ಕಷ್ಟಗಳು ಬರುತ್ತವೆ ಹೋಗುತ್ತವೆ .ಅದನ್ನು ಎದುರಿಸಿ ಮುಂದೆ ನಡೆಯವದನ್ನು ನಾವು ಕಲಿಯ ಬೇಕು . ಇಂದು ಕತ್ತಲು ಆದ್ರೆ ನಾಳೆ ಬೆಳಕು ಆಗೇ ಆಗುತ್ತದೆ ."Every sucussfull person has a painfull story Every painfull story has a sucussfull endinding "
Saturday, January 30, 2010
ನನ್ನ ಬಗ್ಗೆ ನಿಮಗೆ ಚೂರು ಮಾಹಿತಿ .......
.ನಾನು ಅಂಗ್ಲೇ ಭಾಷೆಯನ್ನೇ ವಟ್ ಗುಡುತ್ತಾ ಇದ್ದೆ ನನ್ನನ್ನು ಕನ್ನದಕರಿಸಿದ್ದು ನನ್ನ ಈ ಸ್ನೇಹಿತ್ ರವಿ . ದೇವಸ್ಥಾನಗಳಿಂದ ದೂರ ಇದ್ದ ನನ್ನನ್ನು ದೇವರ ದೇವಸ್ಥಾನಗಳಿಗೆ ಹೋಗುವಂತೆ ಮಾಡಿದ್ದೂ ಸಹ ರವಿ . ನಾನು ನನ್ನ ಈ ಪ್ರಾಣ ಸ್ನೇಹಿತನಿಂದ ತುಂಬಾ ಅಂದ್ರೆ ತುಂಬಾ ಕಲಿತಿದ್ದೇನೆ ಆದ್ರೆ ನಾ ಮಾತ್ರ ಇತನಿಗಾಗಿ ಒಂದು ಚೂರು ಸಹಾಯವನ್ನು ಮಾಡಲಿಲ್ಲ .ಇತನು ಕೊಟ್ಟ ವಸ್ತು ಗಳನ್ನೂ ನಾನು ಮರಳಿ ಕೊಡಲು ಆಗುತ್ತಾ ಇಲ್ಲ . ನಾನು ಮರಳಿ ಕೊಟ್ಟರೆ ಆ ವಸ್ತುಗಳಿಗೆ ಬೆಲೆ ಕೊಟ್ಟಂಥಹ ದಾಗುತ್ತದೆ ಅದ್ದರಿಂದ ನಾ ಆ ವಸ್ತುಗಳಿಗೆ ಮರಳಿ ಕೊಡುತ್ತ ಇಲ್ಲ .ಆ ವಸ್ತುಗಳಿಗೆ ಬೆಲೆ ಕಟ್ಟಲು ನನ್ನಿಂದ ಸಾದ್ಯವಿಲ್ಲ . ನನ್ನ ಉಸಿರು ಇರುವವರೆಗೆ ಇತನು ಮಾಡಿದ ಸಹಾಯವನ್ನು ಮರಿಯುವದಿಲ್ಲ .ನನ್ನ ಜೀವನದಲ್ಲಿ ನಾನು ಹೆಚ್ಚು ಗೌರವ್ ಕೊಡುವದು ನನ್ನ ಕುಟುಂಬದ ಸದಸ್ಯರಿಗೆ ಮತ್ತು ನನ್ನ ಸ್ನೇಹಿತ ರಾದ ಪ್ರಿನ್ಸ್ ಮತ್ತು ರಶ್ಮಿ ಅಕ್ಕನಿಗೆ ಇವರನ್ನು ನಾನು ತುಂಬಾ ಅಂದ್ರೆ ತುಂಬಾ ಪ್ರೀತಿಸುತ್ತೇನೆ .ಇವರಿಬ್ಬರು ನನ್ನ ಅಪ್ಪ ಅಮ್ಮ ಅಂದ್ರೆ ತಪ್ಪಾಗಲಾರದು . ಇವರು ಮಾಡಿದ ಉಪಕಾರವನ್ನು ನಾನು ಎಂದೆಂದಿಗೂ ಮರೆಯುವದಿಲ್ಲ .ಇವರು ನನ್ನನ್ನು ಇವರು ಹೆತ್ತ ಮಗುವಿನ ಹಾಗೆ ನನ್ನ ಲಾಲನೆ ಪಾಲನೆ ಮಾಡಿದ್ದರೆ .ಇವರಿಬ್ಬರು ನನಗೆ ಪರಿಚಯ ಆಗಿದ್ದು ಇನ್ಫೋಸಿಸ್ ನಲ್ಲಿ . ನಾನು ಇವರ ಟೀಂ ನಲ್ಲಿ ಹೊಸದಾಗಿ ಸೇರಿಕೊಂಡಿದ್ದೆ . ಆಗ ನಮಗೆ ಪ್ರಿನ್ಸ್ ಟೀಂ ಲೀಡರ್ .ಮುಂದೆ ನಾವು ಒಂದೇ ಮನೆಯಲ್ಲಿ ವಾಸ ಮಾಡಿದೆವು . ನಾನು ಆಗ ತುಂಬಾ ಅಂದ್ರೆ ತುಂಬಾ ಮುಗ್ದ ನಂಗೆ ವರ್ಕ್ ನಾಲೆಜ್ ಇತ್ತು ವಿನಃ .ಯಾವರೀತಿ ನಡೆದು ಕೊಳ್ಳಬೇಕು ಅಂತ ಗೊತ್ತು ಇರಲಿಲ್ಲ .ತುಂಬಾ ತುಂಟ ಇದ್ದೆ . ಸರಿಯಾಗಿ ಅಡಿಗೆ ಮಾಡಲು ಬರುವದಾಗಲಿ ಬಟ್ಟೆ ವಾಶ್ ಮಾಡುವದಾಗಲಿ ನಂಗೆ ಬರುತ್ತಿರಲಿಲ್ಲ . ಪ್ರತಿಯೊಂದನ್ನು ನಂಗೆ ಕಳಿಸಿ ಕೊಟ್ಟಂತಹ ಮಾತಾ ಪಿತಾ ಅಂದ್ರೆ ತಪ್ಪಾಗಲಾರದು .ನಾವು ಒಟ್ಟಿಗೆ ಮೂರು ವರ್ಷ ಗಳ ಕಾಲ ಒಟ್ಟಿಗೆ ಇದ್ದೆವು . ಆದ್ರೆ ಈಗ ಬೇರೆ ಬೇರೆ ಆಗಿದ್ದೇವೆ . ಆದರೂ ಸಹ ಅವರನ್ನು ಮರೆಯಲು ಆಗುತ್ತಾ ಇಲ್ಲ . ಮಣ್ಣಿನ ಮುದ್ದೆ ಯಂತೆ ಇದ್ದ ನನ್ನನ್ನು ಒಂದು ಸುಂದರ ಮೂರ್ತಿ ಯನ್ನಾಗಿ ಮಾಡಲು ನನ್ನ ಸ್ನೇಹಿತ ರಾದ ಪ್ರಿನ್ಸ್ ರಶ್ಮಿ ಅಕ್ಕ ಮತ್ತು ರವಿಕಿಮಾರ್ ಹಾಗೂ ನನ್ನ ತಾಯಿ ದೇವರು ,ಅಪ್ಪ ,ಅಕ್ಕ ಸುನಂದಾ ಅಣ್ಣ ಗಣೇಶ್ ಇವರನ್ನು ನಾನು ಪ್ರಾಣ ಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ ಮತ್ತು ಅರಾದೆಸುತ್ತೇನೆ .
ನಿಮ್ಮನ್ನು ನೀವು ಮೆಚ್ಚಿಸುವ ವಿಧಾನ ಭಾಗ ಒಂದು
ನಿಮ್ಮ ಬಗ್ಗೆ ಹೇಳುವದಕ್ಕೆ ಸಂಕೋಚವೇಕೆ .............?
ಆತ್ಮ ವಿಶ್ವಾಸ ನಡೆದು ಬಂದ ದಾರಿ ಮತ್ತು ನಡೆ
ನಿಮ್ಮನೇಕೆ ಕೆಲಸಕ್ಕೆ ತೆಗೆದು ಕೊಳ್ಳಬೇಕು........?
ಭಾನುವಾರದ ವಣಮನಸ್ಸು
Friday, January 29, 2010
ಪ್ರೀತಿ ಅಂದ್ರೆ ಹೀಗೆ ನಾ .......?

ಪ್ರಯೋಜನಕ್ಕೆ ಬರದು ಅಂತ ಯಾರು ಅಂದವರು ............?
ಹಾಡಿನ ಸವಾಲ್
ಸ್ನೇಹ
*'ಅವರವರ ಕರ್ಮ '
ಪರಿಸ್ಥಿಯ ಕೈಗೊಂಬೆ
ಮಿನಿನ್ ತೊಟ್ಟಿ

ಮೀನಿನ ತೊಟ್ಟಿಯ ಚಿತ್ರ ಒಂದು ವಾರದ ಹಿಂದೆ ನನ್ನ ಆಫೀಸಿನ ಹತ್ತಿರವೇ ಕುಳಿತುಕೊಳ್ಳೋ ಆಡಮ್ ಆಫೀಸಿನ ಗಾಜಿನ ಗೋಡೆಯ ಮೇಲೆ ಹುಟ್ಟಿಕೊಂಡಿದ್ದು ನಮಗೆಲ್ಲರಿಗೂ ಆಶ್ಚರ್ಯ ತರಿಸಿತ್ತು. ಆಡಮ್ ತನ್ನ ಆಫೀಸಿನ ಒಳಗಡೆಯಿಂದ ಗಾಜಿನ ಮೇಲೆ ಚಿತ್ರ ಬರೆದಿದ್ದ, ಉಳಿದವರಿಗೆ ಹೊರಗಡೆಯಿಂದ ತಮಗೆ ಬೇಕಾದ ಅವತರಣಿಕೆಗಳನ್ನು ಸೇರಿಸುವ ಮುಕ್ತ ಅವಕಾಶ ಇತ್ತು. ಗಾಜಿನ ಗೋಡೆಯ ಮೇಲೆ ಎರಡೂ ಕಡೆಯಿಂದಲೂ ಚಿತ್ರಗಳನ್ನು ಬರೆಯಬಹುದು ಎಂದು ನನಗನ್ನಿಸಿದ್ದು ಆಗಲೆ.ಎರಡು ಮಕ್ಕಳಿರೋ ಆಡಮ್ ತನ್ನ ಚಿತ್ರದಲ್ಲಿ ನಾಲ್ಕು ಗೋಲ್ಡ್ ಫಿಶ್ಗಳು, ಅವುಗಳು ಉಸಿರಾಡೋದಕ್ಕೆ ಅನುಕೂಲವಾಗುವ ಹಾಗೆ ಏರ್ ಬಬಲ್ ಬರುವಂತೆ ಜೊತೆಗೆ ಒಂದು ಗಿಡವನ್ನೂ ಅದರ ಪಕ್ಕದಲ್ಲಿ ಬರೆದಿದ್ದ. ನೀರಿನ ಮಟ್ಟವನ್ನು ಸಾಕಷ್ಟು ಎತ್ತರಕ್ಕೆ ಏರಿಸಿ ’ಸ್ವಲ್ಪ ದಿನಗಳಲ್ಲಿ ನೀರು ಬತ್ತಿ ಹೋದರೂ ಅಡ್ಡಿ ಇಲ್ಲ’ ಎಂದಿದ್ದ. ನಾನು ಕೇಳಿದೆ, ’ನಮ್ಮ ಮನೆಯಲ್ಲಂತೂ ಮೇಂಟೆನೆನ್ಸ್ಗೆ ಸುಲಭವೆಂದು ಗೋಲ್ಡ್ ಫಿಶ್ ಇಟ್ಟಿದ್ದೇವೆ, ಚಿತ್ರದಲ್ಲಾದರೂ ಬೇರೆ ಮೀನುಗಳನ್ನು ಬರೆಯಬಹುದಿತ್ತಲ್ಲ?’ ಎಂದು. ಆಡಮ್ ’That's a good observation...' ಎಂದು ಚಿಕ್ಕದಾಗಿ ಹೇಳಿ ನಕ್ಕು ಬಿಟ್ಟಿದ್ದ. ಆತ ಬರೆದ ಚಿತ್ರ ಕೇವಲ ಒಂದೇ ಒಂದು ಅದರ ಮೂಲ ಸ್ವರೂಪದಲ್ಲಿ ಉಳಿದಿತ್ತು ಎಂದು ಹೇಳಬಹುದು. ಮರುದಿನ ಆತನೇ ಒಂದು ಗಿಡದ ಪಕ್ಕದಲ್ಲಿ ಮತ್ತೊಂದು ಚಿಕ್ಕ ಗಿಡವನ್ನು ಬರೆದ ಹಾಗೂ ಯಾರಿಗಾದರೂ ಸ್ಕೂಬಾ ಡೈವರ್ನ ಚಿತ್ರವನ್ನು ಬರೆಯಲು ಬರೆಯುತ್ತದೆಯೇ ಎಂದು ಕೇಳಿದ್ದೂ ಆಯಿತು. ಹೆಚ್ಚಿನ ನಮಗೆ ಬರೋದಿಲ್ಲ ಎಂದು ಹೆಗಲು ಕುಣಿಸಿದೆವು, ಪಕ್ಕದ ಆಫೀಸಿನ ಜೆಫ್ ಬಂದು ಕೇವಲ ಎರಡೇ ನಿಮಿಷಗಳಲ್ಲಿ ಸ್ಕೂಬಾ ಡೈವರ್ ಅನ್ನು ಸೇರಿಸಿಬಿಟ್ಟ. ಜೆಫ್ ಚಿತ್ರ ಬರೆಯೋದಕ್ಕೆ ಮೊದಲು ಸ್ಕೂಬಾ ಡೈವರ್ ಎಂದರೆ ಹೇಗೆ ಬರೆಯಬಹುದು ಎಂದೆಲ್ಲಾ ಯೋಚಿಸಿಕೊಂಡಿದ್ದ ನನಗೆ ಆತ ಚಿತ್ರ ಬರೆದ ಮೇಲೆ ’ಅಯ್ಯೋ ಇಷ್ಟು ಸುಲಭವೇ!’ ಎನ್ನಿಸಿದ್ದು ನಿಜ.ಮರುದಿನ ಮುಂಜಾನೆ ನೋಡಿದಾಗ, ಅಕ್ವೇರಿಯಮ್ ತಳಕ್ಕೆ ಒಂದೆರಡು ಹಸಿರು ಸ್ಟಿಕ್ಕರುಗಳು ಅಂಟಿಕೊಂಡಿದ್ದವು. ಅದೇ ದಿನ ಮಧ್ಯಾಹ್ನ ಒಂದು ದೊಡ್ಡ ಮೀನಿನ ಮುಖವೂ ಬದಿಯಿಂದ ಎದ್ದು ಕಾಣತೊಡಗಿತ್ತು, ಇನ್ನೇನು ಸಣ್ಣ ಮೀನನ್ನು ನುಂಗಿ ಬಿಡುವ ಹಾಗೆ. ಇದಾದ ತರುವಾಯ ಆಡಮ್ ಹಸಿರು ಗಿಡಗಳ ಎಲೆಗಳ ಸಂಖ್ಯೆಯನ್ನು ಹೆಚ್ಚಿಸುತ್ತ ಹೋದ. ಮುಂದಿನ ದಿನಗಳಲ್ಲಿ ಗಾಜಿನ ತೊಟ್ಟಿಯ ಮೇಲೆ ಮೀನು ಹಿಡಿಯಲು ಗಾಳ ಹಾಕಿ ಕುಳಿತ ಚಿತ್ರವೂ ಹಾಗೂ ಗಾಜಿನ ತೊಟ್ಟಿಗೆ ಅಡಿಯಿಂದ ಬಿಸಿ ಮಾಡುವಂತೆ ಯಾರೋ ಒಬ್ಬರು ಮೊಂಬತ್ತಿ (ಕ್ಯಾಂಡಲ್ಲ್) ಯನ್ನೂ ಹಚ್ಚಿ ಬಿಟ್ಟಿದ್ದರು! ಈ ಚಿತ್ರಕ್ಕೆ ಕೊನೆಯ ಬದಲಾವಣೆ ಎಂಬಂತೆ ಸಣ್ಣ ಮೀನನ್ನು ನುಂಗಲು ಹವಣಿಸುವ ದೊಡ್ಡ ಮೀನಿನ ಬಾಯಿಯಿಂದ ರಕ್ತ ಜಿನುಗಿದ ಹಾಗೆ ಮತ್ತು ದೊಡ್ಡ ಮೀನಿನ ಕಣ್ಣಿರುವ ಜಾಗೆಯಲ್ಲಿ ಒಂದು ಸ್ಮೈಲಿ ಸ್ಟಕ್ಕರ್ರೂ ಪ್ರತ್ಯಕ್ಷವಾದವು.ಹೀಗೆ ಒಂದು ವಾರದಲ್ಲಿ ಒಳಗಡೆಯಿಂದ ಆಡಮ್ ಚಿತ್ರವನ್ನು ಬೆಳೆಸುತ್ತಾ ಹೋದ ಹಾಗೆ ಹೊರಗಡೆಯಿಂದ ಅದೇ ಗಾಜಿನ ಮೇಲೆ ಅಕ್ಕ ಪಕ್ಕದ ಜನರು ತಮಗೆ ಬೇಕಾದ ’ಎಲಿಮೆಂಟು’ಗಳನ್ನು ಸೇರಿಸುತ್ತಾ ಹೋದರು. ಆಕ್ವೇರಿಯಮ್ ಎನ್ನುವುದು ನಿಜ ಜೀವನದಲ್ಲಿ ಒಂದು ಜೈವಿಕ ವ್ಯವಸ್ಥೆಯೆಂಬಂತೆ ಈ ಗಾಜಿನ ಮೇಲೆ ಬರೆದ ಚಿತ್ರವೂ ಚಿತ್ರದಲ್ಲಿ ಜೀವಂತವಾಗಿಯೇ ಇತ್ತು.***ಚಿತ್ರ ಬರೆಯುವವರ ಮನಸ್ಸಿನಲ್ಲಿದೆ ಎಲ್ಲ ಥರದ ಕಲ್ಪನೆಗಳು, ಅವು ದಿನಕ್ಕೆ, ಘಳಿಗೆಗೊಮ್ಮೆ ಬದಲಾಗುವುದು ಸಹಜ. ಜೊತೆಗೆ ನಿಜ ಜೀವನವೂ ಸಹ ನಾನಾ ರೀತಿಯ ಸವಾಲುಗಳನ್ನು ಒಡ್ಡುವುದು ಇದ್ದೇ ಇದೆ. ಒಂದು ಚಿತ್ರದ ವ್ಯವಸ್ಥೆಯಲ್ಲಿ ಹಲವಾರು ಸರಿ ಉತ್ತರಗಳಿವೆ, ಹೀಗೆ ಬರೆದರೆ ತಪ್ಪು ಎಂಬುವುದು ದೂರದ ಮಾತು. ನೀವು ವಾಷಿಂಗ್ಟನ್ ಡಿಸಿಯ ಕಲಾ ಮ್ಯೂಸಿಯಮ್ಗಳನ್ನು ನೋಡಿದ್ದರೆ ನಿಮಗೆ ಗೊತ್ತು, ಪುರಾತನ ಚಿತ್ರಕಲೆಯಿಂದ ಹಿಡಿದು ಆಧುನಿಕ (abstract) ಕಲೆಯವರೆಗೆ ಬೇಕಾದಷ್ಟು ವೇರಿಯೇಷನ್ನುಗಳಿಗೆ ಒಳಪಟ್ಟ ಮಾಧ್ಯಮವದು. ಆಕ್ವೇರಿಯಮ್ ಒಂದು ಜೈವಿಕ ವ್ಯವಸ್ಥೆ, ಅದರ ಹಲವಾರು ವಸ್ತುಗಳು ಅದರದ್ದೇ ಆದ ಒಂದು ವಿಶೇಷ ವಾತಾವರಣವನ್ನು (eco system) ಸೃಷ್ಟಿಸುತ್ತದೆ.ನೀವು ಬರ್ಲಿನ್ ಗೋಡೆಯ ಮೇಲೆ ಉದ್ದಾನುದ್ದಕ್ಕೂ ಜನರು ಥರಾವರಿ ಚಿತ್ರಗಳನ್ನು ಗೋಡೆಯ ಎರಡೂ ಬದಿಗೆ ಜನರು ಬರೆದ ಡಾಕ್ಯುಮೆಂಟರಿಯನ್ನು ನೋಡಿರಬಹುದು, ಆ ಬಗ್ಗೆ ಕೇಳಿರಬಹುದು. ಅದು ಒಂದು ರೀತಿಯ ಓಪನ್ ಕ್ಯಾನ್ವಾಸ್ ಇದ್ದ ಹಾಗೆ. ನಮ್ಮ ಆಫೀಸಿನಲ್ಲೂ ಬೇಕಾದಷ್ಟು ಜನರ ಆಫೀಸಿನಲ್ಲೂ ಈ ರೀತಿಯ ದೊಡ್ಡ ಗಾಜಿನ ಗೋಡೆಗಳಿದ್ದರೂ ಕೇವಲ್ ಆಡಮ್ ಮಾತ್ರ ನಾನು ಕಂಡಂತೆ ಮೊದಲ ಬಾರಿಗೆ ತನ್ನ ಬದಿಗಿದ್ದ ಗಾಜಿನ ಮೇಲ್ಮೈ ಮೇಲೆ ಚಿತ್ರ ಬರೆದು ಉಳಿದವರು ಅದಕ್ಕೇನೇನೋ ರೂಪಗಳನ್ನು ಕೊಡುತ್ತಿದ್ದರೂ ಅದನ್ನು ಪುರಸ್ಕರಿಸುತ್ತಿದ್ದ. ಹೀಗೆ ಒಂದು ವಾರ ಕಳೆದ ನಂತರ ನಿನ್ನೆ ನನ್ನ ಕಣ್ಣೆದೆರಿಗೇ ಈ ಚಿತ್ರವನ್ನು ಅಳಿಸಿ ಹಾಕಿದ, ಏಕೆ ಎಂದು ಕೇಳಿದ್ದಕ್ಕೆ ’ಚಿತ್ರ ಬರೆದದ್ದಾಯಿತು, ಅದು ಬೆಳೆದದ್ದೂ ಆಯಿತು, ಈಗ ಅದು ತನ್ನ ಚಾರ್ಮ್ ಕಳೆದುಕೊಂಡಿದೆ’ ಎಂದ. ಅದು ನಿಜವೂ ಹೌದು ಮೊದಮೊದಲು ಈ ಚಿತ್ರದ ಹತ್ತಿರ ಸುಳಿದಾಡುವವರು ಒಂದಲ್ಲ ಒಂದು ರೀತಿಯ ಕಾಮೆಂಟುಗಳನ್ನು ಹಾಕಿ ಹೋಗುತ್ತಿದ್ದರು, ಅನಂತರ ಈ ಚಿತ್ರ ಗೌಣವಾಯಿತು.***ನನಗೆ ಆಶ್ಚರ್ಯವಾಗುವಷ್ಟರ ಮಟ್ಟಿಗೆ ಈ ಚಿತ್ರ ಆಫೀಸಿನ ಕ್ರಿಯೇಟಿವಿಟಿಗೆ ಒಂದು ಮಾದರಿಯಾಗಿತ್ತು. ಕೆಲವರು ಮಾರ್ಕರ್ ಪೆನ್ನುಗಳಿಂದ ಚಿತ್ರಕ್ಕೆ ತಮ್ಮದೊಂದು ಕೊಡುಗೆಯನ್ನು ನೀಡಿದ್ದರೆ, ಇನ್ನು ಕೆಲವರು ವರ್ಬಲ್ ಕಾಮೆಂಟುಗಳನ್ನು ಹಂಚಿಕೊಂಡರು. ಕೆಲವರು ಚಿತ್ರವನ್ನು ಬೆಳೆಸಿದರೆ (constructive), ಇನ್ನು ಕೆಲವರು ಅದನ್ನು ಧ್ವಂಸ ಮಾಡಲು ನೋಡಿದರು (destructive). ಜನರ ಸೃಜನಶೀಲತೆ, ಅವರ ಮನಸ್ಸಿಗೆ ಹಿಡಿದ ಕನ್ನಡಿ ಎನ್ನುವುದು ಇಲ್ಲಿ ನನಗಂತೂ ಸ್ಪಷ್ಟವಾಗಿತ್ತು
ಬೇವು ಬೆಲ್ಲ ಇರದ ಹೊಸ ವರ್ಷಗಳು
ನಮ್ಮ ನಡುವಿನ ಸಂಭಂದಗಳ ಸೂಕ್ಷ್ಮತೆ
ಪಾಪ , ಇಂದಿನ ಮಕ್ಕಳು
ವರ್ಚುವಲ್ ಪ್ರಪಂಚದ ಲೀಲೆ
Thursday, January 28, 2010
'ಚಹಾ ಮತ್ತು ಪೇಪರ್ '

ಹುಡುಗಿಯರು ಯಾಕಿಂಗೆ ......?
.jpg)
ಏನ್ ಮಾಡ್ಬೇಕು ಅಂತಾನೇ ಗೊತ್ತಾಗ್ತಿಲ್ಲ.. ನನ್ ನಂಬರ್ ಅವಳಿಗೆ ಹೇಗೆ ಸಿಕ್ಕಿತೋ ಗೊತ್ತಿಲ್ಲ.. ಅವಳು ಯಾರು ಎನ್ನುವುದು ಮೊದಲೇ ಗೊತ್ತಿಲ್ಲ. ಸಿಕ್ಕಾಪಟ್ಟೆ ಕಾಡ್ತಾಳೆ ಸಾರ್.. ದಿನಕ್ಕೆ ನೂರಕ್ಕಿಂತಲೂ ಹೆಚ್ಚು ಮೆಸೇಜ್ ಮಾಡ್ತಾಳೆ, ಫೋನ್ ಮಾಡಿದರೆ ಇಡುವುದೇ ಇಲ್ಲ. ಹೊತ್ತಲ್ಲದ ಹೊತ್ತಲ್ಲಿ ಫೋನ್, ಮಾತನಾಡಲೇಬೇಕು ಅಂತ ಹಠ.. ನಂಗೆ ನಿಜಕ್ಕೂ ಭಯ ಆಗ್ತಿದೆ ಸಾರ್.. ಅವಳ ಕಾಟದಿಂದ ತಪ್ಪಿಸೋಣ ಅಂತ ಮೊಬೈಲ್ ಸ್ವಿಚ್ ಆಫ್ ಮಾಡಿದ್ರೆ ಆಫೀಸು, ಮನೆಯ ಲ್ಯಾಂಡ್ ಲೈನ್ಗೆ ಕಾಲ್ ಮಾಡ್ತಾಳೆ.. ಮಾತನಾಡಲೂ ಅಲ್ಲ, ಬಿಡಲೂ ಅಲ್ಲ. ಯಾವ ಕ್ಷಣದಲ್ಲಿ ಅವಳ ಕೈಯಲ್ಲಿ ಸಿಕ್ಕಿ ಹಾಕಿಕೊಂಡೆನೋ.. ಯಾವಾಗ ಮುಕ್ತಿ ಪಡೀತೀನೋ.. ನಂಗೆ ಗೊತ್ತಿಲ್ಲ ಸಾರ್.. ಇನ್ ಯಾವತ್ತೂ ದೇವರಾಣೆಗೂ ಹುಡುಗೀರ ಫೋನ್ ರಿಸೀವ್ ಮಾಡೊಲ್ಲ..- ಹೀಗಂತ ಒಬ್ಬ ಹುಡುಗ ವಸ್ತುಶ: ಅಳ್ತಾನೆ ಅಂದ್ರೆ ನೀವು ನಂಬ್ತೀರಾ?ನಂಬಲೇ ಬೇಕು.. ಇದು ಒಬ್ಬಿಬ್ಬರು ಹುಡುಗರ ಕತೆಯಲ್ಲ. ಈ ಚಕ್ರವ್ಯೂಹದೊಳಗೆ ಸಿಕ್ಕಿಹಾಕಿಕೊಂಡವರಿಗಷ್ಟೇ ಗೊತ್ತು ಅದರ ಸಂಕಟ.ಹಾಗಂತ, ಈ ಹುಡುಗಿ ಕಾಲ್ ಮಾಡ್ತಾ ಇರೋದು ಒಬ್ಬ ಹುಡುಗನಿಗೆ ಮಾತ್ರ ಅಲ್ಲ, ಹಲವು ಹುಡುಗರಿಗೆ. ಇದೇ ಗೆಳೆಯ ಇನ್ನೊಬ್ಬನಲ್ಲಿ ತನ್ನ ಕತೆ ಹೇಳಿಕೊಂಡಾಗ ಅವನಿಗೂ ಅದೇ ರೀತಿ, ಅದೇ ಹುಡುಗಿ. ಮತ್ತೊಬ್ಬನದೂ ಅದೇ ಕತೆ. ಇನ್ನೆಷ್ಟೋ!ಮತ್ತೊಬ್ಬ ಹುಡುಗಿಯಂತೂ ಬೆನ್ನು ಬೆನ್ನಿಗೆ ಮಿಸ್ ಕಾಲ್ ಕೊಟ್ಟು ಕಾಟ ಕೊಡುವ ಜಾತಿ. ಯಾರಿದು ಹೀಗೆ ಮಿಸ್ ಕಾಲ್ ಕೊಡ್ತಾ ಇದ್ದಾರಲ್ಲಾ ಅಂತ ಕಾಲ್ ಮಾಡಿದ್ರೆ `ನಿಂಗೆ ನನ್ ನಂಬರ್ ಯಾರ್ ಕೊಟ್ರು.. ನೀವು ಎಲ್ಲಿ ಕೆಲ್ಸ ಮಾಡೋದು' ಎಂದು ಪ್ರಶ್ನಿಸ್ತಾಳೆ. ಕಾಲ್ ಕೊಟ್ಟಿದ್ದು ನೀವಲ್ವಾ ಅಂತ ಕೇಳಿದರೆ ಇಲ್ಲವೇ ಇಲ್ಲ ಎನ್ನುವ ವಾದ. ಒಮ್ಮೆ ಕನೆಕ್ಷನ್ ಸಿಕ್ಕಿದರೆ ಸಾಕು ನಂತರ ಅದನ್ನು ಹೇಗೆ ಹಿಡಿದಿಟ್ಟು ಮುಂದುವರಿಸಬೇಕು ಎನ್ನುವುದು ಅವಳಿಗೆ ಚೆನ್ನಾಗಿ ಗೊತ್ತು.ನಿನ್ನೆ ಮೊನ್ನೆವರೆಗೆ ಹುಡುಗಿಯರು ತಮ್ಮ ಮನೆ ನಂಬರ್, ಮೊಬೈಲ್ ನಂಬರ್ ಯಾವ ಹುಡುಗನಿಗೂ ಸಿಕ್ಕದಿರಲಿ ಅಂತ ಕಾದಿಡ್ತಾ ಇದ್ದರು. ತೀರಾ ಆತ್ಮೀಯ ವಲಯದ ಹುಡುಗರಿಗೆ ಮಾತ್ರ ಅದು ಲಭ್ಯ. ಆ ನಂಬರ್ ಸಿಕ್ಕಿದವನು ತುಂಬ ವಿಶ್ವಾಸಿಗ ಅಂತಾನೇ ಅರ್ಥ. ಅದಕ್ಕೆ ಕಾಲ್ ಮಾಡೋದು, ರಿಸೀವ್ ಮಾಡೋದ್ರಲ್ಲೂ ತುಂಬ ನಿಯತ್ತು. ಆದರೆ, ಈಗ ನೋಡಿದರೆ ಅಪರಿಚಿತ ಹುಡುಗಿಯರ ಕೈಗೆ ಮೊಬೈಲ್ ನಂಬರ್ ಸಿಗದಿರಲಿ ಅಂತ ಹುಡುಗರು ಹಾರೈಸಬೇಕಾದ ಸ್ಥಿತಿ.ಫೋನ್ ಮಾಡೋ ಹುಡುಗಿಯರ ಬೇಡಿಕೆಗಳೂ ವಿಚಿತ್ರ.. ಸಣ್ಣ ಧೈರ್ಯದ ಹುಡುಗರಿಗೆ ಭಯ ಹುಟ್ಟಿಸುವಂತದ್ದು!ಪೇಪರ್ನಲ್ಲಿ ಬರೋ ಮೊಬೈಲ್ ನಂಬರುಗಳಿಗೆ , ಹೇಗೋ ಸಿಗುವ ಸಂಖ್ಯೆಗಳಿಗೆ ಫೋನ್ ಮಾಡುವವರು ಒಂದು ಕಡೆ ಇದ್ದರೆ ತಮ್ಮ ನಂಬರನ್ನು ಪೇಪರಿನಲ್ಲಿ ಹಾಕಿ ಎಂದು ಕಾಡುವ ಹುಡುಗಿಯರೂ ಇದ್ದಾರೆ ಎಂದರೆ ಆಶ್ಚರ್ಯವಾದೀತು ಅಲ್ಲವೇ?ಇದಿಷ್ಟೇ ಅಲ್ಲ, ಇವತ್ತು ಖಾಸಗಿ ಎಫ್ಎಂ ಚಾನೆಲ್ ಗಳು ನಡೆಸುವ ಅಷ್ಟೂ ಕಾರ್ಯಕ್ರಮಗಳು, ರೇಡಿಯೋ ಚಾಟ್ಗಳಲ್ಲಿ ಭಾಗವಹಿಸುವವರಲ್ಲಿ, ಕಾದು ಫೋನ್ ಮಾಡೋರಲ್ಲಿ 85 ಶೇ. ಹುಡುಗಿಯರು. ಅದರಲ್ಲೂ ಮಧ್ಯರಾತ್ರಿಯ ನಂತರವೂ ಪಿಸುಮಾತಿನ ಮೂಲಕ ನಿವೇದನೆ ಮಾಡಿಕೊಳ್ಳುವ ಪರಿ, ಪ್ರೀತಿ-ಪ್ರೇಮದ ಬಗ್ಗೆ ಅವರು ಆಡೋ ಮಾತು, ಹುಡುಗರನ್ನು ಹೇಗೆ ಒಲಿಸಿಕೊಳ್ಳಬೇಕು ಎಂದು ಕೇಳುವಾಗಿನ ನಿರ್ಲಜ್ಜತೆಗಳು ಅಬ್ಬಾ ಎಂದು ಹುಬ್ಬೇರಿಸುವಂತೆ ಮಾಡುತ್ತಿವೆ.ನೆನಪಿರಲಿ, ಗುರುತೇ ಪರಿಚಯವಿಲ್ಲದ ಹುಡುಗರ ಜತೆ ಗಂಟೆಗಟ್ಟಲೆ ಮಾತನಾಡುವ, ಮೆಸೇಜುಗಳ ಮೇಲೆ ಮೆಸೇಜ್ ಬಿಡುವ ಈ ಹುಡುಗಿಯರು ಮನೆಗೆ ಬಂದರೆ ಪರಮ ಮೌನಿಗಳಾಗಿರುತ್ತಾರೆ. ಅಪ್ಪ-ಅಮ್ಮನಲ್ಲೂ ಮಾತಿಲ್ಲ. ಅಜ್ಜ-ಅಜ್ಜಿಯಂತೂ ಇಲ್ಲವೇ ಇಲ್ಲ. ಕೊನೆಗೆ ತಂಗಿಯ ಜತೆಗೂ. ಅವರ ಮಾತು ಏನಿದ್ದರೂ ಫೋನ್ನಲ್ಲೇ. ಅಲ್ಲಿ ಮೊದಲು ಸಿಲ್ಲಿ ಸಿಲ್ಲಿ ಮಾತು, ತುಂಬ ಸಂತೋಷ, ನಂತರ ದು:ಖ, ಬಳಿಕ ಜೋರು ಅಳು.. ಹೀಗೆ ವೈವಿಧ್ಯತೆಗಳು. ತನ್ನ ಕಷ್ಟಗಳನ್ನು ಹೇಳಿಕೊಳ್ಳಲು ಬೇರೆ ಯಾರೂ ಇಲ್ಲವೇ ಇಲ್ಲ ಎನ್ನುವಷ್ಟು ಏಕಾಂಗಿತನ!ಮಾತೆತ್ತಿದರೆ ಸಿಡುಕು, ಏನು ಕೇಳಿದರೂ ಗೊತ್ತಿಲ್ಲ ಎಂಬ ಉತ್ತರ, ನನ್ನನ್ನು ಏನೂ ಕೇಳಬೇಡಿ ಎನ್ನುವ ದಾಷ್ಟ್ರ್ಯ. ಮನೆಯ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡರೆ ಮುಗಿಯಿತು... ಅವರದೇ ಲೋಕ. ಅವರ ಮೊಬೈಲ್ಗಳನ್ನು ಯಾರೂ ಮುಟ್ಟುವಂತಿಲ್ಲ... ಬಂದ ಕಾಲ್ಗಳನ್ನು ರಿಸೀವ್ ಮಾಡುವಂತಿಲ್ಲ!ಹುಡುಗಿಯರು ಯಾಕೆ ಹೀಗೆ ಔಟ್ಸ್ಪೋಕನ್ ಆಗುತ್ತಿದ್ದಾರೆ, ಯಾಕೆ ಎಲ್ಲ ಪರಿಧಿಗಳನ್ನು ಮೀರುತ್ತಿದ್ದಾರೆ ಎನ್ನುವುದಕ್ಕೆ ಉತ್ತರಗಳಿಲ್ಲ. ಬಹುಶ: ಸಿಕ್ಕಿರುವ ಅತಿಯಾದ ಸ್ವಾತಂತ್ರ್ಯ, ಕಾಲೇಜಿಗೆ, ಉದ್ಯೋಗಕ್ಕೆ ಹೋಗುವ ಮಕ್ಕಳನ್ನು ನಿಯಂತ್ರಿಸಲಾಗದ ಹೆತ್ತವರ ಅಸಹಾಯಕತೆ, ಮನೆ ಬಿಟ್ಟು ಹೊರಗಿರುವ ಹುಡುಗಿಯರಿಗೆ ಸಿಕ್ಕಿರುವ ಮುಕ್ತತೆಗಳೇ ಕಾರಣಗಳಿರಬಹುದು. ಜತೆಗೆ ಭಾವನೆಗಳನ್ನು ಹಂಚಿಕೊಳ್ಳಬೇಕೆಂಬ ಆತುರ, ಯಾರಾದರೂ ಸರಿ ಎಂಬ ಅವಸರಗಳು ಅವರನ್ನು ಈ ದಾರಿಗೆ ಎಳೆದು ತರುತ್ತಿವೆಯಾ? ಅವರು ಇದೇ ರೀತಿ ಮುಂದುವರಿದರೆ ಎಂಥಂಥದೋ ಕೈಗಳಲ್ಲಿ ಸಿಕ್ಕಿಹಾಕಿಕೊಳ್ಳಬೇಕಾದ ಸ್ಥಿತಿ ಬಂದರೆ ಆಗ ಅವರನ್ನು ರಕ್ಷಿಸುವವರು ಯಾರು?ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನಾವು ಯೋಚಿಸಬೇಕಾದ ಗಂಭೀರ ಪ್ರಶ್ನೆಗಳಿವು.
"ಮೊದಲು ಅಪ್ಪ ಅಮ್ಮನಿಗೆ ಬುದ್ದಿ ಹೇಳಿ "
"ನಮ್ಮ ಊರಿನ ಮೂರು ಗಾಲಿನ್ ಆಟಿಕೆ "
"ನಮ್ಮ ದೇಶ ನಮ್ಮದು "
ಎಂಭತ್ತರ ದಶಕದಿಂದೀಚೆಗೆ ನಮ್ಮನ್ನು ನಾವು ಪ್ರಪಂಚದ ಇತರೆ ಬೆಳವಣಿಗೆಗಳಿಗೆ ತೊಡಗಿಸಿಕೊಂಡಿದ್ದು ನಿಮಗೆಲ್ಲ ನೆನಪಿರಬಹುದು. ಮೊದಲೆಲ್ಲ ಕುಟುಂಬ ಯೋಜನೆ ಎಂದರೇನು ಎಂದು ಗೊತ್ತಿರದೇ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದ ಕುಟುಂಬಗಳು ಎಷ್ಟೋ. ಒಂದೇ ಸೂರಿನೆಡೆ ಬಡತನದಲ್ಲಿ ಹಲವಾರು ಮಕ್ಕಳ ಹೊಟ್ಟೆ ತುಂಬುವುದು, ಅವುಗಳಿಗೆ ಸರಿಯಾದ ವಿದ್ಯೆಯನ್ನು ಕಲಿಸಿಕೊಡುವುದು ಎಲ್ಲವೂ ಸಾಧ್ಯವಿಲ್ಲದ ಮಾತಾಗಿತ್ತು. ಈ ತಲೆಮಾರು ಇರುವ ಹಾಗೆಯೇ ಮುಂದಿನ ಒಂದೆರಡು ತಲೆಮಾರುಗಳು ಮುಂದುವರೆದ ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ಮೊದಲಾದವುಗಳ ಪಲಾನುಭವಿಗಳಾಗಿ ಬೆಳೆಯುವ ಭಾಗ್ಯ ಕಂಡುಕೊಂಡವು. ಹೀಗೆ ತಲೆಮಾರುಗಳು ತಮ್ಮನ್ನು ತಾವು ಬದಲಾವಣೆಗಳಿಗೆ ಒಳಪಡಿಸಿಕೊಂಡು ಬಂದಂತೆ ಜಗತ್ತು ಚಿಕ್ಕದಾಯಿತು. ಎಲ್ಲೆಲ್ಲೋ ಇದ್ದವರಿಗೆ ಎಲ್ಲಿಯದೋ ಮಾಹಿತಿ ದೊರೆಯುವಂತಾಯಿತು.
ತಂತ್ರಜ್ಞಾನವೇ ಇರಲಿ, ಮಾಹಿತಿ-ಸಂವಹನಗಳಾಗಲಿ ಭಾರತ ಜಗತ್ತಿನ ಅತಿ ದೊಡ್ಡ ಲ್ಯಾಬೋರೇಟರಿ ಇದ್ದ ಹಾಗೆ. ಹೊಸ ವಸ್ತು, ವಿಷಯಗಳಿಗೆ ಕೋಟ್ಯಾಂತರ ಭಾರತೀಯರು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಲೇ ಬಂದರು. ಬೇರೆ ಯಾವೊಂದು ದೇಶದಲ್ಲೂ ಸಿಗದಷ್ಟು ಬಳಕೆದಾರರು ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ದೇಶ-ವಿದೇಶಗಳ ಗುರಿಯಾದರು. ೧೯೫೦ ರ ದಶಕ ಅಮೇರಿಕನ್ನರಿಗೆ ನಾವು ಬೆಳೆದ ಬಗೆಯನ್ನು ತಿಳಿಸಿ ಹೇಳಿದಾಗ ಅಲ್ಲಿ ಬೇಕಾದಷ್ಟು ಸಾಮ್ಯತೆ ಸಿಗುತ್ತದೆ, ನಮ್ಮ ನಡೆ-ನುಡಿಯನ್ನು ಗಮನಿಸಿದಾಗ ಅದು ಸ್ಪಷ್ಟವಾಗುತ್ತದೆ. ಆದರೆ ನಮ್ಮ ಮುಂದಿನ ಜನರೇಶನ್ನುಗಳಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿ ನಿಂತು ನೋಡಿದರೂ ಎಲ್ಲ ಯುವ ಪೀಳಿಗೆಗಳೂ ಒಂದೇ ಪೋಷಣೆಗಳಿಗೆ ಒಳಗಾದಂತೆ ಕಂಡು ಬರುತ್ತದೆ. ಉದಾಹರಣೆಗೆ, ಒಂದು ಕಾಲದಲ್ಲಿ ಭಾರತವನ್ನು ಪೀಡಿಸುತ್ತಿದ್ದ ಪೋಲಿಯೋ ಈಗ ಜಗತ್ತಿನುದ್ದಕ್ಕೂ ನಿರ್ಮೂಲನದ ಹಾದಿ ಹಿಡಿದಿದೆ. ಪೋಲಿಯೋ ಪೀಡಿತರಾದವರು ಹಳೆಯ ಸಂತತಿಗಳ ಉದಾಹರಣೆಗಳಾದರು. ವಿಶ್ವದ ಒಂದು ಮೂಲೆಯಲ್ಲಿ ನಡೆಯುವ ವಿಚಾರಗಳು ಇನ್ನೆಲ್ಲೋ ತಮ್ಮ ಅಲೆಗಳನ್ನು ಎಬ್ಬಿಸುವ ಸುನಾಮಿಗಳಾಗುವುದು ಇತ್ತೀಚೆಗೆ ಸಹಜ ಹಾಗೂ ನಿರೀಕ್ಷಿತ.
ನಮ್ಮ ಭಾರತದ ಹಳೆಯ ನೆನಪುಗಳು ’ನಾಷ್ಟಾಲ್ಜಿಯ’ವಲ್ಲದೇ ಮತ್ತೇನು? ರಸ್ತೆಯ ತುಂಬ ಕಡಿಮೆ ಕಾರುಗಳು ಓಡಾಡುತ್ತಿದ್ದ ೭೦-೮೦ ರ ದಶಕದ ದಿನಗಳಲ್ಲಿ ಬೆಳೆದು ಬಂದ ನಾವು ಇಂದು ಮನೆಗೊಂದು ಕಾರಿನ ದಿಢೀರ್ ಬೆಳವಣಿಗೆಯನ್ನು ವಕ್ರ ದೃಷ್ಟಿಯಿಂದ ನೋಡುತ್ತೇವೇಕೆ? ಜಾತಿ-ಜಾತಕಗಳ ಮುಖಾಂತರ ಮದುವೆಯಾಗಿ ಬಂದ ನಮಗೆ ಅಂತರ್ಜಾತಿ-ಅಂತರ್ಮತ ವಿವಾಹಗಳು ಹೊಸದಾಗಿ ಕಂಡುಬಂದರೆ ಅದು ನಮ್ಮ ಮಿತಿಯೆಂದೇಕನಿಸುವುದಿಲ್ಲ? ನಾವಿದ್ದಾಗಲೇ “ಎಷ್ಟೊಂದು ಜನ!” ಎಂದು ಉದ್ಗಾರವೆತ್ತುತ್ತಿದ್ದವರಿಗೆ ಈಗ ದೇಶ ಬೆಳೆದಿದೆ ಎಂಬುದನ್ನು ಸಕಾರಾತ್ಮಕವಾಗಿ ಸ್ವೀಕರಿಸಲೇಕಾಗುವುದಿಲ್ಲ? ಕಡಿಮೆ ಜನ ಹೆಚ್ಚು ಸಂಪನ್ಮೂಲಗಳ ಅಮೇರಿಕದ ನೀರು ಕುಡಿದು ಬಡತನದ ನಮ್ಮ ನೆರೆಹೊರೆಗಳು ಕ್ಷುಲ್ಲಕವಾಗಿ ಕಾಣುವುದೇಕೆ? ನಮಗೆಲ್ಲ ಭಾರತ ಅನ್ನೋದು ಗಂಡನ ಮನೆಯಲ್ಲಿ ಮುನಿಸು ಸಾಧಿಸಿಕೊಂಡು ಸಾಂತ್ವನಕ್ಕೆ ಓಡುವ ಹೆಣ್ಣಿನ ತವರು ಮನೆಯೇಕಾಗಬೇಕು? ದೂರ ಹೋಗಿಯೂ ತವರು ನಾವು ಕಂಡುಕೊಂಡ ಹಾಗೇ ಇರಬೇಕು ಎನ್ನುವುದು ಈ ನಿರಂತರ ಬದಲಾವಣೆಯ ದಿನಗಳಲ್ಲಿ ನ್ಯಾಯವೇ?
ಬದಲಾವಣೆಗಳಿಗೆ ಓಗೊಟ್ಟ ಯಾರೊಬ್ಬರೂ ಭಾರತದ ಬೆಳವಣಿಗೆಯ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಲಾರರು. ಒಂದು ಕಾಲದಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಟ್ರಂಕ್ ಕಾಲ್ ಮಾಡಿ ಕಾದು ಒಂದು ದೂರವಾಣಿಯ ಸಂದೇಶವನ್ನು ಸಾಗಿಸುತ್ತಿದ್ದವರಿಗೆ ಇಂದಿನ ಮೊಬೈಲ್ ಯುಗ ವರದಾನವಾಗಿರುವಾಗ ಅದನ್ನು ನಾವು ಮಾಲಿನ್ಯ (ನಾಯ್ಸ್) ಎನ್ನುವುದು ಸ್ವಾರ್ಥವಾಗುತ್ತದೆ. ಕಾರುಗಳು ಶ್ರೀಮಂತರಿಗಷ್ಟೇ ಇದ್ದು ಐಶಾರಾಮವಾಗಿದ್ದ ದಿನಗಳಿಗೆ ಹೋಲಿಸಿಕೊಂಡು ಇಂದಿನ ಟ್ರಾಫಿಕ್ ಜಾಮ್ ಅನ್ನು ದೂರುವುದು ನಮ್ಮ ಮಿತಿಯಾಗುತ್ತದೆ. ಒಳ್ಳೆಯದೆಲ್ಲ ನಮಗೇ ಇರಲಿ ಎನ್ನುವುದು ಯಾವ ದೊಡ್ಡತನದ ಪ್ರತೀಕವಾದೀತು ನೀವೇ ಹೇಳಿ.