ನಾನೆ ಹಿಂತಿರುಗಿ ಹೋಗುವ ಮನಸ್ಸು ಮಾಡಿದ್ದೇನೆ... ನೀನಿಲ್ಲದ ಬದುಕುಅಭ್ಯಾಸವಾಗಿಬಿಟ್ಟಿದೆ.ನಾನಿಲ್ಲದ ಬದುಕೇ ನಿನಗೆ ಸುಂದರವಾಗಿದ್ದರೆ ಅದು ಇನ್ನಷ್ಟು ಸುಂದರವಾಗಿರಲೆಂದು ನಾನು ಬಯಸುತ್ತೇನೆ…ಆ ದೇವರ ಹಾರೈಕೆ ಸದಾ ನಿನ್ನೊಂದಿಗಿರಲಿ.….ಅರಿವಿಲ್ಲದಂತೆ ಕಣ್ಣುಗಳಿಂದ ಹೊಂಗಿಲು ಉದುರಲು… ಅಷ್ಟರಲ್ಲಿ ಅಮ್ಮ ಕರೆದಂತಾಗಿ ನೆನಪಿನಿಂದ ಹೊರ ಬಂದಿದ್ದೆ … ಸಮಯಕ್ಕೆ ಸರಿಯಾಗಿ ನನಗಿಷ್ಟವಾದ
"ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ
ಕೂಡಿ ಬರದಿರು ಮತ್ತೆ ಹಳೆಯ ನೆನಪೇ “
ಎಂಬ ಹಾಡನ್ನು ರೇಡಿಯೋದ ಜೊತೆಗೆ ನಾನು ಗುನುಗುನುಗುತ್ತಿದ್ದಂತೆ ನಗುವೊಂದು ನನ್ನಲ್ಲಿ ಮೂಡಿತ್ತು… ನಾನು ಅಮ್ಮನ ಕರೆಗೆ ಓಗೊಟ್ಟು ನನ್ನ ಕೆಲಸದ ಕಡೆಗೆ ಮುಖ ಮಾಡಿದೆ …….

Saturday, April 3, 2010

ಸಂಭಂದಗಳ ಸುಳಿಯಲ್ಲಿ ..........

ನಾವು ಕೊಲ್ಕತ್ತಾದಲ್ಲಿದ್ದಾಗ ಪ್ರತೀ ವರ್ಷ ಊರಿಗೆ ಬರುತ್ತಿದ್ದೆವು.... ೩೬ ಘಂಟೆಗಳು ರೈಲಿನಲ್ಲಿ ಪಯಣಿಸಿ ಬರುವಾಗ ಪ್ರತೀ ಬಾರಿಯೂ ಹೊಸ ಹೊಸ ಪರಿಚಯಗಳಾಗುತ್ತಿತ್ತು. ಹಾಗೇ ಒಂದು ಸಲ ನಾವು ವಾಪಸ್ಸು ಹೋಗುವಾಗ, ಮದ್ರಾಸಿನಲ್ಲಿ ಕೋರಮಂಡಲ್ ಎಕ್ಸ್ ಪ್ರೆಸ್ಸ್ ಹತ್ತಿ ಕೆಲವು ಘಂಟೆಗಳೊಳಗೆ ನಾನು ರೈಲು ಹತ್ತುವ ಮೊದಲು ನನ್ನ ಕೈಯಲ್ಲಿಟ್ಟುಕೊಂಡಿದ್ದ, ೨೫೦ ರೂಗಳನ್ನು ಕಳೆದುಕೊಂಡು ಬಿಟ್ಟಿದ್ದೆ. ನಾನು ಕುಳಿತಿದ್ದ ಆಸನದ ಕೆಳಗೆ, ಸಾಮಾನುಗಳನ್ನು ಸರಿಸಿ, ಆತಂಕದಿಂದ ಹುಡುಕುತ್ತಿದ್ದಾಗ, ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ಒಂದು ಸಂಸಾರ (ತಮಿಳು ಮಾತನಾಡುತ್ತಿದ್ದರು - ಗಂಡ, ಹೆಂಡತಿ ಮತ್ತು ಎರಡು ಗಂಡು ಹುಡುಗರು), ಕರಿದ ಚಕ್ಕುಲಿಯಂತದೇನೋ ತಿನ್ನುತ್ತಾ, ನನ್ನನ್ನೇ ನೋಡುತ್ತಿದ್ದರು. ಕೊನೆಗೆ ಕಣ್ಣಲ್ಲಿ ನೀರು ತುಂಬಿ, ನಾನು ನಿರಾಸೆಯಿಂದ ಎದ್ದಾಗ, ಆ ಮಹಿಳೆ (ಮಾಮಿ) ನನ್ನನ್ನು "ಎನ್ನಮ್ಮಾ ತೇಡರೆ"? ಎಂದು ಕೇಳಿದರು.... ಸರಿ ನನ್ನ ಗಂಗಾ-ಕಾವೇರಿ ಪ್ರವಾಹ ಹರಿಯಲು ಯಾರಾದರೊಬ್ಬರ ಸಾಂತ್ವನ ನುಡಿ ಬೇಕಾಗಿತ್ತು.... ನಾನು ಕಥೆಯೆಲ್ಲಾ ಹೇಳಿದೆ. ಅವರು ನನ್ನನ್ನು ಮಾತನಾಡಿಸುತ್ತಾ, ನನ್ನ ದು:ಖ ಮರೆಸುವ ಪ್ರಯತ್ನ ಮಾಡುತ್ತಿದ್ದರು. ಮಾತಿನ ಮಧ್ಯದಲ್ಲಿ ನಾನು ಸೀಮೆ ಎಣ್ಣೆ ಸ್ಟೋವಿನಲ್ಲಿ ಅಡುಗೆ, ತಿಂಡಿ ಎಲ್ಲಾ ಮಾಡಿ, ಕೆಲಸಕ್ಕೆ ಹೋಗುತ್ತೇನೆಂಬ ವಿಷಯ ಕೇಳಿ, ಅವರು ತುಂಬಾ ಮರುಗಿದರು. ಆ ಮಾಮಿ ರಿಸರ್ವ್ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು. ಮನೆ ವಿಳಾಸ ಕೊಟ್ಟು ಕರೆದರು. ಊರಿಗೆ ಹಿಂತಿರುಗಿ ನಾನು ಅವರ ಕರೆ ಮರೆತೇ ಬಿಟ್ಟಿದ್ದೆ. ಒಂದು ದಿನ ಲೇಕ್ ಮಾರ್ಕೆಟ್ ನಲ್ಲಿ ಮಾಮಿಯ ಪತಿಯ ಭೇಟಿಯಾಯಿತು ಮತ್ತು ಅವರು ನಮ್ಮನ್ನು ಬಲವಂತದಿಂದ ಮನೆಗೆ ಕರೆದೊಯ್ದರು. ಮಾಮಿ ತನ್ನ ಹತ್ತಿರ ಇದ್ದ ಒಂದು ಗ್ಯಾಸ್ ಸಿಲಿಂಡರ್ ಕೂಡ ಕೊಟ್ಟರು. ಕೆಲಸಕ್ಕೆ ಹೋಗುವ ಹುಡುಗಿ, ಎಷ್ಟು ಕಷ್ಟ ಪಡುತ್ತೀ ಎಂದು ಅಕ್ಕರೆ ತೋರಿದರು.... ಅಲ್ಲಿಂದ ಸುಮಾರು ೫ ವರ್ಷಗಳ ಕಾಲ ನಾನು ಬೇರೆ ಹೊಸ ಗ್ಯಾಸ್ ಸಂಪರ್ಕ ತೆಗೆದುಕೊಳ್ಳದೆಲೇ (ರೇಷನ್ ಕಾರ್ಡ್ ಇಲ್ಲದೆ ಹೊಸ ಸಂಪರ್ಕ ಕೊಡುತ್ತಿರಲಿಲ್ಲ ಮತ್ತು ನಮಗೆ ಕೊಲ್ಕತ್ತದ ರೇಷನ್ ಕಾರ್ಡ್ ಇರಲಿಲ್ಲ) ಅವರ ಆ ಒಂದು ಸಿಲಿಂಡರ್ ನ್ನೇ ಇಟ್ಟುಕೊಂಡು, ಗ್ಯಾಸ್ ತರಿಸಿಕೊಂಡು ಉಪಯೋಗಿಸುತ್ತಿದ್ದೆ. ಹೀಗೆ ರೈಲಿನಲ್ಲಿ ಬರಿಯ ಕೆಲವು ಘಂಟೆಗಳಲ್ಲಿ ಆದ ಪರಿಚಯ, ಸ್ನೇಹ ಮುಂದೆ ಒಂದು ಆಪ್ತ ಸಂಬಂಧಕ್ಕೇ ತಳಪಾಯ ಹಾಕಿತ್ತು. ಅವರು ನನ್ನ ಮಗ ಹುಟ್ಟಿದಾಗ ಕೂಡ ನನಗೆ ತುಂಬಾ ಸಹಾಯ ಮಾಡಿದ್ದರು. ಇದನ್ನು ಮೊದಲು ಬರಿಯ ಸ್ನೇಹವೆಂದೇ ಅಂದುಕೊಂಡಿದ್ದರೂ ಕೂಡ ಆತ್ಮೀಯತೆ ಬೆಳೆದಂತೆ ಸ್ನೇಹ ಯಾವುದೋ ಒಂದು ಅವಿನಾಭಾವ ಸಂಬಂಧ ಕಲ್ಪಿಸಿಬಿಟ್ಟಿತ್ತು. ಈ ಆತ್ಮೀಯ ಬಂಧವು ಸ್ನೇಹವೇ ಆದರೂ, ಇದನ್ನು ಸಂಬಂಧದ ಚೌಕಟ್ಟಿಲ್ಲದೆ ನೋಡಲು ನನಗೆ ಸಾಧ್ಯವಾಗಲಿಲ್ಲ.... ಅವರು ನನಗೆ ತಾಯಿಯಂತೆಯೂ, ಹಿರಿಯಕ್ಕನಂತೆಯೂ ಪ್ರೀತಿ ತೋರಿದರು.... ಇಲ್ಲಿ ವಯಸ್ಸಿನ ಅಂತರವಿಲ್ಲದೆ ಶುದ್ಧ ಸ್ನೇಹವಿತ್ತು ಮತ್ತು ಆ ಸ್ನೇಹದ ಚೌಕಟ್ಟಿಗೆ ಪ್ರೀತಿಯ ಬಂಧನವಿತ್ತು, ಗೌರವವಿತ್ತು.....ಮತ್ತೊಂದು ಪ್ರಸಂಗ ಮತ್ತು ನನ್ನ ಮತ್ತಿಬ್ಬರು ಬಸ್ ಸ್ನೇಹಿತರ ವಿಚಾರ ಹೇಳದಿದ್ದರೆ ಹೇಗೆ... ನಾನಾಗ ಗರ್ಭಿಣಿಯಾಗಿದ್ದೆ. ನನ್ನ ಕಛೇರಿ ನಮ್ಮ ಮನೆಯಿಂದ ಸುಮಾರು ೫ ಕಿ.ಮೀ ದೂರ ಇತ್ತು. ಮನೆಯಿಂದ ೫ ನಿಮಿಷದ ನಡಿಗೆ ಬಸ್ ನಿಲ್ದಾಣಕ್ಕೆ. ನಾನು ಪಾರ್ಕ್ ಸ್ಟ್ರೀಟ್ ಎಂಬ ಸ್ಥಳಕ್ಕೆ ಹೋಗ ಬೇಕಾಗಿತ್ತು, ದಿನವೂ.. ಮನೆ ಹತ್ತಿರದಿಂದ (ಲೇಕ್ ರೋಡ್ ಸ್ಟಾಪ್) ಒಂದು ಮಿನಿ ಬಸ್ ನೇರವಾಗಿ ನನ್ನನ್ನು ನನ್ನ ಕಛೇರಿಯ ಮುಂದೆ ಇಳಿಸುತ್ತಿತ್ತು.... ಎಷ್ಟೇ ಬೇಗ ಎದ್ದು ಒದ್ದಾಡಿದರೂ ನನಗೆ ೧೦ ನಿಮಿಷ ಮುಂಚೆ ಮನೆ ಬಿಡುವುದಾಗುತ್ತಿರಲಿಲ್ಲ ಮತ್ತು ದಿನವೂ ನಾನು ಬಸ್ ಸ್ಟಾಪ್ ತಲುಪುವ ವೇಳೆಗೆ, ಬಸ್ ತುಂಬಿರುತ್ತಿತ್ತು.... ನಾನು ನಿಂತೇ ೫ ಕಿ.ಮೀ ಪಯಣಿಸಬೇಕಾಗಿತ್ತು.... ಕೆಲವು ದಿನಗಳು ಇದನ್ನು ಗಮನಿಸುತ್ತಿದ್ದ ಒಬ್ಬರು ತಮಿಳು, ಮಧ್ಯವಯಸ್ಕರು, ನನ್ನನ್ನು ಕರೆದು ತಾವು ಕುಳಿತಿದ್ದ ಸೀಟು ಬಿಟ್ಟುಕೊಟ್ಟರು. ನಾನು ಸಂಕೋಚದಿಂದಲೇ ಕುಳಿತೆ.... ಅದೇ ಶುರು ನೋಡಿ... ಅಲ್ಲಿಂದ ಒಂದು ಶುಭ್ರ, ಸಪ್ರೇಮ ಸ್ನೇಹ ಆ ’ಮಾಮ’ನಿಗೂ ನನಗೂ ಏರ್ಪಟ್ಟಿತು. ಕೊಂಚ ಬೇಗ ಬರೋಕೇನಮ್ಮಾ ಎಂದು ದಿನವೂ ಅಕ್ಕರೆಯಿಂದ ರೇಗುವರು.... ಒಂದು ಸೀಟು ನನಗಾಗಿ ಕಾದಿರಿಸಿರುತ್ತಿದ್ದರು. ಇಲ್ಲದಿದ್ದರೆ ಆ ದಿನ ಅವರ ಪ್ರಯಾಣ ನಿಂತೇ ಆಗುತ್ತಿತ್ತು... ಕೆಲವು ದಿನಗಳ ನಂತರ ಇವರ ಜೊತೆ ಇನ್ನೊಬ್ಬರು ’ಮಾಮ’ ಕೂಡ ಸೇರಿದರು. ಇಬ್ಬರೂ ಸೇರಿ ಮೂವರು ಕುಳಿತುಕೊಳ್ಳುವ ಒಂದು ಸೀಟಿನಲ್ಲಿ ಜಾಗ ಹಿಡಿದು ಕುಳಿತಿರುತ್ತಿದ್ದರು.... ನಾನು ಮಹಾರಾಣಿಯಂತೆ ಬಸ್ ಹೊರಟ ನಂತರ ಬಂದು ಹತ್ತಿ ಕಾಯ್ದಿಟ್ಟ ಜಾಗದಲ್ಲಿ ಕುಳಿತು, ಅವರೊಡನೆ ಹರಟುತ್ತಾ ಪಯಣಿಸುತ್ತಿದ್ದೆ.... ಕೊನೆ ಕೊನೆಗೆ ನನಗಾಗಿ ಅವರು ಮೊದಲ ಬಸ್ ಬಿಟ್ಟು, ಎರಡನೆ ಬಸ್ಸಿಗಾಗಿ ಕಾಯುತ್ತಾ ನಿಲ್ಲುತ್ತಿದ್ದರು..... ಇದೂ ನಿಷ್ಕಲ್ಮಶವಾದ ಸ್ನೇಹವೇ... ಆದರೆ ಸ್ನೇಹದಲ್ಲಿ ಎಲ್ಲೂ ಬರೆಯದ, ಮೇಲ್ಮುಖಕ್ಕೆ ಕಾಣಿಸದ, ಒಂದು ಅಜ್ಞಾತವಾದ ಸಂಬಂಧವಿತ್ತು. ಅವರು ನನ್ನನ್ನು ತಮ್ಮ ತಂಗಿಯಾಗಿ, ಮಗಳಾಗಿ ಪ್ರೀತಿಸಿದರು, ಅಕ್ಕರೆ ತೋರಿದರು... ಯಾವುದೇ ರಕ್ತ ಸಂಬಂಧವಲ್ಲವೆಂದರೂ ಅಲ್ಲೊಂದು ಸ್ನೇಹ ಸಂಬಂಧವಿತ್ತು.... ಈಗ ಅವರು ಎಲ್ಲಿದ್ದಾರೋ, ಏನೋ ನನಗೆ ಗೊತ್ತಿಲ್ಲ... ಆದರೆ ಅವರು ತೋರಿದ ಆ ಅಕ್ಕರೆ, ಆ ನಿಷ್ಕಲ್ಮಶವಾದ ಸ್ನೇಹ ನಾನೆಂದೂ ಮರೆಯಲಾಗುವುದೇ ಇಲ್ಲ.....ಇದೆಲ್ಲಾ ಸಂಸಾರದ, ಬಳಗದವರಲ್ಲದವರ ಜೊತೆಗಿನ ಸ್ನೇಹ ಸಂಬಂಧಗಳಾದವು... ಆದರೆ ನಮ್ಮದೇ ಬಂಧು ಬಳಗಗಳಲ್ಲಿ... ಪುಟ್ಟ ಸಂಸಾರದಲ್ಲೇ ಸ್ನೇಹವಿದೆಯಲ್ಲವೇ..? ಎಲ್ಲಕಿಂತ ಮೊದಲು ತಾಯಿ-ಮಗುವಿನದು... ಗರ್ಭದಲ್ಲೇ ಹೇಗೆ ತಾಯಿ ತನ್ನ ಮಗುವಿನ ಜೊತೆಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುತ್ತಾಳೋ... ಹಾಗೇ ಅದರ ಜೊತೆಗೆ ಸ್ನೇಹ ಸಂಬಂಧವೂ ಬೆಳೆದುಬಿಟ್ಟಿರುತ್ತೆ.... ಮಗು ಹುಟ್ಟಿದಾಗಿನಿಂದಲೂ ತಾಯಿಯ ಸ್ಪರ್ಶವನ್ನು ಗುರುತಿಸುವಂತೆಯೇ, ತಾಯಿಯ ಮುಗುಳುನಗುವನ್ನೂ ಗುರುತಿಸುತ್ತದೆ. ನಗುವೇ ಸ್ನೇಹದ ಹಾಡು....ಅಲ್ಲವೇ? ಮಗು ಬೆಳೆಯುತ್ತಾ ಬಂದಂತೆ ಜೊತೆಗೇ ಬೆಳೆಯುವ ಪ್ರೀತಿಯೂ, ಬಂಧನವೂ ಸ್ನೇಹವೇ ಆಗಿರುತ್ತದೆ. ಇಲ್ಲಿ ತಾಯಿ ತನ್ನ ಮಗುವನ್ನು ತಾನು ಪೂಜಿಸುವ, ಆರಾಧಿಸುವ ಭಗವಂತನಂತೆ ಕಾಣುತ್ತಾಳೆ... ಮಕ್ಕಳು ದೊಡ್ಡವರಾದಂತೆಲ್ಲಾ ತಾಯಿಯಲ್ಲಿ ತನ್ನ ಅತ್ಯಂತ ಆಪ್ತ, ನಿಕಟ ಸ್ನೇಹಿತರನ್ನೇ ಕಾಣುತ್ತಾರೆ..... ತನ್ನ ಸ್ನೇಹಿತರ ಜೊತೆಗಿನ ಆಟ, ಶಾಲೆಯಲ್ಲಿನ ಪಾಠ, ತನ್ನ ಬೇಕು ಬೇಡವುಗಳೆಲ್ಲಕ್ಕೂ ತಾಯಿಯನ್ನೇ ಆಶ್ರಯಿಸುತ್ತಾ...ಅತ್ಯಂತ ನಿಕಟವಾದ ಸ್ನೇಹ ಬಂಧನ ಬೆಳೆಸಿಕೊಂಡು ಬಿಟ್ಟಿರುತ್ತೆ.... ಮಕ್ಕಳ ಬಾಲ ಲೀಲೆಗಳಲ್ಲಿ ತಾಯಿ ತನ್ನ ಬಾಲ್ಯವನ್ನೂ, ತಾರುಣ್ಯದಲ್ಲಿ ತನ್ನ ಭಾವನೆಗಳ ಏರುಪೇರಿನ ನೆರಳುಗಳನ್ನೂ ಕಾಣುತ್ತಾಳೆ.... ಎಲ್ಲಿ ಈ ಸಸ್ನೇಹ ಸಂಬಂಧವಿರುತ್ತದೋ ಅಲ್ಲಿ, ತಾಯಿ ಮಕ್ಕಳ ಸಂಬಂಧ ಗಟ್ಟಿಯಾದ ಅಡಿಪಾಯದ ಮೇಲೆ ಸುಭದ್ರವಾದ ಕಟ್ಟಡವಾಗಿರುತ್ತದೆ....ಹಾಗೇ ತಂದೆ-ಮಕ್ಕಳ ನಡುವೆ ಕೂಡ ಆರೋಗ್ಯಕರ, ನಿಕಟ ಸ್ನೇಹವಿಲ್ಲದಿದ್ದರೆ, ಸಂಬಂಧ ಗಟ್ಟಿಯಾಗುವುದಿಲ್ಲ.....ಹೀಗೇ ಈ ಸ್ನೇಹ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಒಳ್ಳೆಯ ಸ್ನೇಹಿತರಾಗುವುದರ ಮೂಲಕ, ಅತ್ಯಂತ ಆತ್ಮೀಯವಾಗುತ್ತದೆ. ಅಣ್ಣ-ತಮ್ಮ, ಅಕ್ಕ-ತಂಗಿಯರ ಮಧ್ಯೆ ಪ್ರೀತಿಯಿಲ್ಲದಿರುವುದಿಲ್ಲ, ಆದರೆ ಎಲ್ಲಿ ಸ್ನೇಹವಿರುತ್ತದೋ ಅಲ್ಲಿ, ಸಂಬಂಧ ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ಅಕ್ಕ ತನ್ನ ತಮ್ಮ, ತಂಗಿಯರ ವ್ಯಕ್ತಿತ್ವ ವಿಕಾಸಕ್ಕೂ, ಬೆಳವಣಿಗೆಗೂ ಯಾವಾಗಲೂ ಆಪ್ತ ಸೂಚನೆ, ಸಲಹೆಗಳನ್ನು ಕೊಟ್ಟು, ಸ್ನೇಹಿತೆಯಂತಿರಬಹುದು. ಇಲ್ಲಿ ಸಂಬಂಧಕ್ಕಿಂತ ಸ್ನೇಹ ಹೆಚ್ಚು ಮುಖ್ಯವಾಗುತ್ತದೆ..... ಈ ಥರಹದ ಸ್ನೇಹ ಸಂಬಂಧಗಳಲ್ಲಿ, ಅಣ್ಣ-ತಂಗಿಯರ ಸ್ನೇಹ ಮಾತ್ರ ಅತ್ಯಂತ ಅಪೂರ್ವವಾದದ್ದು... ಏಕೆಂದರೆ ತಂಗಿ ತನ್ನ ಅಣ್ಣನಲ್ಲಿ ಬರಿಯ ಅಣ್ಣ ಮಾತ್ರವಲ್ಲ, ತಂದೆ, ಮಾರ್ಗದರ್ಶಕ, ಅಧ್ಯಾಪಕ, ಆತ್ಮೀಯ ಮತ್ತು ತನ್ನ ಸಂದೇಹಗಳನ್ನು ನಿವಾರಿಸುವ ಒಬ್ಬ ಆರೋಗ್ಯಕರ ವ್ಯಕ್ತಿತ್ವವುಳ್ಳ, ಆದರ್ಶ ಭಾವನೆಗಳುಳ್ಳ ವ್ಯಕ್ತಿಯೆಂದು ನಂಬಿರುತ್ತಾಳೆ.... ಅಕ್ಕ ತಮ್ಮನ ಪ್ರೀತಿಯಲ್ಲಿ, ಸಂಬಂಧದಲ್ಲಿ ಒಂಥರಾ ತಾಯಿ-ಮಗುವಿನ ಛಾಯೆ ಮೇಲ್ನೋಟಕ್ಕೇ ಕಂಡ ಬರುತ್ತದೆ, ಆದರೆ ಅಣ್ಣ-ತಂಗಿಯರ ಸಂಬಂಧದಲ್ಲಿ ಅದು ಬೇರೆಯೇ ಇರುತ್ತದೆ. ಅಣ್ಣ-ತಂಗಿಯರ ಸಂಬಂಧ ಮಾತ್ರ ಅತ್ಯಂತ ಸೂಕ್ಷ್ಮವಾದ, ಮಧುರವಾದ, ಅನುರಾಗದಿಂದ ಕೂಡಿದ, ಎಲ್ಲಾ ಸಂಬಂಧಗಳಿಗೂ ಮೀರಿದ ಸ್ನೇಹದ ಸಂಬಂಧ....ಕೊನೆಯದಾಗಿ ಸಂಬಂಧಗಳಲ್ಲಿಯ ಸ್ನೇಹದ ಮಾತು ಎಂದರೆ ಗಂಡ-ಹೆಂಡತಿಯರ ನಡುವಿನದು.... ಹಿರಿಯರೊಪ್ಪಿ ನಿಶ್ಚಯಿಸಿದ ಮದುವೆಯೋ, ಪ್ರೇಮ ವಿವಾಹವೋ.. ಮದುವೆಯ ವಿಧಾನ ಅಥವಾ ರೀತಿ ಇಲ್ಲಿ ಮುಖ್ಯವಾಗುವುದಿಲ್ಲ. ಮದುವೆಯ ನಂತರದ ಗಂಡ-ಹೆಂಡತಿಯರ ಸಂಬಂಧ ಬೆಸೆಯುವ ಸ್ನೇಹ ಮುಖ್ಯವಾಗುತ್ತದೆ. ಎಲ್ಲದಕ್ಕಿಂತ ಮೊದಲು ಇಬ್ಬರ ನಡುವೆ ಸ್ನೇಹ ತಂತು ಬೆಸೆಯಲೇಬೇಕು. ಒಬ್ಬರಲ್ಲಿ ಒಬ್ಬರು ತಮ್ಮ ಆತ್ಮೀಯ ಸ್ನೇಹಿತರನ್ನು ಕಂಡಾಗಷ್ಟೇ... ಸಂಬಂಧ ಹೆಚ್ಚು ಅರ್ಥಪೂರ್ಣವಾಗುವುದು. ಯಾವುದೇ ವಿಷಯಗಳ ಬಗ್ಗೆಯೂ ಕಟ್ಟುಪಾಡಿಲ್ಲದೇ ಚರ್ಚಿಸಬಹುದಾದರೆ ಅದು ಅಣ್ಣ-ತಂಗಿಯರ ಮಧ್ಯೆ ಮತ್ತು ಗಂಡ-ಹೆಂಡತಿಯರ ಮಧ್ಯೆ ಮಾತ್ರ.... ಹೆಣ್ಣು ತನ್ನ ಎಲ್ಲಾ ಬೇಕು ಬೇಡಗಳ ನಿಗಾ ವಹಿಸುವ, ತನ್ನ ಭಾವನೆಗಳನ್ನು ಗೌರವಿಸುವಂತಹ ವ್ಯಕ್ತಿಯನ್ನು ಜೀವನ ಸಂಗಾತಿಯಾಗಿ ಬಯಸುತ್ತಾಳೆ. ತನ್ನ ಸಂಗಾತಿ ಸಂದರ್ಭಗಳಿಗೆ ತಕ್ಕಂತೆ ತನ್ನನ್ನು, ಅಣ್ಣನಂತೆ ಅರ್ಥ ಮಾಡಿಕೊಂಡು - ತಂದೆಯಂತೆ ಸಂತೈಸಿ, ಗೆಳೆಯನಂತೆ ಚರ್ಚಿಸಬೇಕೆಂದು, ಬಯಸುತ್ತಾಳೆ... ಹೆಣ್ಣು ಮಾತ್ರ ತನ್ನ ಗಂಡನಿಗೆ, ಅಕ್ಕನಾಗಿ, ತಾಯಿಯಾಗಿ, ಗೆಳತಿಯಾಗಿ ವಿಧವಿಧ ಪಾತ್ರಗಳನ್ನು ನಿಭಾಯಿಸಬೇಕಾಗಿಲ್ಲ... ಗಂಡು ಕೂಡ ಹಾಗೇ ಮಾಡಿದಾಗಷ್ಟೇ ಸಂಬಂಧ ಕೊನೆತನಕ ಉಳಿಯುವುದು. ಸಂಬಂಧ ಉಳಿಯಬೇಕೆಂದರೆ ಎಲ್ಲಕ್ಕಿಂತ ಮೊದಲು ಇಬ್ಬರಲ್ಲೂ ಸ್ವಾರ್ಥ ರಹಿತ, ಯಾವುದೇ ನಿರೀಕ್ಷಣೆಯಿಲ್ಲದ ಪವಿತ್ರ ಸ್ನೇಹ ಏರ್ಪಡಬೇಕು ಮತ್ತು ಈ ಸ್ನೇಹದ ಭದ್ರ ಕೋಟೆಯ ಒಳಗೆ, ಹೊಸ ಜೀವನದ ಸುಂದರ ಅರಮನೆ ಕಟ್ಟಬೇಕು. ಆ ಅರಮನೆಯ ತೋಟದಲ್ಲಿ ಪ್ರೇಮದ ಹೂಗಳು ಅರಳಬೇಕು....ಕೆಲವು ದಿನಗಳ ಹಿಂದೆ ನಾನು " ಸಿಂಪಥಿ ಮತ್ತು ಎಂಫಥಿ "ಯ ಮಧ್ಯದ ತೆಳುವಾದ ಗೆರೆಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದೆ ... ನಿಘಂಟಿನ ಅರ್ಥಗಳನ್ನು ಬಿಟ್ಟು, ಇನ್ನೂ ಸ್ವಲ್ಪ ಆಳವಾಗಿ ಯೋಚಿಸಿದಾಗ, ನನಗೆ ನಿಜಕ್ಕೂ ಅಚ್ಚರಿಯಾಗಿತ್ತು. ಅಬ್ಬಾ..!! ನನ್ನ ಜೀವನದಲ್ಲೇ ಇದರ ಅನುಭೂತಿ ಎಷ್ಟು ಚೆನ್ನಾಗಿ ಆಗಿದೆಯೆಂದು.... ಮಧುರ ಸ್ನೇಹದ ಸಂಬಂಧಗಳೇರ್ಪಟ್ಟಾಗಲೇ ನಮಗೆ ಎಂಫಥಿಯ ನಿಜವಾದ ಅರ್ಥದ ಅನುಭವವಾಗುವುದು... ಸಿಂಪಥಿ ಮತ್ತು ಎಂಫಥಿಯ ಜೊತೆ ಇನ್ನೊಂದು ಶಬ್ದವನ್ನೂ ಜೋಡಿಸಬಹುದು ಅದು... "ಕಂಪ್ಯಾಶನ್".......ಮೂಲ ಅರ್ಥ ನೋಡಿದರೆ ಒಂದೇ ಅನ್ನಿಸುವುದಾದರೂ. ಇದನ್ನು ನಾವು ಮಾನವೀಯತೆಯ ಜೊತೆ ಹೆಚ್ಚು ಜೋಡಿಸಬಹುದು... ಆಂಗ್ಲದ ಒಂದು ಮಾತು... "Give compassion and you will receive understanding....Give unconditional love and you will become infinite".... ಅದರರ್ಥವನ್ನು ವಿಶ್ಲೇಷಿಸಿದಾಗ ಮಾನವೀಯತೆಯ ಮತ್ತು ಸ್ನೇಹದ ಹಸ್ತವನ್ನು ನಾವು ಮತ್ತೊಬ್ಬರೆಡೆ ಚಾಚಿದಾಗ, ನಮಗೆ ಬದುಕಿನ ನಿಜವಾದ ಅರ್ಥ ತಿಳಿದುಕೊಳ್ಳುವ ಅವಕಾಶ ಸಿಗುತ್ತದೆ... ಹಾಗೂ ಯಾವುದೇ ನಿರೀಕ್ಷಣೆಯಿಲ್ಲದ, ಕಟ್ಟುಪಾಡುಗಳಿಲ್ಲದ, ಮುಕ್ತವಾದ ಪ್ರೀತಿಯನ್ನು ಸ್ನೇಹದೊಂದಿಗೆ ಬೆರೆಸಿ ಎಲ್ಲರಿಗೂ ಹಂಚಿದರೆ, ನಾವು ಈ ಬ್ರಹ್ಮಾಂಡದಲ್ಲಿರುವ ಪ್ರಚಂಡ ಶಕ್ತಿಯೊಂದಿಗೆ ವಿಲೀನಗೊಳ್ಳುತ್ತೇವೆ.... ಅಂದರೆ ಪ್ರೀತಿಯಂತೆ ನಾವು ಸ್ನೇಹವನ್ನೂ ಪವಿತ್ರ (divine) ಎನ್ನಬಹುದು... ಇಷ್ಟೆಲ್ಲ ಸ್ನೇಹದ ವಿಚಾರ ನಾನು ಬರಿಯ ಮನುಷ್ಯ ಸಂಬಂಧಗಳಿಗೆ ಹೇಳಿದೆ... ಆದರೆ ಇಲ್ಲಿ ನನ್ನ ಮಾತುಗಳನ್ನು ಮುಗಿಸುವ ಮುನ್ನ..."ನಮ್ಮ ನಿಮ್ಮಗಳ ನಡುವಿನದಲ್ಲದ, ನಾವು ನಂಬುವ ಭಗವಂತನ ಜೊತೆಗಿನ ನಮ್ಮ ಅಂತರಂಗದ ಸಂಬಂಧವನ್ನೂ ನಾವು ಸ್ನೇಹವೆಂದೇ ಕರೆಯುತ್ತೇವಲ್ಲವೇ....ನಮ್ಮ ಆರಾಧ್ಯ ದೈವವೇ ನಮ್ಮ ಅಂತರಂಗದ ಹಾಗೂ ಅತ್ಯಂತ ನಿಕಟ ಸ್ನೇಹಿತನಲ್ಲವೇ....ನಾವು ನಮ್ಮ ದೈವದ ಜೊತೆಗೆ ತೋರುವ ನಮ್ಮ ಪ್ರೀತಿ, ಭಕ್ತಿ, ಅನುಬಂಧ ಎಲ್ಲವೂ ಸ್ನೇಹ ಮಯವೇ ಅಲ್ಲವೇ...ನಾವು ಮೆಚ್ಚಿ ಆರಾಧಿಸುವ ಭಗವಂತನಿಂದ ನಾವು unconditional ಪ್ರೀತಿ/ಸ್ನೇಹ ಪಡೆದುಕೊಳ್ಳುತ್ತಿರುವಾಗ, ನಾವೂ ಸ್ನೇಹಕ್ಕೆ ಪುಟ್ಟ ಸಂಬಂಧದ ಎಳೆ ಬೆರೆಸಿ, ಸ್ನೇಹವನ್ನು ವಿಶ್ವವ್ಯಾಪಿಯಾಗಿಸಬೇಕೆಂಬುದೇ ನನ್ನ ಅಭಿಪ್ರಾಯ....."ರಕ್ತ ಸಂಬಂಧಗಳಲ್ಲೇ ನಾವು ಸ್ನೇಹವನ್ನು ಅನುಮೋದಿಸುವಾಗ.... ಸ್ನೇಹಿತರ ಜೊತೆಗೆ ಸಂಬಂಧ ಗುರುತಿಸಿಕೊಳ್ಳುವುದರಲ್ಲಿ ನನಗೆ ಯಾವ ತಪ್ಪೂ ಕಾಣುವುದಿಲ್ಲ. ಸ್ನೇಹಿತರ ಜೊತೆಗೂ ನಾವು ಭಾವನಾತ್ಮಕವಾಗಿ ಸಂಬಂಧ ಕಲ್ಪಿಸಿಕೊಂಡಾಗಲೇ ಆತ್ಮೀಯತೆ ಹೆಚ್ಚುವುದು ಮತ್ತು ಮುಕ್ತವಾಗಿ ಚರ್ಚಿಸಲು ಅವಕಾಶವಾಗುವುದು...... ರಕ್ತ ಸಂಬಂಧಗಳಲ್ಲಿರುವ ನಿರೀಕ್ಷಣೆ ಸ್ನೇಹದಲ್ಲಿ ಇರುವುದಿಲ್ಲವೆಂಬುದೊಂದು ಮುಖ್ಯ ಕಾರಣವಾದರೆ, "ಸ್ನೇಹ"ದ ಕಡಲು "ರಕ್ತ ಸಂಬಂಧ"ದ ಕಡಲಿಗಿಂತ ಅತ್ಯಂತ ವಿಶಾಲವಾದುದು ಮತ್ತು ಕಡಲಿಗಿಳಿಯುವ ಪ್ರತೀ ದೋಣಿಗೂ, ತೇಲಲು ಬೇಕಾದಷ್ಟು ವಿಸ್ತಾರ ಇರುವುದು....ನನ್ನ ಮಿತ್ರರೊಬ್ಬರ ಸಂದೇಶ...."ಆಕಾಶಕ್ಕಿಂತ ಅಗಲವಾದುದು ಆಸೆ....ನೀರಿಗಿಂತ ತೆಳುವಾದುದು ಉಸಿರು....ಹೂವಿಗಿಂತ ಮೃದುವಾದುದು ಮನಸು...ವಜ್ರಕ್ಕಿಂತ ಅಮೂಲ್ಯವಾದುದು ಪ್ರೀತಿ....ಪ್ರೀತಿಗಿಂತ ಪವಿತ್ರವಾದುದು ಸ್ನೇಹ".....ಪ್ರತಿಯೊಬ್ಬರ ಜೀವನದಲ್ಲೂ "ಸ್ನೇಹ" ಎಷ್ಟು ಅವಶ್ಯಕ ಮತ್ತು ಸ್ನೇಹವೇ ಉಸಿರು ಎಂಬುದನ್ನು ಸರಳವಾಗಿ ಮೇಲಿನ ಕೆಲವು ಸಾಲುಗಳು ಅರ್ಥ ಬಿಡಿಸಿಟ್ಟಿವೆ.... ಇದನ್ನು ಕಳುಹಿಸಿದ ನನ್ನ ಸ್ನೇಹಿತರಿಗೆ, ಸಸ್ನೇಹ ವಂದನೆಗಳನ್ನು ಸಲ್ಲಿಸುತ್ತಾ...ಹೀಗೆ ನಾವು ನಮ್ಮ ಬದುಕಿನ ಎಲ್ಲಾ ಕೊಂಡಿಗಳನ್ನೂ ಸ್ನೇಹಕ್ಕೇ ಜೋಡಿಸಿದರೆ, ಎಲ್ಲವೂ ಮತ್ತು ಎಲ್ಲರೂ ’ಸಂಬಂಧಗಳೇ’.... ಸಂಬಂಧಗಳಿಲ್ಲದ ಪ್ರೀತಿ ಸ್ನೇಹವಲ್ಲ, ಸ್ನೇಹವಿಲ್ಲದ ಬದುಕು ಬದುಕಲ್ಲ"... ನಾ ಮೇಲೆ ಹೇಳಿದ ಎಲ್ಲಾ ಸಂಬಂಧಗಳಲ್ಲೂ ಸ್ನೇಹವಿದ್ದೇ ಇರುವುದರಿಂದಲೇ ನಮಗೆ ನಿಷ್ಕಲ್ಮಶವಾದ ಪ್ರೀತಿಯ ಸಂಬಂಧಗಳು ಸಿಗುತ್ತವೆ.

Tuesday, March 16, 2010

ನೆನಪಲ್ಲೇ ......


ಎಲ್ಲರಿಗೂ ಯುಗಾದಿ ಹಬ್ಬಕ್ಕೆ ರಜೆ. ನನಗೊಂದೇ ಆಫೀಸ್ ಅಲ. ರಜೆ ಇದ್ರೆ ಎಷ್ಟು ಚೆನ್ನಾಗಿತ್ತು ಅಂತ ಮನಸಲ್ಲಿ ಅಂದುಕೊಳ್ಳುತ ಕ್ಯಾಬ್ ಹತ್ತಿದೆ. ಕ್ಯಾಬ್ ಕುಳಿತು ಕಿಟಿಕಿ ಆಚೆ ನೋಡುವುದು ನಂಗೆ ಪಂಚಪ್ರಾಣ. ಅಲ್ಲಿ ಸಿಗುವ "ಏಕಾಂತ "ನನಗೆ ತುಂಬಾ ತುಂಬಾ ಇಷ್ಟ.ಗಾಳಿಗೆ ಮುಖಒಡ್ಡಿ ಕೂರುತ್ತೇನೆ. ಅಬ್ಬ! ಎಂಥ ಸುಖವಿದೆ !!! ಹಾಗೇ ಹೋಗುತ್ತಿರಬೇಕಾದರೆ ಒಂದು ಮನೆಯಾಚೆ ಒಂದು ಹೆಂಗಸು, ಸುಮಾರು ನನ್ನ ಅಮ್ಮನ ವಯಸ್ಸಿರಬಹುದು . ಮನೆ ಅಂಗಳವನ್ನು ಸಗಣಿ ಹಾಕಿ ಸಾರಿಸಿ ರಂಗೋಲಿ ಹಾಕುತ್ತಿದ್ದರು. ನೋಡಿ ಬಹಳ ಸಂತೋಷ ಆಯಿತು. ಅಬ್ಬ! ದಿನೇ ದಿನೇ ಯಾಂತ್ರಿಕವಾಗುತ್ತಿರುವ ಬದುಕಿನ ಮದ್ಯದಲ್ಲೂ ಈ ಮಹಿಳೆ ರಂಗೋಲಿ ಹಾಕುವಂತ ತಾಳ್ಮೆ ಹೊಂದಿದಾಳಲ್ಲ ಅಂತ ಖುಷಿ ಆಯಿತು.
ನನಗಿನ್ನೂ ನೆನೆಪಿದೆ. ಯಾವುದಾದರು ಹಬ್ಬ ಬಂದರೆ ಅಮ್ಮನ ಬಳಿ " ಅಮ್ಮ ನನಗೆ ಸಗಣಿ ಮುಟ್ಟಲು ಒನ್ ತರ. ನೀನೆ ಸಗಣಿ ಹಾಕಿ ಸಾರಿಸಿ ಕೊಡು ನಾನು ರಂಗೋಲಿ ಹಾಕುತ್ತೀನಿ ಅಂತ ಹೇಳುತ್ತಿದ್ದುದ್ದು . ನಾನು , ನನ್ನ ತಂಗಿ ನಾನು ರಂಗೋಲಿ ಹಾಕುತ್ತೀನಿ, ನಾನು ಹಾಕುತ್ತೀನಿ ಅಂತ ಕಿತ್ತಾಡುವಾಗ, ಅಮ್ಮ ಬಂದು ಸರಿ ಇಬ್ಬರು ಒಂದೊಂದು ಹಾಕಿ ಹೇಳಿದಾಗ, ನಾನು ,ತಂಗಿ compromise ಮಾಡಿ ಕೊಂಡು ಒಂದೇ ದೊಡ್ಡ ರಂಗೋಲಿ ಹಾಕೋಣ, 15 ರಿಂದ 8 ಹಾಕೋಣ? ಅಥವ 17 ರಿಂದ 9 ಹಾಕೋಣ ?ಬಾತುಕೋಳಿಗೆ ಯಾವ ಬಣ್ಣ? ಶಂಖಕ್ಕೆ ಯಾವ ಬಣ್ಣ ಅಂತ ಮಾತಾಡಿಕೊಂಡು ರಂಗೋಲಿ ಹಾಕುತ್ತಿದ್ವಿ. ಯಾಕೋ ನೆನಪಾಗಿ ಬೇಸರವಾಯಿತು. ಕಿರು ನಗೆ ಬಂತು ನನಗೆ.
"ನೆನಪಲ್ಲೇ ನಾ ಉಸಿರಾಡಿದೆ ,
ನೆನಪಲ್ಲೇ ನಾ ಜೀವಿಸಿದೆ "
ಈ ನೆನಪುಗಳೇ ಹೀಗೆ ಅಲ್ಲವ? ನೆನಪಿನ ದೋಣಿಯಲ್ಲಿ ತೇಲಾಡಲು ಏನೋ ಸಂತೋಷ!!!
ಅಪ್ಪನ ಹತ್ತಿರ ಹಠ ಮಾಡಿ 200 ಪುಟಗಳ 2 small size notebook ತರಿಸಿಕೊಂಡು , ಚುಕ್ಕಿ ರಂಗೋಲಿ ಗೆ ಒಂದು, ಬಳ್ಳಿ ರಂಗೋಲಿ ಗೆ ಒಂದು ಅಂತ ಎರಡು ಪುಸ್ತಕವನ್ನು ಮಾಡಿಟ್ಟುಕೊಂಡು, ಯಾರ ಮನೆ ಎದುರಿಗೆ ರಂಗೋಲಿ ಹಾಕಿದರು ಅದನ್ನು ನೋಡಿಕೊಂಡು ತಕ್ಷಣ ಮನೆಗೆ ಬಂದು ಅದನ್ನು ಪುಸ್ತಕದಲ್ಲಿ ಸೇರಿಸುತಿದ್ದೆ. ಹಿಂಗೆ ಮಾಡಿ ನನ್ನ ಹತ್ತಿರ ಕಡಿಮೆ ಅಂದರೂ 500 ರಂಗೋಲಿಗಳು ಶೇಖರವಾಗಿದ್ದವು . ಆದರೆ free hand ರಂಗೋಲಿ ಮಾತ್ರ ನನಗೆ ಕಡೇ ಓರೆಗೂ ಬಿಡಿಸಲು ಬರಲೇ ಇಲ್ಲ. ಎಷ್ಟೋ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಕೂಡ ಗೆದ್ದಿದ್ದೆ. ಆದ್ರೆ ಈಗ ರಂಗೋಲಿ ಹಾಕದೆ ಹತ್ತಿರ 2.5 ವರುಷಗಳು ಕಳೆದೇ ಬಿಟ್ಟಿದೆ. ಯಾಕೋ ಹಬ್ಬದಂದು ಇದನೆಲ್ಲ ಮಿಸ್ ಮಾಡಿಕೊಲ್ಳುತ್ತಿದ್ದೆನಲ್ಲ ಅಂತ ಮನಸಲ್ಲೇ ಅಂದುಕೊಂಡು , ರಜೆ ಕೊಡದ tl ನಾ ಮನಸಲ್ಲೇ ಧಾರಾಳವಾಗಿ ಬೈದುಕೊಂಡು ಆಫೀಸ್ ನೆಡೆಗೆ ಹೊರಟೆ.
=====****====****======
ಸ್ನೇಹಿತರೇ ,
ನಿಮಗೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಯುಗಾದಿಯು ನಿಮ್ಮ ಬದುಕಿನಲ್ಲಿ ಸಿಹಿ ತರಲಿ ಅಂತ ನಿಮ್ಮ ಗೆಳೆಯನ ಹಾರೈಕೆ.... :-)

Monday, March 8, 2010

ಮತ್ತೆ ಅವನ ನೆನಪಾಯಿತು .......

ಪ್ರತೀ ಸಾರಿಯೂ ನಾನು ಅಂದುಕೊಳ್ಳುತ್ತೇನೆ ಗೆಳೆಯ.....ಇನ್ನೂ ನಿನ್ನ ಮರೆತು ಬಿಡಬಿಡಬೇಕು ...ನಾನು, ನನ್ನ ಜೀವನ , ಅಂತ selfish ಆಗಿ ಬದುಕಿಬಿಡಬೇಕು...ನೀನು ಇಲ್ಲದೇನೂನಾನು ಜೀವಿಸಬಲ್ಲೆ ಎಂದು ತೋರಿಸಬೇಕು ..ಬರೀ ನಿನ್ನ ನೆನಪಿನ ಕಣ್ಣಿರಷ್ಟೇ ಅಲ್ಲ ನನಗೆನಗಲೂ ಬರುತ್ತದೆ ಎಂದು ಸಾರಿ ಸಾರಿ ಹೇಳಬೇಕು.....ನೀನು ಇಲ್ಲದಿದ್ದರೂ ನಿನ್ನ ನೆನಪೊಂದನ್ನು ನನ್ನ ಎದೆಯ ಗೂಡಿನಲ್ಲಿ ಬೆಚ್ಚಗೆ ಕಾದಿರಿಸಿಅದನ್ನ ಸವಿಯುತ್ತಾ ಜೀವನ ಕಳೆದು ಬಿಡುವ...ನಿನ್ನ ಪ್ರತಿಯೊಂದು ಮಾತುಗಳು ಈಗಲೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿದೆ...ನನ್ನಜೊತೆ ನೀನು ಆಡಿದ ಖುಷಿಯ ಮಾತುಗಳು, ನೋವಿನ ಮಾತುಗಳು, ನನ್ನ ಬಗ್ಗೆ ನಿನಗಿದ್ದಪ್ರೀತಿ ಎಲ್ಲವೂ ನೆನಪಿದೆ...ನೀನು ಒಂದು ದಿನ ಹೀಗೆ ನನ್ನ ಬಿಟ್ಟು ಹೋಗುತ್ತಿಯ ಎಂಬ ಕಲ್ಪನೆಯೂ ನನ್ನ ದಿಗಿಲುಗೊಳಿಸುತ್ತಿದ್ದ ಕಾಲವಾಗಿತ್ತು...ಆದರೆ ಗೆಳೆಯಅದೆಲ್ಲ ಸುಳ್ಳಾಗಿ ಹೋಯಿತು...ನೋಡು ಈಗ ನೀನಿಲ್ಲದೇ ಹೇಗೆ ನಾನು ಒಂದು ವರುಷ ಅಂದರೆ 365 ದಿನಗಳನ್ನು ಕಳೆದುಬಿಟ್ಟೆ...ಅದು ಹೇಗೆ ದಿನಗಳು ಕಳೆದವೋ ನನಗೇ ತಿಳೀ ತಿಲ್ಲ ....ನೆನಪಿಟ್ಟುಕೋ ಗೆಳೆಯ ನಿನ್ನನ್ನು ನನ್ನಷ್ಟು ಈ ಜಗತ್ತಿನಲ್ಲಿ ಯಾರು ಪ್ರೀತಿಸಲಾರರು...Its a Challenge!!! ... ತುಂಬಾ ಇಷ್ಟ ಪಟ್ಟು ಬಿಟ್ಟೆ ಗೆಳೆಯ ....ತುಂಬಾ ನೇ ...ಯಾಕೆ ಅಷ್ಟು ಇಷ್ಟ ಪಟ್ಟೆ ... I Dont know...I Dont have an valid answer for that..It just happened.....ಆ ನಿನ್ನ ಓರೆ ನೋಟ, ನೀನು ನಿನ್ನ ಕೂದಲನ್ನು ಸರಿ ಮಾಡಿಕೊಳ್ಳುತ್ತಿದ್ದ ರೀತಿ...ಗೆಳೆಯ...Believeme your looks were killing me ...ನಿನ್ನ smile ಚೆನ್ನಾಗಿದೆ, ನಿನ್ನ dimple cute ಅಂತೆಲ್ಲಾ ಹೇಳಿದಾಗ ನನ್ನಮನಸಲ್ಲೆಲ್ಲ ಆನಂದದ ಸಾಗರ ಉಕ್ಕಿ ಹರಿಯುತಿತ್ತು ....I was so crazy about you!!!ನನ್ನ ಗೆಳೆಯ ಯಾಕೋ ಸುಮ್ಮನೇ ನನ್ನ ರೇಗಿಸುವುದಕ್ಕೆ ಹೇಳಿದ ಹೀಗೆ ಮಾಡಿದರೆ ಅವನು ನಿನ್ನ ಬಿಟ್ಟು ಹೋಗುತ್ತಾನೆ ನೋಡುಅಂತ....ಕೂಡಲೇ ನನ್ನ ಕಣ್ಣಿನಿಂದ non-stop ಕಣ್ಣೀರು ಬಂದಿತ್ತು..ನನ್ನ ಸಮಾಧಾನ ಮಾಡಲು ಬಂದ ಅವನು ನೆನಪುಗಳು ಬೇಡವೆಂದರೂ ಕಾಡುತ್ತವೆ ಗೆಳೆಯ ..ಏನು ಮಾಡಲಿ??...ಮನಸ್ಸಿನಲ್ಲಿ ನೋವು ಇಟ್ತ್ಕೊಂಡು ಹೊರಗೆನಗುತ್ತಾ ಬಾಳುವುದು ಎಷ್ಟು ಕಷ್ಟ ಎಂದು ತಿಳಿದವರಿಗೆ ಗೊತ್ತು........ನೀನು ಎಲ್ಲೇ ಇರು ಗೆಳೆಯ ಆದರೆ ನನ್ನ ಮನಸ್ಸಿನಲ್ಲಿನೀನೆಂದೂ ಇದ್ದೇ ಇರುತ್ತಿಯ...ಹೇಳುತ್ತಾರಲ್ಲ ಗೆಳೆಯ...ಹೃದಯ ಕನ್ನೆಡಿ ಇದ್ದಂತೆ ...ಹೇಗೆ ಕನ್ನೆಡಿ ಒಡೆದಾಗ ಪ್ರತೀ ಚೂರಿನಲ್ಲೂಮುಖ ಕಾಣಿಸುತ್ತದೋ ಹಾಗೆ ಗೆಳೆಯ...ನನ್ನ ಹೃದಯದ ಪ್ರತೀ ಚೂರಿನಲ್ಲೂ ನಿನ್ನ ಮುಖವೇ ಕಾಣಿಸುತ್ತದೆ...ನನ್ನದೇನುತಪ್ಪಿಲ್ಲ..ಎಲ್ಲ ನನ್ನ ಹೃದಯದ್ದು ...ಸರಿ ಇಷ್ಟೆಲ್ಲಾ ನಿನಗ್ಯಾಕೆ ಹೇಳಬೇಕು ಅಲ್ಲವ? you are not at all bothered about me......ಪರ್ವಾಗಿಲ್ಲ ಗೆಳೆಯ...ನನಗೂ challenges ಅಂದ್ರೆ ತುಂಬಾ ಇಷ್ಟ .....ನಿನ್ನ ಬಿಟ್ಟು ಬದುಕುವುದೇ ನನ್ನ Life ನ Challenge ಅಂದುಕೊಳ್ಳುತ್ತೇನೆ...ಇದು ನನಗೆ ಯಾರು ಹಾಕಿದ challenge ಅಲ್ಲ ,ನೀನು ಹಾಕಿದ್ದಲ್ಲ ನನಗೆ ನಾನೇ ಹಾಕಿಕೊಂಡಿದ್ದು ..
And I have to win the challenge And win myself ಅಷ್ಟೆ...ಹೋಗುವುದು ಹೋಗಿದ್ದೀಯ ಗೆಳೆಯ...ನೀನು ತಿರುಗಿ ಬರುತ್ತೀಯೋ ಇಲ್ಲವೋ ಒಂದು ತಿಳಿದಿಲ್ಲ..ಆದರೆ ಒಂದಂತೂ ನಿಜ ನಿನ್ನತುಂಬಾ ಪ್ರೀತಿಸಿದೆ...ನಿನ್ನನ್ನೇ..ಬರೀ ನಿನ್ನನ್ನೇ...ಮನಸನ್ನು ಗಟ್ಟಿ ಮಾಡಿಕೊಂಡಿದ್ದೇನೆ ಗೆಳೆಯ...ನೀನ್ ಇಲ್ಲದೇ ಇರಬೇಕು ಅಂತ...ಹಾಗೆ ಇದೀನಿಕೂಡ..ಆದರೆ ಎಲ್ಲೋ ಒಂದೊಮ್ಮೆ ಭಯವಾಗಿ ಬಿಡುತ್ತೆ....ಎಲ್ಲಿ ನಾನು ಈ Challenge ನಲ್ಲಿ ಸೋತು ಬಿಡುತ್ತೇನೋಅಂತ...ಎಲ್ಲಿ ಜೀವನದಿಂದ ಓಡೀಹೊರಟು ಹೋಗುತ್ತೇನೋ ಅಂತ.....ಹೋಗುವುದಿಲ್ಲ ಗೆಳೆಯ ...ಆದರೂ ಮನಸಲೆಲ್ಲ ನಿನ್ನ ನೆನಪುಗಳು ಬೇಡವೆಂದರೂ ಬಂದು ವತ್ತರಿಸಿದಾಗ ಮನಸೆಲ್ಲ ಒಂದೊಮ್ಮೆ ಅಲ್ಲೋಲ ಕಲ್ಲೋಲವಾಗಿರುತ್ತದೆ ...ಹಾಗೆ ಮತ್ತೆ ಸ್ವಲ್ಪ ಸಮಯದ ನಂತರ ಮತ್ತೆ ಶಾಂತ ,ಪ್ರಶಾಂತ ತಿಳಿ ನೀರಿನ ಹಾಗೆ ಮನಸ್ಸು ಕೂಡ...ದೂರದಲ್ಲೆಲ್ಲೋ ನೀನಿದ್ದಿಯ ಒಂದು ದಿನ ನೀನು ಬರುತ್ತಿಯ ಏನೆಲ್ಲಾ ಕನಸುಗಳನ್ನು ಕಟ್ಟಿಕೊಂಡಿದ್ದೆ...ಆದರೆ ಈಗ ನಾನು ನಿನ್ನ ಬಗ್ಗೆಯಾವ ಕನಸನ್ನು ಕಟ್ಟುತ್ತಿಲ್ಲ .....ಮನಸ್ಸು ಈಗ ನಿರ್ಲಿಪ್ತ ನಿಶ್ಚಲ...ಶುಭ್ರ ಬಿಳುಪಿನಂತೆ ಸ್ವಚ್ಛ ... ...
ಇಂತಿ ನಿನ್ನ
ಸಂತೋಷ

Wednesday, March 3, 2010

ಪ್ರಾಣ ಸ್ನೇಹಿತ್ ರವಿಕುಮಾರ್

Hello ದಾಸಾ
ಯಾಕೋ ಏನಾಗಿದೆ ನಿನಗೆ ? ಮಾತಿಲ್ಲ, ಕಥೆಯಿಲ್ಲ.. ಕೊನೆಪಕ್ಷ ಒಂದು message ಕೂಡ ಮಾಡೋದು ಮರೆತು ಹೋಯ್ತಾ ?ನಂಗೊತ್ತು ಕಣೋ ನಿನಗೆ ಬೇರೆ ಗೆಳೆಯರು ಸಿಕ್ಕಿದ್ದರೆ ಅಂತ . ಆದರೂ ನಿನ್ನ ಪ್ರಾಣ ಸ್ನೇಹಿತರನ್ನ ಮರ್ತೋಗಿ ಬಿಡೋದಾ ? ಮೊನ್ನೆ ನಿನ್ನ ಸ್ನೇಹಿತ phone ಮಾಡಿದ್ದ ಅವ್ನೂ ಹೇಳ್ತಿದ್ದ ಮಾರಾಯ ರವಿ ಕಳ್ದೋಗಿದಾನೆ ಸಂತು ಮೊದಲಿನ ಥರ ಇಲ್ಲ ಅವ್ನು" ಅಂದಿದ್ದ .! But ನಾನು ಒಪ್ಪಲೇ ಇಲ್ಲ . "no no he can't change " ಅಂದಿದ್ದೆ. ಆದ್ರೆ ಮೊನ್ನೆ ಅನಿಸ್ತು ನೀನು ಬದಲಾಗಿದ್ದೀಯ, avoid ಮಾಡ್ತಾ ಇದ್ದೀಯ ಎಂದು .ಅತ್ತು ಬಿಟ್ಟೆ ರವಿ ನಿನ್ನೆ ರೂಮನಲ್ಲಿ . ಯಾಕೆ ನಿನ್ನನ್ನು ಅಷ್ಟೊಂದು ಹಚ್ಕೊಂಡೆ ಗೊತ್ತಿಲ್ಲ . mostly ನಮ್ಮಿಬ್ಬರ nature ಒಂದೇ ಆಗಿತ್ತು, or ನಿನ್ನಂಥ ಗೆಳೆಯನ ನಿರೀಕ್ಷೆಯಲ್ಲಿದ್ದೆ ..ನೀನು ಸಿಕ್ಕಿಬಿಟ್ಟಿದ್ದೆ.
Best friends ಅನ್ನೋ ಹಣೆಪಟ್ಟಿ ನಾವೆಂದೂ ಕಟ್ಕೊಳ್ಳಿಲ್ಲ . ಆದರೆ ನಾನು ಮನೆಗೆ ಹೋದಾಗ ಒಬ್ಬರನ್ನೊಬ್ರು ಅದೆಷ್ಟು ಮಿಸ್ ಮಾಡ್ತಾ ಇದ್ದೆವು ಹೇಳು.
ಮೊನ್ನೆ ideals ವರೆಗೆ ಹೋಗಿ ವಾಪಸ್ ಬಂದೆ ಕಣೋ ನಿನ್ನ ಜೊತೆ ಕಿತ್ತಾಡದೇ,ಹೊಟ್ಟೆ ಉರಿಸದೇ ಹೇಗೋ ತಿನ್ನಲಿ 'tiraamisu' ice-cream..! Friendship day, ಗಳಿಗೆ ನೀನು ಕೊಟ್ಟ 'ಹಳದಿ ' ಗುಲಾಬಿ ಹೂಗಳು ಅಳ್ತಾ ಇವೆ ಡೈರಿ ಹಾಳೆಗಳ ಮಧ್ಯೆ .ನನ್ನ ಕಳೆದ ಹುಟ್ಟಿದ ಹಬ್ಬಕ್ಕೆ ನೀನು ಕೊಟ್ಟ card ನಲ್ಲಿ ಹಲ್ಕಿರಿದುಕೊಂಡಿರೋ ಚಿಂಪಾಂಜಿ ನಗೋದನ್ನ ನಿಲ್ಸಿರಬಹುದು . ಜೋರು ಮಳೆಯಲ್ಲಿ ನಿನ್ನ ಜೊತೆ ಜಗಳ ಆಡ್ತಾ ice-cream ತಿಂದದ್ದು, Girinagarನ ಕೊನೆಯಲ್ಲಿನ ಭೇಲ್ ಪುರಿ stallನಲ್ಲಿ ಕಿತ್ತಡ್ಕೊಂಡು 'ಶೇವು ಪುರಿ'ತಿಂದದ್ದು ಇನ್ಮುಂದೆ ಬರೀ ನೆನಪು ಮಾತ್ರಾನಾ ?'ಹೌದು' ಅನ್ನೋ ಉತ್ತರ ಬರದಿರಲಿ ಎಂದು fingers cross ಮಾಡಿದೇನೆ .
ಅದ್ಯಾಕೆ ನಿನ್ನ ಅಷ್ಟೊಂದು ಮಿಸ್ ಮಾಡ್ತೇನೆ ಅಂತ ಯೋಚನೆ ಮಾಡಿದಾಗ, ನೆನಪುಗಳೊಂದಿಗೆ ಗುದ್ದಾಡಿದಾಗ ಹೊಳೆದದ್ದು ಇಷ್ಟು ..! ನಿನ್ನ ಜೊತೆ ಇರೋವಾಗ ಒಬ್ಬ disabledಅನ್ನೋ ಫೀಲಿಂಗ್ ಯಾವತ್ತು ಅದೆಷ್ಟು ತಲೆ ತಿಂತಿದ್ದೆ ನಾನು. 'ನಗುವನ್ನ ಮಾತ್ರ ಹಂಚಬೇಕು ಅಳುವನ್ನಲ್ಲ' ಎನ್ನುವ ನನ್ನ theory ಬುಡಮೇಲಾದದ್ದು ನಿನ್ನ ನಿಷ್ಕಲ್ಮಶ ಸ್ನೇಹದ ಧಾರೆಯಲ್ಲಿ.ನನ್ನ ಮನದೊಳಗಿನ ನಿಷ್ಕಲ್ಮಶ ಸ್ನೇಹದ definitionಗೆ ನೀನು ಉದಾಹರಣೆ. ಕಣ್ಣೀರಿನ ಸಿಂಚನ, ನಗುವಿನ ಎಳೆಬಿಸಿಲಿಗೆ ಮೂಡಿದ ಕಾಮನ ಬಿಲ್ಲಿನ ಸ್ನೇಹ ನಮ್ಮದು ಅನ್ಕೊಂಡಿದ್ದೆ . . ನನ್ನ ಕಣ್ಣೀರನ್ನು ಕಂಡ ಅಪರೂಪದ ವ್ಯಕ್ತಿಗಳಲ್ಲಿ ನೀನೂ ಒಬ್ಬನಾಗಿದ್ದೆ.ಎಷ್ಟು ಸಲ ಜಗಳಾಡಿದ್ದೇವೋ ಲೆಕ್ಕಕ್ಕಿಲ್ಲ. ನಿನ್ನ ಜೊತೆ ಕಣ್ಣೀರಾದ ಘಳಿಗೆಗಳನ್ನು ಹೇಗೋ ಮರೆಯಲಿ ?
ಅದೆಷ್ಟು ತಲೆ ತಿಂತಿದ್ದೆ ನಾನು. ಆ ದಿನ ಒಂದೇ messageನ್ನು 50 ಸಲ ಕಳುಹಿಸಿ ನೀನೂ cellphone switch off ಮಾಡಿದ್ದೆ ನೋಡು . ನನ್ನ stupid poemಗಳ ಕೇಳುಗ ನೀನಾಗಿದ್ದೆ, ಹೊರಗೆ ಬಂದು ಒಂದು ಪುಟ್ಟ walk ಬಂದಿದ್ದೆನಲ್ವಾ? ಇಡೀ ದಿನ F.M ಥರ ವಟವಟ ಅನ್ನೋಳು ಮೌನವಾಗಿ ನಡೆದಿದ್ದೆ ನಿನ್ನ ಜೊತೆ .!ಕೊನೆಗೆ ನೀನು "ಥ್ಯಾಂಕ ಸಂತು " ಅನ್ನೋವಷ್ಟರಲ್ಲಿ ರಸ್ತೆಯ ದೀಪದ ಬೆಳಕಿಗೆ ಕಂಡದ್ದು ಒದ್ದೆ ಕಂಗಳು ..!
ಮನದಲ್ಲಿ ಅದೆಂಥ ನೋವಿದ್ದರೂ ಹೊರಗಡೆಯಿಂದ ನಗುತ್ತಲೇ ಇರುತ್ತಿದ್ದ ನಿನಗೆ ಯಾವತ್ತೋ ಮನದಲ್ಲೇ hats off ಹೇಳಿದ್ದೆ .ನಿನ್ನಿಂದ ಎಷ್ಟೋ ರವಿ ... ಬರೀ best friend ಅಲ್ಲ ನೀನು the Bestest friend .!
ನೀನು ಹೇಳ್ತಿದ್ದೆ ಅಲ್ವಾ ? "ಯಾವತ್ತೂ ಬದಲಾಗಬೇಡ ರವಿ ..ಈಗ ಇದ್ದಂಗೆ ಇರು.. ನನ್ನ ಮಕ್ಕಳಿಗೆ ''jub v met'ಫಿಲ್ಮ್ ತೋರಿಸಿ ನಂಗೂ ಒಬ್ಳು ಥೇಟ್ 'ಗೀತ್' ನಂಥ best friend ಇದ್ಳು ಅಂತ ಹೇಳ್ತೇನೆ "ಎಂದು ..
ತುಂಬಾ ಮಿಸ್ ಮಾಡ್ತಿದೇನೆ ಕಣೋ ನಿನ್ನ .ನೀ ಜೊತೆಗಿಲ್ಲದ girinagarಬೇಡ ಅನ್ಸ್ತಿದೆ. ಒಮ್ಮೆ ಮೆಸೇಜ್ ಮಾಡಿ "stupid miss u too" ಅಂದುಬಿಡೋ. . ಎಲ್ಲೋ ಒಂದು ಕವನ ಓದಿದಾಗ .ನಾನು ಕಾಡಬಹುದು. ನನ್ನ ಮಿಸ್ ಮಾಡಬಹುದು ಆಗ ಒಂದೇ ಒಂದು message ಮಾಡಿಬಿಡು "stupid miss you " ಎಂದು .ಕಾಯ್ತಾ ಇರ್ತೇನೆ ಅದೇ 'ಸೈಬಿನ್ ' complexನ ಅದೇ ನಾಲ್ಕನೆ ಖುರ್ಚಿಯಲ್ಲಿ ..!
Your stupid ಫ್ರೆಂಡ್
ಸಂತೋಷ್

ಹೆಸರಿಲ್ಲದ miditagaLu

ಮಾತಾಡುವ ಮನಸ್ಸು ಮೂಕವಾಗಿಬಿಟ್ಟರೆ? ಸದಾ ನಗುನಗುತ್ತಿರುವ ತುಟಿಗಳು ಬಿಗಿದು ಕೊಂಡರೆ? ಹಾಡುವ ಕೋಗಿಲೆ ಸುಮ್ಮನಾಗಿಬಿಟ್ಟರೆ? ಭೊರ್ಘರೆಯುವ ಸಮುದ್ರವು ನಿಸ್ಚಲವಾದ್ರೆ? ನವಿಲು ಕುಣಿಯುವುದನ್ನು ನಿಲ್ಲಿಸಿಬಿಟ್ಟರೆ? ವಸಂತನ ಆಗಮನವೆ ಆಗದಿದ್ದ್ರೆ? ಬದುಕಿನಲ್ಲಿ ಏನೂ ಸಮರಸವೇ ಇರಲಾರದು." ಪ್ರೀತಿ ಹರಿಯುವ ನದಿಯಂತೆ "ಇದನ್ನು ಎಲ್ಲೋ ಓದಿದ ನೆನಪು. ಬರಡಾದ ಭೂಮಿಯಲ್ಲಿ ಬೆಳೆ ಆಗಬೇಕೆಂದರೆ ಅಲ್ಲಿ ಮಳೆ ಆಗಮನ ಆಗಲೇ ಬೇಕು. ಬರಡಾದ ಹೃದಯದಲ್ಲಿ ಪ್ರೀತಿ ಚಿಗುರ ಬೇಕಾದರೆ ಅಲ್ಲಿ ಪ್ರೀತಿಯ ಮಳೆ ಆಗಲೇ ಬೇಕು. ಎಲ್ಲರ ಎದುರು ಕಣ್ಣು ,ಮೂಗು ಕೆಂಪು ಮಾಡಿಕೊಂಡು 'ಏನಾಯ್ತು'?? ಅಂತ ಕೇಳಿಸಿ ಕೊಂಡು ಬೇಸರವಾಗಿದೆ. ನಗುತ್ತಿರುವ ಮುಖದ ಹಿಂದಿನ ನೋವಿನ ಅರಿವು ನಿನಗಿಲ್ಲ. ಕೊಡುವ ಕೈಗಿಂತ ಬೇಡುವ ಕೈಗಳು ಯಾವಾಗಲು 'ಕೀಳೆ '!!!.ತಕರಾರಿಲ್ಲ ಈ ಮಾತಿಗೆ. ಕೊಟ್ಟವನು ಕೊಟ್ಟ ಕ್ಷಣಕ್ಕೆ ಮರೆತರೆ , ಅದನ್ನು ಕಾಡೀ ಬೇಡಿ ಪಡೆದುಕೊಂಡ ಜೀವ ಕೊನೇ ಉಸಿರಿರುವ ವರೆಗೂ , ಅದನ್ನು ಪಡೆದುಕೊಂಡ ಕ್ಷಣವನ್ನು ನೆನಪಿಸಿಕೊಂಡು 'ಜೀವನ ಧನ್ಯ' ಅಂತ ಖುಷಿ ಪಡುತ್ತದೆ. ಅದು ಸಿಗದೆ ಇದ್ದರೆ ,ಸಾಯುವ ಕಡೆ ಕ್ಷಣದ ವರೆಗೂ ಬೇಡಿಸಿಕೊಂಡ ಮುಖದ ದರ್ಶನಕ್ಕೆ ತವಕಿಸುತ್ತದೆ. ಬದುಕು ಅನಿವಾರ್ಯ ಆಗಬೇಕಾ? ಈ ಓಟ ಎಲ್ಲೀವರೆಗೆ ಸಾದ್ಯ ? ಇಂಥ ಒಂದು ಮನಸ್ಸಿರುವುದಕ್ಕೆ ಸಂತೋಷ. ಮಾತು ಕೇಳದ ಹೃದಯದ ಬಗ್ಗೆ ಸಿಟ್ಟು.ಸಮಯವನ್ನು ಕಳೆಯಲು ಯಾರೂ ಇಂಥ ದುಬಾರಿ ಮಾರ್ಗವನ್ನು ಹುಡುಕಿಕೊಳ್ಳುವ ಸಾಹಸ ಮಾಡಲಾರರು!!! ಆ ನೋವಿನ ನೋವು ಬಲ್ಲವರಿಗೆ ಗೊತ್ತು ....ಪಾರ್ಕಿನ ಮೂಲೆ ಬೆಂಚುಗಳು ಧನ್ಯ!! ಒಂದು ಸುಂದರ ಹುಡುಗಿ ಘಂಟೆಗಟ್ಟಲೇ ಕುಳಿತಿರು ತ್ತಾಳೆ . ಅದರ ಹಾಗೆ ಒಂಟಿಯಾಗಿ ....ಸುಮ್ಮನೇ ಇದ್ದು ಬಿಟ್ಟರೆ ಜೀವನ ಬೋರ್ ಆಗುತ್ತೆ. ಅದಕ್ಕೆ ನನಗೆ ನಾನು ಈ ತರ ಮಾಡಿಕೊಂಡು ಬಿಟ್ಟೇನ?? ....ಯಾಕೆ ಮನಸೇ ನನ್ನ ಮಾತೇ ಕೇಳುತ್ತಿಲ್ಲ ? ? ಆದರೂ ಮನಸೇ ನೀನು ತಪ್ಪು ಮಾಡಿಲ್ಲ !!

Thursday, February 25, 2010

ಪ್ರೇಮ ಪತ್ರ ಗಳು ತಂದ ಅವಾಂತರ


ನಮ್ಮ ಆಫೀಸಿನಲ್ಲಿ ಹೊಸ team leader ಬಂದಿದ್ದಾರೆ. ಅವರು ಸಕತ್ ತಮಾಷೆ ಮಾಡುತ್ತಿರುತ್ತಾರೆ.ಅವರಿಗೆ lovers ಅಂದರೆ ಏನೋ ವಿಶೇಷ ಆಸಕ್ತಿ ತೋರಿಸುತ್ತಾರೆ .ಅದು ಯಾಕೆ ಅಂತ ನನಗೆ ಇನ್ನೂ ಕಂಡು ಹಿಡಿಯೋಕೆ ಆಗಲೇ ಇಲ್ಲ ...:( ನಮ್ಮ teamನಲ್ಲಿ ಯಾರಿಗಾದರು boyfriend / girlfriend ಇದ್ದರೆ ಅವರ ಹೆಸರನ್ನು team ಗೆ ಹೇಳಬೇಕು. ಹಾಗೇ ಹೇಳಿದಮೇಲೆ ನಾವು ಅವರ ಹೆಸರನ್ನು ಕರೆಯೋ ಹಾಗಿಲ್ಲ. ಬದಲಿಗೆ ಅವರ boyfriend/ girlfriend ಹೆಸರಿನಿಂದ ಅವರನ್ನು ಕರೀಬೇಕು. ನಮ್ಮ teamನಲ್ಲಿ ಸುಮಾರು ಜನರ ಹೆಸರೇ ಮರೆತು ಹೋಗಿದೆ ನನಗೆ ಏಕೆಂದರೆ ಅವರನ್ನು ಬೇರೆ ಹೆಸರಿನಿಂದ ಕರೆಯಲಾಗುತ್ತಿದೆ .ಉದಾ : ನಮ್ಮ teamನಲ್ಲಿ ಒಬ್ಬ ನೀಲಂ ಅಂತ ಇದಾನೆ . ಅವನ ಹುಡುಗಿಯ ಹೆಸರು ಲೀಲಾ. ಅದಕ್ಕೆ ನಾವೆಲ್ಲಾ ಅವನನ್ನು 'ಲೀಲಾ' ಎಂದೇ ಕರೆಯುತ್ತೇವೆ.ಹೀಗಿದ್ದಾಗ ಮೊನ್ನೆ ನನ್ನ ಮೇಲೆ ಅವರ ವಕ್ರ(!) ದೃಷ್ಟಿ ಸಂತೋಷ್ ಗೆ ಮಾತ್ರ ಇನ್ನೂ ಸಂತೋಷ್ ಅಂತಾನೆ ಕರಿತಾ ಇದೀವಿ. ಅವನ girlfriend ಹೆಸರನ್ನು ಕೇಳಬೇಕು ಎಂದು ಹಿಂದೆ ಬಿದ್ದು ಬಿಟ್ಟರು. ಇದ್ಯಾವುದರ ನಿರೀಕ್ಷೆ ಇಲ್ಲದ ನನಗೆ ಒನ್ ತರಹ shock ಆಗೋಯ್ತು . ಇದೇನಪ್ಪ? ನಾನು ನನ್ನ ಪಾಡಿಗೆ ಆರಾಮಾಗಿ ಆಫೀಸಿನಲ್ಲಿ ಕಾಫಿ, ಟೀ, ಕುಡ್ಕೊಂಡು... ಜೊತೆಗೆ ಕೆಲಸದ ಮಧ್ಯೆ ಆಗೀಗ ಚಾಟಿಂಗ್, ಬ್ಲಾಗಿಂಗ್ ಮಾಡ್ತಿರಬೇಕಾದ್ರೆ ಇದೆಲ್ಲಿಂದ ಬಂತಪ್ಪ ತಲೆನೋವು ಅಂತ ಮನಸಲ್ಲೇ ಎಲ್ಲರನ್ನು ಬೈದು ಕೊಳ್ಳುತ್ತಿದ್ದೆ . ನನಗೆ ಯಾರೂ girlfriend ಇಲ್ಲ. ತುಂಬಾ ನಂಬಿಕಸ್ತ , ಒಳ್ಳೇ ಫ್ರೆಂಡ್ಸ್ ಇದಾರೆ ಅಂದರೆ ನಂಬಲು ತಯಾರೇ ಇಲ್ಲ ಆಸಾಮಿಗಳು. ನಾನು ಯಾರ ಹೆಸರು ಹೇಳುವುದಪ್ಪ, ಅಯ್ಯೋ ಅಂತ ಕೂತ್ಕೊಂಡಾಗ, ಉರಿಯೋ ಬೆಂಕಿಗೆ ತುಪ್ಪ ಸುರಿಯೋ ಹಾಗೆ - " ಅಯ್ಯ ಸಂತೋಷ ಗೆ girlfriend ಇಲ್ಲ ಅಂದ್ರೆ ನಂಬೋಕೆ ಆಗೋಲ್ಲ. ಅನ್ನೋದೇ...:-( ನಾನು ಹೇಳಿಬಿಟ್ಟೆ ನೀವು ಆ ತರಹ assume ಮಾಡಿಕೊಂಡರೆ ನಾನೇನು ಮಾಡೋಕಾಗಲ್ಲ ಎಂದೆ . ನನ್ನ ಪರಿಸ್ಥಿತಿ ಯಾರಿಗೂ ಬೇಡ. ಇದೊಳ್ಳೆ ಗೋಳಾಯ್ತಲ್ಲ ..... ...ನನಗೆ ಯಾರೂ girlfriend ಇಲ್ಲಾಆಆಆಆ.... plz ನನ್ನ ಬಿಟ್ಟು ಬಿಡಿ. girlfriend ಸಿಕ್ಕಿದ ಕೂಡಲೇ ನಿಮಗೆ ತಿಳಿಸುತ್ತೀನಿ . ಆಗ ಅವನ ಹೆಸರಿನಿಂದ ಕರೀರಿ "ಅಂದೆ.....ನೀನೂ ಈಗ ಹೇಳದೆ ಇದ್ರೆ ನಮಗೆ ಟ್ರೀಟ್ ಕೊಡಿಸಬೇಕು ಅಂದ್ರು... ಅಬ್ಬ!!! ಇವತ್ತು ಬೆಳಗ್ಗೆ ಬೆಳಗ್ಗೆ ಯಾರ್ ಮುಖ ನೋಡಿದ್ನಪ್ಪ ??? ಅಯ್ಯೋ ನನ್ನ ಪರ್ಸ್ಗೆ ಕತ್ತರಿ ಬೀಳುತ್ತಲ್ಲಪ್ಪ ಅನ್ಕೊತಾ ಇದ್ದೆ...ಇದ್ದರೆ ಹೇಳಬಹುದು...ಇಲ್ದೆ ಇದ್ರೆ ಹೇಗೆ ಹೇಳಲಿ? ನಾನು ಸುಮ್ನೆ ಕೂತಿದ್ದೆ. ಆಮೇಲೆ ಅವರಿಗೆ ನನ್ನ ನೋಡಿ 'ಪಾಪ' ಅನಿಸ್ತು ಅನ್ಸುತ್ತೆ. ಸರಿ ನಿನ್ನ ಹುಡುಗಿ ಹೇಗಿರಬೇಕು ಅನ್ನೋದಾದರೂ ಹೇಳು ಅಂದ್ರು. ಒಂದಷ್ಟು ಅದು - ಇದು ಹೇಳಿ ಬದುಕಿದೆಯಾ ಬಡಜೀವವೇ ಎಂದು ಹೇಳಿ ಸಮಾಧಾನದ ನಿಟ್ಟುಸಿರು ಬಿಟ್ಟೆ!!! ಆ ಹುಡುಗಿ ಯಾವಾಗ ಸಿಗುತ್ತಾಳೋ ... ನನಗೆ ಯಾವಾಗ ಅವರು ಆ ಹೆಸರಿನಿಂದ ಕರೆಯುತ್ತಾರೋ ???....ಎಂದು ಇಲ್ಲಿವರೆಗೂ ಇರದ ವಿಚಾರ ಮಾತ್ರ ಯಾಕೋ ಮನಸ್ಸಿನಲ್ಲಿ ಹಾದು ಹೋಯ್ತು...

Wednesday, February 24, 2010

ಕುಂತರು ನಿಂತರು ನಿನ್ನದೇ ಧ್ಯಾನ್ ........

ಗೆಳೆಯಾ,
ರವಿ
ಹೇಗೆ ಇದ್ದೀಯ ನಾನು ಇದನ್ನು ಕೇಳುವ ಅರ್ಹತೆಯನ್ನು ಕಳೆದು ಕೊಡಿದ್ದೇನೆ ಅನ್ನುತ್ತಿಯ. ಮನಸ್ಸಿನಲ್ಲಿ ನನ್ನ ಬೈಯುತ್ತ ಇರುತ್ತಿಯ ಅಂತ ನಂಗೆ ಗೊತ್ತು .
ಕುಂತರೂ ನಿಂತರೂ ನಂಗೆ ಯಾಕೆ ನಿನ್ನದೇ ಯೋಚನೆ ಬರುತ್ತಿದೆ? ಬೇಡ ಬೇಡ ಎಂದರೂ , ಮನಸ್ಸಿಗೆ ಬುದ್ದಿ ಹೇಳಿದರು ಅದು ಯಾಕೆ ನನ್ನ ಮಾತುಗಳನ್ನೇ ಕೇಳುತ್ತಿಲ್ಲ? ನಾನು ಯಾಕೆ ನಿನ್ನನ್ನ ಇಷ್ಟೊಂದು miss ಮಾಡಿಕೊಳ್ಳಬೇಕು ಎಂದೂ ನನ್ನಷ್ಟಕ್ಕೆ ನಾನು ಒಬ್ಬಳೇ ಕುಳಿತು ಯೋಚಿಸುತ್ತಿರುವಾಗಲೇ ,ತಕ್ಷಣ mobile ಗೆ ಒಂದು ಸಂದೇಶ .... one msg received.ಖುಷಿ ಇಂದ ನಿನ್ನ್ನದೆ msg ಎಂದೂ ನೋಡುತ್ತೇನೆ!! ಯಾವುದೋ BSNL ನವರದ್ದು. ಮತ್ತೆ ಮನಸ್ಸು ಮೊದಲಿದ್ದ ಸ್ಥಿತಿಗೆ ಹೋಗುತ್ತದೆ. ಅವನು msg ಮಾಡಲ್ಲ ಕಣೋ ಅವನಿಗೆ ನಿನ್ನ ಬಗ್ಗೆ ಆಸಕ್ತಿ ಇಲ್ಲ ಅಂತ ಹೇಳುತ್ತದೆ . ಹೃದಯ ಕೇಳಲ್ಲ!! ಅವನು ಮಾಡದಿದ್ದರೆ ಏನು ನೀನು ಮಾಡುತ್ತಲಿರು ಅನ್ನುತ್ತದೆ . ಮತ್ತೆ ಮನಸ್ಸು ಹೇಳುತ್ತದೆ - ಬೇಡ ಅವನ ದೃಷ್ಟಿಯಲ್ಲಿ ನೀನು cheap ಆಗುತ್ತಿಯ , ಬಿಟ್ಟು ಬಿಡು.
ಹಾಗೇ TV ಯಲ್ಲಿ ಬರುತ್ತಿರುವ ಹಾಡಿನ ಒಂದು ಸಾಲು ಕೇಳಿಸುತ್ತದೆ...

" ರಪ್ತ ರಪ್ತ ,ಹೊಲೆ ಹೊಲೆ ದಿಲ್ಕೋ ಚುರಾಯ ತೂನೆ ,
ದಿಲ್ಕೋ ಥೋ ಪತಾ ಭಿ ನಾ ಚಲಾ"

ಹಾಗೇ ಮತ್ತೆ ಮನಸ್ಸು ತಡೆಯದೇ ನಿನಗೆ ಕರೆ ಮಾಡುತ್ತೇನೆ. 25 ಸಾರಿ ಕರೆ ಮಾಡಿದರೂ ನೀನು ಎತ್ತುವುದಿಲ್ಲ. ಕಡೆ ಪಕ್ಷ ನೀನು ಬ್ಯುಸಿ ಇದ್ದ ಕಾಲದಲ್ಲಿ, 25 missed ಕಾಲ್ ಯಾಕಿರಬಹುದು ಅಂತ ವಿಚಾರಿಸೋ courtesy ನು ತೋರಲ್ಲ. ಗೆಳೆಯ ನಿನಗೊಂದು ಹೇಳುತ್ತೇನೆ, ನಿನ್ನ ಚುಚ್ಚು ಮಾತುಗಳನ್ನು ಒಂದು ಹಂತದವರೆಗೆ ತಡೆದುಕೊಳ್ಳಬಲ್ಲೆ . ನೀನು ಏನು ಹೇಳಿದರೂ ಬೇಸರಿಸಿಕೊಳ್ಳಬಾರದು ಅಂತ ನಿರ್ಧಾರನೂ ಮಾಡಿದ್ದೇನೆ. ಆದರೆ ನಾನು ಮನುಷ್ಯ ತಾನೇ? ನನಗೂ hurt ಆಗುತ್ತೆ ಅಲ್ಲವ? ಬೇರೆಯವರಿಗೆಲ್ಲ ನೀನು ಪ್ರೋತ್ಸಾಹ , ಗೆಳೆತನ ಕೊಡುವವನು ನನಗ್ಯಾಕೆ ಈ ತರಹದ ಒಂದು negligence ತೋರುತ್ತಿದಿಯ?

ನನಗೆ ನಿನ್ನ sympathy ಬೇಡ ಗೆಳೆಯ. ನೀನು ಏನು ಮಾಡಿದರೂ ಅದನ್ನ ಕಾಟಾಚಾರಕ್ಕೆ ಮಾಡುವುದು ಬೇಡ. ಮನಸ್ಸಿನಿಂದ ಮಾಡು.ನಿನಗೆ ಈ ಕಾಲ್ , msg ಗಳು ಎಲ್ಲ time pass. ಆದರೆ ನನಗೆ ಮುಂದಿನ ಕ್ಷಣಗಳಿಗೆ ಆ ನಿನ್ನ ಎರಡು ಅಕ್ಷರಗಳೇ ಸ್ಫೂರ್ತಿ. ಇದನೆಲ್ಲ ನಿನಗೆ ನಾನು ಹೇಗೆ ತಿಳಿ ಹೇಳಲಿ? ನಿನಗ್ಯಾಕೆ ಏನು ಅರ್ಥವೇ ಆಗುವುದಿಲ್ಲ? ಬಹುಷಃ ನನಗೆ ನಿನ್ನ ಮೇಲಿರುವಷ್ಟು ಆಸಕ್ತಿ , ಕಾಳಜಿ , ಇದ್ಯಾವುದು ನಿನಗೆ ನನ್ನ ಮೇಲಿರಲಿಕ್ಕಿಲ್ಲ ಅಂತ ನಾನು assume ಮಾಡಿಕೊಳ್ಳಲ ? ನೀನೇನು ಹೇಳಲ್ಲ. ಅದೂ ನಂಗೊತ್ತು.

ಆದರೂ ಡಿ.ವಿ.ಜಿ ಯವರ ಮಾತಿನಂತೆ,

"ಇಂದಲ್ಲ ನಾಳೆ ಹೊಸ ಭಾನು ತೆರೆದೀತು...
ಕರಗೀತು ಮುಗಿಲಾ ಬಳಗಾ..
ತುಂಬೀತು ಸೊಗೆಯ ಮಳೆ
ತುಂಬೀತು ಎದೆಯ ಹೊಳೆ
ತೊಳೆದೀತು ಒಳಗು ಹೊರಗಾ..!!"

.......ಎಲ್ಲೋ ಒಂದು ಕಡೆ ಬದುಕಿನ ಬಗ್ಗೆ ಭರವಸೆ ಇದ್ದೇ ಇದೆ. ನನಗೂ ಗೊತ್ತು ಗೆಳೆಯ . ಜೀವನದಲ್ಲಿ ಯಾರಿಗೂ ಯಾರೂ ಇಲ್ಲ. ನಮಗೆ ನಾವೇ ಅಂತ . ಆದರೆ ಎಲ್ಲೋ ಒಂದು ಕಡೆ ನನಗೆ ನಿನ್ನ ಬಗ್ಗೆ ಒಂದು ರೀತಿ ಆಸಕ್ತಿ, ಪ್ರೀತಿ ಹುಟ್ಟಿದರೆ ನನ್ನ ತಪ್ಪೇನಿದೆ ಅಂತ ಅರ್ಥವಾಗುತ್ತಿಲ್ಲ. ಅದಕ್ಕೆ ಗೆಳೆಯ ನಾನು ನಿರ್ಧರಿಸಿದ್ದೇನೆ. Ball is in your court. ನೀನೇ ನಿರ್ಧರಿಸು.

ಇಂತಿ,
ಸಂತೋಷ್

Friday, February 19, 2010

ರೈತರಿಗಿನ್ನೂ ದೇವರೇ ಗತಿ ........


ಬಳ್ಳಾರಿಯ ವಿವಾದಿತ, ಉದ್ದೇಶಿತ ವಿಮಾನ ನಿಲ್ದಾಣದ ಸರ್ವೆ ಕಾರ್ಯಕ್ಕೆ ಬಂದಿದ್ದ ಸಿಬ್ಬಂದಿಯಲ್ಲಿ ಒಬ್ಬನನ್ನು ರೈತರು ತಮ್ಮ ವಶಕ್ಕೆ ತೆಗೆದುಕೊಂಡು ಒತ್ತೆಯಾಳಾಗಿ ಇಟ್ಟುಕೊಂಡಾಗ, ಕೊನೆಗೂ ರೈತರ ತಾಳ್ಮೆಯ ಕಟ್ಟೆಯೊಡೆಯಿತು; ಅವರ ಹೋರಾಟಕ್ಕೆ ಸೈದ್ಧಾಂತಿಕ ತಳಹದಿಯೊಂದು ಒದಗಿಬಿಟ್ಟಿತು, ಇನ್ನು ಪ್ರತಿಭಟನೆ ತೀವ್ರಗೊಳ್ಳುತ್ತದೆಯೆಂದು ಅಂದುಕೊಳ್ಳುತ್ತಿರುವಾಗಲೇ ಎಲ್ಲವೂ ಠುಸ್ಸಾಯಿತು.ರೈತರು ಆತನನ್ನು ಮುಕ್ತಗೊಳಿಸಿದರು.’ನಾನು ದಾರಿ ತಪ್ಪಿದ್ದೆ. ರೈತರು ನನಗೆ ದಾರಿ ತೋರಿಸಿದರು.ಅವರೇನು ತನ್ನನ್ನು ಒತ್ತೆಯಾಳಾಗಿ ಇಟ್ಟುಕೊಂಡಿಲ್ಲ’ ಎಂದು ರೈತರೊಡನಿದ್ದಾಗ ಮಾಧ್ಯಮಕ್ಕೆ ಹೇಳಿದ್ದ ಆತ ತಿರುಗಿಬಿದ್ದು ಪೋಲಿಸ್ ಸ್ಟೇಷನ್ ನಲ್ಲಿ ರೈತ ಮುಖಂಡ ಮಲ್ಲಿಕಾರ್ಜುನ ರೆಡ್ಡಿ ವಿರುದ್ಧವೇ ಅಪಹರಣದ ಕೇಸು ದಾಖಲಿಸಿದ. ಪೋಲಿಸರು ೫೦ ಮಂದಿಯನ್ನು ಬಂದಿಸಿದರು.ಬಳ್ಳಾರಿಯಲ್ಲಿ ಏನು ಬೇಕಾದರೂ ಆಗಬಹುದು!ತುಂಗಭದ್ರೆಯ ನೀರುಂಡು ಹಸಿರಿನಿಂದ ಕಂಗೊಳಿಸುತ್ತಿರುವ ಚಾಗನೂರು,ಸಿರಿವಾರ ಗ್ರಾಮಗಳು ಸರಕಾರಿ ಕಡತಗಳಲ್ಲಿ ಖುಷ್ಕಿ ಜಮೀನಾಗಿ ಪರಿವರ್ತನೆಗೊಳ್ಳಬಹುದು. ಸ್ಥಳೀಯ ಜನಪ್ರತಿನಿಧಿಗಳನ್ನು ಸಾರಾಸಗಟಾಗಿ ಖರೀದಿ ಮಾಡಿ ’ರೆಸಾರ್ಟ್ ಅರೆಸ್ಟ್’ ಮಾಡಿ ಇಡಬಹುದು.’ನಮ್ಮದು ಖುಷ್ಕಿ ಜಮೀನಲ್ಲ; ಅದು ನೀರಾವರಿ ಜಮೀನು; ಫಲವತ್ತಾದ ಕಪ್ಪು ಮಣ್ಣು; ಇಲ್ಲಿ ನಾವು ಹತ್ತಿ. ತೊಗರಿ, ಜೋಳ, ಮೆಕ್ಕೆಜೋಳ, ಮೆಣಸಿನಕಾಯಿ, ಕಡಲೆ,ತರಕಾರಿಗಳನ್ನು ಬೆಳೆದು ಸ್ವಾವಲಂಬಿಯಾಗಿ ಬದುಕುತ್ತಿದ್ದೇವೆ. ನಮ್ಮ ಅನ್ನವನ್ನು ಕಿತ್ತುಕೊಳ್ಳಬೇಡಿ. ನಮ್ಮ ಪ್ರಾಣ ಹೋದರೂ ಜಮೀನು ಬಿಟ್ಟುಕೊಡುವುದಿಲ್ಲ’ ಎಂದು ರೈತರು ಒಂದು ವರ್ಷದಿಂದ ಪ್ರತಿಭಟಿಸುತ್ತಿದ್ದಾರೆ.ಬಳ್ಳಾರಿಜಿಲ್ಲೆಯ ಉಸ್ತುವಾರಿ ಸಚಿವರೂ, ಗಣಿದೊರೆಗಳೂ ಆದ ಜನಾರ್ಧನ ರೆಡ್ಡಿ ಮತ್ತವರ ಬಳಗ ಇದನ್ನೊಂದು ಪ್ರತಿಷ್ಟೆಯ ವಿಷಯವಾಗಿ ಪರಿಗಣಿಸಿದ್ದಾರೆ. ಅವರ ದಾಕ್ಷಿಣ್ಯದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ’ ಬಳ್ಳಾರಿ ವಿಮಾನ ನಿಲ್ದಾಣ ಮಾಡಿಯೇ ಸಿದ್ದ’ ಎನ್ನುತ್ತಿದ್ದಾರೆ.ದೀನ-ದಲಿತರು, ನೊಂದವರು, ಅಸಹಾಯಕರೆಡೆಗೆ ಪ್ರಭುತ್ವವೇ ನಡೆದು ಬರಬೇಕು. ಆದರೆ ಆಡಳಿತ ಪಕ್ಷ ಯಾವುದು? ವಿರೋಧಪಕ್ಷ ಯಾವುದು? ಎಂಬ ಗೊಂದಲದಲ್ಲಿ ನಾವಿದ್ದೇವೆ. ನಮ್ಮ ಅನುಕಂಪ ಈಗ ಅವರಿಗೇ ಬೇಕಾಗಿದೆ!ಇನ್ನು ಸದಾ ವಿರೋಧ ಪಕ್ಷದಂತೆ ಕೆಲಸ ಮಾಡಬೇಕಾದ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಪತ್ರಿಕಾರಂಗ ರಾಜಕಾರಣಿಗಳ, ಉದ್ದಿಮೆದಾರರ ಕೃಪಾಕಟಾಕ್ಷದಲ್ಲಿ ಸಮೃದ್ಧವಾಗಿ ಬೆಳೆಯುತ್ತಲಿದೆ! ರಾಜಧಾನಿಯನ್ನು ಬಿಟ್ಟರೆ ಬೇರೆಡೆ ಅವರ ಅರಿವು ವಿಸ್ತರಿಸುವುದಿಲ್ಲ. ಪತ್ರಕರ್ತರ ಆದ್ಯತೆಗಳೇ ಈಗ ಬೇರೆ. ಸಮಾಜದ ಧ್ವನಿಯಾಗಬೇಕಾಗಿದ್ದ ಸಾಹಿತಿ-ಕಲಾವಿದರು ಸ್ವಕೇಂದ್ರಿತ ಗುಂಪುಗಳನ್ನು ಕಟ್ಟಿಕೊಂಡು ಪರಸ್ಪರ ಹೊಗಳಿಕೊಳ್ಳುತ್ತಾ ಭ್ರಮಾಲೋಕದಲ್ಲಿ ಮುಳುಗಿದ್ದಾರೆ.ಮಂಗಳವಾರ ಸಿರಿವಾರ, ಚಾಮಲಾಪುರಗಳಲ್ಲಿ ರೈತರ ಪ್ರತಿಭಟನೆ ಮುಂದುವರಿಯಿತು. ಬುಧವಾರ ಹಾಸನ, ಚಾಮರಾಜನಗರದಲ್ಲಿ ಭೂಸ್ವಾದೀನ ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದರು. ಗುರುವಾರ ದಾವಣಗೆರೆ, ಚಾಮರಾಜ ನಗರಗಳಲ್ಲಿ ಪೋಲಿಸರು ಲಾಠಿ ಬೀಸಿದರು. ಅಕ್ಷರಶಃ ಅಟ್ಟಾಡಿಸಿಕೊಂಡು ರಕ್ತ ಬರುವಂತೆ ಹೊಡೆದರು. ಮಹಿಳೆಯರನ್ನೂ ಬಿಡಲಿಲ್ಲ. ಜಿಲ್ಲಾ ದಂಡಾಧಿಕಾರಿಯೆಂದು ಕರೆಯಲಾಗುವ ಜಿಲ್ಲಾಧಿಕಾರಿಯವರೇ ಸ್ವತಃ ಕೈಯಲ್ಲಿ ಲಾಠಿ ಹಿಡಿದು ರೈತರನ್ನು ನಿಯಂತ್ರಿಸುತ್ತಿದ್ದರು. ಪುಣ್ಯಕ್ಕೆ ’ಚಡ್ಡಿ’ ಹಾಕಿರಲಿಲ್ಲ ಅಷ್ಟೇ!. ಇವರು ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಟಿ.ಡಿ.ಪವಾರ್ ಸೇರಿ ೪೦ ಮಂದಿ ರೈತರನ್ನು ನ್ಯಾಯಾಂಗ ಬಂದನಕ್ಕೆ ತಳ್ಳಿದರು.ಪೋಲಿಸರು ಲಾಠಿ ಚಾರ್ಜ್ ಮಾಡಿದ್ದನ್ನು ಶನಿವಾರ ದಾವಣಗೆರೆಯಲ್ಲಿ ಕೃಷಿ ಸಚಿವ ರವೀಂದ್ರನಾಥ್ ಸಮರ್ಥಿಸಿಕೊಂಡರು. ರೈತರು ಸಂಯಮದಿಂದ ವರ್ತಿಸಬೇಕೆತ್ತಿಂದು ಹೇಳಿದರು. ಕಳೆದ ವರ್ಷ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಹೊಸದರಲ್ಲೇ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ನಡೆಸಿ ಇಬ್ಬರನ್ನು ಬಲಿ ತೆಗೆದುಕೊಂಡಿತ್ತು.ಅದಾದ ಒಂದು ವಾರಕ್ಕೆ ಇದೇ ಸಚಿವರ ಪಕ್ಕದ ಕ್ಶೇತ್ರದ ಇಬ್ಬರು ಸಚಿವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಇದೇ ಕೃಷಿ ಸಚಿವರು ಹೇಳಿದ್ದೇನು ಗೊತ್ತೇ? ನಿನ್ನೆ ಸತ್ತವ ರೈತನಲ್ಲ. ಇವತ್ತು ರೈತ ಸತ್ತಿರುವ ಬಗ್ಗೆ ನನಗೇನೂ ಗೊತ್ತಿಲ್ಲ’. ಇವರು ನಮ್ಮ ಕೃಷಿ ಸಚಿವರು!ನಾಡಿಗೇ ಅನ್ನ ನೀಡುವ ರೈತ ಅಷ್ಟು ನಿಕೃಷ್ಟನೇ? ಅವರೇನು ಸಮಾಜಘಾತುಕ ಶಕ್ತಿಗಳೇ? ಪೋಲಿಸರ ದೃಷ್ಟಿಯಲ್ಲಿ ಕ್ರಿಮಿನಲ್ಸ್ ಗೂ ರೈತರಿಗೂ ವ್ಯತ್ಯಾಸವೇ ಇಲ್ಲವೇ? ಗೃಹಮಂತ್ರಿಗಳೇ ಉತ್ತರಿಸಬೇಕು. ”ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಔದಾರ್ಯವಾಗಿ ಮಾತನಾಡಿ ಬೀದಿಯಲ್ಲಿ ಹೊಡೆಸ್ತಾರೆ”ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳುತ್ತಾರೆ.ಹಸಿರು ಶಾಲು ಹೊದ್ದು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ತಮ್ಮ ಅಧಿಕಾರದ ಹೊಸ್ತಿಲಲ್ಲಿರುವಾಗಲೇ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರು ನಡೆಸಿದರು. ಆ ಪರಿಸ್ಥಿತಿ ಇಂದಿಗೂ ಮುಂದುವರಿಯುತ್ತಲಿದೆ.ರೈತರು ತಮಗಾಗುತ್ತಿರುವ ಅನ್ಯಾಯ, ದಬ್ಬಾಳಿಕೆ, ಶೋಷಣೆ, ಮಾರುಕಟ್ಟೆ ತಾರತಮ್ಯ...ಇತ್ಯಾದಿಗಳ ಬಗ್ಗೆ ಆಳುವವರ ಮುಂದೆ, ಆಧಿಕಾರಿಗಳ ಮುಂದೆ ಹೇಳಿಕೊಳ್ಳಲು ಕಾತರಿಸುತ್ತಿದ್ದಾರೆ. ಆದರೆ ಅವರಿಗೆ ಪುರುಸೊತ್ತಿಲ್ಲ. ಯಾರನ್ನಾದರೂ ಮಾತುಕತೆಗೆ ಕಳುಹಿಸುವ ವ್ಯವಧಾನವಿಲ್ಲ. ರೈತರ ಮೊರೆ ಅರಣ್ಯ ರೋಧನವಾಗುತ್ತಿದೆ.ಉಳ್ಳವರಿಗೆ ತಮ್ಮ ಅತ್ಯುನ್ನತಿಗಾಗಿ ರೈತರ ಫಲವತ್ತಾದ ಭೂಮಿಯೇ ಬೇಕಾಗಿದೆ. ವಿಶೇಷ ಅರ್ಥಿಕ ವಲಯವನ್ನೇ ತೆಗೆದುಕೊಳ್ಳಿ; ಅಲ್ಲೆಲ್ಲಾ ವಶಪಡಿಸಿಕೊಂಡ, ವಶಪಡಿಸಿಕೊಳ್ಳುತ್ತಿರುವ ಭೂಮಿಯೆಲ್ಲವೂ ಫಲವತ್ತಾದ ಭೂಮಿಯೇ. ಯಾಕೆ ಇವರಿಗೆ ಒಣಭೂಮಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಆಗುವುದಿಲ್ಲವೇ? ಹೀಗೆ ಕೃಷಿ ಭೂಮಿಯೆಲ್ಲಾ ಕೈಗಾರಿಕ ವಲಯಗಳಾಗಿ, ವಸತಿನಿಲಯಗಳಾಗಿ ಬದಲಾದರೆ ಭವಿಷ್ಯದಲ್ಲಿ ಆಹಾರ ಭದ್ರತೆಯೆಂಬುದು ಬಹುದೊಡ್ಡ ಸಮಸ್ಯೆಯಾಗಿ ಕಾಡಲಿದೆ. ಇದರ ಜೊತೆಗೆ ಮೂಡುವ ಬಹು ಮುಖ್ಯ ಪ್ರಶ್ನೆ ಎಂದರೆ ನಮಗೆ ಯಾವ ರೀತಿಯ ಅಬಿವೃದ್ಧಿ ಬೇಕು? ಅಬಿವೃದ್ಧಿ ತಂದಿತ್ತ ಸಮಸ್ಯೆಗಳು ಈಗ ಕೊಪೆನ್ ಹೆಗನ್ ನಲ್ಲಿ ನಡೆಯುತ್ತಿರುವ ’ಹವಾಮಾನ ವೈಪರಿತ್ಯ ಶ್ರ‍ಂಗ ಸಭೆ’ಯಲ್ಲಿ ಚರ್ಚಿತವಾಗುತ್ತಲಿದೆ.ಬಳ್ಳಾರಿಗೆ ಬನ್ನಿ; ಇಲ್ಲಿ ಈಗಾಗಲೇ ಎರಡು ವಿಮಾನ ನಿಲ್ದಾಣಗಳಿವೆ. ನಗರದ ಕಂಟೋನ್ಮೆಂಟ್ ಬಳಿ ಇರುವ ಐತಿಹಾಸಿಕ ವಿಮಾನ ನಿಲ್ದಾಣ. ಇದು ಎರಡನೇ ಮಹಾಯುದ್ದ ಕಾಲದಲ್ಲಿ ವಾಯುನೆಲೆಯಾಗಿ ಬಳಕೆಯಾಗಿದ್ದ ವಿಮಾನ ನಿಲ್ದಾಣ. ಇನ್ನೊಂದು ನಗರದಿಂದ ೪೦ ಕಿ.ಮೀ ದೂರದಲ್ಲಿರುವ ತೋರಣಗಲ್ಲಿರುವ ಜಿಂದಾಲ್ ಏರ್ ಪೋರ್ಟ್. ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಹಂಪೆ ಹಾಗು ಬೆಳೆಯುತ್ತಿರುವ ಕೈಗಾರಿಕೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮೂರನೆಯ ವಿಮಾನ ನಿಲ್ದಾಣಕ್ಕಾಗಿ ಸರ್ವೆ ಕಾರ್ಯ ನಡೆಸಿ ನಗರದಿಂದ ೧೨ ಕಿ.ಮೀ ದೂರದಲ್ಲಿರುವ ಪಾಪಿನಾಯಕನಹಳ್ಳಿಯನ್ನು ಸೂಕ್ತ ಪ್ರದೇಶವೆಂದು ೧೯೯೬ರಲ್ಲಿ ಎಂ.ಪಿ.ಪ್ರಕಾಶ್ ಅಧಿಕಾರವಧಿಯಲ್ಲಿ ಗುರುತಿಸಲಾಗಿತ್ತು. ಆದರೆ ಅದಕ್ಕೆ ಚಾಲನೆ ದೊರೆತಿರಲಿಲ್ಲ.ವಿಮಾನ ನಿಲ್ದಾಣಕ್ಕೆ ಸೂಕ್ತ ಸ್ಥಳವೆಂದು ಗುರುತಿಸಲ್ಪಟ್ಟ ಪಾಪಿನಾಯಕಹಳ್ಳಿಯ ಒಣಭೂಮಿಯನ್ನು ಬಿಟ್ಟು ಚಾಗನೂರು, ಸಿರಿವಾರದ ನೀರಾವರಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಜನಾರ್ಧನ ರೆಡ್ಡಿ ಆದೇಶ ನೀಡಿದರು. ’ವಿಜಯನಗರ ಅರ್ಬನ್ ಡೆವಲಪ್ ಮೆಂಟ್ ಏರಿಯಾ’ ದೊಳಗೆ ಈ ಜಮೀನು ಬರುತ್ತದೆಯೆಂಬುದು ರೆಡ್ಡಿಗಳ ವಾದ. ಇದನ್ನು ವಿರೋಧಿಸಿ ರೈತರು ಕಳೆದ ಪೆ.೨೪ರಂದು ಶಾಂತಿಯುತ ಬೃಹತ್ ಮೆರವಣಿಗೆ ನಡೆಸಿದರು. ಆಗ ಪೋಲಿಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸುವ ಮೂಲಕ ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸಿತು. ಅದರೂ ರೈತರು ಧೃತಿಗೆಡದೆ ಪ್ರಭುತ್ವದ ವಿರುದ್ಧ ಹೊರಾಡುತ್ತಲೇ ಬರುತ್ತಿದ್ದಾರೆ. ಅವರ ಹೋರಾಟಕ್ಕೆ ನೈತಿಕ ಬೆಂಬಲ ನೀಡಲು ’ನರ್ಮದಾ ಬಚಾವೋ’ ಆಂದೋಲನದ ರೂವಾರಿ, ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ನ.೧೦ರಂದು ಚಾಗನೂರು, ಸಿರಿವಾರ ಗ್ರಾಮಕ್ಕೆ ಭೇಟಿ ನೀಡಿದ್ದರು. ರೈತರೊಡನೆ ಆಪ್ತ ಚರ್ಚೆ ನಡೆಸಿದ್ದರು.ಈಗ ಮತ್ತೆ ರೈತರ ವಿರೋಧದ ನಡುವೆ, ಅವರನ್ನೆಲ್ಲಾ ಊರ ಹೊರಗಿಟ್ಟು, ಪೋಲಿಸ್ ಸರ್ಪಗಾವಲಿನಲ್ಲಿ ಸರಕಾರ ಸರ್ವೆ ಕಾರ್ಯ ಮುಗಿಸಿದೆ. ಚಾಮರಾಜನಗರದಲ್ಲಿ ಸ್ವತಃ ಜಿಲ್ಲಾಧಿಕಾರಿಯವರೇ ಲಾಠಿ ಹಿಡಿದು ಹಸಿರು ಶಾಲು ಹಾಕಿದ ರೈತರನ್ನು ಬೆದರಿಸುತ್ತಿದ್ದಾರೆ. ಅಧಿಕಾರ ವರ್ಗ ಎಂದೂ ರೈತ ಪರವಾಗಿರಲು ಸಾಧ್ಯವಿಲ್ಲ. ಆದರೆ ಜನಪ್ರತಿನಿಧಿಗಳು ಓಟು ಹಾಕಿದವರ ಋಣದಲ್ಲಿರಬೇಕಲ್ಲವೇ? ಪಾಪ ಅವರಿಗೆ ಮರೆವಿನ ರೋಗ!ಮುಂದೇನು? ಈಗ ಅವರ ಬೆಂಬಲಕ್ಕೆ ಜನಪರ ಸಂಘಟನೆಗಳು ಮುಂದಾಗಬೇಕು. ನಾಡು-ನುಡಿ, ನೆಲ-ಜಲ ಸಂರಕ್ಷಣೆಗಾಗಿ ಪಣತೊಟ್ಟಿರುವ ಹಲವು ಸಂಘಟನೆಗಳು ನಮ್ಮಲ್ಲಿವೆ.ಅವು ರೈತರ ಬೆಂಬಲಕ್ಕೆ ನಿಲ್ಲಬೇಕು. ಆದರೆ ಅವೆಲ್ಲಾ ರಾಜಕೀಯ ಹಿತಾಸಕ್ತಿಗಳನ್ನು ಬಿಟ್ಟು ಬರಲು ಸಾಧ್ಯವೇ?. ’ರೈತ ಸಂಘ’ ಮತ್ತೆ ಮೈಕೊಡವಿ ನಿಲ್ಲಬೇಕು. ಒಟ್ಟಾಗಬೇಕು.ಅಷ್ಟಕ್ಕೂ ರೆಡ್ಡಿಗಳಿಗೆ ಈ ಭೂಮಿಯೇ ಯಾಕೆ ಬೇಕು? ಸ್ಥಳಿಯರು ಹೇಳುವ ಪ್ರಕಾರ ಚಾಗುವಾರ ಮತ್ತುಸಿರಿವಾರದ ಸುತ್ತಮುತ್ತಲಿನ ಸುಮಾರು ೨೮೦ ಎಕ್ರೆ ಜಮೀನನ್ನು ರೆಡ್ಡಿಗಳು ಬೇನಾಮಿ ಹೆಸರಿನಲ್ಲಿ ಖರೀದಿ ಮಾಡಿದ್ದಾರಂತೆ. ಇಲ್ಲಿ ವಿಮಾನ ನಿಲ್ದಾಣ ಬಂದರೆ ಈ ಜಮೀನಿಗೆ ಚಿನ್ನದ ಬೆಲೆ ಬಂದು ರಿಯಲ್ ಎಸ್ಟೇಟ್ ಉದ್ಯಮ ಗರಿಗೆದರಬಹುದೆಂಬುದು ಅವರ ದೂರಾಲೋಚನೆ. ಅವರ ದೂರಾಲೋಚನೆ ರೈತರ ಪಾಲಿಗೆ ದುರಾಲೋಚನೆಯಾಗಿದೆ.ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಎಕ್ರೆಗೆ ೧೨ ಲಕ್ಷ ರೂಪಾಯಿ ಪರಿಹಾರ ಕೊಡುತ್ತೇವೆ ಎಂಬುದು ಸರಕಾರದ ಸಮರ್ಥನೆ. ಆದರೆ ದುಡ್ಡುತಗೊಂಡು ರೈತರೇನು ಮಾಡಬಲ್ಲರು? ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಭೂಮಿ ಕೊಟ್ಟ ರೈತರೆಲ್ಲಾ ಎಕ್ರೆಗೆ ಕನಿಷ್ಟ ೫೦ ಲಕ್ಷದಿಂದ ಎರಡು ಕೋಟಿ ತನಕ ಪಡೆದುಕೊಂಡಿದ್ದರು. ಅದರಲ್ಲಿ ಬಹಳಷ್ಟು ಮಂದಿ ದುಂದುವೆಚ್ಚ ಮಾಡಿ ಇರುವ ದುಡ್ಡನ್ನೆಲ್ಲಾ ಕಳೆದುಕೊಂಡು ಜೀವನೋಪಾಯಕ್ಕಾಗಿ ಸಣ್ಣಪುಟ್ಟ ಉದ್ಯೋಗ ಮಾಡಿಕೊಂಡಿದ್ದಾರೆ.ದುಡ್ಡು ಕರಗುತ್ತದೆ. ಅದರೆ ಭೂಮಿ ಹಾಗಲ್ಲ; ಅದು ಮೂಲಧನ. ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಗೊಳ್ಳುತ್ತಲೇ ಹೋಗುತ್ತದೆ. ಅದರ ಬಡ್ಡಿಯಿಂದಲೇ ರೈತ ಜೀವನ ನಿರ್ವಹಣೆ ಮಾಡುತ್ತಾನೆ. ತನಗೆ ಅನ್ನ ನೀಡುವ ಭೂಮಾತೆಯನ್ನು ಆತ ದೇವರೆಂದು ಪೂಜಿಸುತ್ತಾನೆ; ಅದರೊಡನೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುತ್ತಾನೆ. ಮಣ್ಣು ಮಾರಿ ದುಡ್ಡು ಬಾಚಿಕೊಳ್ಳುವವರಿಗಿದು ಅರ್ಥವಾಗದ ವಿಚಾರ.

Monday, February 15, 2010

ಚಿಂತಿ ಯಾಕ............?


ನೀವು ಕೆಲವರನ್ನು ಗಮನಿಸಿದ್ದೀರಾ? ಅವರನ್ನು ನೋಡಿದರೆ ಯಾವಾಗಲು ಏನೋ ಯೋಚಿಸುತ್ತಿರುವಂತೆ ಕಾಣುತ್ತದೆ. ಮುಖ ನೋಡಿ ನಕ್ಕರೂ ತಿರುಗಿ ನಗುವಷ್ಟು ಸಮಾಧಾನ ಇರುವುದಿಲ್ಲ...ಜಗತ್ತಿನ ಎಲ್ಲಾ ಸಮಸ್ಯೆಯು ತಮಗೇ ಬಂದಿರುವ ಹಾಗೇ ಆಡುತ್ತಿರುತ್ತಾರೆ...ಎಲ್ಲರ ಮೇಲೆ ಸಿಡುಕುವುದು, ತಾವೇ ಬೇಸರಿಸಿಕೊಳ್ಳುವುದು,ಅವರಿಗೆ ಅವರ ಮೇಲೆ ಕೋಪವಾ? ಬೇಸರವ?ಗೊತ್ತಿಲ್ಲ...ಜೀವನದಲ್ಲಿ ಚಿಂತೆ ಎಂಬುದು ಯಾರಿಗಿಲ್ಲ ಹೇಳಿ? ಪ್ರತಿಯೊಬ್ಬರಿಗೂ ಚಿಂತೆ ಇದ್ದೇ ಇರುತ್ತದೆ. ಒಬ್ಬರಿಗೆ ಒಂದೊಂದು ಚಿಂತೆ. ಅವರವರಿಗೆ ಇರುವ ತೊಂದರೆಯ ಬಗ್ಗೆ, ಅನಾನುಕೂಲಗಳ ಬಗ್ಗೆ ಪ್ರತಿಯೊಬ್ಬನಿಗೂ ಚಿಂತೆ ಇರುತ್ತದೆ.ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ .....ಅವರ ಮದುವೆ ಮಾಡಬೇಕು ಎನ್ನುವುದು ಪಾಲಕರ ಚಿಂತೆಯಾದರೆ, ಮಕ್ಕಳಿಗೆ ತಮ್ಮ ಮದುವೆಯಾಗೋ ಹುಡುಗ\ಹುಡುಗಿ ಹೇಗಿರಬಹುದು ಎನ್ನುವ ಚಿಂತೆ...ಕಷ್ಟಪಟ್ಟು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗೆ ಮುಂದಿನ ಫೀಸ್ ಹೇಗೆ ಕೊಡುವುದು ಎನ್ನುವ ಚಿಂತೆ...ಮನೆ ಬಿಟ್ಟು ಹೋದ ಗಂಡ ಇನ್ನೂ ಹಿಂದಿರುಗಲಿಲ್ಲ ಎನ್ನುವುದು ಅವನಿಗಾಗಿ ಕಾದು ಕುಳಿತ ಹೆಂಡತಿಯ ಚಿಂತೆ....ಹೀಗೆ ಒಂದಿಲ್ಲೊಂದು ಚಿಂತೆಯಲ್ಲಿಯೇ ನಮ್ಮ ಜೀವನವನ್ನು ಕಳೆದುಬಿಡುತ್ತೆವಲ್ಲವೇ?ಎಷ್ಟೋ ಇಷ್ಟ ಪಟ್ಟು ಪ್ರೀತಿಸಿದ ವ್ಯಕ್ತಿ ಒಂದು ದಿನ ಬಿಟ್ಟು ಹೋಗಿರುತ್ತಾರೆ....ತುಂಬಾ ನಂಬಿಕೆ ಇತ್ತ ಗೆಳತಿ ಮೋಸ ಮಾಡಿರುತ್ತಾಳೆ...ಸಾಲ ಮಾಡಿ ಶುರು ಮಾಡಿದ ಕಸುಬು ಕೈಗೆ ಹತ್ತಿರುವುದಿಲ್ಲ ........ಎಷ್ಟೇ ಕೆಲಸ ಮಾಡಿದರೂ ಬಡ್ತಿ ಸಿಕ್ಕಿರುವುದಿಲ್ಲ.....ಒಂದೇ ,ಎರಡೇ ಚಿಂತೆ ಮಾಡುತ್ತೀನಿ ಎಂದರೆ ಸಿಗುತ್ತದೆ ಸಾವಿರಾರು ವಿಷಯಗಳು.." ಹೊಟ್ಟೆ ತುಂಬಿದವನಿಗೆ ಹೊಟ್ಟೆ ಹೊರುವ ಚಿಂತೆ,ಹೊಟ್ಟೆ ಹಸಿದವನಿಗೆ ಹೊಟ್ಟೆ ಹೊರೆವ ಚಿಂತೆ"ಆದರೆ ಒಂದಂತೂ ನಿಜ ಹೀಗೆ ಯೋಚಿಸುವುದರಿಂದ ಯಾವುದೇ ಪ್ರಯೋಜನವಿಲ್ಲ....ನಮ್ಮನ್ನು ನಾವು ಇನ್ನಷ್ಟು ಶಿಕ್ಷಿಸಿಕೊಳ್ಳುತ್ತೇವೆ ...ಒಂದು ಗಾದೆ ಮಾತಿದೆಯಲ್ಲ "ಚಿತೆ ಹೆಣವನ್ನು ಸುಟ್ಟರೆ, ಚಿಂತೆ ಬದುಕಿರುವವನನ್ನು ಸುಡುತ್ತದೆ " ಎಂದು. ಅದಕ್ಕೆ ನಾನು ಹೇಳುವುದೆಂದರೆ , ಚಿಂತೆ ಮಾಡಿ ಯಾವುದೇ ಉಪಯೋಗವಿಲ್ಲ. ಅದರ ಬದಲು ಬಂದಿರುವ ಸಮಸ್ಯೆಗೆ ಪರಿಹಾರ ಹುಡುಕುವುದರಲ್ಲೇ ಇರುವುದು ಜಾಣತನ..ಜೀವನದಲ್ಲಿ ಎಷ್ಟೋ ಸಿಹಿ-ಕಹಿ ಘಟನೆಗಳಾಗಿರುತ್ತವೆ. ಕಹಿ ಘಟನೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಚಿಂತೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ....ಏನು ನಡಿಬೇಕೋ ಅದು ಆಗೇ ಆಗುತ್ತದೆ. ನಾವು ಚಿಂತೆ ಮಾಡಿದರೂ ಅಷ್ಟೇ ಬಿಟ್ಟರು..ಇರುವಷ್ಟು ದಿನ ನಗುನಗುತ ಜೀವನ ಸಾಗಿಸುವುದನ್ನು ಕಲಿಯೋಣ..ನನ್ನ ಕೆಲವು ಸ್ನೇಹಿತರಿಗೆ ಹೇಳಿದ್ದೀನಿ ಯೋಚನೆ ಮಾಡಬೇಡಿ ಎಲ್ಲಾ ಸರಿ ಹೋಗುತ್ತದೆ ಎಂದು..ಒಂದು ವೇಳೆ ಹಾಗಾದರೆ??ಹೀಗಾದರೆ?... ಎಂದು ಅನಾವಶ್ಯಕವಾಗಿ ಯೋಚಿಸುತ್ತಾರೆ. ಕೊನೆಗೆ ನೋಡಿದರೆ ಎಲ್ಲವು ಒಳ್ಳೇದೆ ಆಗಿರುತ್ತದೆ. ಯೋಚಿಸಿ ಮನಸು ಹಾಳುಮಾಡಿಕೊಂಡಿದ್ದೆ ಬಂತು !!!!....."ಬಂದದ್ದು ಬರಲಿ, ಗೋವಿಂದನ ದಯೆ ಇರಲಿ" ಎಂಬ ಮಾತಿನಂತೆ ಬದುಕಿನಲ್ಲಿ ಮುಂದೆ ಸಾಗೋಣ. ಅನಾವಶ್ಯಕವಾಗಿ ಯೋಚಿಸಿ ಮನಸ್ಸನ್ನು ಹಾಳುಮಾಡಿ ಕೊಳ್ಳುವುದು ಬೇಡ.ಜೀವನವನ್ನು ಸಂತೋಷದಿಂದ ಸಾಗಿಸೋಣ."Hope for the best, prepare for the worst".ಮನುಷ್ಯನ ಇಂಥ ಚಿಂತೆ ಮಾಡುವಂಥ ಬುದ್ದಿಯನ್ನು ಕಂಡೇ ಹಿರಿಯರು ಬಹುಷಃ ಹಾಡಿದ್ದೇನೋ..."ಚಿಂತ್ಯಾಕೆ ಮಾಡತಿದ್ದಿ ಚಿನ್ಮಯನಿದ್ದಾನೆ "ಎಂದು....

Sunday, February 14, 2010

ಮಾನವೀಯತೆ ಎಲ್ಲಿದೆ .........?


ಕಳೆದವಾರ office ಗೆ ರಜೆ ಇದ್ದ ದಿನ .ಯಾಕೋ ನನಗೆ ನನ್ನ (ರಶ್ಮಿ) ಗೆಳತಿಗೆ ,ಮನೆ ಯಲ್ಲೇ ಕುಳಿತು ತುಂಬಾ ಬೋರ್ ಹೊಡೆಯುತಿತ್ತು .ಸರಿ ಇಬ್ಬರು ಸೇರಿ ಎಲ್ಲಾದರೂ ತಿರುಗಲು ಹೋಗೋಣ ಎಂದು ನಿರ್ಧರಿಸಿದೆವು.ಬೇಗ ರೆಡಿ ಆಗಿ shopping ಮಾಡೋಣ ಎಂದುಕೊಂಡು ಹೊರಟೆವು .ನಾವಿಬ್ಬರೂ full shopping ಮಾಡಿದೆವು. ಎಲ್ಲ mall ಗಳಿಗೆ ತಿರುಗಿದೆವು .ಅವಳೇ ಜಾಸ್ತಿ shopping ಮಾಡಿದ್ದು. ನಾನು ಅಷ್ಟೇನೂ ವಿಶೇಷವಾಗಿ ಕರಿದಿಸಿರಲಿಲ್ಲ .ಅವಳಿಗೂ ಸ್ವಲ್ಪ brand ಹುಚ್ಚು. ಒಂದೊಂದು t-shirt ಗಳಿಗೆ ಅವಳು ಸಾವಿರಗಟ್ಟಲೆ ಕೊಡುತ್ತಿದ್ದುದ್ದನ್ನು ನೋಡಿ ನನಗೇನೋ ಒಂತರಹ ಕಸಿವಿಸಿ ಆಗುತ್ತಿತ್ತು ಯಾಕೋ ಗೊತ್ತಿಲ್ಲ .ಜನ ಹೇಗೆ ಈ ಹುಚ್ಚು ಗೀಳುಗಳಿಗೆ ಅಂಟಿಕೊಂಡು ಬಿಡುತ್ತಾರೆ ಅನಿಸಿಬಿಟ್ಟಿತು.ಸರಿ ಅವಳ shopping ಆಯಿತು ನಾವು ಹೊರಗೆ ನಡೆದೆವು.ಸ್ವಲ್ಪ ದೂರ ಹೋಗುತ್ತಿದ್ದಂತೆ ರಸ್ತೆಯಲ್ಲಿ ಒಂದು ಚಿಕ್ಕ ಹುಡುಗ ನಮ್ಮೆದುರಿಗೆ ಬಂದ.ಸುಮಾರು 5-6 ವರ್ಷದವ ಇರಬಹುದು ಅವನು ಅಷ್ಟೆ .ಅವ ಭಿಕ್ಷೆ ಬೇಡುತ್ತಿದ್ದ . ಮೈಮೇಲೆ ಒಂದು ಹಳೇ ಚಡ್ಡಿ ಬಿಟ್ಟರೆ ಬೇರೇನೂ ಇರಲಿಲ್ಲ. ಅವನ ಎದೆ ಮೂಳೆಗಳು ಕಾಣುತ್ತಿದ್ದವು .ನಮ್ಮ ನೋಡುತ್ತಿದ್ದಂತೆ ಆ ಮಗು ನಮ್ಮ ಹತ್ತಿರ ಬಂದಿತು ."ಅಕ್ಕ ಹೊಟ್ಟೆ ಹಸಿವು .3 ದಿನದಿಂದ ಹೊಟ್ಟೆಗೆ ತಿಂದಿಲ್ಲ .ದಯವಿಟ್ಟು 2 ರೂ ಕೊಡಿ "-ಅಂತ ಗೋಗರೆಯುತ್ತಿದ್ದ . ಸಾಲದಕ್ಕೆ ನನ್ನ ಕಾಲಿಗೂ ಬೀಳತೊಡಗಿದ . ನನಗೋ ಅಯ್ಯೋ ಅನ್ನಿಸಿಬಿಟ್ಟಿತು . ತೊಗೊಳಪ್ಪ 10 ರೂ. ಕಾಲಿಗೆಲ್ಲಾ ಬೀಳಬೇಡ ಎಂದೆ. ಆ ಘಳಿಗೆ ಅವನ ಮುಖದಲ್ಲಿ ಒಂದು ನಗೆ ಬಂತಲ್ಲ ಎಷ್ಟು ಸಂತಸವಾಯಿತು ನನಗೆ. ಬಹುಷಃ ನನ್ನ ಸ್ಥಾನದಲ್ಲಿ ಯಾರಿದ್ದರು ಅವರಿಗೂ ಹೀಗೆ ಸಂತಸವಾಗುತಿತ್ತೇನೋ??ಹಾಗೆ ಕೊಟ್ಟು ನಾವು ಬರುತ್ತಿದ್ದಾಗ ನನ್ನ ಗೆಳತಿ "ಸಂತೋಷ ಅವರಿಗೆಲ್ಲ ಯಾಕೆ ಕೊಡುತ್ತೀಯ ? ನಿನಗೆ ಬುದ್ದಿ ಇಲ್ವಾ? ದುಡ್ಕೊಂಡು ತಿನ್ನಕಾಗಲ್ಲ.waste fellows . ಓದಿ ಉದ್ದಾರ ಅಗಕೆ ಆಗಲ್ಲ ಇವ್ರಿಗೆ "-ಅಂತೆಲ್ಲ ಬೈಯುತ್ತಿದ್ದಳು.ನನಗೆ ಅವಳ ಮಾತು ತುಂಬಾ ಬೇಸರ ಮಾಡಿತು .ಅಲ್ಲ ಅವ ಇನ್ನು 5 ವರ್ಷದ ಮಗು .ಅವ ಎಲ್ಲಿ ದುಡಿಯಲು ಹೋಗಬೇಕು?ಅವನಿಗೆ ಒಂದು 10 ರೂ ಕೊಟ್ಟರೆ ನಮ್ಮದೇನು ಹೋಗುತ್ತದೆ? ಅವ ಓದುತ್ತೀನಿ ಅಂದರೂ ಅವನನ್ನು ಶಾಲೆಗೆ ಸೇರಿಸುವರು ಯಾರು? ಅದೆಲ್ಲ ಕಡೆಗಿನ ಮಾತು. ಹೊಟ್ಟೆ ತುಂಬಿದರೆ ತಾನೆ ಓದುವ ಮಾತು.mall ಗೆ ಹೋಗಿ 150 ರೂ t-shirt ಗೆ 1500 ರೂ ಕೊಟ್ಟು ಕೊಂಡುಕೊಳ್ಳುವ ಜನ ,ಆ ಬಡ ಹುಡುಗನಿಗೆ 10 ರೂ ಕೊಟ್ಟರೆ ಯಾಕೆ ಹೀಗಾಡಬೇಕು?ಮಾನವೀಯತೆ ಎಲ್ಲಿದೆ ?ಎಷ್ಟೋ ಜನ ಇದ್ದಾರೆ ನನ್ನ ಗೆಳತಿಯ ಹಾಗೆ ಯೋಚಿಸುವರು .ಕುಡಿಯುವುದು ,ಸೇದುವುದು,ಇದ್ಯಾವುದಕ್ಕೂ ಖರ್ಚು ಮಾಡಿದ ದುಡ್ಡು ಅವರಿಗೇನು ಅನ್ನಿಸುವುದಿಲ್ಲ .ಆದರೆ ಯಾರೋ ಬಡವರಿಗೆ ಕೊಡಬೇಕು ಅಂದಾಗ ಅವರ" ಲೆಕ್ಕಾಚಾರದ ಬುದ್ದಿ "ಎಚ್ಚೆತ್ತು ಕೊಂಡು ಬಿಡುತ್ತದೆ .ಹೇಗೆದೆ ಅಲ್ಲವ?ನಮಗೋಸ್ಕರ ಸಾವಿರಾರು ರೂಪಾಯಿ ಖರ್ಚು ಮಾಡುವ ನಾವು ,ತೀರ ಹಸಿವು ಎಂದವರಿಗೆ ನಮಗೆ ಕೈಯಲ್ಲಾದ ಸಹಾಯ ಮಾಡಿದರೆ ತಪ್ಪೇನು ಇಲ್ಲ ಅಂದುಕೊಳ್ಳುತ್ತೇನೆ.ನೀವೇನು ಹೇಳುತ್ತೀರಿ?

ಮುದ್ದು ಗೆಳೆಯನಿಗಾಗಿ ಮುದ್ದು ಪತ್ರ ........

ನನ್ನ ಮುದ್ದು ರವಿ ....
,ನಾನು ನಿನಗೆ ಧನ್ಯವಾದ ಹೇಳಬೇಕಿತ್ತು . ನಿನಗೆ ಗೊತ್ತಿಲ್ಲ ಕಣೋ ನೀನು ನನಗೆ ಅದೆಷ್ಟು ಸ್ಫೂರ್ತಿ ತುಂಬುತ್ತೀಯ ಎಂದು...ನನಗೆ ನಿನ್ನ ಬಗ್ಗೆ ಹೆಮ್ಮೆ ಎನಿಸುತ್ತಿದೆ . ನನಗೆ ಗೊತ್ತು ನೀನೂ ಎಷ್ಟೋ ಕಷ್ಟಗಳನ್ನು ಅನುಭವಿಸಿದ್ದೀಯ ಎಂದು ..ಆದರೂ ನನಗಾಗಿ ನಗುತ್ತಾ ನೀನು ಮಾಡುತ್ತಿರುವ ಕೆಲಸ ತುಂಬ ಖುಷಿ ಕೊಡುವಂತದ್ದು ..ನಿಜ ಹೇಳಬೇಕೆಂದರೆ ನಿನ್ನ ಮೀಟ್ ಮಾಡಿದ ಮೊದಲ ದಿನವೇ ನನಗೆ ತಿಳಿದಿತ್ತು "that you are a different person" ಅಂತ .ಅದೆಷ್ಟು ಪ್ರೌಡಿಮೆ ಇದೆ ನಿನ್ನ ಮಾತುಗಳಲ್ಲಿ , ನನ್ನ childish nature ನ ತಿಳಿದುಕೊಂಡು ಸಣ್ಣ ಮಗುವನ್ನು treat ಮಾಡಿದ ಹಾಗೆ ಮಾಡುತ್ತೀಯ .....ನಿನ್ನ ಹತ್ತಿರ ಸದಾ ಕಾಲ ಮಾತಾಡುತ್ತಿರುವ ಎಂದು ಅನಿಸುತ್ತದೆ ಗೆಳೆಯ …ಏಕೆಂದರೆ ನಿನ್ನ ಹತ್ತಿರ ಮಾತಾಡುವುದೇ ಒಂದು ಹಿತ ನನಗೆ …ನೀನು ನನ್ನ ಬಾಳ ಬೆಳಕಾಗಿದ್ದಿಯ ಗೆಳೆಯ .."U have helped me to see things in a better and brighter way"…ಏಕೆಂದರೆ ಒಂದು ಕಾಲದಲ್ಲಿ ನಾನು ನನ್ನ ಹಲವಾರು ಭಯಗಳಿಂದ ಮುಳುಗಿ ಹೋಗಿದ್ದೆ .."Completely insecured about love and hope". ನನಗನ್ನಿಸುತಿತ್ತು ಯಾರೂ ನನ್ನ ಅರ್ಥ ಮಾಡಿಕೊಳ್ಳುವುದಿಲ್ಲ ….ಅದು ಯಾರಿಗೂ ಬೇಡ ಕೂಡ ಎಂದುಆಗ ಬಂದಿದ್ದು ನೀನು …ಅದೇನೋ ನಿನ್ನ meet ಮಾಡುವ ಮೊದಲೇ ನನ್ನ ಮನದಲ್ಲಿ ಒಂದು ಚಿತ್ರ , ಕಲ್ಪನೆ ಮೂಡಿತ್ತು …ನನ್ನ ಹುಡುಗ ಹೀಗೇ ಇರಬೇಕೆಂದು ..ಅದೆಲ್ಲ ಸಾಧ್ಯವಿಲ್ಲ ಎಂದೂ ತಿಳಿದಿತ್ತು ಆದರೆ ನಿನ್ನ ನೋಡಿದಾಗ ಸಾಧ್ಯವಿದೆ ಎಂಬ ನಂಬಿಕೆ ಮೂಡಿದ್ದು …ಅದೇ ಕ್ಷಣ ನನಗೆ ತಿಳಿಯದಂತೆ ನಾನು ನಿನ್ನ ಪ್ರೀತಿಸತೊಡಗಿದ್ದೆ …ಅದು ನನಗಷ್ಟೇ ತಿಳಿದಿತ್ತು …ನನ್ನಷ್ಟಕ್ಕೇ ಸಂತಸ ಪಟ್ಟೆ …ಏನೋ secured feeling ಇತ್ತು ಆಗ …ನಿನ್ನ ಕಂಡ ಕ್ಷಣದಿಂದ ನಾನೇನೋ ಒಂಟಿಯಲ್ಲ ಎಂಬ ಭಾವನೆ ನನಗೆ ಬಂದಿದೆ .ಒಂದು ಕ್ಷಣ ಜೀವನದಲ್ಲಿ " I felt so unloved and alone" don’t know why..ಸಂತೋಷವನ್ನು ಹುಡುಕುವ ಅವಿರತ ಪ್ರಯತ್ನ ಮಾಡುತ್ತಿದ್ದೆ ..ನೋವನ್ನು ಹಂಚಿಕೊಳ್ಳುವಂಥ ನಂಬಿಕಸ್ತ ಗೆಳೆಯರೂ ಇರಲಿಲ್ಲ ..ಜೀವನ ಶೂನ್ಯ ಎನಿಸಿಬಿಟ್ಟಿತ್ತು …You made me laugh..ನನ್ನ ದುಃಖಕ್ಕೆ ಪಲಾಯನವಾದವನ್ನು ಕಲಿಸಿದ್ದೆ ನೀನು …ನೀನಿಲ್ಲದಿದ್ದರೆ ಅದು ಸಾದ್ಯವೇ ಇರಲಿಲ್ಲ ಎಂದು ನಿನಗೂ ತಿಳಿದಿದೆ ಅಲ್ಲವ ಗೆಳೆಯ ?...ನಾನು ನಿನಗೆ ನನ್ನ ಜೊತೆ ಕಳೆದ ಸುಮಧುರ ಕ್ಷಣಗಳಿಗಾಗಿ ಧನ್ಯವಾದ ಹೇಳುತ್ತೇನೆ …ನನ್ನ ಮಾತನ್ನು ಆಲಿಸಿದಕ್ಕೆ , ನನ್ನ problems ಗೆ (if not solution) suggestion ಕೊಟ್ಟಿದ್ದಕ್ಕೆ …ನನಗೀಗ ಅನಿಸುತ್ತಿದೆ ದೇವರು ನನಗಾಗಿ ಕಳಿಸಿಕೊಟ್ಟ ದೇವತೆ ಏನೋ ನೀನು ಎಂದು ಏಕೆಂದರೆ ನನ್ನ ಮನಸಿನಲ್ಲಿರುವುದನ್ನು ಹೇಳದೆಯೇ ತಿಳಿದುಕೊಳ್ಳುತ್ತಿದ್ದೆ ನೀನು ….ಬರೀ ಬೇಸರ ತುಂಬಿಕೊಂಡಿದ್ದ ನನ್ನ ಜೀವನದಲ್ಲಿ ನೀನು ಬಂದು ನನ್ನ ಮುಖದಲ್ಲಿ ಒಂದು ನಗುವನ್ನು ಬರಿಸಿದ್ದಿಯ …ಬರೀ ನಿನ್ನ ಇರುವಿಕೆ ಇಂದಲೇ ನನಗೆ ಸಂತಸವಾಗುತಿತ್ತು …ನೀನೇನೂ ಹೇಳಬೇಡ ಗೆಳೆಯ ..ಬರೀ ನನ್ನ ಜೊತೆಯಲ್ಲಿ ಇರು ನೀನು ನನಗಷ್ಟೇ ಸಾಕು …ದಿನಾ ನಾನು ದೇವರಿಗೆ thanks ಹೇಳುತ್ತೇನೆ …ಒಳ್ಳೆ ಜನರನ್ನು ನನ್ನ ಜೀವನದಲ್ಲಿ ಕಳಿಸಿ ಕೊಟ್ಟಿದ್ದಕ್ಕೆ …ಎಲ್ಲರೂ ನನಗೆ ಒಂದಿಲ್ಲೊಂದು ರೀತಿಯಲ್ಲಿ ಪ್ರಭಾವ ಬೀರಿದ್ದಾರೆ …ನನಗೆ ಗೊತ್ತು ಎಲ್ಲರೂ ಜೀವನದಲ್ಲಿ ಒಂದಿಲ್ಲೊಂದು ಕಾರಣಗಳಿಗೆ ಬರುತ್ತಾರೆ …..ಕೆಲವರು ಕೊನೆಯವರೆಗೂ ಜೊತೆಯಲ್ಲಿದ್ದರೆ ಇನ್ನು ಕೆಲವರು ಮಧ್ಯದಲ್ಲೇ ಬಿಟ್ಟು ಹೋಗುತ್ತಾರೆ ..ಅಂಥ ಒಳ್ಳೆಯವರನ್ನು ನಾನು ದೇವತೆಗಳೆಂದು ಕರೆಯಲಿಚ್ಚಿಸುತ್ತೇನೆ ......ಅದರಲ್ಲಿ ನೀನೂ ಒಬ್ಬ ಗೆಳೆಯ …..ನಿನಗೂ ನನ್ನ thanks..ನೀನೂ ಯಾವಾಗಲು ನನ್ನ ಮನಸ್ಸಿನಲ್ಲಿ ಇರುತ್ತೀಯ ಗೆಳೆಯ ..

Saturday, February 13, 2010

ಮೀಸೆ ತೆಗೆದಾಗ ......

ನನ್ನ ಮಹತ್ವದ ಯೋಜನೆಗಳಲ್ಲಿ ಇಂಥವು ಬಹಳ: ಹೇಗಾದರೂ ಮಾಡಿ, ಇನ್ನು ಯಾರೂ ‘ಕಡ್ಡಿ ಫೈಲ್ವಾನ್’ ಅಂತ ಕರೆಯದ ಹಾಗೆ ದಪ್‍ಪ್‍ಪ್ಪ ಆಗಬೇಕು (ಚಿಕನ್ ತಿನ್ನು, ಪ್ರತಿದಿನ ಒಂದೇ ಒಂದು ಪಿಂಟ್ ಬಿಯರ್ ಕುಡಿ -ಗೆಳೆಯರ ಸಲಹೆಗಳು). ಈ ತಿಂಗಳ ಒಂದನೇ ತಾರೀಖಿನಿಂದ ಜಿಮ್ಮಿಗೆ ಸೇರಿಕೊಂಡು ಬಿಡಬೇಕು (ಸುಮಾರು ಒಂದನೇ ತಾರೀಖುಗಳು ಕಳೆದುಹೋಗಿವೆ). ಇಷ್ಟರೊಳಗೆ ಯಾರಿಂದಲೂ ಕಂಡುಹಿಡಿಯಲಾಗದ ವಸ್ತುವೊಂದನ್ನು ಕಂಡುಹಿಡಿಯಬೇಕು (ಬಚಾವ್, ನಾನು ವಿಜ್ಞಾನಿಯಲ್ಲ). ಒಂದು ದಿನ, ಯಾರೆಂದರೆ ಯಾರಿಗೂ ಹೇಳದೇ, ಸಿಕ್ಕಿದ ಟ್ರೈನ್ ಹತ್ತಿ, ಗೊತ್ತೇ ಇಲ್ಲದ ಊರಿಗೆ ಹೋಗಿಬಿಡಬೇಕು. ಒಂದು ತಿಂಗಳು ಅಲ್ಲಿ ಭೂಗತನಾಗಿದ್ದು ವಾಪಸು ಬರಬೇಕು (ಇದನ್ನು ಮಾತ್ರ ಮಾಡಿಯೇ ತೀರುವವನಿದ್ದೇನೆ!).ಇವುಗಳ ಸಾಲಿಗೇ ಸೇರುವ ನನ್ನ ಮತ್ತೊಂದು ಯೋಜನೆ ಎಂದರೆ, ‘ಒಮ್ಮೆ ಮೀಸೆ ಬೋಳಿಸಿ ನೋಡಬೇಕು’ ಎಂಬುದು! ನೀವು ಕೇಳಬಹುದು, ‘ಮೀಸೆ ತೆಗೆಯುವುದು ಅಂತಹ ಮಹತ್ವದ ಯೋಜನೆ ಹೇಗೆ? ಅದೇನು ಹಿಮಾಲಯ ಹತ್ತಿಳಿಯೋ ಹಾಗಾ?’ ಎಂದು. ನನ್ನ ಪ್ರಕಾರ ಅದು ಮಹತ್ವದ ಯೋಜನೆಯೇ. ಏಕೆಂದರೆ, ನನಗೆ ಬೋಳಿಸಬೇಕೆಂದಿರುವುದು ನನ್ನದೇ ಮೀಸೆ! (೧) ನೀವು ಯಾವಾಗಲೂ ಮೀಸೆ ತೆಗೆದಿರುವವರೇ ಆಗಿದ್ದರೆ ಅಥವಾ (೨) ನೀವು ಪದೇ ಪದೇ ಮೀಸೆ ತೆಗೆದು-ಮತ್ತೆ ಬಿಟ್ಟು-ಮತ್ತೆ ತೆಗೆದು -ನಿಮ್ಮ ಮುಖವನ್ನು ಫ್ರೆಂಚು, ಗಡ್ಡ, ಲಾಕು ಅಂತೆಲ್ಲ ಪ್ರಯೋಗಗಳಿಗೆ ಒಳಪಡಿಸುವ ಗುಂಪಿಗೆ ಸೇರಿದವರಾದರೆ ಅಥವಾ (೩) ನೀವು ಇನ್ನೂ ಮೀಸೆಯೇ ಬಂದಿಲ್ಲದ ಎಳೆಯ ಹುಡುಗನಾಗಿದ್ದರೆ ಅಥವಾ (೪) ನೀವು ಹೆಂಗಸಾಗಿದ್ದರೆ -ನಾನೀಗ ಹೇಳುತ್ತಿರುವುದು ಸರಿಯಾಗಿ ಅರ್ಥವಾಗದೇ ಹೋಗಬಹುದು. ಅಥವಾ ತಮಾಷೆ ಅನ್ನಿಸಬಹುದು. ಆದರೆ ನೀವು ‘ಮೀಸೆ ತೆಗೆದರೆ ನಾನು ಹೇಗೆ ಕಾಣುತ್ತೇನೋ’ ಎಂಬ ಭಯ ಇರುವ ನನ್ನಂಥವರ ಗುಂಪಿಗೆ ಸೇರಿದವರಾದರೆ ನನ್ನ ಕಷ್ಟ ನಿಮಗೆ ಅರ್ಥವಾಗುತ್ತದೆ.ನನಗೆ ನನ್ನ ಮೂಗಿನ ಕೆಳಗೆ ಯಾವಾಗ ಈ ಕಪ್ಪು ಕೂದಲುಗಳು ಮೂಡಿದವೆಂಬ ದಿನಾಂಕ ನೆನಪಿಲ್ಲ. ನಮ್ಮ ಎಸ್ಸೆಸ್ಸೆಲ್ಸಿ ಬ್ಯಾಚಿನ ಗ್ರೂಪ್ ಫೋಟೋದಲ್ಲಿ ಹೌದೋ ಇಲ್ಲವೋ ಎಂಬಂತೆ ಕಾಣುವ ಇದು, ಕಾಲೇಜ್ ಗ್ರೂಪ್ ಫೋಟೋದಲ್ಲಿ ಸ್ವಲ್ಪ ಢಾಳಾಗೇ ಕಾಣುತ್ತೆ. ಬಹುಶಃ ನಾನು ಹೈಸ್ಕೂಲಿನ ಡೆಸ್ಕಿನ ಮೇಲೆ ಕೈವಾರದಿಂದ ಚಿತ್ರ ಕೊರೆಯುತ್ತಿದ್ದಾಗಲೇ ನನ್ನ ಮೇಲ್ದುಟಿಗಳ ಮೇಲೆ ಶುರುವಾದ ಈ ಶ್ಮಶ್ರುಬೆಳೆ, ಹಾಗೇ ಅವ್ಯಾಹತವಾಗಿ ಮುಂದುವರೆದು ಕಾಲೇಜಿನ ರಿಸಲ್ಟ್ ನೋಡಲು ಹೋಗುವ ವೇಳೆಗೆ ಕಟಾವಿಗೆ ಬಂದಿರಬೇಕು. ಅದಕ್ಕೇ ಮತ್ತೆ, ರಿಸಲ್ಟ್ ನೋಡಿ ವಾಪಸ್ ಬರುತ್ತಿದ್ದಾಗ ಸಿಕ್ಕ ಸದಾಶಿವನೆಂಬ ಹೈಸ್ಕೂಲು ಗೆಳೆಯ ನನ್ನನ್ನು ನಿಲ್ಲಿಸಿ ‘ಓಹ್, ಸುಶ್ರುತ ಅಲ್ಲೇ ನೀನು? ಗುರ್ತೇ ಸಿಕ್ಕದಿಲ್ಲಲಾ ಮಾರಾಯಾ! ಆವಾಗ ಸಣ್ಣಕ್ ಇದ್ದೆ; ಈಗ ಮೀಸೆ-ಗೀಸೆ ಬಂದು ಒಳ್ಳೇ ದೊಡ್ ಗಂಡ್ಸಿನ್ ಹಂಗೆ ಕಾಣ್ತಿದೀಯಾ’ ಅಂದದ್ದು!ಮತ್ತು ಅವತ್ತೇ ನಾನು ಯಾರಿಗೂ ಕಾಣದಂತೆ ಅಪ್ಪನ ರೇಸರ್ ಸೆಟ್ಟಿನ ಜೊತೆಗಿದ್ದ ಪುಟ್ಟ ಕತ್ತರಿಯಿಂದ ಹಾಗೆ ಉದ್ದುದ್ದ ಬೆಳೆದಿದ್ದ ಮೀಸೆಯ ಕೂದಲುಗಳನ್ನು ಕತ್ತರಿಸಿ ‘ಟ್ರಿಮ್’ ಮಾಡಿಕೊಂಡದ್ದು! ಅಪ್ಪನಿಗೆ ಗೊತ್ತಾದರೂ ಸುಮ್ಮನಿದ್ದದ್ದು!ಅದೆಲ್ಲಾ ಇರಲಿ, ಒಂದಂತೂ ಸತ್ಯ: ನನಗೆ ಬರಬೇಕಿದ್ದ ಕಾಲಕ್ಕೆ ಮೀಸೆ ಬಂದಿತ್ತು. ಕನ್ನಡಿ ನೋಡಿಕೊಂಡಾಗಲೆಲ್ಲ ‘ನೀನು ಗಂಡಸು ಕಣೋ’ ಅಂತ ಹೇಳುತ್ತಿತ್ತು. ಮತ್ತೆ, ಆವಾಗ ‘ಹವ್ಯಕ ಬ್ರಾಹ್ಮಣರಲ್ಲಿ ವಧುಗಳ ಕೊರತೆ’ ಇನ್ನೂ ಶುರುವಾಗಿರದಿದ್ದರಿಂದಲೋ ಏನೋ, ‘ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು’ ಎಂಬ ಕಾಶಿನಾಥನ ಚಿತ್ರಗೀತೆ ನನ್ನ ಗುನುಗುಗಳಲ್ಲೊಂದಾಗಿತ್ತು.ನಾನು ನೀವಿದ್ದಕ್ಕೇ ಖುಶಿಯಾಯ್ತೋ ಎಂಬಂತೆ ಮೀಸೆ ಬೆಳೆಯುತ್ತಾ ಹೋಯ್ತು. ಬೆಂಗಳೂರಿನಲ್ಲಿ ವಿವಿಧ ರೀತಿಯ ಮೀಸೆ ಬಿಟ್ಟವರೆಲ್ಲ ಕಾಣುತ್ತಿದ್ದರು. ರಾಜ್‌ಕುಮಾರ್ ಥರ ಸಣ್ಣಮೀಸೆ, ವೀರಪ್ಪನ್ ಥರ ಹುರಿಮೀಸೆ, ಚಾಪ್ಲಿನ್ ಥರ ಪುಟ್ಟ ಮೀಸೆ (ಪ್ಲೀಸ್, ಉದಾಹರಣೆಗಾಗಿ ಹೇಳಿದ್ದು ಅಷ್ಟೇ), ಹಾಗೇ ಚೂಪುಮೀಸೆ, ಚುಪುರುಮೀಸೆ, ಬಿಲ್ಲಿನಂತಹ ಮೀಸೆ, ಇನ್ನೂ ಏನೇನೋ. ಆದರೆ ಇವರೆಲ್ಲರಿಗಿಂತ ನನಗೆ ಈ ಮೀಸೆ ತೆಗೆದವರೇ ಗ್ರೇಟ್ ಗಂಡಸರಂತೆ ಕಾಣುತ್ತಿದ್ದರು. ಅವರಂತೆ ನಾನೂ ಒಮ್ಮೆ ಮೀಸೆಯನ್ನು ಪೂರ್ತಿಯಾಗಿ ತೆಗೆದು ನೋಡಬೇಕು ಅಂತ ಅನ್ನಿಸುತ್ತಿತ್ತು. ಆದರೆ ಧೈರ್ಯ ಸಾಲುತ್ತಿರಲಿಲ್ಲ.ನನ್ನ ಹಳೆಯ ಆಫೀಸಿನ ಕಲೀಗು ವಿಕ್ರಮ್, ನಾನು ಜಾಬ್ ಇಂಟರ್ವ್ಯೂಗಳಲ್ಲಿ ಆಯ್ಕೆಯಾಗದೇ ಇರುತ್ತಿದ್ದುದಕ್ಕೆ ಕಾರಣ ನನ್ನ ಮೀಸೆಯೇ ಅಂತ ವಾದಿಸುತ್ತಿದ್ದ. ಅವನ ಪ್ರಕಾರ ಮೀಸೆಯಿದ್ದವರು ಇನ್ನೂ ‘ಪ್ರೌಢತ್ವ ಪ್ರಾಪ್ತವಾಗದವರು’. ಮೀಸೆ ತೆಗೆದರೂ ಗಂಡಸಿನ ಹಾಗೆ ಕಾಣಿಸುವವನೇ ನಿಜವಾದ ಗಂಡಸು ಎಂಬುದವನ ತರ್ಕವಾಗಿತ್ತು. "ನೀವು ಒಮ್ಮೆ ಮೀಸೆ ತೆಗ್ದು ನೋಡಿ ಸುಶ್ರುತ್.. ಆಗ ಮುಖದಲ್ಲಿ ಸೀರಿಯಸ್‌ನೆಸ್ ಬರುತ್ತೆ. ಹ್ಯಾಗೆ ಪಟ್ಟಂತ ಸೆಲೆಕ್ಟ್ ಆಗ್ತೀರೋ ನೋಡಿ ಜಾಬ್‌ಗೆ!" ಅಂದಿದ್ದ ವಿಕ್ರಮ್.ಆದರೆ ಮೀಸೆ ತೆಗೆದುಬಿಟ್ಟರೆ ನಾನೆಲ್ಲಿ ಹುಡುಗಿ ಥರ ಕಾಣ್ತೀನೋ ಎಂಬುದು ನನ್ನ ಭಯ. ಕನ್ನಡಿ ಮುಂದೆ ನಿಂತಾಗ ನನ್ನ ತೋರುಬೆರಳುಗಳಿಂದ ಮೀಸೆ ಮುಚ್ಚಿಕೊಂಡು ನಾನು ಮೀಸೆ ತೆಗೆದಾಗ ಹೇಗೆ ಕಾಣಬಹುದು ಅಂತ ಕಲ್ಪಿಸಿಕೊಳ್ಳುತ್ತಿದ್ದೆ. ಆದರೆ ಕಲ್ಪನೆಯೇ ಸರಿಯಾಗಿ ಆಗುತ್ತಿರಲಿಲ್ಲ. ಕೊನೆಗೆ ಫೋಟೋಶಾಪಿನಲ್ಲಿ ನನ್ನ ಫೋಟೋದ ಮೀಸೆ ಅಳಿಸಿ ನೋಡಿದೆ. ಆಗ ಅದೊಂಥರಾ ಪ್ರೇತದ ಹಾಗೆ ಕಂಡಿತು. ನೋಡಿದ ನನ್ನ ಕಲೀಗುಗಳು ನಗಾಡಿಬಿಟ್ಟರು. ಇದರ ಸಹವಾಸವೇ ಬೇಡ ಅಂತ ಸುಮ್ಮನಾಗಿಬಿಟ್ಟೆ.ಮೊನ್ನೆ ನನ್ನ ರೂಮ್‌ಮೇಟು ಊರಿಗೆ ಹೋಗಿದ್ದ ಭಾನುವಾರ ನಾನೊಬ್ಬನೇ ಮನೆಯಲ್ಲಿದ್ದೆ. ಮಾಡಲಿಕ್ಕೇನೂ ಕೆಲಸವಿರಲಿಲ್ಲ, ಮಧ್ಯಾಹ್ನ ಹನ್ನೆರಡರ ಹೊತ್ತಿಗೆ ಸ್ನಾನಕ್ಕೆ ಹೊರಟವನಿಗೆ ಕನ್ನಡಿ ಕಂಡಿದ್ದೇ ಅಪಶಕುನವಾಗಿಹೋಯಿತು. ಈ ಕನ್ನಡಿ ದಾಡಿ ಮಾಡದ ನನ್ನ ಮುಖವನ್ನು ಪ್ರಾಮಾಣಿಕವಾಗಿ ಹಾಗೇ ತೊರಿಸಿಬಿಟ್ಟಿತು. ತಕ್ಷಣ ‘ಓಹ್, ಶೇವಿಂಗ್ ಮಾಡ್ಕೋಬೇಕು’ ಎಂಬುದು ಹೊಳೆದುಬಿಟ್ಟಿತು. ಸರಿ, ಮುಖದ ತುಂಬ ಕ್ರೀಮ್ ಹಚ್ಚಿಕೊಂಡು, ‘ಜಿಲೆಟ್ಟಿ ಸಖತ್ತಾಗಿ ಬರುತ್ತೆ’ ಅಂದಿದ್ದ ಗೆಳೆಯನ ಮಾತು ಕೇಳಿ ತಂದುಕೊಂಡಿದ್ದ ರೇಸರಿನಿಂದ ಶೇವ್ ಮಾಡಿಕೊಳ್ಳತೊಡಗಿದೆ. ಈ ಏರ್?ಟೆಲ್ ಕಂಪನಿಯವರಿಗೆ ಭಾನುವಾರವೂ ರಜೆ ಇಲ್ಲವೋ ಅಥವಾ ಉಪೇಂದ್ರ ಮಾತಾಡಿದ ಕಾಲರ್‌ಟ್ಯೂನನ್ನು ನಾನು ಡೌನ್‌ಲೋಡ್ ಮಾಡಿಕೊಳ್ಳುವವರೆಗೆ ನಿದ್ದೆ ಮಾಡುವುದಿಲ್ಲ ಅಂತ ಹರಕೆ ಹೊತ್ತುಕೊಂಡಿದ್ದಾರೋ ಏನೋ, ಸರಿಯಾಗಿ ನನ್ನ ರೇಸರ್ ಕಪಾಳದಿಂದ ಕೆಳಕ್ಕಿಳಿಯುತ್ತಿದ್ದಾಗ ರಿಂಗ್ ಮಾಡಿದರು. ಅದ್ಯಾವಾಗ ಆ ಪರಿ ಹೈ ವಾಲ್ಯೂಮಿನಲ್ಲಿಟ್ಟುಕೊಂಡಿದ್ದೆನೋ ಏನೋ, ಒಳ್ಳೇ ಅಕ್ಕಚ್ಚಿಗೆ ಕೊಡದ ಜರ್ಸಿ ದನದ ಥರ ಕೂಗಿಕೊಂಡಿತು ನನ್ನ ಮೊಬೈಲು. ಬೆಚ್ಚಿಬಿದ್ದವನಂತೆ ತಿರುಗಿ ನೋಡಿದೆ, ಓಡಿ ಹೋಗಿ ಟೀಪಾಯಿಯ ಮೇಲಿದ್ದ ಮೊಬೈಲನ್ನು ಕ್ರೀಮ್ ಹತ್ತದಂತೆ ಹುಷಾರಾಗಿ ಕಿವಿಗಿಟ್ಟುಕೊಂಡೆ, ಉಪ್ಪಿ ಶುರುಮಾಡುತ್ತಿದ್ದಂತೆಯೇ ‘ಥೂ, ಈ ಏರ್‌ಟೆಲ್ ಮನೆ ಹಾಳಾಗ!’ ಅಂತ ಬೈದುಕೊಂಡು ಕಟ್ ಮಾಡಿದೆ, ತಿರುಗಿ ಬಂದು ಕನ್ನಡಿಯೆದುರು ನಿಂತೆ. ಜಿಲೆಟ್ಟಿ ಒಂದು ಮಹತ್ಕಾರ್ಯ ಮಾಡಿತ್ತು.ನನಗೆ ಅದುವರೆಗೆ ಕಲ್ಪನೆಯೇ ಇರಲಿಲ್ಲ: ಈ ಜಿಲೆಟ್ಟಿ, ಮೊಬೈಲು, ಉಪೇಂದ್ರ, ಏರ್‌ಟೆಲ್ಲು, ಕನ್ನಡಿ ಎಲ್ಲರಿಗೂ ನನ್ನ ಮೀಸೆಯ ಮೇಲೆ ಅದೆಂತಹ ಹೊಟ್ಟೆಕಿಚ್ಚಿತ್ತು ಅಂತ. ಅಷ್ಟು ವರ್ಷಗಳಿಂದ ಒಬ್ಬ ಮುತ್ತೈದೆ ಹಣೆಯ ಕುಂಕುಮವನ್ನು ಜೋಪಾನವಾಗಿ ಕಾಯ್ದುಕೊಂಡು ಬರುವಂತೆ ನಿಗಾ ವಹಿಸಿಕೊಂಡು ಬಂದಿದ್ದ ನನ್ನ ಮೀಸೆಯ ಬಲಭಾಗವನ್ನು ಜಿಲೆಟ್ಟಿ ಕ್ಷಣದಲ್ಲಿ ಸವರಿಹಾಕಿತ್ತು! ಕರೆಂಟ್ ಹೊಡೆದವನಂತೆ ಬಾಯಿ ಕಳೆದು, ಕಣ್ಣು ಮಿಟುಕಿಸಿ ದೊಡ್ಡದಾಗಿ ಮಾಡಿ ನೋಡಿಕೊಂಡೆ. ನನ್ನ ಪ್ರತಿಬಿಂಬವೂ ಬಾಯಿ ಕಳೆದು, ಕಣ್ಣು ಮಿಟುಕಿಸಿ ದೊಡ್ಡದಾಗಿ ಮಾಡಿತೇ ಹೊರತು ಮೀಸೆಯ ಸವರಿದ ಜಾಗದಲ್ಲಿ ಏನೂ ಬದಲಾವಣೆ ಆಗಲಿಲ್ಲ. ನನಗೆ ಸಿ‌ಇಟಿ ಫೇಲಾದಷ್ಟು ಬೇಸರವಾಗಿ ಕುಸಿದು ಕುಳಿತೆ.ಸಿನಿಮಾಗಳಲ್ಲಿ ಇಂತಹ ಪ್ರಕರಣ ನಡೆದದ್ದು ನೋಡಿ ಗೊತ್ತಿತ್ತೇ ಹೊರತು ನನಗೆ ಇಷ್ಟು ಹತ್ತಿರದಲ್ಲಿ ದುರ್ಘಟನೆಯೊಂದು ಸಂಭವಿಸಿದಾಗ ಏನು ಮಾಡಬೇಕೆಂದೂ ಗೊತ್ತಿರಲಿಲ್ಲ. ಮೀಸೆಯೆಂದರೆ ಮುಖದ ಮೇಲಿನ ಕಪ್ಪು ಕಾಮನಬಿಲ್ಲಿನಂತೆ. ಅದಿದ್ದರೇನೇ ಗಂಡಸಿನ ಮುಖಕ್ಕೊಂದು ಲಕ್ಷಣ. ಅದೇ ಇಲ್ಲದಿದ್ದರೆ?ಪಾರ್ಶ್ವವಾಯು ಹೊಡೆದವನಂತೆ ಕೂತಿದ್ದ ನನ್ನನ್ನು ಕರೆದೊಯ್ಯಲು ಯಾವ ಆಂಬುಲೆನ್ಸೂ ಬರುವ ಲಕ್ಷಣ ಕಾಣಲಿಲ್ಲ. ಒಂದೆರಡು ಹನಿ ಕಣ್ಣೀರಾದರೂ ಉದುರಿಸೋಣವೆಂದುಕೊಂಡವನು ಸೀನ್ ಸ್ವಲ್ಪ ಜಾಸ್ತಿ ಆಗುತ್ತೇನೋ ಅನ್ನಿಸಿ ಸುಮ್ಮನಾದೆ. ಅರ್ಧ ಭಾಗ ಮಾತ್ರ ಉಳಿದಿದ್ದ ನನ್ನ ಮೀಸೆಯನ್ನು ಮತ್ತೊಮ್ಮೆ ಕಣ್ತುಂಬ ನೋಡಿಕೊಂಡೆ. ಜಿಲೆಟ್ಟಿಗೆ ಬಲಿಯ ಜೀವ ಪೂರ್ತಿ ತೆಗೆದುಕೊಳ್ಳುವಂತೆ ಸೂಚಿಸಿದೆ.ಸ್ನಾನ ಮಾಡಿ ಹೊರಬರುವಾಗ ‘ಸಧ್ಯ, ಇವತ್ತು ರೂಮ್‌ಮೇಟ್ ಮನೇಲಿಲ್ಲ’ ಅಂತ ನಿಟ್ಟುಸಿರು ಬಿಟ್ಟೆ. ಒಬ್ಬನೇ ಇದ್ದಾಗ ಅವಮಾನವಾಗುವುದಕ್ಕೂ ನಾಲ್ಕು ಜನರ ಎದುರಿಗೇ ಆಗುವುದಕ್ಕೂ ವ್ಯತ್ಯಾಸವಿರುತ್ತದೆ. ಅವನಿದ್ದಿದ್ದರೆ ನನ್ನ ಶೇವಿಂಗ್ ಕಾರ್ಯ ಮುಗಿಯುತ್ತಿದ್ದಂತೆಯೇ ಉಗಿಯುತ್ತಿದ್ದ. ಈಗಾದರೆ ಹಾಗಲ್ಲ; ನಾನು ಮನುಷ್ಯಲೋಕವನ್ನು ಎದುರಿಸಲು ಮಾನಸಿಕವಾಗಿ ಸನ್ನದ್ಧನಾಗಲಿಕ್ಕೆ ಸಮಯವಿದೆ. ಹಾಗಂದುಕೊಂಡು, ಬಟ್ಟೆ ಧರಿಸಿ ಕನ್ನಡಿ ಮುಂದೆ ನಿಂತೆ. ಜಗತ್ತಿನ ಪೆಕರರ ಸಂಘದ ಅಧ್ಯಕ್ಷನೇ ನಾನಿರಬೇಕು ಅನ್ನಿಸಿತು. ಸಾವರಿಸಿಕೊಂಡೆ. ಸಮಾಧಾನ ಮಾಡಿಕೊಂಡೆ. ಒಂದಲ್ಲಾ ಒಂದು ದಿನ ಮೀಸೆ ತೆಗೆದು ನೋಡಬೇಕು ಅಂದುಕೊಂಡಿದ್ದ ನನ್ನ ಯೋಜನೆಯಂತೂ ಈಡೇರಿದೆ, ಇನ್ನು ಯಾರು ಏನೇ ಅಂದರೂ ಶಾಂತಚಿತ್ತದಿಂದ ಸ್ವೀಕರಿಸಬೇಕು ಅಂತ ತೀರ್ಮಾನಿಸಿದೆ. ನನಗೆ ನಾನೇ ‘ಬಾಲಿವುಡ್ ಹೀರೋ ಹಾಗೆ ಕಾಣ್ತಿದೀಯಾ ಬಿಡು’ ಅಂತ ಬೆನ್ತಟ್ಟಿಕೊಂಡೆ.ದಿನವೂ ಹೋಗುವ ಹೋಟೆಲ್ಲಿಗೆ ಹೋಗಲು ಭಯವಾಗಿ ಹೊಸ ಹೋಟೆಲ್ಲಿಗೆ ಹೋದೆ. ಆದರೂ ಕ್ಯಾಶಿಯರ್ರಿನಿಂದ ಹಿಡಿದು ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ ಅನ್ನಿಸಿತು. ಆವತ್ತು ಯಾವ ಗೆಳೆಯರನ್ನೂ ಕಾಣಲು ಹೋಗಲಿಲ್ಲ. ಮರುದಿನ ಆಫೀಸಿಗೆ ಹಿಂಜರಿಯುತ್ತಲೇ ಹೋದೆ. ಕಲೀಗುಗಳ ಹೋ ನಗು. "ಗರ್ಲ್ ಫ್ರೆಂಡ್ ಚುಚ್ಚುತ್ತೆ ಅಂದ್ಲೇನ್ರೀ?"ಯಿಂದ "ಯಕ್ಷಗಾನದಲ್ಲಿ ಸ್ತ್ರೀಪಾತ್ರ ಮಾಡೋಕೆ ಹೋಗಿದ್ಯಾ?" ತನಕ ಪ್ರತಿಕ್ರಿಯೆಗಳು, ಹೀಯಾಳಿಕೆಗಳು, ಕಾಲೆಳೆಯುವಿಕೆಗಳು. ಅಷ್ಟು ದಿನ ಒಂದೂ ಮಾತಾಡದ ಕಲೀಗೊಬ್ಬಳು "ಐ ಲೈಕ್ ಗಯ್ಸ್ ವಿಥ್ ಮಸ್ಟಾಕ್" ಎಂದುಬಿಟ್ಟಳು. ಆದರೂ ‘ನೆನಪಿಗಿರಲಿ’ ಅಂತ ಒಂದೆರಡು ಫೋಟೋ ನಾನೇ ತೆಗೆದುಕೊಂಡೆ. ಧೈರ್ಯ ಮಾಡಿ ಆರ್ಕುಟ್ಟಿಗೂ ಹಾಕಿದೆ. ಕೆಲವರು ‘ಹಾರಿಬಲ್’ ಅಂದರು, ಕೆಲವರು ‘ಮದುವೆ ಯಾವಾಗ?’ ಕೇಳಿದರು, ಇನ್ನು ಕೆಲವರು ‘ಕೆಟ್ಟದಾಗಿ ಕಾಣ್ತೀಯ. ತಕ್ಷಣ ಛೇಂಜ್ ಮಾಡ್ದಿದ್ರೆ ಒದೆ ತಿಂತೀಯ’ ಅಂತ ಬೆದರಿಕೆ ಹಾಕಿದರು. ರೂಮ್‌ಮೇಟು ತಾನಿಲ್ಲದಾಗ ಇಂತಹ ಅಚಾತುರ್ಯವೊಂದು ಘಟಿಸಿದುದಕ್ಕಾಗಿ ವಿಷಾದ ವ್ಯಕ್ತಪಡಿಸಿದ. ಮೊನ್ನೆ ಮೇಫ್ಲವರಿಗೆ ಹೋಗಿದ್ದಾಗ ಮೋಹನ್ ಸರ್ ಕೈಕುಲುಕಿ ‘ಬೇಗ ಮೀಸೆ ಬರ್ಲಿ’ ಅಂತ ಹಾರೈಸಿಬಿಟ್ಟರು!ಕಳೆದುಕೊಂಡಾಗಲೇ ಇದ್ದುದರ ನಿಜವಾದ ಬೆಲೆ ಗೊತ್ತಾಗೋದು ಅಂತಾರೆ.. ನನ್ನ ಮೀಸೆ, ಅದು ಇಲ್ಲವಾದಮೇಲೆ ಅದಕ್ಕೆ ಭಾರೀ ಡಿಮಾಂಡ್ ಶುರುವಾಗಿದೆ. ಆದಷ್ಟೂ ಬೇಗ ಬೆಳೆಯಲಪ್ಪಾ ಅಂತ ನಂಬದ ದೇವರಲ್ಲೆಲ್ಲಾ ಪ್ರಾರ್ಥಿಸುತ್ತಿದ್ದೇನೆ. ಮೊರೆ ಕೇಳಿದೆಯಿರಬೇಕು, ಈಗ ಈ ಮಾನಿಟರ್ ಆಫ್ ಮಾಡಿದರೆ ಕಾಣುವ ನನ್ನ ಬಿಳೀ ಮೋರೆಯ ಅಸ್ಪಷ್ಟ ಪ್ರತಿಬಿಂಬದಲ್ಲಿ, ಸಣ್ಣ ಸಣ್ಣ ಕಪ್ಪುಚುಕ್ಕಿಗಳು ಒತ್ತೊತ್ತಾಗಿ ಮೂಡಿರುವುದು ಗೋಚರಿಸುತ್ತಿದೆ. ರಾತ್ರಿಯ ಆಕಾಶವನ್ನು ‘ಇನ್ವರ್ಟ್ ಕಲರ್ಸ್’ ಮಾಡಿದ ಹಾಗೆ.

ಮಗುವಿನ ನಗು ...


ನಿನ್ನೆ ಕಳೆದ ತಿಂಗಳು ಸಂಜೆ ಹೀಗೇ.ರಜಾದಿನವಾದ್ದರಿಂದ ರೂಮಿನಲ್ಲೇ ಇದ್ದೆ. ಕವಿತೆಯೊಂದು ಕೈಕೊಟ್ಟು ಕೂತಿತ್ತು. ಮೊದಲೆರಡು ಸಾಲುಗಳನ್ನೇನೋ ಸರಾಗವಾಗಿ ಬರೆದಿಟ್ಟಿದ್ದೆ. ಆದರೆ ಮುಂದಿನ ಸಾಲುಗಳು ಮಾತ್ರ ಅದೇನೇ ಕಸರತ್ತು ಮಾಡಿದರೂ ಮೂಡಿಬರದೇ ನನ್ನನ್ನು ಚಡಪಡಿಸುವಂತೆ ಮಾಡಿದ್ದವು. ಏನು ಬರೆಯಬೇಕೂಂತ ಗೊತ್ತು; ಆದರೆ ಅವು ಶಬ್ದಗಳಾಗಿ ಪಡಿಮೂಡುತ್ತಿರಲಿಲ್ಲ. ವಿಪರೀತ ಟೆನ್ಶನ್ನಿಗೆ ಒಳಗಾಗಿ, ತಲೆಬಿಸಿಯಾಗಿ, ರೂಮಿನಿಂದ ಹೊರಬಂದೆ.ಟೆರೇಸು ಆಕಾಶಕ್ಕೆ ಮುಖ ಮಾಡಿ ನಕ್ಷತ್ರಗಳಿಗಾಗಿ ಕಾಯುತ್ತಿದ್ದಂತಿತ್ತು. ಸುಮ್ಮನೇ ಅದರ ಮೇಲೆ ಓಡಾಡಿದೆ. ನನ್ನ ಟೆನ್ಶನ್ನನ್ನು ಕಡಿಮೆ ಮಾಡುವಲ್ಲಿ ಆ ಟೆರೇಸಾಗಲೀ, ಆಗಸದ ಕೆಂಬಣ್ಣವಾಗಲೀ, ಆಗ ತಾನೇ ಹೊತ್ತಿಕೊಳ್ಳುತ್ತಿದ್ದ ಬೆಂಗಳೂರಿನ ಬೀದಿದೀಪಗಳಾಗಲೀ, ಪಕ್ಕದ ದೇವಸ್ಥಾನದ ಗಂಟೆಯ ನಿನಾದವಾಗಲೀ ಸಫಲವಾಗುವಂತೆ ಕಾಣಲಿಲ್ಲ. ಅಷ್ಟರಲ್ಲಿ ಪಕ್ಕದ ಮನೆಯ ಸ್ಟೇರ್‌ಕೇಸಿನಲ್ಲಿ ಬೀದಿನಾಯಿಯೊಂದು ಹತ್ತಿ ಬರುತ್ತಿರುವುದು ಕಾಣಿಸಿತು. ದುಡುದುಡನೆ ಹತ್ತುತ್ತಾ ಟೆರೇಸಿಗೆ ಬಂತು ನಾಯಿ. ನನಗೇಕೋ ಆ ನಾಯಿಯೂ ಟೆನ್ಶನ್ನಿನ್ನಲ್ಲಿರುವಂತೆ ಕಂಡಿತು. ಕೇಳಿದೆ ಅದರ ಬಳಿ: "ಏನಯ್ಯಾ, ಟೆನ್ಶನ್ನಿನಲ್ಲಿದ್ದಂಗಿದೆ?" ಅಂತ. ಅದಕ್ಕೆ ನಾಯಿ, "ಹೂಂ ಕಣಣ್ಣ, ದೊಡ್ಡ ತಲೆಬಿಸಿ ಆಗ್‍ಹೋಗಿದೆ. ಅದೆಲ್ಲೋ ವಿಜಯನಗರದಲ್ಲಿ ನಮ್ಮ ಕುಲಬಾಂಧವರು ಯಾವನೋ ಒಬ್ಬ ಮನುಷ್ಯನಿಗೆ ಕಚ್ಚಿ ಅವನು ಸತ್ತೇ ಹೋದನಂತಲ್ಲಾ? ಅವತ್ತಿಂದ ಈ ಮನುಷ್ಯರೆಲ್ಲರೂ ನಮ್ಮ ಮೇಲೆ ಕೆಂಡ ಕಾರಲಿಕ್ಕೆ ಶುರು ಮಾಡಿದಾರೆ. ಕಾರ್ಪೋರೇಶನ್ನಿನವರು ನಮ್ಮನ್ನೆಲ್ಲಾ ಕಿಡ್ನಾಪ್ ಮಾಡಲಿಕ್ಕೆ ಪ್ಲಾನ್ ಮಾಡಿದಾರಂತೆ. ಲಾರಿಯಲ್ಲಿ ಹೇರ್ಕೊಂಡು ಹೋಗ್ತಾರಂತೆ. ನಂಗಂತೂ ಅದೇ ಟೆನ್ಶನ್ನು. ಯಾವ ಲಾರಿ ಕಂಡರೂ ಯಮರಾಯನ ಮುಖದರ್ಶನ ಮಾಡಿದಂಗೆ ಆಗೊತ್ತೆ. ಈಗ್ಲೂ ಹಾಗೇ: ಯಾವುದೋ ಲಾರಿ ದೂರದಲ್ಲಿ ಬರ್ತಿರೋದು ಕಾಣಿಸ್ತು; ತಕ್ಷಣ ಓಡಿ ಟೆರೇಸಿಗೆ ಬಂದ್ಬಿಟ್ಟೆ!" ಅಂತು. ಮನುಷ್ಯನಿಗಷ್ಟೇ ಅಲ್ಲ, ನಾಯಿಗಳಿಗೂ ಇರೊತ್ತೆ ಟೆನ್ಷನ್ನು ಅನ್ನುವ ಹೊಸ ಜ್ಞಾನೋದಯದೊಂದಿಗೆ ನಗುತ್ತಾ ರೂಮಿನೊಳಬಂದೆ.ಮತ್ತೆ ಬರೆಯಲು ಕುಳಿತೆ. ಆದರೆ ಅಕ್ಷರಗಳೇಕೋ ನನ್ನ ಮೇಲೆ ಸಿಟ್ಟು ಮಾಡಿಕೊಂಡಿದ್ದವು ಅನ್ನಿಸೊತ್ತೆ. ಏನಂದರೂ ಕವಿತೆ ಮುಂದುವರಿಯುವ ಲಕ್ಷಣ ಕಾಣಲಿಲ್ಲ. ಮತ್ತೇನು ಮಾಡುವುದು ಎಂದು ಯೋಚಿಸಿದೆ. ನನ್ನ ನೆಂಟರೊಬ್ಬರ ಮನೆಗೆ ಹೋಗದೇ ಬಹಳ ದಿನಗಳಾದವು ಎಂದು ನೆನಪಾಯಿತು. ಅವರಿಗೆ ಒಂದು ಗಂಡು ಮಗು ಹುಟ್ಟಿದ್ದ ಸುದ್ದಿ ನನಗೆ ತಿಳಿದಿದ್ದುದೇ ಆಗಿತ್ತು. ಫೋನ್ ಮಾಡಿ ವಿಶ್ ಮಾಡಿದ್ದೆ. ಪಾಪುವನ್ನು ನೋಡಲು ಬರುವುದಾಗಿ ಹೇಳಿದ್ದೆನಾದರೂ, ಹಾಗೆ ಹೇಳಿ ಈಗ ಆರು ತಿಂಗಳಿಗೆ ಬಂದಿದ್ದರೂ ಇನ್ನೂ ನನಗೆ ಹೋಗಲಿಕ್ಕೆ ಆಗಿರಲಿಲ್ಲ. ಮೊದಲು ನನಗೆ ರಜೆ ಇದ್ದಾಗ ನನ್ನ ಆತ್ಮೀಯ ಸ್ನೇಹಿತ ರವಿ ಮನೆಗೆ ಹೋಗುತ್ತಾ ಇದ್ದೆ .ಆದರೆ ಈಗ ಅವನ ಹತ್ತಿರ ಹೋಗುವದನ್ನು ನಿಲ್ಲಿಸಿದ್ದೇನೆ .ರವಿಗೆ ಮಕ್ಕಳು ಅಂದ್ರೆ ಪಂಚ ಪ್ರಾಣ ಅವನು ಮಕ್ಕಳಿಗಾಗಿ ತಂದ ಚಾಕೊಲೇಟ ನಾನೆ ತಿಂದು ಹಾಕುತ್ತ ಇದ್ದೆ .ನಾವಿಬ್ಬರು ಈಗ ದೂರ ಆಗಿದ್ದೇವೆ ಆದರು ಅವನನ್ನು ನೆನಸದೆ ದಿನಗಳಿಲ್ಲ ......ಪ್ರಿನ್ಸ್ ಮತ್ತು ರಶ್ಮಿ ಮಂಗಳೂರ್ ಗೆ ಹೋಗಿರುವದರಿಂದ ನಾನು ಬೆಂಗಳೂರ್ ನಲ್ಲಿ ನಾನು ಒಬ್ಬನೇ ವಾಸ ಮಾಡುತ್ತ ಇದ್ದೇನೆ .ಬಿಡಿ ಆ ವಿಚಾರ .....ಹೀಗೆ ಸಡನ್ನಾಗಿ ನಮ್ಮ ಸಂಭಂದಿಕರ್ ನೆನಪಾದ್ದರಿಂದ, ಬೇರೆ ಏನೂ ಕೆಲಸವೂ ಇಲ್ಲದ್ದರಿಂದ, ಅಲ್ಲಿಗೇ ಹೋಗೋಣವೆಂದು ತೀರ್ಮಾನಿಸಿದೆ. ಫೋನಾಯಿಸಿ ವಿಚಾರಿಸಿದಾಗ ಅವರು ಮನೆಯಲ್ಲೇ ಇರುವುದು ತಿಳಿಯಿತು. ರಾತ್ರಿ ಊಟಕ್ಕೆ ಬರುತ್ತಿರುವುದಾಗಿ ತಿಳಿಸಿದೆ.ಪ್ಯಾಂಟೇರಿಸಿ, ಕೆಳಗಿಳಿದು ಬಂದು, ನೆಂಟರ ಮನೆ ಕಡೆ ಹೋಗುವ ಬಸ್ಸು ಹತ್ತಿದೆ. ಬಸ್ಸಿನಲ್ಲಿ ಹಿಂದಿನ, ಗಂಡಸರ ಸೀಟುಗಳ್ಯಾವೂ ಖಾಲಿಯಿರಲಿಲ್ಲ. ಮುಂದಿನ, ಹೆಂಗಸರ ಸೀಟುಗಳಲ್ಲಿ ಒಂದೆರಡು ಸೀಟುಗಳು ಖಾಲಿಯಿದ್ದವು. ಸರಿ, ಮುಂದೆ ಯಾರಾದರೂ ಹೆಂಗಸರು ಹತ್ತಿದರೆ ಬಿಟ್ಟುಕೊಟ್ಟರಾಯಿತು ಅಂದುಕೊಂಡು ಅವುಗಳಲ್ಲೇ ಒಂದರಲ್ಲಿ ಆಸೀನನಾದೆ. ಕೂತದ್ದೇ ತಪ್ಪಾಗಿಹೋಯಿತು: ಮತ್ತೆ ಟೆನ್ಶನ್ ಶುರುವಾಯಿತು! ಸ್ಟಾಪ್ ಬಂದಾಗಲೆಲ್ಲಾ ಯಾರಾದರೂ ಹೆಂಗಸರು ಹತ್ತಿಬಿಡುತ್ತಾರೇನೋ, ಸೀಟ್ ಬಿಟ್ಟುಕೊಡಬೇಕಾಗುತ್ತದೇನೋ ಎಂದು ಚಡಪಡಿಸತೊಡಗಿದೆ. ಪ್ರತಿ ಸ್ಟಾಪಿನಲ್ಲಿ ಬಸ್ಸು ನಿಂತಾಗಲೂ ನಾನು ಕೂತಲ್ಲೇ ಬಗ್ಗಿ, ತಲೆ ಎತ್ತಿ, ಮಿಸುಕಾಡಿ, ಬಾಗಿಲ ಕಡೆ ನೋಡುವುದಾಯಿತು. ಸಾಯಲಿ, ಈ ಟೆನ್ಶನ್ನೇ ಬೇಡ, ಶಿಸ್ತಾಗಿ ಎದ್ದುನಿಂತುಬಿಡೋಣ ಅನ್ನಿಸಿತಾದರೂ ಹಿಂದಿನ ಸೀಟಿನವರು ಏನೆಂದುಕೊಂಡಾರೆಂದು ಭಾವಿಸಿ ಮತ್ತೆ ಸೀಟಿಗೊರಗಿದೆ. ಅಂತೂ ಮುಂದಿನ ಸ್ಟಾಪಿನಲ್ಲಿ ಐದಾರು ಮಹಿಳೆಯರು ಬಸ್ಸು ಹತ್ತಿ ನನ್ನ ಸೀಟಿಗೆ ಸಂಚಕಾರ ತಂದರು. ಅವರಿಗೆ ಸೀಟು ಬಿಟ್ಟುಕೊಟ್ಟು ನಾನು ಟೆನ್ಶನ್ನಿನಿಂದ ಅಷ್ಟರ ಮಟ್ಟಿಗೆ ಹೊರಬಂದೆನಾದರೂ, ಸೀಟು ಬಿಟ್ಟುಕೊಡುವಾಗ ಮಾತ್ರ ಒಬ್ಬ ರಾಜಕಾರಣಿಗೆ ಎಷ್ಟು ಬೇಸರ, ಅಪಮಾನಗಳು ಆಗಬಹುದೋ ಅವೆಲ್ಲವನ್ನೂ ನಾನು ಅನುಭವಿಸಿದ್ದೆ. ನಾನು ಎದ್ದು ನಿಂತು ಅವರಿಗೆ ಸೀಟು ಬಿಟ್ಟುಕೊಟ್ಟದ್ದೇ ನನ್ನ ಹಿಂದಿನ ಸೀಟಿನವರ ಮುಖಗಳನ್ನು ನೋಡದಾದೆ. ಅವರೆಲ್ಲಾ ನನ್ನನ್ನು ಅಪಹಾಸ್ಯದ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂದು ನನಗೆ ಭಾಸವಾಗಲಾರಂಭಿಸಿತು.ನೆಂಟರ ಮನೆಯ ಬೆಲ್ಲು ಒತ್ತಿ ಹೊರಗೆ ಕಾಯತೊಡಗಿದೆ. ಒಂದು ನಿಮಿಷವಾದರೂ ಬಾಗಿಲು ತೆರೆಯದಿದ್ದುದರಿಂದ ಮತ್ತೆ ಟೆನ್ಶನ್ ಶುರುವಾಯಿತು. ಮತ್ತೆರಡು ಬಾರಿ ಬೆಲ್ ಒತ್ತಿದೆ. ಸುಮಾರು ಎರಡು ನಿಮಿಷಗಳ ಬಳಿಕ ಅತ್ತಿಗೆ ಬಂದು ಬಾಗಿಲು ತೆರೆದಳು. "ಓ, ಬಾ, ಸಾರಿ, ಪಾಪೂನ ಮಲಗಿಸ್ತಾ ಇದ್ದೆ, ಅದ್ಕೇ ಲೇಟಾಯ್ತು ಡೋರ್ ಓಪನ್ ಮಾಡ್ಲಿಕ್ಕೆ. ಒಳಗೆ ಬಾ. ಎಷ್ಟು ದಿವಸ ಆಯ್ತೋ ಮಹಾನುಭಾವ ಈ ಕಡೆ ಬರದೇ...?" ಎನ್ನುತ್ತಾ ಅತ್ತಿಗೆ ನನ್ನನ್ನು ಆದರದಿಂದ ಸ್ವಾಗತಿಸಿದಳು. ಸೀದಾ ಕಿಚನ್ನಿಗೆ ಕರೆದೊಯ್ದಳು. ಅತ್ಮೀಯವಾಗಿ ಮಾತನಾಡುತ್ತಾ ಕಾಫಿ ಮಾಡಿಕೊಟ್ಟಳು. ಅಷ್ಟರಲ್ಲಿ ಜಗದೀಶಣ್ಣ ಕೂಡ ಬಂದ. ಅವನೊಂದಿಗೆ ಹಾಲ್‍ಗೆ ಬಂದು ಮಾತನಾಡುತ್ತಾ ಕುಳಿತೆವು. ಆಫೀಸು, ವರ್ಕ್‍ಲೋಡು, ಸ್ಯಾಲರಿ, ಟ್ರಾಫಿಕ್ಕು, ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೋಗಿದ್ದು, 'ಒಂದು ಗಾಡಿ ತಗೊಳ್ಳೋ ಮರಾಯಾ', ಇಂಡಿಯಾ-ಸೌತ್ ಆಫ್ರಿಕಾ ಮ್ಯಾಚು... ಹೀಗೆ ಅವ್ಯಾಹತವಾಗಿ ಮಾತಾಡಿದೆವು. ಅತ್ತಿಗೆ ಅಡುಗೆಯಲ್ಲಿ ತೊಡಗಿದ್ದಕ್ಕೆ ಸಾಕ್ಷಿಯಾಗಿ ಕಿಚನ್ನಿನಿಂದ ಮಿಕ್ಸಿ, ತುರಿಮಣೆ, ಸೌಟುಗಳ ಸದ್ದು ಕೇಳಿಬರುತ್ತಿತ್ತು. ವಗ್ಗರಣೆಯ ಶಬ್ದದೊಂದಿಗೇ ಪರಿಮಳವೂ ತೇಲಿಬಂತು.ಅಷ್ಟೊತ್ತಿಗೆ ಮಲಗಿದ್ದ ಪಾಪುವಿಗೆ ಎಚ್ಚರವಾಗಿ ಕೋಣೆಯಿಂದ ಅಳು ಕೇಳಿಬಂತು. ಅತ್ತಿಗೆ 'ಹೂಂ ಬಂದೇ...' ಎನ್ನುತ್ತಾ ಕೋಣೆಗೆ ಹೋಗಿ ಮಗುವನ್ನು ಎತ್ತಿಕೊಂಡು ಬಂದಳು. ತಾಯಿಯ ತೋಳಿನಲ್ಲಿ ಕುಳಿತು ಮಿಕಮಿಕನೆ ನಮ್ಮನ್ನೇ ನೋಡುತ್ತಿದ್ದ ಮಗು ಮೊಲದ ಮರಿಯಂತೆ ಕಂಡಿತು. 'ಇಲ್ನೋಡು... ಇದು ಯಾರು ಗೊತ್ತಾ? ಮಾಮ.. ಮಾಮ ಇದು. ಹೋಗ್ತೀಯಾ ಮಾಮನ ಹತ್ರ?' ಅನ್ನುತ್ತಾ ಅತ್ತಿಗೆ ಪಾಪುವನ್ನು ನನ್ನ ಕೈಗೆ ವರ್ಗಾಯಿಸಿದಳು. ಆದರೆ ನನ್ನ ಕೈಗೆ ಬಂದದ್ದೇ ಪಾಪು ಅಳಲಿಕ್ಕೆ ಶುರುಮಾಡಿತು. 'ಏ.. ಸುಮ್ನಿರೂ... ಆ.. ವೂ..' ಎಂದು ಇತ್ಯಾದಿ ಏನೇನೋ ಬಡಬಡಿಸಿ ಮಗುವನ್ನು ಸುಮ್ಮನಿರಿಸಲು ನೋಡಿದೆನಾದರೂ ಅದು ಅಳುವನ್ನು ನಿಲ್ಲಿಸಲಿಲ್ಲ. ಒಂದು ಮುತ್ತು ಕೊಟ್ಟರೆ ಸಾಕು ಹಟ ನಿಲ್ಲಿಸುವ ನನ್ನ ಹುಡುಗಿ ಈ ಮಗುವಿಗಿಂತ ಸಾವಿರ ಪಾಲು ಬೆಟರು ಅನ್ನಿಸಿ ಮಗುವನ್ನು ಜಗದೀಶಣ್ಣನಿಗೆ ಒಪ್ಪಿಸಿದೆ. ಅವನು ನೆಲಕ್ಕೆ ಕುಳಿತುಕೊಂಡು, ಮಗವನ್ನು ತೊಡೆಯಮೇಲೆ ಕೂರಿಸಿಕೊಂಡು, 'ಆನೆ ಬಂತೊಂದಾನೆ' ಮಾಡತೊಡಗಿದ.ಆನೆ ಬಂತೊಂದಾನೆಯಾವೂರಾನೆ?ಸಿದ್ದಾಪುರದಾನೆಇಲ್ಲಿಗ್ಯಾಕ್ ಬಂತು?ಹಾದಿ ತಪ್ಪಿ ಬಂತುಬೀದಿ ತಪ್ಪಿ ಬಂತುನಮ್ಮನೆ ಪಾಪಚ್ಚಿ ನೋಡಕ್ ಬಂತು..!ಅಳು ನಿಲ್ಲಿಸಿ ಮಗು ಗಿಟಗಿಟನೆ ನಗಲಿಕ್ಕೆ ಶುರುಮಾಡಿತು. ಬೊಚ್ಚುಬಾಯಿ ಬಿಟ್ಟುಕೊಂಡು ನಿಷ್ಕಳಂಕವಾಗಿ ನಗುತ್ತಿದ್ದ ಈ ಮಗುವಿನ ಚೆಲುವಿಗೆ ನಾನು ಮಾರುಹೋದೆ. ಆ ನಗೆಯ ಶಬ್ದದ ಅಲೆಯಲ್ಲಿ ತೇಲಿಹೋದೆ.ನಾನೂ ಜಗದೀಶಣ್ಣನ ಪಕ್ಕ ಹೋಗಿ ಕುಳಿತುಕೊಂಡೆ. ಪಕ್ಕದಲ್ಲೇ ಮಗುವನ್ನು ಆಡಿಸಲಿಕ್ಕೆಂದು ತಂದಿದ್ದ ಗಿಲಗಿಚ್ಚಿಯೊಂದಿತ್ತು. ಅದನ್ನು ಗಿಲಗಿಲನೆ ಅಲುಗಾಡಿಸುತ್ತಾ ನಾನು ಮಗುವಿನ ಸ್ನೇಹ ಸಂಪಾದಿಸಲು ನೋಡಿದೆ. ಸ್ವಲ್ಪ ಹೊತ್ತಿನ ನಂತರ ಮಗು ನನಗೆ ಹೊಂದಿಕೊಂಡಿತು. ಅದರ ಮುದ್ದು ಗಲ್ಲವನ್ನು ಚಿವುಟಿದೆ. 'ಛೀ ಕಳ್ಳ!' ಎಂದೆ. ಮಗು ಮತ್ತೆ ಗಿಟಗಿಟನೆ ನಕ್ಕಿತು.ಯೋಚಿಸುತ್ತಿದ್ದೆ ನಾನು: ಯಾಕೆ ಹೀಗೆ ನಗುತ್ತದೆ ಮಗು? ನಾವು 'ಆನೆ ಬಂತೊಂದಾನೆ' ಮಾಡುವ ಮೊದಲು ಮಗುವಿಗೇನು ಆನೆಯನ್ನು ತೋರಿಸಿರುವುದಿಲ್ಲ. 'ಛೀ ಕಳ್ಳ' ಎನ್ನುವಾಗ ಕಳ್ಳ ಎಂದರೆ ಯಾರು ಎಂಬುದೇ ಗೊತ್ತಿರುವುದಿಲ್ಲ ಮಗುವಿಗೆ. ಆದರೂ ನಗುತ್ತದೆ. ಯಾಕೆ?ಮಗುವಿನ ಕೈಗೆ ಗಿಲಗಿಚ್ಚಿಯನ್ನು ಕೊಟ್ಟು ಕೇಳಿದೆ ನಾನು: "ನಾವು 'ಆನೆ ಬಂತೊಂದಾನೆ' ಎನ್ನುತ್ತಾ ಬಾಗಿದರೆ-ತೂಗಿದರೆ, ಅಥವಾ 'ಛೀ ಕಳ್ಳ!' ಎಂದು ಗೋಣು ಕೊಡವಿದರೆ ನಿನಗೆ ಏನು ಕಾಣಿಸುತ್ತದೆ ಮಗುವೇ? ಅದರಲ್ಲಿ ಅಷ್ಟೆಲ್ಲಾ ನಗುವಂತದ್ದು ಏನಿದೆ? ನಾವೆಲ್ಲಾ ಚಿತ್ರಗಳೇ ನಿನ್ನ ಪಾಲಿಗೆ?"ಕೈಯಲ್ಲಿ ಹಿಡಿದಿದ್ದ ಗಿಲಗಿಚ್ಚಿಯಿಂದ ಕಿಂಕಿಣಿ ನಾದ ಹೊಮ್ಮಿಸುತ್ತಾ ಹೇಳಿತು ಮಗು, "ಎಲ್ಲದಕ್ಕೂ ಕಾರಣ ಕೇಳಬೇಡವೋ ದಡ್ಡ ಮಾಮ! ಕಾರಣಗಳನ್ನೆಲ್ಲಾ ನೀನಿಟ್ಟುಕೋ. ಬೇಕಾದರೆ ಮತ್ತಷ್ಟು ಟೆನ್ಶನ್ ಮಾಡಿಕೋ. ಆನೆ ಎಂದರೆ ಏನು ಅಂತ ನನಗೆ ಬೇಕಿಲ್ಲ. ಆನೆ ಹೇಗಿರುತ್ತದೋ ನನಗೆ ಗೊತ್ತಿಲ್ಲ. ಆದರೂ ನಗಲಿಕ್ಕೇನು! ಕಳ್ಳ ಎಂದರೆ ಯಾರಾದರೂ ಆಗಿರಲಿ. ಅವನು ಬೇಕಾದರೆ ನಿನ್ನ ನಗೆಯನ್ನು ಕೊಳ್ಳೆ ಹೊಡೆದವನೇ ಆಗಿರಲಿ. ಆದರೆ ಆತ ನನ್ನ ನಗೆಯನ್ನು ಕಸಿಯಲಾರ. ನಾನು ಸುಮ್ಮನೇ ನಗುತ್ತೇನೆ! ನಿನಗೆ ಹೀಗೆ ನಗಲಿಕ್ಕಾಗುತ್ತದಾ? 'ಆನೆ ಬಂತೊಂದಾನೆ' ಮಾಡಿದರೂ ನೀನು ನಗುವಂತಿಲ್ಲ; 'ಛೀ ಕಳ್ಳ' ಎಂದರೂ ನಗುವಂತಿಲ್ಲ. ಆನೆ ಬಂದರೂ ಕಳ್ಳ ಬಂದರೂ ಹೆದರಿಕೊಂಡು ಓಡಿಹೋಗುತ್ತೀ ನೀನು! ದಿನವಿಡೀ 'ಟೆನ್ಶನ್ ಟೆನ್ಶನ್' ಎನ್ನುತ್ತಾ ಓಡಾಡುವ ನೀನು ನಗುವಿಗೂ ಕಾರಣ ಕೇಳುತ್ತೀಯ, ಅಳುವಿಗೂ ಕಾರಣ ಕೇಳುತ್ತೀಯ, ಪ್ರೀತಿಗೂ ಕಾರಣ ಕೇಳುತ್ತೀಯ... ಏಯ್ ಸುಮ್ನಿರೋ ದಡ್ಡ ಮಾಮ!" ಅಷ್ಟಂದು ಮತ್ತೆ ನಗಲಾರಂಭಿಸಿತು. ನಾನು ತಿರುಗಿ ಮಾತಾಡಲು ಏನೂ ತೋಚದೇ ಸುಮ್ಮನೆ ಮಗುವಿನ ಮುಖವನ್ನೇ ನೋಡುತ್ತಿದ್ದೆ.ಅತ್ತಿಗೆ ಊಟಕ್ಕೆ ಕರೆಯುವವರೆಗೂ ನಾನು ಮಗುವನ್ನು ಆಡಿಸುತ್ತಲೇ ಇದ್ದೆ. ಊಹೂಂ, ಹಾಗನ್ನುವುದಕ್ಕಿಂತ 'ನಾನೇ ಮಗುವಾಗಿದ್ದೆ ಮಗುವಿನ ಜೊತೆ' ಎಂದರೆ ಹೆಚ್ಚು ಸರಿಯಾಗುತ್ತದೆ. ಒಳ್ಳೆಯದೊಂದು ಊಟ ಮಾಡಿ, ಸಾದಾ ಕವಳ ಹಾಕಿ ನಾನು ನೆಂಟರ ಮನೆಯಿಂದ ಹೊರಟೆ. ಅಷ್ಟೊತ್ತಿಗಾಗಲೇ ಮಗು ತೊಟ್ಟಿಲಿನ ಮೆತ್ತೆಯಲ್ಲಿ ಬೆಚ್ಚಗೆ ನಿದ್ದೆ ಹೋಗಿತ್ತು.ರೂಮಿಗೆ ಮರಳುವ ಹಾದಿಯಲ್ಲಿ ಹೊಸದೇ ಆದ ಉಲ್ಲಾಸವೊಂದು ನನ್ನಲ್ಲಿ ತುಂಬಿಕೊಂಡಿರುವ ಭಾವವನ್ನು ಅನುಭವಿಸಿದೆ. ಅರ್ಧ ಬರೆದಿಟ್ಟು ಬಂದಿದ್ದ ಕವಿತೆಯ ಮುಂದಿನ ಸಾಲುಗಳು ಅದಾಗಲೇ ಕಣ್ಣ ಮುಂದೆ ನಿಲ್ಲತೊಡಗಿದ್ದವು. ಆ ಸಾಲುಗಳ ಹಿಂದೆ ಅದೇ ಮಗುವಿನ ಬೊಚ್ಚು ಬಾಯಿಯ ನಗುವಿನ ಚಿತ್ರ ಅಚ್ಚೊತ್ತಿತ್ತು.

ಪ್ರೇಮ ಪತ್ರ ........


ಬೊಗಸೆ ಕಣ್ಗಳ ಹುಡುಗೀ,ನಿನಗೆ ಸಾವಿರ ಸಿಹಿಮುತ್ತುಗಳು.ಇಲ್ಲೊಂದು ಸುಂದರ ಸಂಜೆ. ಇವತ್ತು ಥೈಲ್ಯಾಂಡ್ ಗೆ ಬಂದ್. ಬೆಳಗ್ಗೆಯಿಂದ ಮುಚ್ಚಿದ್ದ ಅಂಗಡಿಗಳು ಇದೀಗ ತಾನೆ ಕಣ್ಣು ಬಿಡುತ್ತಿವೆ.. ಹೋಟೆಲುಗಳ ಸ್ಟೋವ್ ಹೊತ್ತಿಕೊಳ್ಳುತ್ತಿವೆ.. ಸಿಗ್ನಲ್ ದೀಪಗಳು ತಮ್ಮ ಬಣ್ಣಗಳನ್ನು ಮತ್ತೆ ನೆನಪು ಮಾಡಿಕೊಳ್ಳುತ್ತಿವೆ.. ಯೋಚಿಸುತ್ತಿದ್ದೆ ನಾನು: ಹೀಗೆ ನಾನು ನಿನ್ನನ್ನು ನೆನಪಿಸಿಕೊಳ್ಳುವ ಪ್ರಸಂಗ ಬರದೇ ಎಷ್ಟು ದಿನಗಳಾದವು..? ಯಾಕೆಂದರೆ ನಾನು ನಿನ್ನನ್ನು ಮರೆತಿದ್ದೇ ಇಲ್ಲ! ನನ್ನ ಹೃದಯದ ಬೀದಿಗಳಲ್ಲಿ ನಿನ್ನ ಸವಿನೆನಪುಗಳ ಅಂಗಡಿಗಳು ಯಾವಾಗ ಮುಚ್ಚಿದ್ದವು ಹೇಳು? ನೀನು ಹಚ್ಚಿಟ್ಟು ಹೋದ ಪ್ರೀತಿಯ ಹಣತೆ ಎಂದು ಆರಿತ್ತು ಹೇಳು? ಆದರೂ ನಿನಗೆ ಹುಸಿಕೋಪ. ಪತ್ರ ಬರೆಯದೇ ಎಷ್ಟು ದಿನಗಳಾದವು ಎಂದಾ? ಹೌದು ಕಣೆ, ಟೈಮೇ ಸಿಗಲಿಲ್ಲ. ನಿನ್ನ ಬಳಿ ಹೇಳಿಕೊಳ್ಳಲು ಸಾಕಷ್ಟು ವಿಷಯಗಳಿವೆ ಎಂಬುದಂತೂ ನಿಜ.ಕಳೆದ ತಿಂಗಳು ಭಾನುವಾರ ಒಂದು ಟೂರ್ ಹೋಗಿದ್ದೆ. 'ಹವ್ಯಕ-ಸಾಗರ' ಮತ್ತು 'ಆರ್ಕುಟ್-ಹವ್ಯಕ' ಬಳಗಗಳು ಸಂಯೋಜಿಸಿದ್ದ ಪ್ರವಾಸ. ಬಲಮುರಿ ಜಲಪಾತ ಮತ್ತು ರಂಗನತಿಟ್ಟು ಪಕ್ಷಿಧಾಮಗಳಿಗೆ ಹೋಗಿದ್ದೆವು. ಪೂರ್ತಿ ನೂರಾ ಮೂವತ್ತು ಜನ! ಮೂರು ಬಸ್‍ಗಳಲ್ಲಿ ಹೋಗಿದ್ದು. ಸುಮಾರು ಮೂವತ್ತು ಹುಡುಗಿಯರೂ ಬಂದಿದ್ದರು. (ಅವರ ಬಗ್ಗೆ ಬರೆಯುವುದಿಲ್ಲ ನಾನು; ಯಾಕೆಂದರೆ ನೀನು ಕೋಪಿಸಿಕೊಳ್ಳುತ್ತೀ!) ಪ್ರವಾಸ ತುಂಬಾ ಚೆನ್ನಾಗಿತ್ತು. ಬಸ್ಸಿನಲ್ಲಿ ವಿಪರೀತ ಗಲಾಟೆಯಿತ್ತು. ಹಾಡುಗಳು, ಅಂತ್ಯಾಕ್ಷರಿ, ಯಾವ್ಯಾವುದೋ ಆಟಗಳು... ಓಹ್! ಫುಲ್ ಮಸ್ತ್! ಬಲಮುರಿಯಲ್ಲಿ ಬೀಳುತ್ತಿದ್ದ ನೀರಿನಲ್ಲಿ ನಿನ್ನದೇ ಲಹರಿಯಿತ್ತು.ಜುಳುಜುಳು ನೀರಿಲ್ಲಿ ತಿಲ್ಲಾನ ಹಾಡಿತ್ತು ನೋಡೋಕೆ ನಾ ಬಂದರೆ:ನಿನ್ನದೇ ತಕತೈ ಕಂಡಿತು.. ತಕದಿಮಿ ಹೆಚ್ಚಿತು..

ಬಹಳ ಹೊತ್ತು ನೀರಿನಲ್ಲಿ ಆಟವಾಡಿ ನಾವು ರಂಗನತಿಟ್ಟಿಗೆ ಬಂದೆವು. ಅದೆಷ್ಟೊಂದು ಬಿಳಿ ಬಿಳಿ ಹಕ್ಕಿಗಳು ಅಲ್ಲಿ... ಹತ್ತು-ಹನ್ನೆರಡು ಜನ ಒಂದು ದೋಣಿಯಲ್ಲಿ ಕುಳಿತು ಕೊಳದಲ್ಲಿ ತೇಲುತ್ತಾ ಪಕ್ಷಿಗಳನ್ನು ನೋಡುವುದು. ಎಲ್ಲೆಲ್ಲಿಂದಲೋ ಬಂದ ಹಕ್ಕಿಗಳು. ದೋಣಿಯವ ಹೇಳುತ್ತಿದ್ದ: "ಇವು ಸ್ನಿಕ್ಕರ್ ಅಂತ. ಗ್ರೀಸ್ ದೇಶದಿಂದ ಬಂದವು.." "ಇವು ಫೆದರ್‌ಸ್ಟೋನ್ ಅಂತ, ಮಲೇಷಿಯಾದಿಂದ ಬರ್ತಾವೆ.." ಯಾವುದೋ ದೇಶದಿಂದ ಇಲ್ಲಿಗೆ ಬಂದು, ಮರದ ಎಲೆಗಳ ಮರೆಯಲ್ಲಿ ಗೂಡು ಕಟ್ಟಿಕೊಂಡು, ಮೊಟ್ಟೆ ಇಟ್ಟು ಮರಿ ಮಾಡಿ, ಮರಿಹಕ್ಕಿಯ ರೆಕ್ಕೆ ಬಲಿಯುತ್ತಿದ್ದಂತೆಯೇ ಮತ್ತೆ ಹಾರಿಹೋಗುತ್ತವಂತೆ. ಹಕ್ಕಿಗಳನ್ನು ನೋಡುತ್ತಾ ಅಲೆಗಳ ಮೇಲೆ ತೇಲುತ್ತಾ ನಾನು ಮೈಮರೆತಿದ್ದೆ. ಯಾವುದೋ ಹಕ್ಕಿ ಮರಿಗೆ ಗುಟುಕು ನೀಡುತ್ತಿತ್ತು.. ಮತ್ಯಾವುದೋ ಹಕ್ಕಿ ತನ್ನ ಸಂಗಾತಿಗೆ ಗುಟ್ಟು ಹೇಳುತ್ತಿತ್ತು..ದೂರ ನಾಡಿನ ಹಕ್ಕಿಹಾರಿ ಬಾ ಗೂಡಿಗೆ..ಗೂಡು ತೂಗ್ಯಾವ ಗಾಳೀಗೆ..ಸುವ್ವಿ ಸುವ್ವಾಲೆ ಸುವ್ವಿ..ಪಯಣದುದ್ದಕ್ಕೂ ನಿನ್ನನ್ನು ತುಂಬಾ ಮಿಸ್ ಮಾಡಿಕೊಂಡೆ.ಮೊನ್ನೆ ಶುಕ್ರವಾರ ಏರ್‌ಶೋ ನೋಡಲಿಕ್ಕೆ ಹೋಗಿದ್ದೆ: ಆಫೀಸಿಗೆ ರಜೆ ಹಾಕಿ. ಇವೂ ಹಕ್ಕಿಗಳು. ಲೋಹದ ಹಕ್ಕಿಗಳು. ಮೊಟ್ಟೆ ಇಡದ ಹಕ್ಕಿಗಳು. ಇವೂ ಆಗಸದಲ್ಲಿ ತನ್ಮಯತೆಯಿಂದ ಹಾರಾಡುತ್ತವೆ. ಪಲ್ಟಿ ಹೊಡೆಯುತ್ತವೆ. ನಿಂತಂತೆ ತೇಲುತ್ತವೆ. ರೆಕ್ಕೆ ಅಗಲಿಸುತ್ತವೆ... ಯಾವ್ಯಾವುದೋ ದೇಶಗಳಿಂದ ಬಂದ ವಿಮಾನಗಳು, ಜೆಟ್‍ಗಳು ನಡೆಸಿದ ತರಹೇವಾರಿ ಕಸರತ್ತು ನೋಡುವಂತಿತ್ತು. ಜೆಟ್‍ಗಳ ಆರ್ಭಟವೇ ಒಂದು ತೂಕವಾದರೆ ನಮ್ಮ ಭಾರತದ 'ಸೂರ್ಯಕಿರಣ್' ಹೆಸರಿನ ಮಿನಿ ವಿಮಾನಗಳದ್ದೇ ಒಂದು ತೂಕ. ಪುಟ್ಟ ಪುಟ್ಟ ಒಂಭತ್ತು ವಿಮಾನಗಳು ಆಗಸದಲ್ಲಿ ಅದೇನೇನು ಆಟವಾಡಿದೆವು ಅನ್ನುತ್ತೀ..? ಆಗಸದಲ್ಲಿ ತ್ರಿವರ್ಣಗಳ ಓಕುಳಿ ನಿರ್ಮಿಸಿ ಅವು ಗಿಟ್ಟಿಸಿದ ಸಿಳ್ಳೆ-ಚಪ್ಪಾಳೆಗಳು ಅದೆಷ್ಟೋ? ಚುಕ್ಕಿಗಳೇ ಇಲ್ಲದೆ ಅವು ಎಳೆದ ರಂಗೋಲಿಗಳೆಷ್ಟೋ? ಕೊನೆಗೊಮ್ಮೆ, ಅವುಗಳಲ್ಲೇ ಎರಡು ವಿಮಾನಗಳು ವಿರುದ್ಧ ದಿಕ್ಕಿನಿಂದ ಹಾರಿಬಂದು ಒಂದು ದೊಡ್ಡ ಹಾರ್ಟು ಸೃಷ್ಟಿಸಿದವು. ಮತ್ತೊಂದು ವಿಮಾನ ಬಂದು ಒಂದು ಬಾಣವನ್ನೂ ಸೇರಿಸಿತು ಆ ಹೃದಯಕ್ಕೆ... ಜನರಿಂದ ವಿಮಾನದ ಸಪ್ಪಳವನ್ನೂ ಮೀರಿಸುವಂತಹ ಕರತಾಡನ. ನೀನು ಇರಬೇಕಿತ್ತು ಅನ್ನಿಸಿತು. ಆದರೆ ಆ ಬಿಸಿಲಿಗೆ ನಿನ್ನ ಮುಖ ಬಾಡಿಹೋಗುತ್ತಿತ್ತು; ಬಾರದಿದ್ದುದೇ ಒಳ್ಳೆಯದಾಯಿತು ಅನ್ನಿಸಿತು ಕೊನೆಗೆ.ನಿನ್ನೆ ರಾತ್ರಿಯಿಡೀ ಕುಳಿತು ಎಸ್.ಎಲ್. ಭೈರಪ್ಪನವರ ಹೊಸ ಕಾದಂಬರಿ 'ಆವರಣ' ಓದಿ ಮುಗಿಸಿದೆ. ಅದ್ಭುತ ಕಾದಂಬರಿ ಕಣೇ. ಕತೆ ಹೇಳಿ ನಿಂಗೆ ಬೇಜಾರ ಮಾಡೊಲ್ಲ; ನೀನೇ ಕೊಂಡು ಓದು. ಮೊದಲ ಮುದ್ರಣದ ಪ್ರತಿಗಳು ಎರಡೇ ದಿವಸಗಳಲ್ಲಿ ಖಾಲಿಯಾಗಿ ಈಗ ರಿಪ್ರಿಂಟ್ ಆಗಿ ಬಂದಿದೆ ಮತ್ತೆ. ಬೇಗ ಹೋಗಿ ಒಂದು ಕಾಪಿ ಎತ್ತಿಕೊಂಡು ಬಂದುಬಿಡು. ಓದಿಯಾದಮೇಲೆ ಹೇಳು: ಕುಳಿತು ಚರ್ಚಿಸೋಣ.ಸರಿ, ಮತ್ತೇನು ವಿಶೇಷ? 'ಏನೇನೋ ಕತೆ ಹೇಳುತ್ತಾ ಮುಖ್ಯ ವಿಷಯವನ್ನೇ ಮರೆಸುತ್ತಿದ್ದೀಯಾ' ಅನ್ನುತ್ತೀಯಾ? ಗೊತ್ತು, ವ್ಯಾಲೆಂಟೈನ್ಸ್ ಡೇಗೆ ಗಿಫ್ಟ್ ಎಲ್ಲಿ ಎಂಬುದು ನಿನ್ನನ್ನು ಆಗಿನಿಂದಲೂ ಕಾಡುತ್ತಿರುವ ಪ್ರಶ್ನೆ. ಏನು ಕೊಡಲಿ ನಲ್ಲೆ ನಿನಗೆ...?ನನ್ನದೆಲ್ಲವನೂ ನಿನಗೆ ಕೊಟ್ಟಿರುವಾಗ ಉಳಿದಿರುವುದೇನು?ನಾನೇ ನಿನ್ನವನಾಗಿರುವಾಗ ಬೇಕಿನ್ನೇನು?ನೀನೇನು ಕೊಡುತ್ತೀ ನಂಗೆ? ಹೇ ಕಳ್ಳೀ, ನಾಚುತ್ತೀ ಏಕೆ? ಸಪ್ರೈಸಾ? ಇರಲಿ ಇರಲಿ... ರಾಗಿಗುಡ್ಡದ ಮಧ್ಯದಲ್ಲಿರುವ ಗುಲ್‍ಮೊಹರ್ ಮರ ನಮಗಾಗಿಯೇ ನೆರಳು ಹಾಯಿಸುತ್ತಾ ಕಾಯುತ್ತಿದೆಯಂತೆ. ಮಲ್ಲೇಶ್ವರಂ ಎಯ್ತ್ ಕ್ರಾಸಿನಲ್ಲಿ ಹೂಮಾರುವ ಮಹಿಳೆಯ ಬುಟ್ಟಿಯಲ್ಲಿ ನಿನಗೆಂದೇ ಅರಳಿರುವ ಕೆಂಪು ಗುಲಾಬಿ ಇದೆಯಂತೆ. ಗ್ಯಾಸ್‍ಲೈಟಿನ ಬೆಳಕಿನಲ್ಲಿ ಕಾಯುತ್ತಿರುತ್ತಾನಂತೆ ಪಾನಿಪುರಿ ಮಾಡಿಕೊಡಲು ಅಂಗಡಿಯವ... ಸಿಗುತ್ತೀ ತಾನೇ?

ಹ್ಯಾಪಿ ವ್ಯಾಲೆಂಟೈನ್ಸ್ ಡೇ...!

ಸಂತೋಷ್ .

Friday, February 12, 2010

ಕ್ರೇಜಿ ಕುಟುಂಭ ........


"ಕ್ರೇಜಿ ಕುಟುಂಬ" ಇದನ್ನು ಹೇಗೆ ಆ ಸೆನ್ಸಾರ್ ಮಂಡಳಿಯು ಮೆಚ್ಚಿಕೊಂಡಿತೋ... ಆ ದೇವ್ರೇ ಬಲ್ಲ! ಉತ್ತರ ಕರ್ನಾಟಕದ ಜನರನ್ನು ಹಿಗ್ಗಾಮುಗ್ಗಾ ನಿಂದನೆ ಮಾಡುವ ರೀತಿಯಲ್ಲಿ ಮಾಡಿರುವ ಈ ಸಿನಿಮಾವನ್ನು ಮೆಚ್ಚಿಕೊಂಡ ಸೆನ್ಸಾರ್ ಮಂಡಳಿಯಲ್ಲಿ ಯಾರೂ ಉತ್ತರ ಕರ್ನಾಟಕದವರು ಇಲ್ಲವೆಂದು ಖಂಡಿತ ಅನಿಸುತ್ತದೆ. ಖಂಡಿತವಾಗಿಯೂ ಉತ್ತರ ಕರ್ನಾಟಕದ ಜನರು ಈ ಸಿನಿಮಾವನ್ನು ಭಹಿಷ್ಕರಿಸಲೇಬೇಕು. ಉತ್ತರ ಕರ್ನಾಟಕದ ಸಭ್ಯ ಜನರನ್ನು ಮಹಾ ಕುಡುಕರು...ಇನ್ನೂ ಹೀಗೆ ಅನೇಕ ರೀತಿಯಲ್ಲಿ ಅವಹೇಳನ ಮಾಡಿರುವ ಸಿನಿಮಾ ಜನರಲ್ಲಿ ಉತ್ತರ ಕರ್ನಾಟಕದವರ ಬಗ್ಗೆ ಇರುವ ಕೀಳು ಭಾವನೆ ಏನೆನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ನನಗೆ ಅಚ್ಚರಿಯಾಗಿದ್ದು ಹಿರಿಯ ನಟರಾದ ಸನ್ಮಾನ್ಯ ಶ್ರೀ ಅನಂತನಾಗ್ ಅವರು ಕೂಡ ಇಂಥದೊಂದು ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದು. ಅದೂ ಉತ್ತರ ಕರ್ನಾಟಕದ ಜನರನ್ನು ಹೀನಾಯವಾಗಿ ತೋರಿಸುವಂಥ ಪಾತ್ರವನ್ನು ಒಪ್ಪಿಕೊಂಡಿದ್ದು ಅಚ್ಚರಿ. ಉತ್ತರ ಕರ್ನಾಟಕದ ಜನರ ಸಹೃದಯತೆ ಹಾಗೂ ವಿನಯತೆಯನ್ನು ಕಣ್ಣಾರೆ ಕಂಡ ಅನಂತನಾಗ್ ಅವರು ಈ ರೀತಿಯಲ್ಲಿ ಉತ್ತರ ಕರ್ನಾಟಕದ ಜನರನ್ನು ಬಿಂಬಿಸುವ ಪಾತ್ರದಿಂದ ಆ ಭಾಗದ ಜನರ ಮನ ನೋಯಿಸಿದ್ದಾರೆ.ಸಿನಿಮಾ ನೋಡಿ ಹೊರಬಂದ ತಕ್ಷಣ ಅನಿಸುವುದು ಒಂದೇ "ಉತ್ತರ ಕರ್ನಾಟಕದ ಜನರು ಈ ಮಟ್ಟಿಗೆ ಜೋಕರುಗಳಾ?" ಎಂದು. ಬಿ.ರಾಮಮೂರ್ತಿ ಅವರು ನಿಜವಾದ ಉತ್ತರ ಕರ್ನಾಟಕವನ್ನು ನೋಡಿಯೇ ಇಲ್ಲ ಹಾಗೂ ಅಲ್ಲಿನ ಜನರ ಗುಣವನ್ನು ಅರಿತೇ ಇಲ್ಲ. ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನು ಇಲ್ಲಿ ವ್ಯಂಗ್ಯ ಮಾಡಿದ್ದು ಖಂಡಿತವಾಗಿಯೂ ಮನ ನೋಯುವಂತೆ ಮಾಡುತ್ತದೆ. "ಯು" ಸರ್ಟಿಫಿಕೇಟ್ ನೀಡುವ ಮೂಲಕ ಕುಟುಂಬದ ಎಲ್ಲರೂ ಕುಳಿತು ನೋಡುವಂಥ ಸಿನಿಮಾ ಎಂದು ಬೆನ್ನು ತಟ್ಟಿದ್ದರೂ ಸೆನ್ಸಾರ್ ಮಂಡಳಿಯು ಈ ಚಿತ್ರದಿಂದ ಉತ್ತರ ಕರ್ನಾಟಕದ ಜನರ ಮನಸ್ಸಿಗೆ ಎಷ್ಟೊಂದು ನೋವಾಗುತ್ತದೆ ಎನ್ನುವುದನ್ನು ಒಮ್ಮೆಯಾದರೂ ಯೋಚಿಸಬೇಕಿತ್ತು. ಪ್ರತಿಯೊಂದು ಡೈಲಾಗಿನಲ್ಲಿ, ದೃಶ್ಯದಲ್ಲಿ ಹಾಗೂ ಪಾತ್ರದಲ್ಲಿ ಉತ್ತರ ಕರ್ನಾಟಕವನ್ನು "ಜೋಕರುಗಳ ನಾಡು" ಎಂದು ತೋರಿಸಲಾಗಿದೆ. ಇದು ಆ ಭಾಗದ ಜನರ ಮನಸ್ಸಿಗೆ ದೊಡ್ಡ ಹಿಂಸೆ ಮಾಡುವಂಥ "ಮಾನಸಿಕ ಹಿಂಸೆ" ಮಾಡುವ ಚಿತ್ರವಾಗಿದೆ.ಇಂಥದೊಂದು ಚಿತ್ರವನ್ನು ಉತ್ತರ ಕರ್ನಾಟಕದ ಜನರು ನೋಡಿ ನಕ್ಕು ಬಂದರೆ ಅದು ತಮಗೆ ತಾವು ಮಾಡಿಕೊಂಡ "ಆತ್ಮವಂಚನೆ", "ವಿಶ್ವಾಸ ದ್ರೋಹ", "ತಮ್ಮ ಮುಖಕ್ಕೆ ತಾವೇ ಮಸಿ ಬಳಿದುಕೊಂಡ ಕೃತ್ಯ" ಎಂದು ನಾನು ಖಂಡಿತವಾಗಿಯೂ ಹೇಳುತ್ತೇನೆ. ನಾನು ನೋಡಿದೆ; ನಾನೂ ಉತ್ತರ ಕರ್ನಾಟಕದವನು, ಆದ್ದರಿಂದ ನನಗಂತೂ ಈ ಚಿತ್ರವನ್ನು ನೋಡಿದ ನಂತರ ಬಹಳಷ್ಟು ಬೇಸರವಾಗಿದೆ. ಯಾವೊಂದು ದೃಶ್ಯಕ್ಕಾಗಿ ನನಗೆ ನಗು ಬರಲಿಲ್ಲ. ಸಿನಿಮಾ ನೋಡಿದ ನಂತರ ನನಗೆ ಅನಿಸಿದ್ದು ಒಂದೇ; ಈ ಸೆನ್ಸಾರ್ ಮಂಡಳಿಯವರು ಎಲ್ಲಿದ್ದಾರೆ; ಅವರನ್ನಾ....! ಎಂದು ಮಾತ್ರ. ನನಗೆ ಉತ್ತರ ಕರ್ನಾಟಕದ ಬೈಗುಳಗಳು ಚೆನ್ನಾಗಿ ಬರುತ್ತವೆ ಆದ್ದರಿಂದ ಅವುಗಳನ್ನು ಬಳಸಬಹುದು; ಆದರೆ ನಾವು ಉತ್ತರ ಕರ್ನಾಟಕದ ಜನರು ಬೈಗುಳ ಬಳಸುವುದು ಕೂಡ ತೀರ ಆತ್ಮೀಯತೆಯಿಂದ; ಆದ್ದರಿಂದ ಹಾಗೆ ಮಾಡಲು ಕೂಡ ಮನಸ್ಸು ಆಗುತ್ತಿಲ್ಲ!

ಬೇಕಾಗಿದ್ದಾರೆ ..............

[ಮುಂಬೈ ಮೇಲೆ ಪಾಕಿಸ್ತಾನೀ ಬೆಂಬಲಿತ ಉಗ್ರಗಾಮಿಗಳಿಂದ ದಾಳಿ ನಡೆದು ಒಂದು ವರ್ಷವಾದರೂ, ಪಾಕಿಸ್ತಾನವು ಪರಿಣಾಮಕಾರಿಯಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಆ ರೀತಿ ಕ್ರಮ ಕೈಗೊಳ್ಳುವಂತೆ ಮಾಡುವಲ್ಲಿ ಸರಕಾರ ವಿಫಲವಾಗಿರುವ ಹಿನ್ನೆಲೆಯಲ್ಲಿ ಬೊಗಳೂರಿನಲ್ಲಿ ಕಾಣಿಸಿಕೊಂಡ ಜಾಹೀರಾತಿದು]
ಮುಂಬೈ ಮೇಲೆ ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ದಾಳಿ ನಡೆಸಿದವರು ಮತ್ತು ಅವರ ಅಪ್ಪ ಅಮ್ಮ ಎಲ್ಲರೂ ಪಾಕಿಸ್ತಾನದಲ್ಲಿದ್ದಾರೆ ಎಂಬುದು ಜಗತ್ತಿಗೇ ತಿಳಿದರೂ, ಪಾಕಿಸ್ತಾನವು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಾಡಿಸುವ ವ್ಯಕ್ತಿಗಳು ಬೇಕಾರಾಗಿದ್ದಾರೆ.ಪಾಕಿಸ್ತಾನವು ಪ್ರತಿ ಬಾರಿಯೂ ಸಾಕ್ಷ್ಯಾಧಾರ ಕೊಡಿ, ಸಾಕ್ಷ್ಯಾಧಾರ ಕೊಡಿ ಅಂತ ಕೇಳುತ್ತಿರುವಾಗ, ಕೊಡ್ತೀವಿ ಕೊಡ್ತೀವಿ ಅನ್ನುತ್ತಲೇ ರಾಶಿ ರಾಶಿ ಕಾಗದ ಪತ್ರಗಳನ್ನು ಟ್ರಕ್‌ಗಳಲ್ಲಿ ಪಾಕಿಸ್ತಾನಕ್ಕೆ ರವಾನಿಸುವ ಸರಕಾರವನ್ನು ನಿಭಾಯಿಸುವವರು ಬೇಕಾರಾಗಿದ್ದಾರೆ.ಅಮಾಯಕ ಜೀವಗಳನ್ನು ಬಲಿತೆಗೆದುಕೊಂಡ ಉಗ್ರಗಾಮಿ ದಾಳಿಯನ್ನು ಇನ್ನಾದರೂ ಸಮರ್ಥವಾಗಿ ಎದುರಿಸುವಲ್ಲಿ ಪೊಲೀಸ್ ವ್ಯವಸ್ಥೆಯನ್ನು ಇನ್ನೂ ಆಧುನೀಕರಣಗೊಳಿಸಲು ಸಮಯವಿಲ್ಲದಿರುವುದರಿಂದ, ಇನ್ನಾದರೂ ಪೊಲೀಸರಿಗೆ ಬಲ ತುಂಬುವವರು ಬೇಕಾರಾಗಿದ್ದಾರೆ.ಪಾಕಿಸ್ತಾನದೊಂದಿಗೆ ಶಾಂತಿ ಶಾಂತಿಯೇ ಮುಖ್ಯವಾಗಿರುವವರು ಮತ್ತು ಯಾವುದೇ ಕಾರಣಕ್ಕೂ ಪಾಕಿಸ್ತಾನವು ನೊಂದುಕೊಳ್ಳಬಾರದು. ಯಾಕೆಂದರೆ, ಅವರಲ್ಲಿಯೂ ಉಗ್ರಗಾಮಿಗಳ ದಾಳಿ ನಡೆಯುತ್ತಿದೆಯಲ್ಲ ಎಂಬ ಮನೋಭಾವವಿರುವವರು ದೇಶವಾಳಲು ಬೇಕಾರಾಗಿದ್ದಾರೆ.ಪಾಕಿಸ್ತಾನವನ್ನು ನಡುಗಿಸುವ, ಉಗ್ರರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ವ ರೀತಿಯಲ್ಲಿಯೂ ಒತ್ತಡ ಹೇರುವ ಅವಕಾಶಗಳನ್ನೆಲ್ಲಾ ಕೈಚೆಲ್ಲಿ, ಶಾಂತಿ ಮಂತ್ರ ಪಠಿಸುತ್ತಲೇ ಇರುವವರು ಬೇಕಾಗಿದ್ದಾರೆ.ಅತ್ತ ಕಡೆಯಿಂದ ಚೀನಾ ಪಾಕಿಸ್ತಾನಕ್ಕೆ ಸಕಲ ರೀತಿಯಲ್ಲಿಯೂ ನೆರವು ನೀಡುತ್ತಾ, ಅರುಣಾಚಲ ಪ್ರದೇಶ ನನ್ನದು ಎಂದು ಹೇಳಿಕೊಳ್ಳುತ್ತಲೇ ಇದೆ. ಇನ್ನೊಂದೆಡೆಯಿಂದ, ಪಾಕಿಸ್ತಾನಕ್ಕೆ ಉಗ್ರರ ವಿರುದ್ಧ ಹೋರಾಡಲೆಂದು ಕೋಟಿ ಕೋಟಿ ನೆರವು ನೀಡುತ್ತಲೇ, ಭಾರತ ನನ್ನ ಪರಮಾಪ್ತ ರಾಷ್ಟ್ರ ಎಂದು ಹೇಳಿಕೊಳ್ಳುತ್ತಿರುವ ಚೀನಾ, ಇವುಗಳೊಂದಿಗೆ ಮೈತ್ರಿಯನ್ನು ಗಾಢವಾಗಿ ಬೆಸೆಯುವವರು ಬೇಕಾರಾಗಿದ್ದಾರೆ.ದೇಶದಲ್ಲಿ ಪ್ರಜೆಗಳು ಬೆಲೆ ಏರಿಕೆಯಿಂದ ಕಂಗಾಲಾಗಿ, ಪ್ರವಾಹ, ಅತಿವೃಷ್ಟಿ-ಪ್ರವಾಹ, ಅನಾವೃಷ್ಟಿಯಿಂದ ತತ್ತರಿಸುತ್ತಿದ್ದರೂ, ನಮಗೆ ಬೇರೆ ದೇಶಗಳೊಂದಿಗಿನ ಸಂಬಂಧವೇ ಮುಖ್ಯ, ಅದಕ್ಕಿಂತಲೂ ಅಣು ಒಪ್ಪಂದ ಮುಖ್ಯ ಎನ್ನುತ್ತಾ, ದೇಶದ ಜನತೆಯ ಕಣ್ಣೀರೊರೆಸಬೇಕಾದವರು ಬೇಕಾರಾಗಿದ್ದಾರೆ.ಭವಿಷ್ಯದಲ್ಲಿ ನಡೆಯುವ ಉಗ್ರರ ನೂರಾರು ದಾಳಿ ಪ್ರಕರಣಗಳಿಗೆ ಈಗಲೇ ವಿಷಾದಿಸ್ತೀವಿ ಮತ್ತು ಮುಂದೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ತೀವಿ ಅಂತ ಭರವಸೆಯನ್ನು ಈಗಲೇ ಕೊಡುವ ದೇಶವಾಳುವ ನಾಯಕರೂ ಬೇಕಾರಾಗಿದ್ದಾರೆ.ಮುಖ್ಯ ಅರ್ಹತೆ: ಉಗ್ರಗಾಮಿಗಳೇನಾದರೂ ಇನ್ನು ಮುಂದೆ ಭಾರತದ ಮೇಲೆ ದಾಳಿ ಮಾಡಿದರೆ ಅವರಿಗೆಲ್ಲಾ ಬಾಳಾ ಠಾಕ್ರೆ ಮತ್ತು ಶಿವಸೇನೆಯ ವಿರುದ್ಧ ಏನಾದರೂ ಒದರುವಂತೆ ಉಪಾಯ ಮಾಡಿ ಮನವೊಲಿಸುವುದು. ಇದರಿಂದ ಶಿವಸೈನಿಕರೇ ಈ ಉಗ್ರರನ್ನು ಚೆನ್ನಾಗಿ ಚಚ್ಚಿ ಚಚ್ಚಿ ಮುಗಿಸಿಬಿಡಬಹುದು. ಇಲ್ಲವಾದರೆ, ಹಿಂದಿ, ಇಂಗ್ಲಿಷಿನಲ್ಲಿ ಪ್ರಮಾಣವಚನ ಸ್ವೀಕರಿಸುವಂತೆ/ಶಪಥ ಮಾಡುವಂತೆ/ಪಣ ತೊಡುವಂತೆ/ ಭಾಷೆ ಕೊಡುವಂತೆ ಉಗ್ರರನ್ನು ಪ್ರೇರೇಪಿಸುವುದು. ಆಗ ಶಿವಸೇನೆ ಮತ್ತು ಮಹಾರಾಷ್ಟ್ರ ನವ ನಿರ್ನಾಮ ಸೇನೆಗಳು ನಾ ಮುಂದು ತಾ ಮುಂದು ಅಂತ ಚಚ್ಚಲು ಹೊರಡುತ್ತವೆ. ಇಂತ ಚಾಕಚಕ್ಯತೆ ಉಳ್ಳವರು ಕೂಡ ಬೇಕಾರಾಗಿದ್ದಾರೆ.(ಸೂಚನೆ: ನಾವು ಸರಿಯಾಗಿಯೇ ಬರೆದಿದ್ದರೂ ಬೇಕಾಗಿದ್ದಾರೆ ಮಧ್ಯೆ ಒಂದು ರಾ ಹೆಚ್ಚು ಸೇರಿಕೊಂಡಿದ್ದು ಹೇಗೆಂಬುದು ನಮಗೇ ಗೊತ್ತಿಲ್ಲ. ಈ ಬಗ್ಗೆ ತನಿಖೆಗೆ ಆಯೋಗವೊಂದನ್ನು ರಚಿಸಲಾಗಿದ್ದು, ಅದಕ್ಕೆ ಹತ್ತಾರು ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತದೆ. ಈ ಆಯೋಗವು ಸುಮಾರು ೧೭ ವರ್ಷಗಳ ಬಳಿಕ ಎಲ್ಲರಿಗೂ ಗೊತ್ತಿರುವ ವರದಿಯನ್ನು ಸಲ್ಲಿಸಲಿದೆ.)

ಆಂಟಿ ಮಾಸ್ಕಿಟೋ ಸಾಫ್ಟ್ವೇರ್ ...........

(ಬೊಗಳೂರು ನೆಟ್ಗಳ್ಳರ ಬ್ಯುರೋದಿಂದ)ಬೊಗಳೂರು, ಫೆ.13- ಪೆಪ್ಸಿ ಬಾಟಲಿಯಿಂದ ಸ್ಟ್ರಾ ಇಟ್ಟು ಕೋಲಾ ಹೀರುವಂತೆ ಮಾನವನ ರಕ್ತವನ್ನು ಹೀರುವ, ಕಿವಿ ತಮಟೆ ಒಡೆಯುವಂತೆ ಗುಂಯ್‌ಗುಡುವ ರಕ್ತ-ಪಿಪಾಸು ಸೊಳ್ಳೆಗಳಿಗೆ ಮುಕ್ತಿ ಕಾಣಿಸಲು ಹೊಸ ಸಾಫ್ಟ್ ವೇರ್ ಸಿದ್ಧವಾಗಿದೆ ಎಂಬ ಹಳೆ ವರದಿ ಪ್ರಕಟವಾಗಿರುವಂತೆಯೇ ಎಲ್ಲರ ಕಿವಿಗಳೂ ಒಮ್ಮೆಗೆ ನೆಟ್ಟಗಾಗಿವೆ.Aunty ಸೊಳ್ಳೆಯಿಂದ ಕಚ್ಚಿಸಿಕೊಂಡು ತಡೆಯಲಾರದೆ ಈ Anti ಸೊಳ್ಳೆ ತಂತ್ರಜ್ಞಾನ ಕಂಡುಹುಡುಕಿದ ವಿಜ್ಞಾನಿಯ (ದೈಹಿಕ ಮತ್ತು ಮಾನಸಿಕ) ಸ್ಥಿತಿ ನೆನಪಿಸಿಕೊಂಡು ಗೊಳ್ಳನೆ ನಕ್ಕ ಅಸತ್ಯಾನ್ವೇಷಿ, ಈ ಬಗ್ಗೆ ತನಿಖೆ ನಡೆಸಿದಾಗ ಹೊಸ ಅಂಶವೊಂದು ಬಯಲಾಗಿದೆ.ವಾಸ್ತವವಾಗಿ ವಿಜ್ಞಾನಿ ಇದನ್ನು ಕಂಡುಹುಡುಕಿದ್ದು ಸೊಳ್ಳೆಗಳಿಗಾಗಿ ಅಲ್ಲವಂತೆ. "Every new product comes out by an accident" ಎಂಬಂತೆ, ಸೊಳ್ಳೆಗಳಿಗೆ ಈ ಸಾಫ್ಟ್ ವೇರ್ ಮಾರಕವಾದದ್ದು ಕೂಡ ಒಂದು ಆಕ್ಸಿಡೆಂಟ್.ಈ ಸುರಸುಂದರಾಂಗ ವಿಜ್ಞಾನಿಗೆ ಸುಂದರಿಯರ ವಿಪರೀತ ಕಾಟ. ಒಂಚೂರು ವಿಶ್ರಾಂತಿ ತೆಗೆದುಕೊಳ್ಳೋಣವೆಂದರೆ ಬಿಡಲೊಲ್ಲರು. ಅವರನ್ನು ದೂರ ಮಾಡುವುದು ಹೇಗೆ ಎಂಬ ಸಂಶೋಧನೆಯಲ್ಲಿದ್ದಾಗ ಹೆಣ್ಣು ಸೊಳ್ಳೆಗಳಿಗಷ್ಟೇ ಮಾರಕವಾಗಿರುವ ಈ ಸಾಫ್ಟ್ ವೇರ್ ಉತ್ಪತ್ತಿಯಾಗಿದೆ. ಮೊಬೈಲ್‌ ಫೋನ್‌ಗೂ ಇದು ಲಭ್ಯವೆಂಬುದು ಇತ್ತೀಚಿನ ಸುದ್ದಿ.ಮಾನವನ ರಕ್ತ ಹೀರುವ ಹೆಣ್ಣು ಸೊಳ್ಳೆಗಳು ಈ ಸಾಫ್ಟ್ ವೇರ್ ಹೊರಡಿಸುವ ಶಬ್ದ ಬಂದತ್ತ ಧಾವಿಸುತ್ತವೆ. ಅದು ಕಂಪ್ಯೂಟರ್‌ನಿಂದ ಬರುವುದರಿಂದ ಅಲ್ಲಿ ಬ್ರೌಸ್ ಮಾಡುತ್ತಾ ಬೊಗಳೆ-ರಗಳೆ ಓದತೊಡಗುತ್ತವೆ. ಅಲ್ಲಿಗೆ ಬೇರೆಯವರ ರಕ್ತ ಹೀರುವ ಮನುಷ್ಯ ಪ್ರಾಣಿಗೆ ಸುಖ ನಿದ್ದೆ.ಈ ಕುರಿತ ಹೆಚ್ಚಿನ ಮಾಹಿತಿ ನಿಮಗೆ ಇಲ್ಲಿ ಸಿಗಲಾರದು.ಈ ಸಾಫ್ಟ್ ವೇರ್ ಇಲ್ಲಿ ಡೌನ್ ಲೋಡ್ ಮಾಡಬೇಕಿದ್ದರೆ ಬೊಗಳೆ-ರಗಳೆ ಓದುಗರಿಗೆ ಸಂಪೂರ್ಣ ಉಚಿತ. (ಶರತ್ತುಗಳು ಅನ್ವಯ. ಬೇಕಿದ್ದರೆ ನೀವು ಸೇವಾ ತೆರಿಗೆ, ಹ್ಯಾಂಡ್ಲಿಂಗ್ ಚಾರ್ಜ್, ಸಾಗಾಟ ವೆಚ್ಚ, ಕೂಲಿ ವೆಚ್ಚ, ತಯಾರಿಕಾ ವೆಚ್ಚ, ಊಟದ ಖರ್ಚು, ಮಾಹಿತಿ ಶುಲ್ಕ... ಇನ್ನೂ ಇತ್ಯಾದಿ ಏನೇನೋ ಶುಲ್ಕಗಳನ್ನೆಲ್ಲಾ ಸೇರಿಸಿ ಬೊಗಳೆ-ರಗಳೆ ಬ್ಯುರೋದ ಅಸತ್ಯಾನ್ವೇಷಿಗೆ ಕಳುಹಿಸಬಹುದು.
[ಒಂದಾನೊಂದು ಕಾಲದ ಬೊಗಳೆ ರಗಳೆಯ ವರದಿ]

Thursday, February 11, 2010

ನೆನಪ್ಪುಗಳ ನಂಟು ........

ಬಾಳಿನಲ್ಲಿ ಎಷ್ಟೋ ಬಗೆಯ ಸಂಬಂಧಗಳು ಹೀಗೇ ಬಂದು ಕೂಡುತ್ತವೆ, ಇನ್ನು ಕೆಲವು ತನ್ನಂತಾನಾಗಿಯೇ ಕಳಚಿ ಕೊಳ್ಳುತ್ತವೆ.ಕೆಲವು ಸಂಬಂಧಗಳು ಬೇಡವೆನ್ನಿಸಿದರೂ ಬಿಡಿಸಲಾಗದ ಗಂಟಾಗಿ ಉಳಿದು ಕೊಳ್ಳುತ್ತವೆ! ಪ್ರೀತಿಯ ನಂಟು ಇರದ ಸಂಬಂಧಕೆ ಅರ್ಥವಿದೆಯೇ? ಅಂಥವುಗಳ ಆಯುಷ್ಯವೂ ಬಲು ಕಡಿಮೆ. ಸಂಬಂಧವೆಂದರೆ ಒಡಹುಟ್ಟಿದವರೇ ಆಗಬೇಕಿಲ್ಲ. ಯಾರೋ ದಾರಿ ಮೇಲಿನ ಅಪರಿಚಿತ ಒಡನಾಡಿ, ಒಲವಿನ ಗೆಳೆಯರಾಗಬಹುದು.ಸಂಬಂಧಗಳಿಗೆ ಹೆಸರಿರುವುದಿಲ್ಲ. ಹೆಸರಿಟ್ಟ ಸಂಬಂಧಗಳು ಅರ್ಥ ಕಳೆದು ಕೊಂಡರೆ ಅವಕ್ಕೆ ಯಾವ ಬೆಲೆಯೂ ಇಲ್ಲ. ಆದರೆ ಕೊಂಡಿ ಕಳಚಿ ಹೋದರೂ ಸಾವಿರ ನೆನಪುಗಳು ಕೆಲವೊಮ್ಮೆ ಮನದಲ್ಲಿ ಮುಜುಗರ ತೋರದೆಯೇ ಉಳಿದು ಬಿಡುತ್ತವೆ. ಸಿಹಿ ಒಂದೇ ಇರಲಿ ಒಡನೆ ಅಂಟಿಕೊಂಡಿರುವ ಕಹಿ ಬೇಡವೇ ಬೇಡ ಎನ್ನಲು ಸಾಧ್ಯವೇ? ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಅಂತ ಆಗಾಗ ಕಣ್ಮುಂದೆ ಬಂದು ಅಣಕಿಸುತ್ತವೆ ಈ ನೆನಪುಗಳು. ಕಾಡುವ ಈ ನೆನಪುಗಳಿಗೆ ಅದೆಷ್ಟು ಸಲ ಚಂದಾ ಬಾಕಿ ನೀಡಲು ಸಾಧ್ಯ?

Wednesday, February 10, 2010

ಸ್ನೇಹ ......


ಯಾರಿಗೆ ಏನ ಹೇಳಲಿ ! ಹೊಸತನವ ಬಯಸುತಿರುವೆ !ಏನ ಹೇಳಿಕೊಳ್ಳಲಿ ! ಭಾವನೆಗಳು ನಿನ್ನ ಸ್ನೇಹವ ಬಯಸುತಿರುವೆ !ಹೊಸ ರೀತಿಯಲಿ ಹೊಸ ಕನಸನು ಮನ ಕಂಡಿದೆನಿರ್ಮಲ ಸ್ನೇಹಕಾಗಿ ಅದು ಕಾತರಿಸುತಿದೆ !ಗೊತ್ತು ನನಗೆ ದುನಿಯಾ ಹೇಗಿದೆಯೆಂದು !ವಂಚನೆಯಿಲ್ಲದೆ ಯಾವುದೂ ದೊರಕುವುದಿಲ್ಲ ಇಂದು !ಸ್ನೇಹದ ಹೆಸರಿನಲಿ ಪ್ರೀತಿಯನು ಹುಡುಕುವವರು !ಅರಿಯುವುದಿಲ್ಲ ! ಬುದ್ದಿಗೇಡಿಗಳು ! ಸ್ನೇಹದ ಅರ್ಥವ ಕೆಡಿಸುವವರು !ಅರಿವಿದೆ ಗೆಳೆತನವೆಂದರೆ ಏನೆಂದು !ಯೋಚಿಸುವುದಿಲ್ಲವೇಕೆ ಉಳಿಸಿಕೊಳ್ಳಲು ! ಆತುರಪಡುವಿರೆಕೆ ತಿಳಿದು ಪ್ರೀತಿಯೆಂದು !ಅರಿಯಬೇಕಿದೆ ಗೆಳೆಯರೇ ಸ್ನೇಹವೆಂದರೆ ಒಂದು ಸುಂದರ ಬಂಧನವೆಂದುಅರಿತುಕೊಂಡರೆ ! ಪ್ರೀತಿಯು ಇಲ್ಲ ಅದರ ಮುಂದೆ ! ಮತ್ತೆಂದೂ !ಸ್ನೇಹದ ಕಡಲಿನಲಿ ದೋಣಿಯ ಹುಟ್ಟು ಹಾಕುತ ಸಾಗುತಿರುವ ನಾವಿಕನು ನಾನು !ಆ ಸ್ನೇಹದ ಪಯಣದಲಿ ಜೊತೆಯಾಗಿ ಬರುವಿರೇನು !ಮರೆತು ಕೂಡ ಹೇಳಬೇಡಿ ಸ್ನೇಹವೆಂದರೆ ಪ್ರೇಮವೆಂದು !ಅರಿತುಕೊಳ್ಳಿ ಸ್ನೇಹಕೂ ಪ್ರೇಮಕೂ ಬೇರೆ ಬೇರೆ ಅರ್ಥವಿದೆಯೆಂದು !ಇಲ್ಲದ ಆಸೆಯಲಿ ! ಸ್ನೇಹದ ಕೋಟೆಯಲಿ ಬಿರುಕನು ತರಬೇಡಿ !ನಿರ್ಮಲ ಸ್ನೇಹದಲಿ ಪ್ರೀತಿಯನು ತಂದು ಅದರ ಅರ್ಥ ಕೆಡಿಸಬೇಡಿ !ಯಾರೋ ಏನೋ ಮಾಡಿದರೂ ಅವ್ರ ಬಾಳು ಅವ್ರ ಹಣೆಯ ಪಾಡು !ನಮಗಿಲ್ಲಿ ಬೇಕಿದೆ ! ಸುಂದರ ಸ್ನೇಹದ ಜೇನು ಗೂಡು !ಒಲವು ಇಲ್ಲಿ ಸ್ನೇಹವಾಗಿರಲಿ ! ಬದುಕಿನಲಿ ಪ್ರೀತಿ ತುಂಬಿರಲಿ !ಇಲ್ಲಿ ಸ್ನೇಹದ ಸಿಂಚನವಿರಲಿ !
ಮನದ ಮನೆಗೆ ಬಂದ ಗೆಳತಿಮನದೊಳಗೆ ಅಳಿಸಲಾಗದ ಗುರುತು ನೀ ಬಿಟ್ಟು ಹೋದದ್ಯಾಕೆ ಆ ರೀತಿಅರಿವಿತ್ತೆ ಇರಲಿಲ್ಲವೇ ನಿನಗೆ ನನ್ನ ನಿರ್ಮಲ ಪ್ರೀತಿದಿನ ನಿತ್ಯ ನಿನ್ನ ನೆನಪಿನಲೆ ಜೀವನ ಸಾಗಿಸುತಿರುವೆ ಓ ಗೆಳತಿ !ಅಂದುಕೊಂಡಿದ್ದೆ ಇಬ್ಬರೂ ಸೇರಿ ಸಾಗುವ ಜೊತೆಯಲಿ ದೂರ ದೂರನೀನಾಗಿ ಹೋದೆ ನನಗೆ ಅಮಾವಾಸ್ಯೆಯ ಚಂದಿರಗ್ರಹಣ ಕಳೆಯುತದೆ ಎಂದು ಕಾದಿರುವೆ ನಾನು ಕಟ್ಟಿ ಮನದೊಳಗೆ ಮಂದಿರಹೇಳಿ ಬಿಡೇ ಗೆಳತಿ ಬಂದೆ ಬರುತಾವ ಕಾಲ ! ನಮಗಾಗಿ ಮತ್ತೆ ಬರುತಾನ ಚಂದಿರ?ನಿನ್ನೊಳಗೆ ನಾನಿದ್ದೆ , ನನ್ನೊಳಗೆ ನಿನ್ನ ನೆನಪನೆ ತುಂಬಿ ಕೊಂಡಿದ್ದೆಎಲ್ಲ ಗೊತ್ತಿದ್ದೂ ನೀನೇಕೆ ಗೆಳತಿ ಗೊತ್ತಿಲದ ಹಾಗೆ ಇದ್ದು ಬಿಟ್ಟಿದ್ದೆನಿಜ ಹೇಳೇ ಗೆಳತಿ ನಿನಗೆ ನನ್ನ ಮೇಲೆ ನಂಬಿಕೆ ಇತ್ತೇ ಇರಲಿಲ್ಲವೇ ?ಅರಿಯದ ನನ್ನ ಒಡಲಲಿ ನಿನ್ನ ನೆನಪಿನಲ್ಲಿ ಬರಿಯ ನೋವೆ !ಚಿಂತೆಯಿಲ್ಲ ಗೆಳತಿ ಆದದೆಲ್ಲ ಒಳಿತೆ ಆಯಿತೆಂದು ನಲಿಯುವೆನಿನ್ನ ನೆನಪುಗಳ ಜೊತೆಯಲಿ ಜೀವನ ಕಳೆಯುವೆಆದರೂ ಒಮ್ಮೊಮ್ಮೆ ಸದ್ದಿಲ್ಲದ ಹಾಗೆ ಬಂದು ನನ್ನ ನೆನಪು ಕೆದಕುವುದು ನಿನಗೆ ತರವೇ ?

.....ಸಂತೋಷ್ ಪಾಂಡು ಗದಕರ್ .......

ಆ ದಿನಗಳು ....

ಆ ದಿನಗಳು"
ನೆನಪಿದೆಯೇ ಆ ದಿನಗಳು??ನೆನಪಿದೆಯೇ ಆ ಕ್ಷಣಗಳು??ನಕ್ಕ ನಗು, ಆಡಿದ ಮಾತು,ಮಾಡಿದ ಜಗಳ, ಹೊರಹೊಕ್ಕ ಕಂಬನಿ,ಪ್ರೀತಿಯ ಕಲ್ಪನೆ, ಪರೀಕ್ಷೆಯ ಯಾತನೆ.
ನೆನೆದಿದ್ದೆವು ಇವೆಲ್ಲವೂ ಎಂತಹ ಕಹಿ ಗುಳಿಗೆಗಲೆಂದು,ಮರೆತು ಹೋಗಿದ್ದೆವು ಇವೆ ನಮ್ಮ ಸಂತೋಷದ ಮಳಿಗೆಗಳೆಂದು, ಕಾದಿದ್ದೆವು ಎಂದು ಇದಕೆಲ್ಲ ಪೂರ್ನವಿರಾಮವೆಂದು!ಅದೇ ಸವಿನೆನಪಾಗಿ ಉಳಿದು ಹೋಗಿದೆ ನಮ್ಮೆಲ್ಲರ ಮನದಾಳದಲ್ಲಿಂದು.
ತರುತಲಿದೆ ಮೊಗದ ಮೇಲಿಂದು ಆನಂದದ ಸಿಂಚನ,ಸದಾ ಉಳಿಯಲಿ ಮನದಲಿ ಈ ಅಧ್ಬುತ ರೋಮಾಂಚನ,ಕಣ್ಣಲ್ಲಿ ತುಂಬಿ ತುಳುಕಾಡುತ್ತಿದೆ ಕಾತುರ,ಮತ್ತೆ "ಆ ದಿನಗಳ" ಬಳಿ ಹೋಗುವ ಆತುರ.
ಸ್ನೇಹಿತರೊಡನೆಯ ಬಂಧನ,ಕೈ ಹಾಕಿದ ಕೆಲಸದಲ್ಲೆಲ್ಲ ಸಿಕ್ಕ ಸ್ಪಂದನ,ಮರುಕಳಿಸಲಿ ಜೀವನದ ಪಯಣದಲ್ಲಿನ್ನೊಮ್ಮೆ,ಇದ್ದು ಹೋಗದಿರಲಿ ಮತ್ತೊಮ್ಮೆ.
ಮರೆಯಾಗಲಿ ಈಗಿರುವ ಕಹಿ ನೆನಪುಗಳು.ಚಿರಕಾಲ ನಮ್ಮಲುಳಿಯಲಿ......ಆ ಸವಿನೆನಪುಗಳು!!!!
ಇಂದಿಗೂ, ಎಂದಿಗೂ, ಎಂದೆಂದಿಗೂ.....
------ಸಂತೋಷ್ ಗದಕರ್ ........

Friday, February 5, 2010

ಪಾನಿ ಪೂರಿ ...

ಒಂದು ವಾರದ ಹಿಂದೆ ಸ್ನೇಹಿತರೊಬ್ಬರ ಮನೆಯಲ್ಲಿ ಪಾನೀಪೂರಿ ಮಾಡಿ ಕೊಟ್ಟಿದ್ದರು, ಅವರು ತಟ್ಟೆಯಲ್ಲಿ ತಂದು ಸುತ್ತಲೂ ಸಣ್ಣ ಸಣ್ಣ ಪೂರಿಗಳನ್ನು ಇಟ್ಟು ಮಧ್ಯೆ ಪೂರಿ ಒಳಗೆ ತುಂಬೋದಕ್ಕೆ ಈರುಳ್ಳಿ-ಕೊತ್ತುಂಬರಿ ಸೊಪ್ಪು ಸಣ್ಣಗೆ ಕತ್ತರಿಸಿ ಇಟ್ಟು, ಪಕ್ಕದಲ್ಲಿ ಮ್ಯಾಷ್ಡ್ ಅಲೂಗಡ್ಡೆಯ ಜೊತೆಗೆ ಒಂದು ಸೂಪ್ ಬೌಲ್‌ನಲ್ಲಿ ಪಾನೀ ಅನ್ನೂ ಇಟ್ಟಿದ್ದರು. ಅವರು ಪಾನೀಪೂರಿ ತಯಾರಿಸಿದ್ದಕ್ಕಿಂತಲೂ ಅವರ ಪ್ರೆಸೆಂಟೇಷನ್ ಬಹಳ ಇಷ್ಟವಾಯ್ತು. ಒಂದೊಂದೇ ಪೂರಿ ಹೊಟ್ಟೆ ಒಳಗೆ ಹೋಗುತ್ತಿದ್ದ ಹಾಗೆ ನಾಲಗೆಗೆ ತಡೆ ಅನ್ನುವುದೇ ಇಲ್ಲವಾಗಿ ಹತ್ತರ ಮೇಲೆ ತಿಂದರೂ ಇನ್ನೂ ಬೇಕು ಅನ್ನುವಂತಾಗಿತ್ತು, ಅಷ್ಟು ರುಚಿಯಾಗಿತ್ತು! ಎಷ್ಟೇ ರುಚಿಯಾಗಿದ್ದರೂ, ನಾವು ಚಮಚೆಯಿಂದ ಪಾನಿಯನ್ನು ಪೂರಿಯೊಳಗೆ ತುಂಬಿಕೊಳ್ಳುತ್ತಿದ್ದೆವಾದ್ದರಿಂದ ಭಾರತದಲ್ಲಿ ರಸ್ತೆ ಬದಿಯಲ್ಲಿ ಪಾನೀಪೂರಿಯನ್ನು ತಿಂದಷ್ಟು ರುಚಿಯಂತೂ ಇರಲಿಲ್ಲ, ಏಕೆಂದರೆ ಅಲ್ಲಿ ಪಾನೀ ಇಟ್ಟ ಕೊಳಗದೊಳಗೆ ಆತ ಕೈ ಮುಳುಗಿಸಿ ಪೂರಿಯ ತುಂಬ ಪಾನಿಯನ್ನು ಹಾಕಿಕೊಟ್ಟಾಗಲೇ ಅದರ ರುಚಿ, ಹಿಂದೆ
ಬನಿಯನ್ ಚಹಾದ ಮಹಿಮೆಯನ್ನು
ಓದಿದವರಿಗೆ ಆಹಾರ ಪದಾರ್ಥಗಳ ರುಚಿಯ ಬಗ್ಗೆ ಮತ್ತೆ ಹೇಳುವುದೇನಿದೆ?

ಆದರೆ ಈ ದಿನ ಪಾನೀಪೂರಿಯನ್ನು ವಿಶೇಷವಾಗಿ ನೆನೆಸಿಕೊಳ್ಳಬೇಕಾಗಿ ಬಂತು ಏಕೆಂದರೆ ಅಂದು ಸ್ನೇಹಿತರ ಮನೆಯಲ್ಲಿ ಸ್ಪೂರ್ತಿ ಸಿಕ್ಕು ನಾನೂ ಮನೆಯಲ್ಲಿ ಮಾಡೋಣವೆಂದು ಪಾನೀಪೂರಿ ಪ್ರಾಜೆಕ್ಟನ್ನು ಕೈ ಹಚ್ಚಿಕೊಂಡರೆ ಗಣಪತಿ ಹಬ್ಬದ ಪ್ರಯುಕ್ತವೇನೋ ಎನ್ನುವಂತೆ ಬರೀ ವಿಘ್ನಗಳೇ ಎದುರಾಗುತ್ತಿದ್ದವು. ಅಡುಗೆಮನೆಗೆ ಬೇಕಾದಷ್ಟು ಸಾರಿ ಹೋಗಿ ಗೊತ್ತು ಆದರೆ ಯಾವ ಯಾವ ಸಾಮಾನು ಎಲ್ಲೆಲ್ಲಿದೆ ಎಂದು ಗೊತ್ತಿರಬೇಕಲ್ಲ? ಉಪ್ಪು ಸಿಕ್ಕರೆ ಸಕ್ಕರೆ ಸಿಗದು, ಸಕ್ಕರೆ ಸಿಕ್ಕರೆ ಮತ್ತಿನ್ನೇನೋ ಸಿಗದು. ಹೀಗಿದ್ದಾಗ್ಯೂ ನಾನೂ ಒಂದು ಪಾನೀಪೂರಿಯನ್ನು ಸೆಟ್ ಅನ್ನು ತಯಾರಿಸಿ ಅದರಲ್ಲಿ ಬೇಕು ಬೇಕಾದ ಅನ್ನುವುದಕ್ಕಿಂತಲೂ ಕೈಗೆ ಸಿಕ್ಕವುಗಳನ್ನು ನೀಟಾಗಿ ಜೋಡಿಸತೊಡಗಿದೆ. ಮೊದಲೇ ಅಂಗಡಿಯಿಂದ ತಂದ ಪೂರಿ - ಗೋದಿ ಹಿಟ್ಟನ್ನು ಗೋಲಿಯಾಕಾರದಲ್ಲಿ ಕಲೆಸಿ ಲಟ್ಟಣಿಗೆಯಲ್ಲಿ ನಾದು ಎಣ್ಣೆಯಲ್ಲಿ ಹುರಿಯುವಷ್ಟು ವ್ಯವಧಾನ ಈ ಪ್ರಪಂಚದಲ್ಲಿ ಯಾರಿಗಿದೆ ಹೇಳಿ - ಮೇಲೆ ಒತ್ತಿದರೆ ಕೆಳಗೂ ಬಿರುಕುಬಿಡುತ್ತಿತ್ತು. ಹಾಗೂ ಹೀಗೂ ಮಾಡಿ ಒಂದು ಹತ್ತು ಪೂರಿಯನ್ನು ತಯಾರು ಮಾಡಿ ಅದರ ಜೊತೆಯಲ್ಲಿ ಬಿಸಿ ಚಹಾವನ್ನು ಮಾಡಿಟ್ಟುಕೊಂಡು ಚುಮು ಚುಮು ಛಳಿ ಇದ್ದರೂ ಹೊರಗಡೆ ಕುಳಿತು ಸಂಜೆಯ ಹೊತ್ತಿಗೆ ಮನೆಯ ಸುತ್ತಲು ಚಿರ್ಪ್ ಚಿರ್ಪ್ ಎನ್ನುವ ಮಿಡತೆಗಳ ಸದ್ದಿನೊಂದಿಗೆ ಆಸ್ವಾದಿಸುವುದಿದೆ ನೋಡಿ, ಅದರ ಮುಂದೆ ಯಾವ ಸ್ವರ್ಗಸುಖವೂ ಇಲ್ಲ ಬಿಡಿ.

ನಾನು ಅಡುಗೆ ಮಾಡೋದೇ ಕಡಿಮೆ - ಥ್ಯಾಂಕ್ ಗುಡ್‌ನೆಸ್, ಈ ದೇಶದಲ್ಲಿ ಬ್ರೆಡ್ಡೂ-ಬನ್ನಿಗೇನೂ ಕಡಿಮೆ ಇಲ್ಲ - ಎರಡು ಘಂಟೆ ವ್ಯಯಿಸಿ ಒಂದು ಬಿಸಿಬೇಳೆ ಬಾತ್ ಮಾಡಿ ತಿಂದು ಅದರ ಪಾತ್ರೆಗಳನ್ನು ತೊಳೆದು ಒಪ್ಪ ಮಾಡುವುದಕ್ಕೆ ಇನ್ನೊಂದು ಘಂಟೆಯನ್ನು ವ್ಯಯಿಸುವುದು ನನ್ನ ಜಾಯಮಾನದಲ್ಲೇನೂ ಬರೆದ ಹಾಗಿಲ್ಲ. ತಿನ್ನುವುದಕ್ಕಾಗಿ ಬದುಕಬಾರದು, ಬದುಕುವುದಕ್ಕಾಗಿ ತಿನ್ನಬೇಕು - ಎನ್ನುವ ವೇದಾಂತವನ್ನು ಬಹಳ ವರ್ಷಗಳ ಹಿಂದೆಯೇ ಅನುಸರಿಸಿ ಅದೇ ರೀತಿ ಇವತ್ತಿಗೂ ಚಾಚೂ ತಪ್ಪದೇ ನಡೆದುಕೊಂಡು ಬಂದಿದ್ದಾಗಿದೆ. ನಾಲಗೆ ರುಚಿ ಆದೇಶಿಸೋ ಹೊರವಲಯದ ತಿನ್ನುವಿಕೆಯಲ್ಲಿ ಏನು ಸುಖ ಇದೇ ಹೇಳೀ, ಅದು ಕ್ಷಣಿಕವಾದದ್ದು, ಅದರ ಬದಲಿಗೆ ಏನೋ ಒಂದು ಪುಸ್ತಕವನ್ನು ಓದಿದರೆ ಬರೆದರೆ ಅದು ಯಾವತ್ತಿಗೂ ಇರುವಂತದ್ದು. ಅಂತಹದ್ದರಲ್ಲಿ ದಿನದ ಕಾಲು ಭಾಗವನ್ನು ತಿನ್ನುವುದಕ್ಕಾಗಿ ಬಳಸುವ ಯಾರನ್ನಾದರೂ ನೋಡಿ ಮರುಕಪಡದೇ ಇನ್ನೇನನ್ನು ಮಾಡಬೇಕೋ? ಆದರೆ, ತಿನ್ನುವವರಲ್ಲಿ ಎಲ್ಲರೂ ಒಂದೇ ರೀತಿ ಎಂದು ಹೇಳಲಾಗದು. ಕೆಲವರು ಕಂಬಳಿಹುಳುವಿನ ಥರ ಯಾವಾಗಲೂ ಕುರುಕಲುಗಳನ್ನು ಮೇಯುತ್ತಲೇ ಇದ್ದರೆ ಇನ್ನು ಕೆಲವರು ನಿಯಮಿತವಾಗಿ ಹೊತ್ತುಹೊತ್ತಿಗೆ ಊಟ-ತಿಂಡಿ ಮಾಡಿಕೊಂಡಿರುವವರು. ಆದರೆ ನಮ್ಮ ಗುಂಪಿಗೆ ಸೇರುವವರೇ ಬಹಳ ಮಂದಿ, ದಿನಕ್ಕೆ ಇಂತಿಷ್ಟೇ ಹೊತ್ತಿಗೆ ಇಂಥದ್ದನ್ನೇ ತಿನ್ನಬೇಕು ಎಂದು ಅಶ್ವಮೇಧಯಾಗ ಮಾಡುವವರನ್ನು ಬದುಕಲೇ ಅಯೋಗ್ಯರು, ತಿನ್ನಲು ಮಾತ್ರ ಯೋಗ್ಯರು ಎಂದು ಹಣೆಪಟ್ಟಿಕೊಡದೇ ಮತ್ತಿನೇನು ಮಾಡಬೇಕು.

ತಿನ್ನೋದರ ಬಗ್ಗೆಯೇ? ನನಗೂ ಗೊತ್ತು...ದಾವಣಗೆರೆ ಮಸಾಲೆ ಮಂಡಕ್ಕಿಯಿಂದ ಹಿಡಿದು, ಧಾರವಾಡಾ ಪೇಡಾದವರೆಗೆ, ಮೈಸೂರಿನ ಮಸಾಲೆ ದೋಸೆಯಿಂದ ಹಿಡಿದು, ಮದ್ದೂರುವಡೆ ವರೆಗೆ, ಯಾವುದೋ ಒಂದು ಸೀಜನ್ ನಲ್ಲಿ ಸಿಗೋ ಆನೆಬಂಡಾದಿಂದ ಹಿಡಿದು, ನೇರಳೇಹಣ್ಣಿನಿಂದ ಹಿಡಿದು, ಥರಾವರಿ ಪಲ್ಯ-ಪದಾರ್ಥಗಳಿಗೆ ಬರೋ ಕಳಲೆಯವರೆಗೆ. ಒಂದೆಲಗದ ಸೊಪ್ಪಿನಿಂದ ಹಿಡಿದು ಹರಿವೇ ಸೊಪ್ಪಿನವರೆಗೆ, ಅಪರೂಪಕ್ಕೆ ಮಾಡೋ ನುಗ್ಗೇ ಸೊಪ್ಪಿನಿಂದ ಹಿಡಿದು ಬಸಳೇ ಸೊಪ್ಪಿನವರೆಗೆ... ಇವೆಲ್ಲವನ್ನು ನೆನೆನೆನೆಸಿಕೊಂಡೇ ಬಾಯಲ್ಲಿ ಹಲವರಿಗೆ ನೀರು ಊರಿರಬಹುದು. ಆದರೆ, ಇದರ ಹಿಂದಿನ ಮರ್ಮ ಕೆಲವರಿಗೆ ಮಾತ್ರ ಗೊತ್ತು. ಅಮೇರಿಕದ ಉದ್ದಗಲಕ್ಕೂ ಭಾರತೀಯ ಮೂಲದ ಅಂಗಡಿಗಳೇನೂ ಇಲ್ಲ, ಹತ್ತಿಪ್ಪತ್ತು ವರ್ಷಗಳ ಹಿಂದೆ ಒಂದು ಪೌಂಡು ತೊಗರಿಬೇಳೆಯನ್ನು ಪೋಸ್ಟ್‌ನಲ್ಲಿ ಎಷ್ಟೋ ಜನ ತರಿಸಿಕೊಂಡು ಹೋಳಿಗೆ ಮಾಡಿಕೊಂಡು ತಿಂದಿದ್ದಿರಬಹುದು, ಇತ್ತೀಚೆಗೆ ಇಂತಹ ಅಂಗಡಿಗಳು ಹೆಚ್ಚಾಗಿರಬಹುದು, ಆದರೆ ನಮಗೆ ಬೇಕಾದ ಪದಾರ್ಥ, ತರಕಾರಿ ಮುಂತಾದವುಗಳು ಯಾವಾಗಲೂ ಸಿಗುತ್ತವೆ ಎಂದು ಗ್ಯಾರಂಟಿ ಕೊಡಲಿಕ್ಕೆ ಬಾರದು. ಹಲ್ಲಿದ್ದಾಗ ಕಡೆಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ ಎನ್ನುವುದನ್ನು ನಮ್ಮಂತಹವರನ್ನು ನೋಡೇ ಹೇಳಿರಬಹುದು. ಅಂದರೆ ನನ್ನ ಆಹಾರ ಪದಾರ್ಥಗಳ ವೈರಾಗ್ಯದ ಹಿಂದೆ ಅಭಾವ ಕಾರಣ, ನನ್ನ ಹಾಗೇ ಬೇಕಾದಷ್ಟು ಮಂದಿ ಇದ್ದಾರೆ ಎನ್ನೋದೂ ನನಗೆ ಗೊತ್ತು.

ಹಾಗಿಲ್ಲವೆಂದಾಗಿದ್ದರೆ, ನಮ್ಮೂರುಗಳಲ್ಲಿ ಗಣಪತಿ ಹಬ್ಬಕ್ಕೆಂದು ಎಲ್ಲರೂ ಬಿಸಿಬಿಸಿ ಹೋಳಿಗೆಯನ್ನು ತುಪ್ಪ ಹಾಲು ಹಾಕಿಕೊಂಡು ಸವಿಯುತ್ತಿದ್ದರೆ ಇಲ್ಲಿ ನಾವು ಹಗಲೂ-ರಾತ್ರಿ ಕೆಲಸವನ್ನು ಮಾಡಿಕೊಳ್ಳುವ ಪ್ರಮೇಯವೇಕೆ ಬರುತ್ತಿತ್ತು. ನಮ್ಮ ಭಾರತೀಯ ಹಬ್ಬಗಳಿಗೆ ರಜೆ ತೆಗೆದುಕೊಳ್ಳಬೇಕೆಂದರೂ ಎಷ್ಟೋ ಜನರಿಗೆ ಹಾಗೆ ಆಗದು. ಅನಿವಾಸಿಗಳ ಹಬ್ಬಗಳೆಲ್ಲ ವೀಕ್‌ಎಂಡಿನಲ್ಲೇ ಬರೋದು ಎಂದು ತಮಾಷೆ ಮಾಡುತ್ತಿರುವವರಿಗೂ ಅಣಕಿಸುವಂತೆ ಗಣೇಶನ ಹಬ್ಬ ಶನಿವಾರಕ್ಕೆ ಬಂದರೂ ಎಮರ್ಜನ್ಸಿ ಕೆಲಸದ ಮೇಲೆ ದುಡಿಯಬೇಕಾಗಿ ಬಂದವರಿಗೆ ಹಬ್ಬಗಳೆಲ್ಲ ಸೆಕೆಂಡರಿಯಾಗಿ ಕಾಣಿಸದೇ ಇನ್ನೇನಾದೀತು? ಹಬ್ಬಗಳನ್ನು ಆದರಿಸಿ, ಆಚರಿಸುವುದಕ್ಕೆ ಹಲವು ರೂಪಗಳು - ಹೊಸಬಟ್ಟೆ ಧರಿಸುವುದಾಗಲೀ, ಸುಗ್ಗಿ ಸಮೃದ್ಧಿಯ ಸೂಚಕವಾಗಿಯಾಗಲೀ, ಬಗೆಬಗೆಯ ತಿಂಡಿ ತಿನಿಸುಗಳನ್ನು ಮಾಡಿ ಆಸ್ವಾದಿಸುವುದಾಗಲೀ, ಕುಟುಂಬದ ಎಲ್ಲರೂ ಒಟ್ಟಿಗೆ ಸೇರಿ ಆಚರಿಸುವುದಾಗಲೀ, ಕುಲದೇವರ ಆರಾಧನೆಯಾಗಲೀ ಎಲ್ಲವೂ ಮುಖ್ಯವಾದ ಕಾರಣಗಳೇ. ಸಮಾಜದ ಹಲವು ಧ್ಯೋತಕಗಳಲ್ಲೊಂದಾಗಿ ಬರುವ ಹಬ್ಬಗಳನ್ನು ಸ್ಕಿಪ್ ಮಾಡಿಕೊಂಡು ಹೋಗುವ ನಾವೆಲ್ಲರೂ ಇವತ್ತಲ್ಲ ನಾಳೆ ಒಂದಲ್ಲ ಒಂದು ಬೆಲೆಯನ್ನು ತೆತ್ತಲೇ ಬೇಕಾಗುತ್ತದೆ. ಮಕ್ಕಳು-ಮರಿ ಇದ್ದವರಿಗೆ ಹಬ್ಬಗಳು ತಮ್ಮ ತಮ್ಮ ಸಂಸ್ಕೃತಿ-ಪರಂಪರೆಯನ್ನು ಒಂದು ತಲೆಯಿಂದ ಮತ್ತೊಂದು ತಲೆಗೆ ರವಾನಿಸುವ ಕೊಂಡಿಯಾಗಿರುವಾಗ ಪ್ರತಿಯೊಂದು ಹಬ್ಬವೂ, ಅದರ ವೈಶಿಷ್ಠ್ಯವೂ ಬಹಳ ಮುಖ್ಯ.

ತಿಂಡಿ-ಹಬ್ಬಗಳನ್ನು ನೆನೆಸಿಕೊಳ್ಳುತ್ತಿರುವಾಗ ಒಂದು ರೂಪಕ ನೆನಪಿಗೆ ಬಂತು. ಮಗು ಚಿಕ್ಕದಿರುವಾಗ ತಾಯಿ ಎಷ್ಟೋ ಕಷ್ಟ ಪಟ್ಟು, ಏನೇನೆಲ್ಲ ತೋರಿಸಿ, ಎಷ್ಟೇ ರಂಪ ಮಾಡಿಯಾದರೂ ಬಲವಂತವಾಗಿ ಮಗುವಿಗೆ ತಿನ್ನಿಸುತ್ತಾಳೆ. ಮುಂದೆ ಮಗು ಬೆಳೆದು ಶಾಲೆಗೆ ಹೋಗುವ ಹೊತ್ತಿಗೆ ಒಂದು ಹೋಳಿಗೆ ಹಾಕಿದಲ್ಲಿ ಎರಡು ಬೇಕು ಎಂದು ಹಠ ಹಿಡಿದರೆ ಅದಕ್ಕೆ ಬೇಕಾದಷ್ಟು ಕೊಡುವಲ್ಲಿ ತಾಯಿ ಹುಸಿ ಮುನಿಸು ತೋರಿಸುತ್ತಾಳೆ, ಅಥವಾ ಮಾಡಿದ್ದೆಲ್ಲವನ್ನೂ ನೀನೇ ತಿಂದರೆ ಮನೆಯಲ್ಲಿ ಇತರರಿಗೆ ಸಾಲದು ಎನ್ನುವ ಭಯವನ್ನು ಹುಟ್ಟಿಸುತ್ತಾಳೆ. ಮಗು ಮುಂದೆ ಬೆಳೆದು ಪ್ರಬುದ್ಧತೆಯ ಹಂತಕ್ಕೆ ಬಂದಾಗ ಮತ್ತೆ ಎಲ್ಲರೂ ಒತ್ತಾಯ ಮಾಡಿ ತಿನ್ನಿಸತೊಡಗುತ್ತಾರೆ. ಇನ್ನು ಹಾಗೇ ವಯಸ್ಸಾಗುತ್ತಾ ವಯಸ್ಸಾಗುತ್ತಾ ಏನೇನೋ ಖಾಯಿಲೆಗಳು ಬರಬಹುದು ಎನ್ನುವ ಭಯದಲ್ಲಿ ನಾಲಿಗೆಯ ರುಚಿಗೆ ಮತ್ತೆ ಕಡಿವಾಣ ಬೀಳತೊಡಗುತ್ತದೆ. ಕೊನೆಗೆ ರುಚಿಯೂ-ಚಪಲವೂ ಕಡಿಮೆಯಾಗಿ ಒಂದು ದಿನ ಈ ಲೋಕವನ್ನೇ ಖಾಲಿ ಮಾಡಬೇಕಾಗಿ ಬರುತ್ತದೆ.

ಹೀಗೆ ಪಾನೀಪೂರಿ ಮಹಿಮೆ ಎಲ್ಲಿಯವರೆಗೆ ಬಂತು ನೋಡಿ, ತಿಂದಿದ್ದೂ ಅಲ್ಲದೇ, ಮಾಡಿ ನೋಡಿದ್ದೂ ಅಲ್ಲದೆ, ಅದರ ಬಗ್ಗೆ ಬರೆದು ಓದುವುದಕ್ಕೆ ಸಮಯ ಸಿಕ್ಕಿತಲ್ಲಾ ಅಷ್ಟೇ ಸಾಕು, ಏನಂತೀರಾ?

ತುಂಬಿದವೂ ತುಳುಕುವದಕ್ಕೆ ಸದ್ಯವೇ ...?

ಕಳೆದ ವಾರ ಆಫೀಸಿನಲ್ಲಿ ನೀರಿನ ಬಾಟಲಿಯೊಂದಿಗೆ ಆಡುತ್ತಿದ್ದಾಗ ಒಂದು ಹೊಸ ಅನುಭವವಾಯಿತು. ಅದೊಂದು ಸಾಮಾನ್ಯವಾದ ೫೦೦ ಮಿಲೀ ನೀರಿರೋ ಪ್ಲಾಸ್ಟಿಕ್ ಬಾಟಲ್, ಎಲ್ಲರೂ ನೀರು ಕುಡಿಯೋ ಹಾಗೆ ನಾನೂ ನೀರು ಕುಡಿಯುತ್ತೇನಾದ್ದರಿಂದ ಅದರಲ್ಲೇನೂ ವಿಶೇಷವಿಲ್ಲ! ಅರ್ಧ ನೀರು ಕುಡಿದ ಬಾಟಲಿ ಮುಚ್ಚುಳ ಹಾಕಿ ಬದಿಗೆ ಇಡುವಾಗ ಕಂಪ್ಯೂಟರ್ ಕೀ ಬೋರ್ಡ್ ಪಕ್ಕ ನನಗೆ ಅಡ್ಡವಾಗಿ (horizontal) ಬಿದ್ದಿತು, ಅದನ್ನು ಅಲ್ಲಿಂದಲೇ ಕೇರಮ್ ಬೋರ್ಡ್ ಸ್ಟ್ರೈಕರ್‌ಗೆ ಹೊಡೆದ ಹಾಗೆ ಅದರ ಸ್ಥಳಕ್ಕೆ ಹೋಗುವಂತೆ ಅದರ ಬುಡಕ್ಕೆ ಬೆರಳಿನಿಂದ ಹಗುರವಾಗಿ ತಳ್ಳಿದೆ. ಏನಾಶ್ಚರ್ಯ, ನಾನು ಒಮ್ಮೆ ತಳ್ಳಿದರೆ ಅದು ಎರಡು ಬಾರಿ ಮುಂದೆ ಹೋಯಿತು! ಹೀಗೆ ಮತ್ತೆ ಮತ್ತೆ ಮಾಡಿದಾಗಲೂ ನಾನು ಒಮ್ಮೆ ತಳ್ಳಿದ್ದಕ್ಕೆ ಅದು ಒಂದು ರೀತಿಯ ಜರ್ಕೀ ಮೋಷನ್‌ನಲ್ಲಿ ಒಟ್ಟು ದೂರವನ್ನು ಎರಡು ಸಮನಾದ ಇಂಟರ್‌ವಲ್‌ನಲ್ಲಿ ಕ್ರಮಿಸತೊಡಗಿತು.

ಇದೇ ಪ್ರಯೋಗವನ್ನು ನಾನು ಖಾಲೀ ಹಾಗೂ ತುಂಬಿದ ನೀರಿನ ಬಾಟಲಿಗಳೊಂದಿಗೆ ಮಾಡಿದಾಗ ಅವು ಕೇವಲ ಒಂದೇ ಬಾರಿ ಮುಂದೆ ಹೋಗುತ್ತಿದ್ದವು. ಖಾಲಿ ಇದ್ದ ಬಾಟಲಿ ಸ್ವಲ್ಪ ಹೆಚ್ಚು ದೂರ ಹೋಗುವಂತೆ ಕಂಡುಬಂದರೂ, ದೂರದಲ್ಲಿ ಅಂತಹ ವ್ಯತ್ಯಾಸವೇನೂ ಇರಲಿಲ್ಲ. ಅದೇ ತುಂಬಿದ ಬಾಟಲಿ ತನ್ನ ಭಾರಕ್ಕೆ ಹೆಚ್ಚು ದೂರ ಹೋಗಲಿಲ್ಲ, ಅದನ್ನು ಸ್ಥಳಾಂತರ ಮಾಡುವುದಕ್ಕೆ ಹೆಚ್ಚು ಶಕ್ತಿಯ ಅವಶ್ಯಕತೆ ಸಹಜವಾಗಿ ಇತ್ತು.

ಈ ಅರ್ಧ ತುಂಬಿದ ಬಾಟಲಿಯ ಕಥೆ ಬೇರೆ - ನಾನು ಒಮ್ಮೆ ಕೊಟ್ಟ ಜರ್ಕಿಗೆ ಅದು ಎಷ್ಟು ದೂರವನ್ನು ಕ್ರಮಿಸುತ್ತಿತ್ತೋ, ಅಷ್ಟೇ ದೂರವನ್ನು ಅದರ ಒಳಗಿರುವ ನೀರು ಕೊಟ್ಟ ಜರ್ಕಿಗೆ ಕ್ರಮಿಸುತ್ತಿತ್ತು. ಆ ಬಾಟಲಿಯಲ್ಲಿ ದೆವ್ವವೇನೂ ಇರಲಿಲ್ಲ! ನಾನು ಪ್ರತೀಸಾರಿ ಪುಶ್ ಕೊಟ್ಟಾಗಲೂ ಅದು ಎರಡು ರೀತಿಯಲ್ಲಿ ಕೆಲಸ ಮಾಡುತ್ತಿತ್ತು, ಒಂದು ಇಡಿಯ ಬಾಟಲಿಯನ್ನು ಸ್ಥಳಾಂತರ ಮಾಡುವುದು, ಮತ್ತೊಂದು ಅದರೊಳಗಿನ ಅರ್ಧ ತುಂಬಿದ ನೀರನ್ನು ಸ್ವತಂತ್ರವಾಗಿ ಸ್ಥಳಾಂತರ ಮಾಡುವುದು. ಹೀಗೆ ಸ್ವತಂತ್ರವಾಗಿ ಸ್ಥಳಾಂತರಗೊಂಡ ನೀರಿನ 'ಅಲೆ'ಯ ಹೊಡೆತ ಬಾಟಲಿಯ ಎರಡನೇ ಚಲನೆಗೆ ಕಾರಣವಾಗಿತ್ತು.

ಅಂದರೆ, ಬಾಟಲಿಯ ನೀರಿನ ಚಲನಶಕ್ತಿ (kinetic energy) ಹೊರಗಿನಿಂದ ನೋಡಿದಾಗ ಅಥವಾ ಒಟ್ಟಿನಲ್ಲಿ ಬಾಟಲಿಯ ಪ್ರಚನ್ನ ಶಕ್ತಿಯಾಗಿ (potential energy) ಕಂಡು ಬಂದಿದ್ದೂ ಅಲ್ಲದೇ ಒಂದು ಸಣ್ಣ ಪುಶ್ (ಅವಕಾಶ) ಅನ್ನು ಬಳಸಿಕೊಂಡು ಅದು ಅದೇ ನೇರದಲ್ಲಿ ದುಪ್ಪಟ್ಟು ಮುಂದೆ ಹೋಗಿದ್ದನ್ನು ನೋಡಿ 'ಎಲೇ, ಅವಕಾಶವಾದಿ ಅರ್ಧ ತುಂಬಿದ ಬಾಟಲಿಯೇ!' ಎಂದು ನಾನು ಮೂಗಿನ ಮೇಲೆ ಬೆರಳಿಡುವಂತಾಯಿತು. ಖಾಲಿ ಬಾಟಲಿಗಳು ಹಾಗೂ ತುಂಬಿದ ಬಾಟಲಿಗಳ ಸ್ಥಿತಿ ನೋಡಿ ಸ್ವಲ್ಪ ತಕ್ಕಮಟ್ಟಿಗೆ ಬೇಸರವೂ ಆಯಿತು.

***

ಬಾಟಲಿಗಳಾಗಲೀ, ಕೊಡಗಳಾಗಲೀ 'ತುಂಬೋ'ದಕ್ಕೆ ಬಹಳ ಸಮಯಬೇಕು, ಒಮ್ಮೆ ತುಂಬಿದ ಮೇಲೆ ಅವುಗಳು ಒಂದು ರೀತಿ ದೊಡ್ಡ ಸಂಶೋಧನೆ ಮಾಡಿದವರ ಹಾಗೆ - ಕಡಿಮೆ ವಿಷಯಗಳ ಬಗ್ಗೆ ಹೆಚ್ಚು ಗೊತ್ತು, ಹೆಚ್ಚಿನ ವಿಷಯಗಳ ಬಗ್ಗೆ ಕಡಿಮೆ ಗೊತ್ತು ಅನ್ನೋ ಹಾಗೆ. ಅದೇ ಅರ್ಧ ತುಂಬಿದ ಕೊಡಗಳ ಕಥೆಯೇ ಬೇರೆ, ಅವುಗಳು ಯಾವಾಗಲೂ ಗೊಣಗುತ್ತಲೇ ಇರುತ್ತವೆ, ತಮ್ಮ ಅವಕಾಶ (space) ಕೇವಲ ಅರ್ಧವಷ್ಟೇ ತುಂಬಿರೋದರಿಂದ ಎಷ್ಟು ಹೊತ್ತಿಗೂ ಏನನ್ನು ಬೇಕಾದರೆ ಅದನ್ನು 'ತುಂಬಿ'ಕೊಳ್ಳುವುದಕ್ಕೂ ಸೈ ಎನ್ನುವ ಮನೋಭಾವನೆಯನ್ನು ಪ್ರದರ್ಶಿಸಿ ಒಂದು ರೀತಿ ಕೆಟ್ಟ ನಗುವನ್ನು ತುಟಿಗಳ ಮೇಲೆ ಲೇಪಿಸಿಕೊಂಡಿರುತ್ತವೆ. ಒಮ್ಮೊಮ್ಮೆ ನಮ್ಮೂರಿನ ಅವಕಾಶವಾದೀ ಪುಡಾರಿಗಳಂತೆ ಅವು ಕಂಡು ಬಂದರೂ, ಅವುಗಳ ಅರ್ಧ ತುಂಬಿದ ಸ್ಥಿತಿಯ ಮಟ್ಟಿಗೆ ನನಗೆ ಕನಿಕರವಿದೆ. ಅವುಗಳ ಕಂಠ ಪಟ್ಟಿಯ ಮೇಲೆ ಇನ್ನರ್ಧವನ್ನು ಏಕೆ, ಯಾವುದರಿಂದ ತುಂಬಿಕೊಳ್ಳಲಾಗಲಿಲ್ಲ ಎನ್ನುವ ಸದಾ ತೆರೆದ ಸವಾಲಿದೆ. ತುಂಬಿದ ಕೊಡವನ್ನು ಬಳಸಿದಾಗ ಖಾಲಿ ಆಗಿ ಅರ್ಧವಾಗಿ ಕಂಡು ಬಂದ ಕೊಡಗಳಿಗಿಂತಲೂ ತಮ್ಮ ಜಾಯಮಾನದಲ್ಲಿ ಅರ್ಧಕ್ಕಿಂತಲೂ ಹೆಚ್ಚು ತುಂಬದ ಕೊಡಗಳ ಮೇಲೆಯೇ ನನಗೆ ಮಮಕಾರ ಹೆಚ್ಚು. ನೀವು ಮಾನಕ ವಿಚಲನೆ (standard deviation) ಯನ್ನು ಲೆಕ್ಕ ಹಾಕಿ ನೋಡಿದರೆ ಅರ್ಧ ತುಂಬಿದವುಗಳೇ ಹೆಚ್ಚು ಇದ್ದಂತೆ ಕಾಣಿಸುತ್ತವೆ. ಹೀಗೆ ಅರ್ಧ ತುಂಬಿಕೊಂಡ, ಅರ್ಧವಾದ, ಎಂದೂ ತುಂಬದ ಕೊಡ ಬಾಟಲಿ ಇತ್ಯಾದಿ container ಗಳ ಸ್ಥಿತಿಗತಿಯ ಬಗ್ಗೆ ನನಗೆ ಸ್ವಲ್ಪ ಹೆಚ್ಚು ಕನಿಕರ ಕೂಡಾ.

***

ಹೀಗೆ ಅರ್ಧ ತುಂಬಿದ ಬಾಟಲಿಯ ಪ್ರಯೋಗದ ಮಾತು ಎಲ್ಲೆಲ್ಲಿಗೋ ಹೋಯಿತು - ಈ ಪ್ರಯೋಗದ ನಿಷ್ಪತ್ತಿ (inference) ಏನೂ ಅಂದರೆ ಅರ್ಧ ತುಂಬಿದ ಬಾಟಲಿಗಳು ಒಂದು ರೀತಿ 'ಸು ಅಂದ್ರೆ ಸುಕ್ಕಿನುಂಡೆ...' ಅನ್ನೋ ಜಾಯಮಾನದವು, ಒಂದು ಸಾರಿ ಹೇಳಿದ ಮಾತನ್ನು ಚಾಚೂ ತಪ್ಪದೇ ಪಾಲಿಸುವಂತಹವು, ಸ್ವಲ್ಪ ಪುಶ್ ಕೊಟ್ಟಿದ್ದನ್ನು ಮನನ ಮಾಡಿಕೊಂಡು ತಮ್ಮ ಶಕ್ತ್ಯಾನುಸಾರ ಕಷ್ಟ ಪಡುವಂತಹವು. ನನಗೆ ತೂಕವಾಗಿದ್ದುಕೊಂಡು ಚಲನೆಗೆ, ಬದಲಾವಣೆಗೆ ಆಷ್ಟೊಂದು ಮನಸ್ಸು ಮಾಡದ ತುಂಬಿದವುಗಳಿಗಿಂತ, ಬದಲಾವಣೆಗೆ ತಮ್ಮನ್ನು ಯಾವಾಗಲೂ ತೆರೆದಿಟ್ಟುಕೊಂಡ ಅರ್ಧ ತುಂಬಿದವುಗಳು ಹಾಗೂ ಅವುಗಳ ಒಡನಾಟ ಹೆಚ್ಚು ಇಷ್ಟವಾಯಿತು ಎಂದು ಹೇಳುವುದಕ್ಕೆ ಹೀಗೆ ಬರೆಯಬೇಕಾಯಿತು!

ಅರ್ಧ ತುಂಬಿದವುಗಳಲ್ಲದೇ, ತುಂಬಿದವುಗಳು ತುಳುಕೋದಕ್ಕೆ ಸಾಧ್ಯವೇ?

ನಮ್ಮ ಹಾಡು ನಮ್ಮದು

ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ
ಮನೆಯ ಮಕ್ಕಳ ಐಕ್ಯಗಾನವ ಲಾಲಿಸಿ ಪರಿಪಾಲಿಸೈ!


ಐವತ್ತು ವರ್ಷಗಳ ನಂತರವೂ 'ಸ್ವಾಮಿದೇವನೆ ಲೋಕಪಾಲನೇ ತೇ ನಮೋಸ್ತು ನಮೋಸ್ತುತೇ...' ಎನ್ನುವ ಈ ಹಾಡಿನ ಮೇಲಿನ ವಾಕ್ಯಗಳು ತಮ್ಮ ಸತ್ವವನ್ನೇನೂ ಕಳೆದುಕೊಂಡಂತೆನಿಸಿವುದಿಲ್ಲ. ಹುಯಿಲುಗೋಳರು ರಚಿಸಿದ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು...' ಎಂಬುದು ಇಂದಿಗೂ ಪ್ರಚಲಿತದಲ್ಲಿರುವ ಮತ್ತೊಂದು ಗೀತೆಯೇ. ಹೀಗೆ ಎರಡು ಹಾಡುಗಳ ಮೇಲೆ ನಮ್ಮ ಪರಂಪರೆಯನ್ನು ಅಳೆದು ತೀರ್ಮಾನ ಮಾಡಲಾಗುವುದೇ ಎಂದು ಯಾರು ಬೇಕಾದರೂ ಹುಬ್ಬೇರಿಸಬಹುದು. ಆದರೆ ನನಗಂತೂ ನಾಡಿನ ಐಕ್ಯತೆಯಲ್ಲಿ ದಿನೇದಿನೇ ವಿಶ್ವಾಸ ಕಡಿಮೆಯಾಗುತ್ತಿದೆಯೇ ವಿನಾ ಹೆಚ್ಚೇನೂ ಆಗುತ್ತಿಲ್ಲ.

ನಾವು ಈ ಹಿಂದಿನ ದಶಕಗಳನ್ನು ಒಂದು ಅರ್ಧ ಶತಮಾನವನ್ನು ಕಳೆದು ಬಂದಿದ್ದನ್ನು ಹಿಂತಿರುಗಿ ನೋಡಲೇ ಬೇಕು, ಅದರಿಂದ ಕಲಿಯುವುದಂತೂ ಬೇಕಾದಷ್ಟಿದೆ. ಅರ್ಧ ಶತಮಾನದ ಬಳಿಕವೂ 'ಕನ್ನಡವನ್ನು ಉಳಿಸಿ...' ಎಂದು ರಿಕ್ಷಾ, ಬಸ್ಸುಗಳ ಹಿಂದೆ ಬರೆಸಿಕೊಂಡು ಓಡಾಡುವ ಸ್ಥಿತಿಯಿಂದೆಂದೂ ಹೊರಬಂದಂತೆ ನಾವು ಕಾಣುವುದೇ ಇಲ್ಲ. ಒಂದು ಕಡೆ ಕಾಸರಗೋಡಿನಂತಹ ಪ್ರಾಂತ್ಯವನ್ನು ಕನ್ನಡನಾಡಿನ ಭಾಗವನ್ನಾಗಿ ಮಾಡಿ ಎಂಬ ಕೂಗು ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಕಳೆದುಕೊಂಡಂತೆ ಬೆಳಗಾವಿ ಮತ್ತಿತರ ಗಡಿಪ್ರದೇಶಗಳು ಎಂದಿಗಿಂತ ಹೆಚ್ಚಿನ ಪ್ರಾಂತೀಯ ಅಸ್ಥಿರತೆಯಿಂದ ಒದ್ದಾಡುತ್ತಿವೆ, ನವೆಂಬರ್ ಒಂದರ ಏಕೀಕರಣ ದಿನವನ್ನು ಎಷ್ಟೋ ಕಡೆಗೆ ಕರಾಳದಿನವನ್ನಾಗಿ ಆಚರಿಸಲಾಗುತ್ತಿದೆ, ಕನ್ನಡತನವೆನ್ನುವುದು ಪ್ರಶ್ನಾರ್ಥಕವಾಗಿ ಹೋಗಿದೆ.

ಶಾಲೆಗಳಲ್ಲಿ ಕನ್ನಡವನ್ನು (ಮಾಧ್ಯಮವಾಗಿ)ಕಲಿಸಬೇಕೆ ಬಿಡಬೇಕೆ, ಇಂಗ್ಲೀಷ್ ಅನ್ನು ಯಾವ ವರ್ಷದಿಂದ ಭಾಷೆ ಹಾಗೂ ಮಾಧ್ಯಮವಾಗಿ ಆರಂಭಿಸಬೇಕು ಎನ್ನುವುದಕ್ಕೆ ನಾವಿನ್ನೂ ಉತ್ತರವನ್ನು ಕಂಡುಕೊಂಡಂತಿಲ್ಲ. ಒಂದು ಕಡೆ ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿ ಶಹರಗಳು ಬೆಳವಣಿಗೆಗೆ ತಮ್ಮನ್ನು ತಾವು ತೆರೆದುಕೊಂಡಿದ್ದರೆ ಎಷ್ಟೋ ಹಳ್ಳಿಗಳಲ್ಲಿ ಸಾಕಷ್ಟು ಮೂಲಭೂತ ಅನುಕೂಲಗಳಿಲ್ಲದೇ ಇನ್ನೂ ಮುಖ್ಯವಾಹಿನಿಯಿಂದ ದೂರವೇ ಉಳಿದಿವೆ. ಕರ್ನಾಟಕದಲ್ಲೇ ಉತ್ತರ ಹಾಗೂ ದಕ್ಷಿಣದ ಜಿಲ್ಲೆಗಳಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಸಾಕಷ್ಟು ವ್ಯತ್ಯಾಸವಿರುವುದು ಬಲ್ಲವರ ಚಿಂತೆಗೆ ಮತ್ತೊಂದು ಕಾರಣ - ಹೀಗೆ ದೊಡ್ಡದಾಗುತ್ತಿರುವ ಕಂದಕ, ಅದರಲ್ಲೂ ಕರ್ನಾಟಕವೆಂದರೆ ಬೆಂಗಳೂರು ಎನ್ನುವ ಮನೋಭಾವನೆ ಹಲವಾರು ರೀತಿಯಲ್ಲಿ ಭಿನ್ನಾಭಿಪ್ರಾಯಗಳನ್ನು ನಿರ್ಮಿಸಿದೆ.

ರಾಜಕೀಯವಾಗಿಯೂ ಸಾಕಷ್ಟು ಸ್ಥಿರತೆಯನ್ನೇನೂ ರಾಜ್ಯ ಇತ್ತೀಚಿನ ವರ್ಷಗಳಲ್ಲಿ ಕಂಡಂತಿಲ್ಲ. ಭಿನ್ನ-ಭಿನ್ನ ಆಡಳಿತಗಳು, ಪಕ್ಷಗಳು-ನಾಯಕರ ಧೋರಣೆ, ಮುಂದಾಲೋಚನೆ ಹಾಗೂ ಪ್ರಗತಿಯ ದೃಷ್ಟಿಯಿಂದ ರಾಜ್ಯದ ಹಿತದೃಷ್ಟಿಯಿಂದ ಏನೇನು ಕಾರ್ಯಗಳು ಆಗಬೇಕಿತ್ತೋ ಅವುಗಳೆಲ್ಲವೂ ಅಸ್ಥಿರ ಆಡಳಿತ ವ್ಯವಸ್ಥೆಯಿಂದ ಸೊರಗಿವೆ. ಆಡಳಿತದಲ್ಲಿ ಹುಟ್ಟುವ ಅಸ್ಥಿರತೆ ರಾಜ್ಯದ ನಾಯಕರುಗಳಿಗೆ ತಮ್ಮ ಪಕ್ಷದ ಶಾರ್ಟ್ ಟರ್ಮ್ ಹಿತವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿ ಕಂಡುಬರುತ್ತದೆಯೇ ವಿನಾ ದೆಹಲಿಯಲ್ಲಿ ಧ್ವನಿಯನ್ನು ಏರಿಸಿ ಮಾತನಾಡಿ ಕರ್ನಾಟಕದ ಒಳಿತನ್ನು ಸಾಧಿಸಿಕೊಳ್ಳುವುದಾಗಲೀ, ದೂರದೃಷ್ಟಿಯಿಂದ ಯೋಚಿಸಿ ಉತ್ತಮ ಯೋಜನೆಗಳನ್ನು ಸಿದ್ಧಪಡಿಸುವುದಾಗಲೀ ದೂರವೇ ಉಳಿಯುತ್ತದೆ.

ನಮ್ಮ ಹಾಡು ನಮ್ಮದು, ಆ ಹಾಡು ಐಕ್ಯಗಾನವಾಗಲಿ, ಆದರೆ ಕನ್ನಡವನ್ನು ಉಳಿಸಿಕೊಂಡು ಹೋಗುವುದೇ ನಮ್ಮ ಮುಖ್ಯ ಸಮಸ್ಯೆಯಾಗದಿರಲಿ. ಮುಂಬರುವ ದಿನಗಳಲ್ಲಿ ಈಗಾಗಲೇ ಬೇಕಾದಷ್ಟನ್ನು ತೆರೆದುಕೊಂಡಿರುವ ಕನ್ನಡಿಗರ ಔದಾರ್ಯವನ್ನು ಕೆಣಕುವ ಮತ್ಯಾವ ಘಟನೆಗಳೂ ಘಟಿಸದಿರಲಿ. ಹಳೆಯದನ್ನು ಐತಿಹಾಸಿಕವಾಗಿ ನೋಡಿ ಮುಂದುವರಿದು, ನಾವು ಎಡವಿದಲ್ಲೆಲ್ಲ ಪಾಠವನ್ನು ಕಲಿತು ಪ್ರಗತಿಯ ಕಡೆಗೆ ಸಾಗುವ ಕೆಚ್ಚೆದೆ ನಮಗೆ ಬರಲಿ. ದೇಶದಲ್ಲಿ ಕರ್ನಾಟಕ ಮತ್ತೆ ಮೊದಲಿನದಾಗಲಿ. ಕನ್ನಡ ನಮ್ಮ ಶಕ್ತಿಯಾಗಲಿ.

***