Wednesday, March 3, 2010

ಹೆಸರಿಲ್ಲದ miditagaLu

ಮಾತಾಡುವ ಮನಸ್ಸು ಮೂಕವಾಗಿಬಿಟ್ಟರೆ? ಸದಾ ನಗುನಗುತ್ತಿರುವ ತುಟಿಗಳು ಬಿಗಿದು ಕೊಂಡರೆ? ಹಾಡುವ ಕೋಗಿಲೆ ಸುಮ್ಮನಾಗಿಬಿಟ್ಟರೆ? ಭೊರ್ಘರೆಯುವ ಸಮುದ್ರವು ನಿಸ್ಚಲವಾದ್ರೆ? ನವಿಲು ಕುಣಿಯುವುದನ್ನು ನಿಲ್ಲಿಸಿಬಿಟ್ಟರೆ? ವಸಂತನ ಆಗಮನವೆ ಆಗದಿದ್ದ್ರೆ? ಬದುಕಿನಲ್ಲಿ ಏನೂ ಸಮರಸವೇ ಇರಲಾರದು." ಪ್ರೀತಿ ಹರಿಯುವ ನದಿಯಂತೆ "ಇದನ್ನು ಎಲ್ಲೋ ಓದಿದ ನೆನಪು. ಬರಡಾದ ಭೂಮಿಯಲ್ಲಿ ಬೆಳೆ ಆಗಬೇಕೆಂದರೆ ಅಲ್ಲಿ ಮಳೆ ಆಗಮನ ಆಗಲೇ ಬೇಕು. ಬರಡಾದ ಹೃದಯದಲ್ಲಿ ಪ್ರೀತಿ ಚಿಗುರ ಬೇಕಾದರೆ ಅಲ್ಲಿ ಪ್ರೀತಿಯ ಮಳೆ ಆಗಲೇ ಬೇಕು. ಎಲ್ಲರ ಎದುರು ಕಣ್ಣು ,ಮೂಗು ಕೆಂಪು ಮಾಡಿಕೊಂಡು 'ಏನಾಯ್ತು'?? ಅಂತ ಕೇಳಿಸಿ ಕೊಂಡು ಬೇಸರವಾಗಿದೆ. ನಗುತ್ತಿರುವ ಮುಖದ ಹಿಂದಿನ ನೋವಿನ ಅರಿವು ನಿನಗಿಲ್ಲ. ಕೊಡುವ ಕೈಗಿಂತ ಬೇಡುವ ಕೈಗಳು ಯಾವಾಗಲು 'ಕೀಳೆ '!!!.ತಕರಾರಿಲ್ಲ ಈ ಮಾತಿಗೆ. ಕೊಟ್ಟವನು ಕೊಟ್ಟ ಕ್ಷಣಕ್ಕೆ ಮರೆತರೆ , ಅದನ್ನು ಕಾಡೀ ಬೇಡಿ ಪಡೆದುಕೊಂಡ ಜೀವ ಕೊನೇ ಉಸಿರಿರುವ ವರೆಗೂ , ಅದನ್ನು ಪಡೆದುಕೊಂಡ ಕ್ಷಣವನ್ನು ನೆನಪಿಸಿಕೊಂಡು 'ಜೀವನ ಧನ್ಯ' ಅಂತ ಖುಷಿ ಪಡುತ್ತದೆ. ಅದು ಸಿಗದೆ ಇದ್ದರೆ ,ಸಾಯುವ ಕಡೆ ಕ್ಷಣದ ವರೆಗೂ ಬೇಡಿಸಿಕೊಂಡ ಮುಖದ ದರ್ಶನಕ್ಕೆ ತವಕಿಸುತ್ತದೆ. ಬದುಕು ಅನಿವಾರ್ಯ ಆಗಬೇಕಾ? ಈ ಓಟ ಎಲ್ಲೀವರೆಗೆ ಸಾದ್ಯ ? ಇಂಥ ಒಂದು ಮನಸ್ಸಿರುವುದಕ್ಕೆ ಸಂತೋಷ. ಮಾತು ಕೇಳದ ಹೃದಯದ ಬಗ್ಗೆ ಸಿಟ್ಟು.ಸಮಯವನ್ನು ಕಳೆಯಲು ಯಾರೂ ಇಂಥ ದುಬಾರಿ ಮಾರ್ಗವನ್ನು ಹುಡುಕಿಕೊಳ್ಳುವ ಸಾಹಸ ಮಾಡಲಾರರು!!! ಆ ನೋವಿನ ನೋವು ಬಲ್ಲವರಿಗೆ ಗೊತ್ತು ....ಪಾರ್ಕಿನ ಮೂಲೆ ಬೆಂಚುಗಳು ಧನ್ಯ!! ಒಂದು ಸುಂದರ ಹುಡುಗಿ ಘಂಟೆಗಟ್ಟಲೇ ಕುಳಿತಿರು ತ್ತಾಳೆ . ಅದರ ಹಾಗೆ ಒಂಟಿಯಾಗಿ ....ಸುಮ್ಮನೇ ಇದ್ದು ಬಿಟ್ಟರೆ ಜೀವನ ಬೋರ್ ಆಗುತ್ತೆ. ಅದಕ್ಕೆ ನನಗೆ ನಾನು ಈ ತರ ಮಾಡಿಕೊಂಡು ಬಿಟ್ಟೇನ?? ....ಯಾಕೆ ಮನಸೇ ನನ್ನ ಮಾತೇ ಕೇಳುತ್ತಿಲ್ಲ ? ? ಆದರೂ ಮನಸೇ ನೀನು ತಪ್ಪು ಮಾಡಿಲ್ಲ !!

No comments:

Post a Comment