Tuesday, March 16, 2010

ನೆನಪಲ್ಲೇ ......


ಎಲ್ಲರಿಗೂ ಯುಗಾದಿ ಹಬ್ಬಕ್ಕೆ ರಜೆ. ನನಗೊಂದೇ ಆಫೀಸ್ ಅಲ. ರಜೆ ಇದ್ರೆ ಎಷ್ಟು ಚೆನ್ನಾಗಿತ್ತು ಅಂತ ಮನಸಲ್ಲಿ ಅಂದುಕೊಳ್ಳುತ ಕ್ಯಾಬ್ ಹತ್ತಿದೆ. ಕ್ಯಾಬ್ ಕುಳಿತು ಕಿಟಿಕಿ ಆಚೆ ನೋಡುವುದು ನಂಗೆ ಪಂಚಪ್ರಾಣ. ಅಲ್ಲಿ ಸಿಗುವ "ಏಕಾಂತ "ನನಗೆ ತುಂಬಾ ತುಂಬಾ ಇಷ್ಟ.ಗಾಳಿಗೆ ಮುಖಒಡ್ಡಿ ಕೂರುತ್ತೇನೆ. ಅಬ್ಬ! ಎಂಥ ಸುಖವಿದೆ !!! ಹಾಗೇ ಹೋಗುತ್ತಿರಬೇಕಾದರೆ ಒಂದು ಮನೆಯಾಚೆ ಒಂದು ಹೆಂಗಸು, ಸುಮಾರು ನನ್ನ ಅಮ್ಮನ ವಯಸ್ಸಿರಬಹುದು . ಮನೆ ಅಂಗಳವನ್ನು ಸಗಣಿ ಹಾಕಿ ಸಾರಿಸಿ ರಂಗೋಲಿ ಹಾಕುತ್ತಿದ್ದರು. ನೋಡಿ ಬಹಳ ಸಂತೋಷ ಆಯಿತು. ಅಬ್ಬ! ದಿನೇ ದಿನೇ ಯಾಂತ್ರಿಕವಾಗುತ್ತಿರುವ ಬದುಕಿನ ಮದ್ಯದಲ್ಲೂ ಈ ಮಹಿಳೆ ರಂಗೋಲಿ ಹಾಕುವಂತ ತಾಳ್ಮೆ ಹೊಂದಿದಾಳಲ್ಲ ಅಂತ ಖುಷಿ ಆಯಿತು.
ನನಗಿನ್ನೂ ನೆನೆಪಿದೆ. ಯಾವುದಾದರು ಹಬ್ಬ ಬಂದರೆ ಅಮ್ಮನ ಬಳಿ " ಅಮ್ಮ ನನಗೆ ಸಗಣಿ ಮುಟ್ಟಲು ಒನ್ ತರ. ನೀನೆ ಸಗಣಿ ಹಾಕಿ ಸಾರಿಸಿ ಕೊಡು ನಾನು ರಂಗೋಲಿ ಹಾಕುತ್ತೀನಿ ಅಂತ ಹೇಳುತ್ತಿದ್ದುದ್ದು . ನಾನು , ನನ್ನ ತಂಗಿ ನಾನು ರಂಗೋಲಿ ಹಾಕುತ್ತೀನಿ, ನಾನು ಹಾಕುತ್ತೀನಿ ಅಂತ ಕಿತ್ತಾಡುವಾಗ, ಅಮ್ಮ ಬಂದು ಸರಿ ಇಬ್ಬರು ಒಂದೊಂದು ಹಾಕಿ ಹೇಳಿದಾಗ, ನಾನು ,ತಂಗಿ compromise ಮಾಡಿ ಕೊಂಡು ಒಂದೇ ದೊಡ್ಡ ರಂಗೋಲಿ ಹಾಕೋಣ, 15 ರಿಂದ 8 ಹಾಕೋಣ? ಅಥವ 17 ರಿಂದ 9 ಹಾಕೋಣ ?ಬಾತುಕೋಳಿಗೆ ಯಾವ ಬಣ್ಣ? ಶಂಖಕ್ಕೆ ಯಾವ ಬಣ್ಣ ಅಂತ ಮಾತಾಡಿಕೊಂಡು ರಂಗೋಲಿ ಹಾಕುತ್ತಿದ್ವಿ. ಯಾಕೋ ನೆನಪಾಗಿ ಬೇಸರವಾಯಿತು. ಕಿರು ನಗೆ ಬಂತು ನನಗೆ.
"ನೆನಪಲ್ಲೇ ನಾ ಉಸಿರಾಡಿದೆ ,
ನೆನಪಲ್ಲೇ ನಾ ಜೀವಿಸಿದೆ "
ಈ ನೆನಪುಗಳೇ ಹೀಗೆ ಅಲ್ಲವ? ನೆನಪಿನ ದೋಣಿಯಲ್ಲಿ ತೇಲಾಡಲು ಏನೋ ಸಂತೋಷ!!!
ಅಪ್ಪನ ಹತ್ತಿರ ಹಠ ಮಾಡಿ 200 ಪುಟಗಳ 2 small size notebook ತರಿಸಿಕೊಂಡು , ಚುಕ್ಕಿ ರಂಗೋಲಿ ಗೆ ಒಂದು, ಬಳ್ಳಿ ರಂಗೋಲಿ ಗೆ ಒಂದು ಅಂತ ಎರಡು ಪುಸ್ತಕವನ್ನು ಮಾಡಿಟ್ಟುಕೊಂಡು, ಯಾರ ಮನೆ ಎದುರಿಗೆ ರಂಗೋಲಿ ಹಾಕಿದರು ಅದನ್ನು ನೋಡಿಕೊಂಡು ತಕ್ಷಣ ಮನೆಗೆ ಬಂದು ಅದನ್ನು ಪುಸ್ತಕದಲ್ಲಿ ಸೇರಿಸುತಿದ್ದೆ. ಹಿಂಗೆ ಮಾಡಿ ನನ್ನ ಹತ್ತಿರ ಕಡಿಮೆ ಅಂದರೂ 500 ರಂಗೋಲಿಗಳು ಶೇಖರವಾಗಿದ್ದವು . ಆದರೆ free hand ರಂಗೋಲಿ ಮಾತ್ರ ನನಗೆ ಕಡೇ ಓರೆಗೂ ಬಿಡಿಸಲು ಬರಲೇ ಇಲ್ಲ. ಎಷ್ಟೋ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಕೂಡ ಗೆದ್ದಿದ್ದೆ. ಆದ್ರೆ ಈಗ ರಂಗೋಲಿ ಹಾಕದೆ ಹತ್ತಿರ 2.5 ವರುಷಗಳು ಕಳೆದೇ ಬಿಟ್ಟಿದೆ. ಯಾಕೋ ಹಬ್ಬದಂದು ಇದನೆಲ್ಲ ಮಿಸ್ ಮಾಡಿಕೊಲ್ಳುತ್ತಿದ್ದೆನಲ್ಲ ಅಂತ ಮನಸಲ್ಲೇ ಅಂದುಕೊಂಡು , ರಜೆ ಕೊಡದ tl ನಾ ಮನಸಲ್ಲೇ ಧಾರಾಳವಾಗಿ ಬೈದುಕೊಂಡು ಆಫೀಸ್ ನೆಡೆಗೆ ಹೊರಟೆ.
=====****====****======
ಸ್ನೇಹಿತರೇ ,
ನಿಮಗೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಯುಗಾದಿಯು ನಿಮ್ಮ ಬದುಕಿನಲ್ಲಿ ಸಿಹಿ ತರಲಿ ಅಂತ ನಿಮ್ಮ ಗೆಳೆಯನ ಹಾರೈಕೆ.... :-)

Monday, March 8, 2010

ಮತ್ತೆ ಅವನ ನೆನಪಾಯಿತು .......

ಪ್ರತೀ ಸಾರಿಯೂ ನಾನು ಅಂದುಕೊಳ್ಳುತ್ತೇನೆ ಗೆಳೆಯ.....ಇನ್ನೂ ನಿನ್ನ ಮರೆತು ಬಿಡಬಿಡಬೇಕು ...ನಾನು, ನನ್ನ ಜೀವನ , ಅಂತ selfish ಆಗಿ ಬದುಕಿಬಿಡಬೇಕು...ನೀನು ಇಲ್ಲದೇನೂನಾನು ಜೀವಿಸಬಲ್ಲೆ ಎಂದು ತೋರಿಸಬೇಕು ..ಬರೀ ನಿನ್ನ ನೆನಪಿನ ಕಣ್ಣಿರಷ್ಟೇ ಅಲ್ಲ ನನಗೆನಗಲೂ ಬರುತ್ತದೆ ಎಂದು ಸಾರಿ ಸಾರಿ ಹೇಳಬೇಕು.....ನೀನು ಇಲ್ಲದಿದ್ದರೂ ನಿನ್ನ ನೆನಪೊಂದನ್ನು ನನ್ನ ಎದೆಯ ಗೂಡಿನಲ್ಲಿ ಬೆಚ್ಚಗೆ ಕಾದಿರಿಸಿಅದನ್ನ ಸವಿಯುತ್ತಾ ಜೀವನ ಕಳೆದು ಬಿಡುವ...ನಿನ್ನ ಪ್ರತಿಯೊಂದು ಮಾತುಗಳು ಈಗಲೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿದೆ...ನನ್ನಜೊತೆ ನೀನು ಆಡಿದ ಖುಷಿಯ ಮಾತುಗಳು, ನೋವಿನ ಮಾತುಗಳು, ನನ್ನ ಬಗ್ಗೆ ನಿನಗಿದ್ದಪ್ರೀತಿ ಎಲ್ಲವೂ ನೆನಪಿದೆ...ನೀನು ಒಂದು ದಿನ ಹೀಗೆ ನನ್ನ ಬಿಟ್ಟು ಹೋಗುತ್ತಿಯ ಎಂಬ ಕಲ್ಪನೆಯೂ ನನ್ನ ದಿಗಿಲುಗೊಳಿಸುತ್ತಿದ್ದ ಕಾಲವಾಗಿತ್ತು...ಆದರೆ ಗೆಳೆಯಅದೆಲ್ಲ ಸುಳ್ಳಾಗಿ ಹೋಯಿತು...ನೋಡು ಈಗ ನೀನಿಲ್ಲದೇ ಹೇಗೆ ನಾನು ಒಂದು ವರುಷ ಅಂದರೆ 365 ದಿನಗಳನ್ನು ಕಳೆದುಬಿಟ್ಟೆ...ಅದು ಹೇಗೆ ದಿನಗಳು ಕಳೆದವೋ ನನಗೇ ತಿಳೀ ತಿಲ್ಲ ....ನೆನಪಿಟ್ಟುಕೋ ಗೆಳೆಯ ನಿನ್ನನ್ನು ನನ್ನಷ್ಟು ಈ ಜಗತ್ತಿನಲ್ಲಿ ಯಾರು ಪ್ರೀತಿಸಲಾರರು...Its a Challenge!!! ... ತುಂಬಾ ಇಷ್ಟ ಪಟ್ಟು ಬಿಟ್ಟೆ ಗೆಳೆಯ ....ತುಂಬಾ ನೇ ...ಯಾಕೆ ಅಷ್ಟು ಇಷ್ಟ ಪಟ್ಟೆ ... I Dont know...I Dont have an valid answer for that..It just happened.....ಆ ನಿನ್ನ ಓರೆ ನೋಟ, ನೀನು ನಿನ್ನ ಕೂದಲನ್ನು ಸರಿ ಮಾಡಿಕೊಳ್ಳುತ್ತಿದ್ದ ರೀತಿ...ಗೆಳೆಯ...Believeme your looks were killing me ...ನಿನ್ನ smile ಚೆನ್ನಾಗಿದೆ, ನಿನ್ನ dimple cute ಅಂತೆಲ್ಲಾ ಹೇಳಿದಾಗ ನನ್ನಮನಸಲ್ಲೆಲ್ಲ ಆನಂದದ ಸಾಗರ ಉಕ್ಕಿ ಹರಿಯುತಿತ್ತು ....I was so crazy about you!!!ನನ್ನ ಗೆಳೆಯ ಯಾಕೋ ಸುಮ್ಮನೇ ನನ್ನ ರೇಗಿಸುವುದಕ್ಕೆ ಹೇಳಿದ ಹೀಗೆ ಮಾಡಿದರೆ ಅವನು ನಿನ್ನ ಬಿಟ್ಟು ಹೋಗುತ್ತಾನೆ ನೋಡುಅಂತ....ಕೂಡಲೇ ನನ್ನ ಕಣ್ಣಿನಿಂದ non-stop ಕಣ್ಣೀರು ಬಂದಿತ್ತು..ನನ್ನ ಸಮಾಧಾನ ಮಾಡಲು ಬಂದ ಅವನು ನೆನಪುಗಳು ಬೇಡವೆಂದರೂ ಕಾಡುತ್ತವೆ ಗೆಳೆಯ ..ಏನು ಮಾಡಲಿ??...ಮನಸ್ಸಿನಲ್ಲಿ ನೋವು ಇಟ್ತ್ಕೊಂಡು ಹೊರಗೆನಗುತ್ತಾ ಬಾಳುವುದು ಎಷ್ಟು ಕಷ್ಟ ಎಂದು ತಿಳಿದವರಿಗೆ ಗೊತ್ತು........ನೀನು ಎಲ್ಲೇ ಇರು ಗೆಳೆಯ ಆದರೆ ನನ್ನ ಮನಸ್ಸಿನಲ್ಲಿನೀನೆಂದೂ ಇದ್ದೇ ಇರುತ್ತಿಯ...ಹೇಳುತ್ತಾರಲ್ಲ ಗೆಳೆಯ...ಹೃದಯ ಕನ್ನೆಡಿ ಇದ್ದಂತೆ ...ಹೇಗೆ ಕನ್ನೆಡಿ ಒಡೆದಾಗ ಪ್ರತೀ ಚೂರಿನಲ್ಲೂಮುಖ ಕಾಣಿಸುತ್ತದೋ ಹಾಗೆ ಗೆಳೆಯ...ನನ್ನ ಹೃದಯದ ಪ್ರತೀ ಚೂರಿನಲ್ಲೂ ನಿನ್ನ ಮುಖವೇ ಕಾಣಿಸುತ್ತದೆ...ನನ್ನದೇನುತಪ್ಪಿಲ್ಲ..ಎಲ್ಲ ನನ್ನ ಹೃದಯದ್ದು ...ಸರಿ ಇಷ್ಟೆಲ್ಲಾ ನಿನಗ್ಯಾಕೆ ಹೇಳಬೇಕು ಅಲ್ಲವ? you are not at all bothered about me......ಪರ್ವಾಗಿಲ್ಲ ಗೆಳೆಯ...ನನಗೂ challenges ಅಂದ್ರೆ ತುಂಬಾ ಇಷ್ಟ .....ನಿನ್ನ ಬಿಟ್ಟು ಬದುಕುವುದೇ ನನ್ನ Life ನ Challenge ಅಂದುಕೊಳ್ಳುತ್ತೇನೆ...ಇದು ನನಗೆ ಯಾರು ಹಾಕಿದ challenge ಅಲ್ಲ ,ನೀನು ಹಾಕಿದ್ದಲ್ಲ ನನಗೆ ನಾನೇ ಹಾಕಿಕೊಂಡಿದ್ದು ..
And I have to win the challenge And win myself ಅಷ್ಟೆ...ಹೋಗುವುದು ಹೋಗಿದ್ದೀಯ ಗೆಳೆಯ...ನೀನು ತಿರುಗಿ ಬರುತ್ತೀಯೋ ಇಲ್ಲವೋ ಒಂದು ತಿಳಿದಿಲ್ಲ..ಆದರೆ ಒಂದಂತೂ ನಿಜ ನಿನ್ನತುಂಬಾ ಪ್ರೀತಿಸಿದೆ...ನಿನ್ನನ್ನೇ..ಬರೀ ನಿನ್ನನ್ನೇ...ಮನಸನ್ನು ಗಟ್ಟಿ ಮಾಡಿಕೊಂಡಿದ್ದೇನೆ ಗೆಳೆಯ...ನೀನ್ ಇಲ್ಲದೇ ಇರಬೇಕು ಅಂತ...ಹಾಗೆ ಇದೀನಿಕೂಡ..ಆದರೆ ಎಲ್ಲೋ ಒಂದೊಮ್ಮೆ ಭಯವಾಗಿ ಬಿಡುತ್ತೆ....ಎಲ್ಲಿ ನಾನು ಈ Challenge ನಲ್ಲಿ ಸೋತು ಬಿಡುತ್ತೇನೋಅಂತ...ಎಲ್ಲಿ ಜೀವನದಿಂದ ಓಡೀಹೊರಟು ಹೋಗುತ್ತೇನೋ ಅಂತ.....ಹೋಗುವುದಿಲ್ಲ ಗೆಳೆಯ ...ಆದರೂ ಮನಸಲೆಲ್ಲ ನಿನ್ನ ನೆನಪುಗಳು ಬೇಡವೆಂದರೂ ಬಂದು ವತ್ತರಿಸಿದಾಗ ಮನಸೆಲ್ಲ ಒಂದೊಮ್ಮೆ ಅಲ್ಲೋಲ ಕಲ್ಲೋಲವಾಗಿರುತ್ತದೆ ...ಹಾಗೆ ಮತ್ತೆ ಸ್ವಲ್ಪ ಸಮಯದ ನಂತರ ಮತ್ತೆ ಶಾಂತ ,ಪ್ರಶಾಂತ ತಿಳಿ ನೀರಿನ ಹಾಗೆ ಮನಸ್ಸು ಕೂಡ...ದೂರದಲ್ಲೆಲ್ಲೋ ನೀನಿದ್ದಿಯ ಒಂದು ದಿನ ನೀನು ಬರುತ್ತಿಯ ಏನೆಲ್ಲಾ ಕನಸುಗಳನ್ನು ಕಟ್ಟಿಕೊಂಡಿದ್ದೆ...ಆದರೆ ಈಗ ನಾನು ನಿನ್ನ ಬಗ್ಗೆಯಾವ ಕನಸನ್ನು ಕಟ್ಟುತ್ತಿಲ್ಲ .....ಮನಸ್ಸು ಈಗ ನಿರ್ಲಿಪ್ತ ನಿಶ್ಚಲ...ಶುಭ್ರ ಬಿಳುಪಿನಂತೆ ಸ್ವಚ್ಛ ... ...
ಇಂತಿ ನಿನ್ನ
ಸಂತೋಷ

Wednesday, March 3, 2010

ಪ್ರಾಣ ಸ್ನೇಹಿತ್ ರವಿಕುಮಾರ್

Hello ದಾಸಾ
ಯಾಕೋ ಏನಾಗಿದೆ ನಿನಗೆ ? ಮಾತಿಲ್ಲ, ಕಥೆಯಿಲ್ಲ.. ಕೊನೆಪಕ್ಷ ಒಂದು message ಕೂಡ ಮಾಡೋದು ಮರೆತು ಹೋಯ್ತಾ ?ನಂಗೊತ್ತು ಕಣೋ ನಿನಗೆ ಬೇರೆ ಗೆಳೆಯರು ಸಿಕ್ಕಿದ್ದರೆ ಅಂತ . ಆದರೂ ನಿನ್ನ ಪ್ರಾಣ ಸ್ನೇಹಿತರನ್ನ ಮರ್ತೋಗಿ ಬಿಡೋದಾ ? ಮೊನ್ನೆ ನಿನ್ನ ಸ್ನೇಹಿತ phone ಮಾಡಿದ್ದ ಅವ್ನೂ ಹೇಳ್ತಿದ್ದ ಮಾರಾಯ ರವಿ ಕಳ್ದೋಗಿದಾನೆ ಸಂತು ಮೊದಲಿನ ಥರ ಇಲ್ಲ ಅವ್ನು" ಅಂದಿದ್ದ .! But ನಾನು ಒಪ್ಪಲೇ ಇಲ್ಲ . "no no he can't change " ಅಂದಿದ್ದೆ. ಆದ್ರೆ ಮೊನ್ನೆ ಅನಿಸ್ತು ನೀನು ಬದಲಾಗಿದ್ದೀಯ, avoid ಮಾಡ್ತಾ ಇದ್ದೀಯ ಎಂದು .ಅತ್ತು ಬಿಟ್ಟೆ ರವಿ ನಿನ್ನೆ ರೂಮನಲ್ಲಿ . ಯಾಕೆ ನಿನ್ನನ್ನು ಅಷ್ಟೊಂದು ಹಚ್ಕೊಂಡೆ ಗೊತ್ತಿಲ್ಲ . mostly ನಮ್ಮಿಬ್ಬರ nature ಒಂದೇ ಆಗಿತ್ತು, or ನಿನ್ನಂಥ ಗೆಳೆಯನ ನಿರೀಕ್ಷೆಯಲ್ಲಿದ್ದೆ ..ನೀನು ಸಿಕ್ಕಿಬಿಟ್ಟಿದ್ದೆ.
Best friends ಅನ್ನೋ ಹಣೆಪಟ್ಟಿ ನಾವೆಂದೂ ಕಟ್ಕೊಳ್ಳಿಲ್ಲ . ಆದರೆ ನಾನು ಮನೆಗೆ ಹೋದಾಗ ಒಬ್ಬರನ್ನೊಬ್ರು ಅದೆಷ್ಟು ಮಿಸ್ ಮಾಡ್ತಾ ಇದ್ದೆವು ಹೇಳು.
ಮೊನ್ನೆ ideals ವರೆಗೆ ಹೋಗಿ ವಾಪಸ್ ಬಂದೆ ಕಣೋ ನಿನ್ನ ಜೊತೆ ಕಿತ್ತಾಡದೇ,ಹೊಟ್ಟೆ ಉರಿಸದೇ ಹೇಗೋ ತಿನ್ನಲಿ 'tiraamisu' ice-cream..! Friendship day, ಗಳಿಗೆ ನೀನು ಕೊಟ್ಟ 'ಹಳದಿ ' ಗುಲಾಬಿ ಹೂಗಳು ಅಳ್ತಾ ಇವೆ ಡೈರಿ ಹಾಳೆಗಳ ಮಧ್ಯೆ .ನನ್ನ ಕಳೆದ ಹುಟ್ಟಿದ ಹಬ್ಬಕ್ಕೆ ನೀನು ಕೊಟ್ಟ card ನಲ್ಲಿ ಹಲ್ಕಿರಿದುಕೊಂಡಿರೋ ಚಿಂಪಾಂಜಿ ನಗೋದನ್ನ ನಿಲ್ಸಿರಬಹುದು . ಜೋರು ಮಳೆಯಲ್ಲಿ ನಿನ್ನ ಜೊತೆ ಜಗಳ ಆಡ್ತಾ ice-cream ತಿಂದದ್ದು, Girinagarನ ಕೊನೆಯಲ್ಲಿನ ಭೇಲ್ ಪುರಿ stallನಲ್ಲಿ ಕಿತ್ತಡ್ಕೊಂಡು 'ಶೇವು ಪುರಿ'ತಿಂದದ್ದು ಇನ್ಮುಂದೆ ಬರೀ ನೆನಪು ಮಾತ್ರಾನಾ ?'ಹೌದು' ಅನ್ನೋ ಉತ್ತರ ಬರದಿರಲಿ ಎಂದು fingers cross ಮಾಡಿದೇನೆ .
ಅದ್ಯಾಕೆ ನಿನ್ನ ಅಷ್ಟೊಂದು ಮಿಸ್ ಮಾಡ್ತೇನೆ ಅಂತ ಯೋಚನೆ ಮಾಡಿದಾಗ, ನೆನಪುಗಳೊಂದಿಗೆ ಗುದ್ದಾಡಿದಾಗ ಹೊಳೆದದ್ದು ಇಷ್ಟು ..! ನಿನ್ನ ಜೊತೆ ಇರೋವಾಗ ಒಬ್ಬ disabledಅನ್ನೋ ಫೀಲಿಂಗ್ ಯಾವತ್ತು ಅದೆಷ್ಟು ತಲೆ ತಿಂತಿದ್ದೆ ನಾನು. 'ನಗುವನ್ನ ಮಾತ್ರ ಹಂಚಬೇಕು ಅಳುವನ್ನಲ್ಲ' ಎನ್ನುವ ನನ್ನ theory ಬುಡಮೇಲಾದದ್ದು ನಿನ್ನ ನಿಷ್ಕಲ್ಮಶ ಸ್ನೇಹದ ಧಾರೆಯಲ್ಲಿ.ನನ್ನ ಮನದೊಳಗಿನ ನಿಷ್ಕಲ್ಮಶ ಸ್ನೇಹದ definitionಗೆ ನೀನು ಉದಾಹರಣೆ. ಕಣ್ಣೀರಿನ ಸಿಂಚನ, ನಗುವಿನ ಎಳೆಬಿಸಿಲಿಗೆ ಮೂಡಿದ ಕಾಮನ ಬಿಲ್ಲಿನ ಸ್ನೇಹ ನಮ್ಮದು ಅನ್ಕೊಂಡಿದ್ದೆ . . ನನ್ನ ಕಣ್ಣೀರನ್ನು ಕಂಡ ಅಪರೂಪದ ವ್ಯಕ್ತಿಗಳಲ್ಲಿ ನೀನೂ ಒಬ್ಬನಾಗಿದ್ದೆ.ಎಷ್ಟು ಸಲ ಜಗಳಾಡಿದ್ದೇವೋ ಲೆಕ್ಕಕ್ಕಿಲ್ಲ. ನಿನ್ನ ಜೊತೆ ಕಣ್ಣೀರಾದ ಘಳಿಗೆಗಳನ್ನು ಹೇಗೋ ಮರೆಯಲಿ ?
ಅದೆಷ್ಟು ತಲೆ ತಿಂತಿದ್ದೆ ನಾನು. ಆ ದಿನ ಒಂದೇ messageನ್ನು 50 ಸಲ ಕಳುಹಿಸಿ ನೀನೂ cellphone switch off ಮಾಡಿದ್ದೆ ನೋಡು . ನನ್ನ stupid poemಗಳ ಕೇಳುಗ ನೀನಾಗಿದ್ದೆ, ಹೊರಗೆ ಬಂದು ಒಂದು ಪುಟ್ಟ walk ಬಂದಿದ್ದೆನಲ್ವಾ? ಇಡೀ ದಿನ F.M ಥರ ವಟವಟ ಅನ್ನೋಳು ಮೌನವಾಗಿ ನಡೆದಿದ್ದೆ ನಿನ್ನ ಜೊತೆ .!ಕೊನೆಗೆ ನೀನು "ಥ್ಯಾಂಕ ಸಂತು " ಅನ್ನೋವಷ್ಟರಲ್ಲಿ ರಸ್ತೆಯ ದೀಪದ ಬೆಳಕಿಗೆ ಕಂಡದ್ದು ಒದ್ದೆ ಕಂಗಳು ..!
ಮನದಲ್ಲಿ ಅದೆಂಥ ನೋವಿದ್ದರೂ ಹೊರಗಡೆಯಿಂದ ನಗುತ್ತಲೇ ಇರುತ್ತಿದ್ದ ನಿನಗೆ ಯಾವತ್ತೋ ಮನದಲ್ಲೇ hats off ಹೇಳಿದ್ದೆ .ನಿನ್ನಿಂದ ಎಷ್ಟೋ ರವಿ ... ಬರೀ best friend ಅಲ್ಲ ನೀನು the Bestest friend .!
ನೀನು ಹೇಳ್ತಿದ್ದೆ ಅಲ್ವಾ ? "ಯಾವತ್ತೂ ಬದಲಾಗಬೇಡ ರವಿ ..ಈಗ ಇದ್ದಂಗೆ ಇರು.. ನನ್ನ ಮಕ್ಕಳಿಗೆ ''jub v met'ಫಿಲ್ಮ್ ತೋರಿಸಿ ನಂಗೂ ಒಬ್ಳು ಥೇಟ್ 'ಗೀತ್' ನಂಥ best friend ಇದ್ಳು ಅಂತ ಹೇಳ್ತೇನೆ "ಎಂದು ..
ತುಂಬಾ ಮಿಸ್ ಮಾಡ್ತಿದೇನೆ ಕಣೋ ನಿನ್ನ .ನೀ ಜೊತೆಗಿಲ್ಲದ girinagarಬೇಡ ಅನ್ಸ್ತಿದೆ. ಒಮ್ಮೆ ಮೆಸೇಜ್ ಮಾಡಿ "stupid miss u too" ಅಂದುಬಿಡೋ. . ಎಲ್ಲೋ ಒಂದು ಕವನ ಓದಿದಾಗ .ನಾನು ಕಾಡಬಹುದು. ನನ್ನ ಮಿಸ್ ಮಾಡಬಹುದು ಆಗ ಒಂದೇ ಒಂದು message ಮಾಡಿಬಿಡು "stupid miss you " ಎಂದು .ಕಾಯ್ತಾ ಇರ್ತೇನೆ ಅದೇ 'ಸೈಬಿನ್ ' complexನ ಅದೇ ನಾಲ್ಕನೆ ಖುರ್ಚಿಯಲ್ಲಿ ..!
Your stupid ಫ್ರೆಂಡ್
ಸಂತೋಷ್

ಹೆಸರಿಲ್ಲದ miditagaLu

ಮಾತಾಡುವ ಮನಸ್ಸು ಮೂಕವಾಗಿಬಿಟ್ಟರೆ? ಸದಾ ನಗುನಗುತ್ತಿರುವ ತುಟಿಗಳು ಬಿಗಿದು ಕೊಂಡರೆ? ಹಾಡುವ ಕೋಗಿಲೆ ಸುಮ್ಮನಾಗಿಬಿಟ್ಟರೆ? ಭೊರ್ಘರೆಯುವ ಸಮುದ್ರವು ನಿಸ್ಚಲವಾದ್ರೆ? ನವಿಲು ಕುಣಿಯುವುದನ್ನು ನಿಲ್ಲಿಸಿಬಿಟ್ಟರೆ? ವಸಂತನ ಆಗಮನವೆ ಆಗದಿದ್ದ್ರೆ? ಬದುಕಿನಲ್ಲಿ ಏನೂ ಸಮರಸವೇ ಇರಲಾರದು." ಪ್ರೀತಿ ಹರಿಯುವ ನದಿಯಂತೆ "ಇದನ್ನು ಎಲ್ಲೋ ಓದಿದ ನೆನಪು. ಬರಡಾದ ಭೂಮಿಯಲ್ಲಿ ಬೆಳೆ ಆಗಬೇಕೆಂದರೆ ಅಲ್ಲಿ ಮಳೆ ಆಗಮನ ಆಗಲೇ ಬೇಕು. ಬರಡಾದ ಹೃದಯದಲ್ಲಿ ಪ್ರೀತಿ ಚಿಗುರ ಬೇಕಾದರೆ ಅಲ್ಲಿ ಪ್ರೀತಿಯ ಮಳೆ ಆಗಲೇ ಬೇಕು. ಎಲ್ಲರ ಎದುರು ಕಣ್ಣು ,ಮೂಗು ಕೆಂಪು ಮಾಡಿಕೊಂಡು 'ಏನಾಯ್ತು'?? ಅಂತ ಕೇಳಿಸಿ ಕೊಂಡು ಬೇಸರವಾಗಿದೆ. ನಗುತ್ತಿರುವ ಮುಖದ ಹಿಂದಿನ ನೋವಿನ ಅರಿವು ನಿನಗಿಲ್ಲ. ಕೊಡುವ ಕೈಗಿಂತ ಬೇಡುವ ಕೈಗಳು ಯಾವಾಗಲು 'ಕೀಳೆ '!!!.ತಕರಾರಿಲ್ಲ ಈ ಮಾತಿಗೆ. ಕೊಟ್ಟವನು ಕೊಟ್ಟ ಕ್ಷಣಕ್ಕೆ ಮರೆತರೆ , ಅದನ್ನು ಕಾಡೀ ಬೇಡಿ ಪಡೆದುಕೊಂಡ ಜೀವ ಕೊನೇ ಉಸಿರಿರುವ ವರೆಗೂ , ಅದನ್ನು ಪಡೆದುಕೊಂಡ ಕ್ಷಣವನ್ನು ನೆನಪಿಸಿಕೊಂಡು 'ಜೀವನ ಧನ್ಯ' ಅಂತ ಖುಷಿ ಪಡುತ್ತದೆ. ಅದು ಸಿಗದೆ ಇದ್ದರೆ ,ಸಾಯುವ ಕಡೆ ಕ್ಷಣದ ವರೆಗೂ ಬೇಡಿಸಿಕೊಂಡ ಮುಖದ ದರ್ಶನಕ್ಕೆ ತವಕಿಸುತ್ತದೆ. ಬದುಕು ಅನಿವಾರ್ಯ ಆಗಬೇಕಾ? ಈ ಓಟ ಎಲ್ಲೀವರೆಗೆ ಸಾದ್ಯ ? ಇಂಥ ಒಂದು ಮನಸ್ಸಿರುವುದಕ್ಕೆ ಸಂತೋಷ. ಮಾತು ಕೇಳದ ಹೃದಯದ ಬಗ್ಗೆ ಸಿಟ್ಟು.ಸಮಯವನ್ನು ಕಳೆಯಲು ಯಾರೂ ಇಂಥ ದುಬಾರಿ ಮಾರ್ಗವನ್ನು ಹುಡುಕಿಕೊಳ್ಳುವ ಸಾಹಸ ಮಾಡಲಾರರು!!! ಆ ನೋವಿನ ನೋವು ಬಲ್ಲವರಿಗೆ ಗೊತ್ತು ....ಪಾರ್ಕಿನ ಮೂಲೆ ಬೆಂಚುಗಳು ಧನ್ಯ!! ಒಂದು ಸುಂದರ ಹುಡುಗಿ ಘಂಟೆಗಟ್ಟಲೇ ಕುಳಿತಿರು ತ್ತಾಳೆ . ಅದರ ಹಾಗೆ ಒಂಟಿಯಾಗಿ ....ಸುಮ್ಮನೇ ಇದ್ದು ಬಿಟ್ಟರೆ ಜೀವನ ಬೋರ್ ಆಗುತ್ತೆ. ಅದಕ್ಕೆ ನನಗೆ ನಾನು ಈ ತರ ಮಾಡಿಕೊಂಡು ಬಿಟ್ಟೇನ?? ....ಯಾಕೆ ಮನಸೇ ನನ್ನ ಮಾತೇ ಕೇಳುತ್ತಿಲ್ಲ ? ? ಆದರೂ ಮನಸೇ ನೀನು ತಪ್ಪು ಮಾಡಿಲ್ಲ !!